Tuesday, June 7, 2011

ನಮ್ಮಳ್ಳಿಯ ಕ್ರಿಕೆಟ್ ಮತ್ತು ಕೆಲವು ನೆನಪುಗಳು !!!

ನಮ್ಮ ಆಫೀಸಿನಲ್ಲಿ ಒಂದು ಕ್ರಿಕೆಟ್ tournament ಆಯೋಜಿಸಿದ್ದರು,ಹಾಗೆಯೇ ನಮ್ಮ ಬಾಲ್ಯದ ನೆನಪಾಗಿ,ನಮ್ಮ ಆಗಿನ ಕ್ರಿಕೆಟ್ ಶೈಲಿ,,ನಮ್ಮ ತಂಡಗಳು,ನಮ್ಮ ಆಟದ ಪರಿ ನೆನಪಾಗಿ,ಅದರ ಬಗ್ಗೆ ಒಂದಿಷ್ಟನ್ನು ನಿಮ್ಮ ಜೊತೆ ಹಂಚಿಕೊಳ್ಳೋಣ ಅನ್ನಿಸಿತು..
ನಮ್ಮ ಹಳ್ಳಿಯಲ್ಲಿ ಸಂಕ್ರಾಂತಿ ಕಳೆದರೆ ಸುಗ್ಗಿಯ ಕಾಲ,ಅಂದರೆ ರಾಗಿ ಕುಯ್ಯುವ ಕಾಲ.ರಾಗಿ ಕುಯ್ದು,ಹುಲ್ಲು ಮತ್ತು ರಾಗಿಯನ್ನು ಬೇರ್ಪಡಿಸಲು ಒಂದು ಕಣ ಮಾಡುತ್ತಾರೆ...
ಕಣ ಅಂದರೆ ಸುಮಾರು ೩೦*೩೦ ಜಾಗದಲ್ಲಿ ಸಮತಟ್ಟು ಮಾಡಿ ಸಗಣಿಯಿಂದ ಸಾರಿಸುತ್ತಾರೆ...ನಂತರ ಅಲ್ಲಿ ರಾಗಿಯನ್ನು ತೆನೆಯಿಂದ ಬೇರ್ಪಡಿಸುವ ಕಾರ್ಯ ಶುರು,ನಂತರ ಹುಲ್ಲನ್ನು ರಾಗಿಯನ್ನು ಒಣಗಿಸಲು ಮತ್ತು ಸ್ವಲ್ಪ ದಿನ ಅಲ್ಲಿಯೇ ಅದನ್ನು ಗುಡ್ಡೆ ಮಾಡಿ,ಒಂದು ದಿನ ಪೂಜೆ ಮಾಡಿ,ಅಲ್ಲಿಂದ ರಾಗಿಯನ್ನು ತಮ್ಮ ಮನೆಗಳಿಗೆ ಸಾಗಿಸುತ್ತಾರೆ..
ಕಣವನ್ನು ಒಂದೊಂದು ಮನೆಯವರೇ ಮಾಡುವುದಿಲ್ಲ,ಬದಲಾಗಿ  - ಮನೆಯವರು ಒಟ್ಟಿಗೆ  ಸೇರಿ ಮಾಡುತ್ತಾರೆ..ಇದರಿಂದ ಅವರ ನಡುವೆ ಭಾಂದವ್ಯ ಚೆನ್ನಾಗಿರುತ್ತದೆ,ಮತ್ತು ಅಷ್ಟೂ ಮನೆಯವರು ಎಲ್ಲಾ ಮನೆಯವರ ಕೆಲಸವನ್ನು ಒಟ್ಟಿಗೆ ಮಾಡುತ್ತಾರೆ,ರಾಗಿ ಕುಯ್ಯುವುದರಿಂದ ಹಿಡಿದು,ಅದನ್ನು ಬೇರ್ಪಡಿಸಿ,ರಾತ್ರಿ ಸಮಯದಲ್ಲಿ  ಕಣದಲ್ಲೇ ಮಲಗಿ ಕಾಯುವುದು,ಕಣ  ತಯ್ಯಾರು ಮಾಡುವುದು,ಎಲ್ಲವೂ,ಒಬ್ಬರ ಮನೆಯ ಕೆಲಸಕ್ಕೆ ಇನ್ನೊಬ್ಬರು ಬರುತ್ತಾರೆ,ಅವರ ಮನೆಯ ಕೆಲಸಕ್ಕೆ ಇವರು,ಇವರ ಮನೆಯ ಕೆಲಸಕ್ಕೆ ಅವರು..ಆದ್ದರಿಂದ ಕೂಲಿ ಕೆಲಸದವರನ್ನು ಕರೆಸುವುದು ತಪ್ಪುತ್ತದೆ.. ರೀತಿ ಒಬ್ಬರ ಮನೆಗೆ ನಾವು ಹೋಗಿ,ನಮ್ಮ ಮನೆಯ ಕೆಲಸಕ್ಕೆ ಅವರು ಬರುವು ಪದ್ಧತಿಗೆ 'ಮುಯ್ಯಿ ಆಳು' ಎಂದು ಕರೆಯುತ್ತಾರೆ..

ಇರಲಿ ವಿಷಯಕ್ಕೆ ಬರೋಣ, ಸುಗ್ಗಿಯೆಲ್ಲ ಮುಗಿಯುವುದು ಉಗಾದಿಯ ಹೊತ್ತಿಗೆ,ಅಂದರೆ ಹತ್ತಿರ ಹತ್ತಿರ ಮಾರ್ಚ್,ಅಂದರೆ ನಮ್ಮೆ ವಾರ್ಷಿಕ ಪರೀಕ್ಷೆ ಮುಗಿದು,ಬೇಸಿಗೆ ರಜ ಶುರು ಆಗುವ ಸಮಯ..
ಬೇಸಿಗೆ ರಜೆಯಲ್ಲಿ ನಮಗೆ ಕಣವೇ ಕ್ರಿಕೆಟ್ ಪಿಚ್ ,ಹೇಗೂ ಮಳೆಗಾಲ ಶುರು ಆಗುವವರೆಗೂ ಜಮೀನಲ್ಲಿ ಅವರು ಉಳುವುದಿಲ್ಲ,.ಭೇಸಾಯ ಮಾಡಿದರು ಏನನ್ನೂ ಬೆಳೆಯಲು ಸಾಧ್ಯವಿಲ್ಲ,ನೀರಿನ ಸಮಸ್ಯೆ ಮುಖ್ಯವಾಗಿ..ಏನೇ ಆದರೂ ಅದು ಹಾಗೆ ಬಿಟ್ಟಿರುತ್ತಾರೆ..ಇದು ತುಂಬ ಹಿಂದಿನಿಂದ ನಡೆದು ಬಂದಿದೆ..ಮಳೆಗಾಲ ಶುರು ಆಗುಯ ಸ್ವಲ್ಪ ಮುಂಚೆ ಅದನ್ನು ಉಳುತ್ತಾರೆ,ಅಲ್ಲದೆ ಸ್ವಲ್ಪ ದಿನದ ಮಟ್ಟಿಗೆ  ಜಮೀನಿಗೆ  ರಸ್ಟ್ ಕೊಡುವ ಪರಿಭಾಷೆಯೂ ಇರಬಹುದು....
ಸರಿ, ಕಣ ಕೇವಲ ಪಿಚ್ ಮಾತ್ರ,ನಮ್ಮ ಬೌಂಡರಿ ಇರುತ್ತಿದ್ದದ್ದು,ಮಳೆ ಬಂದ ದಿನ(ಅದೂ ಜೋರಾಗಿ)ಮಾತ್ರ ಹರಿಯುವ ಹಳ್ಳ,ಅಥವಾ ಹೊಲದ ತಂತಿ ಬೇಲಿ,ಹೊಲದ ಬದಿ ಇರಬಹುದು,ಹೀಗೆ ಸಾಗುತ್ತಿತ್ತು..
 ಪಿಚ್ ಮಾತ್ರ ಸಮ ವಾಗಿರುತ್ತಿತ್ತು,ಉಳಿದಂತೆ ಹೊಲದಲ್ಲಿ ಮಣ್ಣಿನ ಉಂಡೆಗಳು(ಹೆಂಟೆ ),ಬಾಲ್ ಹೆಂಟೆಗೆ  ತಾಗಿ ಮುಂದಕ್ಕೆ ಹೋಗಬಹುದು,ಬಲಕ್ಕೂ ,ಎಡಕ್ಕೂ ಯಾವ ದಿಕ್ಕಿಗೂ  ಹೋಗಬಹುದು,ಒಟ್ಟಿನಲ್ಲಿ ಅಲ್ಲಿ fielding
ಮಾಡುವವನ ಗತಿ ಅಧೋಗತಿ,ಅದರಲ್ಲೂ ಮಣ್ಣಿನ ಹೆಂಟೆ ಗಳಲ್ಲಿ ಓಡಿ ಬಾಲ್ ಹಿಡಿಯಬೇಕು.fielding  ಮಾಡುವುದು ಒಂದು ರೀತಿಯ ಹಿಂಸೆಯೇ ಸರಿ,ಆದರೂ ಉತ್ಸಾಹಕ್ಕೆನು  ಕಡಿಮೆ ಇರಲಿಲ್ಲ...
ಇಂಥ ಗುಣಮಟ್ಟದ ಪಿಚ್ನಲ್ಲಿ ಕೂಡ ಸುತ್ತ ಮುತ್ತಲಿನ ಊರಿನವರ ಜೊತೆ ಪಂದ್ಯಗಳನ್ನು ಆಡುತ್ತಿದ್ದೆವು..
ನಮ್ಮ ಪಕ್ಕದ ಉರಿನಲ್ಲಿ ಕೆರೆ ಇತ್ತು,ಅವರು ಕೆರೆಯಲ್ಲಿ ಆಡುತ್ತಿದ್ದರು,ಅದು ಸ್ವಲ್ಪ ದಿನದ ಮಟ್ಟಿಗೆ ಕ್ಷಣಿಕ ಸುಖ,ಕಾರಣ,ಕೆರೆಯ ಮಣ್ಣನ್ನು ತಮ್ಮ ತಮ್ಮ ಜಮೀನಿಗೆ ಹಾಕಿಸಿಕೊಳ್ಳಲು ಅಲ್ಲಲ್ಲಿ ದೊಡ್ಡ ದೊಡ್ಡ  ಗುಂಡಿ ತೆಗೆಯುತ್ತಿದ್ದರು.ಹಾಗಾಗಿ ಪಿಚ್ ಆಳು ಮಾಡುತ್ತಿದ್ದರು..
ಕೆಲವೊಮ್ಮೆ ನಾವು ತೆಂಗಿನ ಗರಿಗಳನ್ನು ಸವರಿ,ಅದರ ಎಡವು ಮಟ್ಟೆಯನ್ನು ಮಚ್ಚಿನಿಂದ ಅಥವಾ ಕುಡುಗೋಲಿನಿಂದ ತುಂಡು ಮಾಡಿ,ಬ್ಯಾಟ್ ಮಾಡುತ್ತಿದ್ದೆವು,ಊರಿನವರೆಲ್ಲ ಒಂದಷ್ಟು ದುಡ್ಡು ಹಾಕಿ ಬ್ಯಾಟ್ ತರುವುದಕ್ಕೂ ಮುಂಚೆ ನಮಗೆ nature  ಗಿಫ್ಟ್ ಬ್ಯಾಟ್ ಗತಿಯಾಗಿತ್ತು..
ನೀಲಗಿರಿಯ ಕಡ್ಡಿಗಳನ್ನು ಸವರಿ,ಅದಕ್ಕೆ ಮೂತಿಯನ್ನು ಕೆತ್ತಿ ವಿಕೆಟ್ ಮಾಡಿ ಕೊಂಡಿದ್ದೆವು,ಒಬ್ಬೊಬ್ಬರು - ರುಪಾಯೀ  ಸೇರಿಸಿ ಬಾಲ್ ತರುತ್ತಿದ್ದೆವು..ಹೀಗಿತ್ತು ನಮ್ಮ ಕ್ರಿಕೆಟ್..
ಇದರ ಜೊತೆಗೆ ಹಸು ಮೇಯಿಸುವುದು ,ತೋಟಕ್ಕೆ ನೀರು ಬಿಡುವುದು,ಮತ್ತೆ ಮೇವು  ತರುವುದು  ಇವೆಲ್ಲ ಕೆಲಸಗಳನ್ನು ಮಾಡಬೇಕಿತ್ತು..
ಹೊಯ್ಸಳ ಕಪ್,ವೀರಭದ್ರ ಕಪ್,ಪುಷ್ಪಗಿರಿ ಕಪ್..ಹೀಗೆಲ್ಲ ಕೆಲವ ಪಂದ್ಯಾವಳಿಗಳು ನಡೆಯುತ್ತಿದ್ದವು....
ಹೀಗೆ ಸುತ್ತಮುತ್ತಲ ಗ್ರಾಮಗಳಿಗೆ ಹೋಗುತ್ತಿದ್ದೆವು ,ನಮ್ಮ ಊರಿನ ಪಿಚ್  ಗಳು ಹೊಲದ ಮಧ್ಯೆ ಇದ್ದದ್ದರಿಂದ ಅಷ್ಟು ಅನುಕೂಲಕರವಲ್ಲವೆನ್ದು ನಾವು ಯಾವ ಪಂದ್ಯಾವಳಿಗಳನ್ನು ಆಯೋಜಿಸಿರಲಿಲ್ಲ.
ಹೀಗೆ ಒಮ್ಮೆ ೭ನೆ ಕ್ಲಾಸ್ ಅನ್ನಿಸುತ್ತದೆ,ನಮ್ಮೂರಿಂದ ಸುಮಾರು - ಕಿಮೀ ದೂರದ ಊರಿಗೆ ಹೋಗಿದ್ದೆವು,ಮೊದಲ ಪಂದ್ಯ ಗೆದ್ದು,ಎರಡನೇ ಪಂದ್ಯ ಸೋತು ವಾಪಸ್ ಬರುತ್ತಿದ್ದೆವು.ನಮ್ಮೂರಿಂದ ಕೆಲವರು ಸೈಕಲ್ ನಲ್ಲಿ,ಕೆಲವರು ಬಸ್ ನಲ್ಲಿ ಹೋಗಿದ್ದೆವು.ನಾನು ಮತ್ತು ನನ್ನ ಸ್ನೇಹಿತ ನನ್ನ ಸೈಕಲ್ ನಲ್ಲಿ ಹೋಗಿದ್ದೆವು.ವಾಪಸ್ ಬರುವಾಗೆ ಸೈಕಲ್ ಚೈನು ಕಟ್ ಆಯಿತು.ಹಳೇಬೀಡಿಗೆ ಇನ್ನು ಸುಮಾರು   ಕಿಮೀ ಇದೆ,ಅಲ್ಲಿಂದ ನಮ್ಮೂರಿಗೆ / ಕಿಮೀ,ಹೇಗಪ್ಪ ಈಗ ಹಳೆಬೀಡಿನ ತನಕ ಹೋಗುವುದು,ಅಲ್ಲಿ ಹೇಗೂ ರಿಪೇರಿ ಮಾಡಿಸಿ ಕೊಂಡರಾಯಿತು ಎಂಬ ಯೋಚನೆ ಇದ್ದಾಗ,ಅಲ್ಲೇ ಪಕ್ಕದ ತೋಟಕ್ಕೆ ಹೋಗಿ,ಒಂದು ದಾರ ಮತ್ತು ಸಣ್ಣ ತಂತಿಯನ್ನು ಅವರಿಂದ ಪಡೆದು ಹೇಗೂ  ಪೇಟೆಯವರೆಗೆ ತಲುಪಿ ರಿಪೇರಿ ಮಾಡಿಸಿಕೊಳ್ಳುವವರೆಗೂ ನಾವಿಬ್ಬರು ಪಟ್ಟ ವ್ಯಥೆ ಕೇಳತೀರದು,ಅದು ಮಧ್ಯದಲ್ಲಿ ಇನ್ನೊಮ್ಮೆ ಹರಿದು  ಹೋಗಿ,ಮತ್ತೆ ತಾತ್ಕಾಲಿಕವಾಗಿ ಚೈನಿಗೆ ತಂತಿ ಸಿಗಿಸೆದ್ದೆವು.

ಬೇಸಿಗೆ ಕಳೆದ ಮೇಲೆ ನಮಗೆ ನಮ್ಮೂರ ಶಾಲೆಯ ಮರಗಳ ನಡುವೆ ಇರುವ,ಶಾಲೆಯ ಮಕ್ಕಳು ಪ್ರಾರ್ಥನೆ ಮಾಡುವ ಜಾಗವೇ ಕ್ರಿಕೆಟ್ ಪಿಚ್ ಆಗುತ್ತಿತ್ತು.ಅಲ್ಲಿ ನಮ್ಮೂರಿನ ಕೆಲವರು ಆಡಲು ಬಿಡುತ್ತಿರಲಿಲ್ಲ.ಕಾರಣ ನಾವು ಶಾಲೆಯ ಹೆಂಚುಗಳನ್ನು ಹೊಡೆದು ಹಾಕುತ್ತಿವಿ ಎಂದು.ಸರಿ ಕೆಲ ದಿನಗಳು ಅಲ್ಲಿ ಆಡಿದೆ ನಂತರ ಎಲ್ಲರು ಬೈಯ್ಯಲು ಶುರು ಮಾಡುತ್ತಿದ್ದರು,ನಮ್ಮ ನಮ್ಮ ಮನೆಗಳಲ್ಲಿ ಕೂಡ.ಹಾಗಾಗಿ ಅಲ್ಲಿ ಆಡಲು ಬಿಟ್ಟೆವು ,ನಂತರ ಯಾರದಾದರೂ ಮನೆಯ ಬಳಿ ಜಾಗವೇ ಗತಿಯಾಗುತ್ತಿತ್ತು.
ನಮ್ಮ ಮನೆಯ ಪಕ್ಕದಲ್ಲಿ ಎತ್ತಿನ ಗಾಡಿ ನಿಲ್ಲಿಸುವ ಜಾಗದಲ್ಲಿ ಸ್ವಲ್ಪ ದಿನ ಆಡಿದೆವು.ಆಗ ನಡೆದಂತಹ ಒಂದು ಘಟನೆ.
ಆಟದ ಮಧ್ಯೆ ಒಮ್ಮೆ ಬಾಲು ಬೇಲಿಯ ಸಂಧಿ ಹೋಯಿತು.ಅಲ್ಲಿದ್ದ ಒಬ್ಬ ಹುಡುಗ ಬಾಲ್ ತರಲು ಹೋದವನು,"ಲೋ ಬರ್ರೋ ಇಲ್ಲಿ,ನೋಡ್ರೋ" ಅಂದ.
ಏನಪ್ಪಾ ಅಂತ ಹತ್ತಿರ ಹೋಗಿ ನೋಡಿದರೆ ಅಲ್ಲೊಂದು ಜೇನು ಕಟ್ಟಿತ್ತು.ಅದಕ್ಕೂ ಮುಂಚೆ ಯಾರು ಕೂಡ ಜೇನನ್ನು ಅಳಿಸಿರಲಿಲ್ಲ,ದೂರದಿನ್ದ ನೋಡಿದವರೇ.
ಸರಿ ಇನ್ನೇನು ಸಾಹಸಕ್ಕೆ ಕೈ ಹಾಕೋಣ ಎಂದು ನಿರ್ಧರಿಸಿ  ಎಲ್ಲ ಸಾಮಗ್ರಿಗಳನ್ನಿ ಸಿದ್ಧ ಪಡಿಸಿಕೊಂಡೆವು.
ಒಬ್ಬ ಹೇಳಿದ 'ಇದು ಕೋಲು ಜೇನು  ,ಸ್ವಲ್ಪ ಹುಷಾರಾಗಿರಬೇಕು,ಕಡಿದರೆ ಮುಖ ಊದುತ್ತದೆ"ಅಂತ.
ಸರಿ ಸೌದೆ,ತೆಂಗಿನ ಗರಿಗಳಿಗೇನೂ ಬರ ಇಲ್ಲ,ಬೆಂಕಿ ಪೊಟ್ಟಣ ಮತ್ತು ಒಂದು ಪಾತ್ರೆ ನಮ್ಮ ಮನೆಯಿಂದ ತಂದಿದ್ದಾಯಿತು.
ಮೊದಲು ಸ್ವಲ್ಪ ದೂರದಿನ್ದ ಸೋಗೆ ಗರಿಗಳಿಗೆ  ಬೆಂಕಿ ಹಚ್ಚಿ ಉರುಲು ಕೊಟ್ಟೆವು,ಯಾಕೋ ಜೇನುಗಳು ಜಗ್ಗಲಿಲ್ಲ.ಜೋರಾಗಿ ಬೆಂಕಿ ಹಚ್ಚುವ ಅಂದರೆ ಹತ್ತಿರದಲ್ಲೇ ಹುಲ್ಲಿನ ಮೆದೆ ಇದೆ(ಹಸು ಕರುಗಳಿಗೆ)
.ನಂತರ ಒಂದೆರಡು ಬಕೆಟ್  ನೀರು ತಂದು ,ಸ್ವಲ್ಪ ಜೋರಾಗಿ ಬೆಂಕಿ ಕಾವು ಕೊಟ್ಟೆವು.ಆಗ ಜೇನು ಒಂದೊಂದಾಗಿ ಪರಾರಿಯಾಗಲು ಶುರು  ಮಾಡಿದವು.ಜೊತೆಗೆ ಎಲ್ಲರಿಗು ಒಂದು ಅಥವಾ ಎರಡೆರಡು ಕಡೆ ಕಡಿದಿದ್ದವು.
ಸ್ವಲ್ಪ ಸಣ್ಣಗೆ ಊತ ಕೂಡ ಬಂದಿತ್ತು.ಎಷ್ಟೇ ಜೇನು ನೊಣಗಳು ಪರಾರಿಯಾದರು ಅಲ್ಲೊಂದು ಇಲ್ಲೊಂದು ಇದ್ದವು.ನಂತರ ಉಳಿದ ಗೆಡ್ಡೆಯನ್ನು ತೆಗೆದು ಹಿಂಡುತ್ತ ಹೋದರೆ ಸುಮಾರು ಅರ್ಧ ಲೀಟರ್ ಫ್ರೆಶ್ ಜೇನು ತುಪ್ಪ.
ಅಲ್ಲಿದ್ದ ಸುಮಾರು  - ಜನ ತೃಪ್ತಿಯಿಂದ ಆಗುವಷ್ಟು ತಿಂದೆವು.
ಆಗ ಅಲ್ಲೊಬ್ಬ ಹುಡುಗ "ಯಾರು ಕೈ ತೊಳೆದು ಕೊಳ್ಳುವವರೆಗೂ  ತಲೆ ಮುಟ್ಟಿ ಕೊಳ್ಳ ಬೇಡಿ  ಕೂದಲೆಲ್ಲ ಬಿಳಿ ಆಗುತ್ತೆ "ಅಂದ.ಇದು ಎಷ್ಟರ ಮಟ್ಟಿಗೆ ನಿಜ ಅಂತ ಗೊತ್ತಿಲ್ಲ.
ಸಮಯದಲ್ಲಿ ನಮ್ಮ ಮನೆಯಲ್ಲಿ ಯಾರು ಇರಲಿಲ್ಲ.ಬಂದ  ನಂತರ ಅಪ್ಪ ಅಮ್ಮನ ಹತ್ತಿರ ವಿಷಯ ಹೇಳಿದಾಗ ಅವ್ರು ಸರಿಯಾಗಿ ಕಡಿದಿದ್ದರೆ ಚೆನ್ನಾಗಿರುತಿತ್ತು.ಬರೀ ಇಷ್ಟೇನಾ ಊದಿರದು ಅಂತ ಹೇಳಿದ್ದರು.ನನಗೆ ನನ್ನ ತುಟಿಯಲ್ಲಿ ಸ್ವಲ್ಪ ಊದಿತ್ತು.ಮಾರನೆಯ ದಿನ ಶಾಲೆಗೇ ಅದೇ ಮುಖದಲ್ಲಿ ಹೋಗಿದ್ದೆ..
ಹೀಗೆ ನಮ್ಮ ಕ್ರಿಕೆಟ್ ಸಾಗುತ್ತಿತ್ತು.ಮಾಮೂಲಿ ಜಗಳಗಳು,ಮತ್ತೆ ಹೊಂದಾಣಿಕೆ ನಮ್ಮ ರಾಜಕೀಯ ಪಕ್ಷಗಳ ತರಹ ಸಾಗುತ್ತಿತ್ತು.

Monday, May 23, 2011

ರೈಲಿನಲ್ಲಿ ನಡೆದ ಕೆಲವು ಪ್ರಸಂಗಗಳು!!!!

BMTC ಬಸ್ ಇಳಿದು ಆ ಬಿಸಿಲ ಧಗೆಯಲಿ ಎರಡೂ  ಕೈಯಲ್ಲಿ ಲಗೇಜು ಹಿಡಿದು,fly over ಏರಿ  ಮತ್ತೆ ಕೆಳಗಿಳಿದು ಅಂಡರ್ ಪಾಸ್ ಎಂಬ ಸುರಂಗ ದಾಟಿ ,ಕೌಂಟರ್ ಮುಂದೆ ಲಗೇಜು ಇಟ್ಟು ಟಿಕೆಟ್ ಕೊಡಿ ಎಂದರೆ ಸರ್ ಚೇಂಜ್ ಇಲ್ಲ ದಯವಿಟ್ಟು ನೀವೇ ಇದ್ದರೆ ಕೊಟ್ಟು ಬಿಡಿ ಎಂದು ಆಕೆ ಹೇಳಿದಾಗ,'ಇದ್ದಿದ್ರೆ ಕೊಡುತ್ತಿದ್ದೆ,ನನ್ನ ಹತ್ರಾನು ಇಲ್ಲ ಎಂದರೆ ನೀವೇ ತಗೊಂಡು ಬರಬೇಕು ಎಂದಳು...
ಸರಿ ಬಿಡಮ್ಮ ತಾಯಿ ಎಂದು ಮನಸಿನಲ್ಲೇ ಹೇಳಿಕೊಳ್ಳುತ್ತಾ,ಹೇಗೂ  ಊಟ ಮಾಡಿಲ್ಲ,ಹೋಟೆಲಿಗೆ ಹೋದರೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ,ಊಟ ಮಾಡಿ ಆಕೆಯ ಇಚ್ಚೆಯಂತೆ ಚೇಂಜ್ ಕೊಟ್ಟು ಟಿಕೆಟ್ ತಗೊಂಡು ಮತ್ತೆ ಎರಡು ಕೈಯಲ್ಲಿ ಲಗೇಜು ಹಿಡಿದು ಅವಸರ ಅವಸರವಾಗಿ platform ಕಡೆಗೆ ಹೋಗುತ್ತಿದ್ದರೆ,ಬಿಸಿಲ ಧಗೆಗೆ ಬೆವರು ತೊಟ್ಟಿಕ್ಕುತ್ತಿತ್ತು.
*************************************
ಮುಕ್ಕಾಲು ಘಂಟೆ ಮುಂಚೆಯೇ ಬಂದು ರೈಲು ಹತ್ತಿ ಸೀಟಿಗಾಗಿ ಅರಸುತ್ತ ರೈಲಿನೊಳಗೆ ಸಾಗುತ್ತ ಹೋದೆ.ಕೆಲವು ಸೀಟು ಖಾಲಿ ಇದ್ದರು,ಆಗಲೇ ಅದನ್ನು ಆಕ್ರಮಿಸಿಕೊಂಡಿದ್ದವರ ಮುಖ ಚರ್ಯೆ ಇಂದ  ಕೂರಲು  ಮನಸ್ಸಾಗಲಿಲ್ಲ,ಹಾಗೆ ಮುಂದೆ ಸಾಗುತ್ತ ಹೋದಂತೆ ಎದುರು ಬದುರು ಸೀಟಿನಲ್ಲಿ ಒಬ್ಬೊಬ್ಬರು ಕೂತಿದ್ದರು,ಒಬ್ಬ ಸುಮಾರು ೧೫ ಪ್ರಾಯದ ಹುಡುಗ,ಇನ್ನೊಬ್ಬ ಬಹುಷಃ ೨೦ ಇರಬಹುದು...
***************************************
ಹಾಗೆ formality ಗೆ ಯಾರಾದ್ರು ಬರ್ತಾರ? ಎಂದು ಕೇಳಿದ ಕೂಡಲೇ,ಆ ಚಿಕ್ಕ ಹುಡುಗ "ಹೌದು ಅಣ್ಣ  ,ಇಬ್ಬರು  ಬರ್ತಾರೆ"ಅಂದ,ಇನ್ನೊಬ್ಬ"ಏ,ಇಲ್ಲ ಕೂರಿ ಸರ್ "ಅಂತ ಹೇಳಿ ಸ್ವಲ್ಪ ಸರಿದ..
"ಅಲ್ಲಪ್ಪ ,ಯಾರೋ ಬರ್ತಾರೆ ಅಂದೆ?"
"ಏನ್ ಮಾಡೋದು ಅಣ್ಣ ,ಆರಾಮಾಗಿ ಕೂರಬೇಕಲ್ಲ ಅದಕ್ಕೆ"
"ಮುಂಚೆ ಬಂದು ಕೂತಿದ್ಯ,ಅದಕ್ಕೆ ಹೀಗೆ ಹೇಳಿದೆ,ಬೇರೆ ಯಾರಾದ್ರೂ ಈ ಥರಾ ಕೂತು,ನಿನಗೆ ಇದೆ ಥರಾ ಹೇಳಿದ್ರೆ?"
"ಹೀ ಹೀ ಹೀ"ಅಂತ  ನಕ್ಕ.
ಸರಿ ಅಂತ ಲಗೇಜು ಇಟ್ಟು,ಅಲ್ಲೇ ಕೂತರೆ ಬೆವರು  ಇಳಿಯುತ್ತಿದೆ..ಫ್ಯಾನ್ ಕೂಡ ಆನ್ ಇಲ್ಲ,ಇದೆ initial point ಆದ್ದರಿಬ್ದ ರೈಲು ಹೊರಡುವ ಅರ್ಧ ಘಂಟೆ ಮುಂಚೆ ಫ್ಯಾನ್ ಆನ್ ಮಾಡುತ್ತಾರೆ.
ಪ್ರಯಾಣ ಮಾಡುವಾಗ  ಯಾವುದಾದರು ಪುಸ್ತಕ ಓದುವ ಅಭ್ಯಾಸ ನನಗೆ.ಅಭ್ಯಾಸ ಬಲದಂತೆ ಪುಸ್ತಕ ತೆಗೆದು,ಶೆಖೆ ಇದ್ದರಿಂದ ಸ್ವಲ್ಪ ಒತ್ತು ಗಾಳಿ ಬಿಸಿಕೊಳ್ಳೋಣ ಎಂದು,ಆ ಪುಸ್ತಕದಲ್ಲೇ ಬೀಸಿಕೊಳ್ಳುತ್ತಿದ್ದೆ.
"ಇನ್ನೊಂದು ೧೦ ನಿಮಿಷ ಅಣ್ಣ,ಇನ್ನೇನ್ ಫ್ಯಾನ್ ಆನ್ ಮಾಡುತ್ತಾರೆ" ಅಂತ ಅವನೇ ಶುರು ಮಾಡಿದ.
ಸರಿ ಮತ್ತಿನ್ನೇನು ಮಾಮೂಲು  ಚಾಳಿಯಂತೆ ಇಬ್ಬರೂ ಎಲ್ಲಿಗೆ ಹೋಗಬೇಕು,ಯಾವೂರು,ಅದೂ  ಇದು ಕುಶಲೋಪರಿ ಮಾತಾಡುತ್ತ ಕುಳಿತೆವು,ಎದುರುಗಿದ್ದವನು ಮಧ್ಯೆ ಏನೇನೋ ಪಸರಿಸುತ್ತಿದ್ದ.
ಸರಿ ಫ್ಯಾನ್ ಆನ್ ಆಯಿತು,ಪುಸ್ತಕ ತೊಡೆ ಮೇಲಿಟ್ಟು,ಸ್ವಲ್ಪ ನಿದ್ದೆ ಮಾಡೋಣ ಅನಿಸಿತು,ಹಾಗೆ ನಿದ್ರೆಗೆ ಜಾರಿದೆ.
*******************************************
ಸ್ವಲ್ಪ ಸಮಯದ ನಂತರ ಏನೇನೋ ಕಿವಿಗೆ ಬಿಳಲು ಶುರು ಆಯಿತು,ಯಾವುದೋ ಸಿನಿಮಾ ಗೀತೆ,
ಜೊತೆಗೆ ಯಾರೋ ಒಬ್ಬ "ಏ ಮುಚ್ಕಂಡು ಹೋಗು,ಕೊಡಲ್ಲ ಅಂತ ಹೇಳಿಲ್ವ?"
"ಏ ಅಣ್ಣಯ್ಯ,ಮಾಮು ಕೊಡೋ,ಯಾಕ್ ಹೀಗೆ ಸತಾಯಿಸುತ್ತಿದ್ದಿಯ?"ಅಂತ ಕೇಳಿಸಿತು.
ಎದ್ದು ನೋಡಿದರೆ,ನಾನು ಹತ್ತಿದಾಗ ತಕ್ಕ ಮಟ್ಟಿಗೆ ಖಾಲಿ ಇದ್ದ ಭೋಗಿ ತುಂಬಿದೆ,ಅಲ್ಲದೆ ಮೇಲಿನ ಸಂಭಾಷಣೆ ಪಕ್ಕದ ಸೀಟಿನಲ್ಲಿ ನಡೆಯುತ್ತಿದೆ,ಅಲ್ಲದೆ ರೈಲು ಯಶವಂತಪುರ ದಾಟಿದೆ.
ಅಲ್ಲಿ ಕೂತಿದ್ದ ಒಬ್ಬ ಯುವಕನಿಗೆ ಹಿಜಡಾ ದುಡ್ಡಿಗಾಗಿ ಪೀಡಿಸುತ್ತಿದ್ದ(ಳು)(ನು)(ತ್ತು).
ಅಲ್ಲಿಂದ ನಮ್ಮ ಸೀಟಿಗೆ ಬಂದು ಕೈ ಯೊಡ್ಡಿದಾಗ,ಅದರ ಜೊತೆ ಏನು ಮಾತು ಎಂದು ಸುಮ್ಮನೆ ಒಂದಷ್ಟು ಚಿಲ್ಲರೆ ಕೊಟ್ಟೆ.ರೈಲಿ ನಲ್ಲಿ  ಪ್ರತಿ ಸಾರಿ ಪ್ರಯಾಣ ಮಾಡುವಾಗ ಇದು ಮಾಮೂಲು,ಒಂಥರಾ ಮಾಮಂದಿರ ಮಾಮುಲಿದ್ದ ಹಾಗೆ.....

ಸರಿ ಅದು ಆಕಡೆ ಹೋದ ತಕ್ಷಣ ಪಕ್ಕದ  ಸೀಟಿನಲ್ಲಿ ಕೂತಿದ್ದ ಇಬ್ಬರು  ಚಿಕ್ಕ ಮಕ್ಕಳು ಸುಮಾರು ೭ ವರ್ಷ ಇರಬಹುದು.
ಅದರಲ್ಲೊಬ್ಬ  ತನ್ನ ಅಪ್ಪನಿಗೆ 'ಅಪ್ಪ ಇವರ್ಯಾರು ?"ಅಂದ,ಅವನ ಅಪ್ಪ ಮಾತು ಶುರು ಮಾಡುವ ಮುಂಚೆಯೇ ಇಷ್ಟೊತ್ತು ಅದರ ಜೊತೆ ವಾಗ್ವಾದ ಮಾಡುತ್ತಿದ್ದ ಇನ್ನೊಬ್ಬ"ಅಯ್ಯೋ ಬಿಡ್ರಪ್ಪ,ಯಾಕ್ ತಲೆ ಕೆಡಿಸ್ಕೊಳ್ತಿರ?"ಅಂದಾಗ
ಇನ್ನೊಬ್ಬ"ದೇವರು ಕಣಪ್ಪ"ಅಂದು ಬಿಟ್ಟ.
ಪಾಪ ಕಿಡಕಿ ಬದಿಯಲ್ಲಿ ಕೂತಿದ್ದ ಆ ಮಕ್ಕಳ  ತಾಯಿ ಕಕ್ಕಾ ಬಿಕ್ಕಿಯಾಗಿ ಬಿಟ್ಟರು.
ಇತ್ತ ಒಬ್ಬ ಮಗ ಅಪ್ಪನಿಗೆ ,ಇನ್ನೊಬ್ಬ ಮಗ ತಾಯಿಗೆ "ಹೌದೆನಪ್ಪ,ಹೌದೆನಮ್ಮ,ದೇವರು ಅಂದ್ರೆ ಇವರೇನಾ ಅಂತ ಪೀಡಿಸಲು ಶುರು ಮಾಡಿದರು.
ಅವರು ಕಾಟ ತಡೆಯಲಾರದೆ"ಇವರು ಗಂಡು ಅಲ್ಲ,ಹೆಣ್ಣು ಅಲ್ಲ"ಅಂದ.
ಅವರಿಬ್ಬರಲ್ಲಿ ದೊಡ್ಡವನು"ಗಂಡು ಅಂದ್ರೆ ಪುಲ್ಲಿಂಗ,ಹೆಣ್ಣು ಅಂದ್ರೆ ಸ್ತ್ರೀಲಿಂಗ,ಇವರು ಯಾವ ಲಿಂಗ"ಅಂದ....
ಶಾಲೆಯ  ಪರಿಭಾಷೆ ಇರಬಹುದು..
ಇರಲಿ.....
***********************************
ಹೀಗೆ ಅವರ ಮಾತು ನಡೆಯುತ್ತಿತ್ತು..
ನಾನು ನನ್ನ ಪಾಡಿಗೆ ತೊಡೆ ಮೇಲಿದ್ದ ಪುಸ್ತಕ ಓದಲು ಶುರು ಮಾಡಿದೆ..
ಎಲ್ಲಾ ರೈಲಿನ ಹಾಗೆ ಇದರಲ್ಲೂ ಚುರುಮುರಿ,ಬಿಸ್ಕತ್ತು,ಕಾಫಿ,ಟೀ ಮಾರುವವರು ಬರುತ್ತಲೇ ಇದ್ದರು,ನನ್ನ ಪಾಡಿಗೆ ಕಾದಂಬರಿ ಓದುತ್ತ,ಮಧ್ಯದಲ್ಲಿ ಪಕ್ಕದಲ್ಲಿದ್ದವನ ಜೊತೆ ಹರಟುತ್ತ ಕಾಲ ಕಳೆಯುತ್ತಿದ್ದಾಗ,ಬಿಸ್ಕತ್ತು ಮಾರುವವನು ಬಂದ..

ಪಕ್ಕದ ಸೀಟಿನ  ಆ ಹುಡುಗರು,ಬೇಕು ಎಂದಾಗ,ಮಕ್ಕಳ ಆಜ್ಞೆಯಂತೆ ಕೊಡಿಸಲು ಮುಂದಾದ ಅಪ್ಪನಿಗೆ,ಒಬ್ಬ ಕ್ರೀಂ ಬಿಸ್ಕೇಟು ಬೇಕು ಅಂದ,ಇನ್ನೊಬ್ಬ ಇನ್ನೇನೋ ಬೇಕು  ಎಂದ,ಮಾರುವವನು ಯಾವುದೋ ಒಂದ ತಗಂಡು ದುಡ್ಡು ಕೊಡಪ್ಪ,ಮುಂದಕ್ಕೆ ಹೋಗಬೇಕು ಅಂತ ಮನಸ್ಸಿನಲ್ಲೇ ಅಂದು ಕೊಂಡಿರಬೇಕು,ಅಲ್ಲಿಯವರೆಗೂ ಇತ್ತು ಅವರ ಕಾಟ,
ಯಾವುದೋ ಒಂದೂ ತಗಂಡ್ರು,ದುಡ್ಡು ಕೊಟ್ಟ,ಅವನು ಮುಂದಕ್ಕೆ ಹೋದ..
******************************************************************************
ಇನ್ನು ಸ್ವಲ್ಪ ಸಮಯದ ನಂತರ ನೀರು ಮಾರುವವನು ಬಂದ,ನನ್ನ ಹಿಂದಿನ ಸೀಟಿನಲ್ಲಿ ಕೂತಿದ್ದ ಹುಡುಗಿ  ಬೇಕೆಂದಾಗ ಅವನು ಒಂದು  ಬಾಟಲ್ ವಾಟರ್ ಕೊಟ್ಟ,ಅವಳು cold ನೀರು ಇಲ್ಲವ ಅಂತ ಕೇಳಿದಳು,ಅವನೇನು refrigerator
ಕೂಡ ಇಟ್ಟುಕೊಂಡು ಓಡಾಡ ಬೇಕಾ ?ಅವಳ ಮಾತಿಗೆ ಅತಿಶಯೋಕ್ತಿ ಅನ್ನಬೇಕೋ,ಅವಿವೇಕತನ ಅನ್ನಬೇಕೋ ಅಥವಾ ದುರಹಂಕಾರ ಅನ್ನಬೇಕೋ ಒಂದೂ ತಿಳಿಯಲಿಲ್ಲ.....
*******************************************************************************
ಸ್ವಲ್ಪ ಮುಂದೆ ಹೋದಾಗ  ಒಂದು  ಚಕ್ಕ ಮಗು ಚಡ್ಡಿಯಲ್ಲೇ ಮಲ ವಿಸರ್ಜನೆ ಮಾಡಿತು,ಅದರ ತಾಯಿ ಹತ್ತಿರವೇ ಇದ್ದ ಡೋರ್ ಬಳಿ ಹೋಗಿ ಆ ಮಗುವನ್ನು  ತೊಳೆಯಲು  ಮೊದಲು   ಮಾಡಿದಳು ,ಗಾಳಿ ಬೀಸುತ್ತಿದ್ದ ಕಾರಣ,ಆ ನೀರು ಗಾಳಿಗೆ ಹಿಂದೆ ಕಿಡಕಿ ಬಳಿ ಕೂತಿದ್ದವರಿಗೆ ಹಾರುತ್ತಿತ್ತು,ಅಲ್ಲೊಬ್ಬ  ಸಿಡಿದೆದ್ದು ಆ ಕಡೆ toilet ಇದೆ ಅಲ್ಲಿಗೆ ಹೋಗಿ ತೊಳೆಯಬಾರದ ,ಬುದ್ದಿ ಗಿದ್ದಿ  ಇದಿಯ ಅಂತ ದಬಾಯಿಸಿದ.
'ಅಯ್ಯೋ ಮಗು ಸರ್ ,ಏನ್ ಮಾಡ್ಲಿ ?"
"ಹೌದಮ್ಮ ಮಗೂನೆ,ತೊಳಿತಿರೋದು ನೀನ್ ತಾನೆ,ಅಲ್ಲೋಗು,ಇಲ್ಲಿ  ಕೂತಿರುವವರಿಗೆ ಮುಖಕ್ಕೆ ಹಾರುತ್ತಿದೆ,ಅಸಯ್ಯ ಅನ್ಸುತ್ತೆ"
ಅವಳ ವರ್ತನೆಗೆ ಏನನ್ನಬೇಕು....ನೀವೇ ಹೇಳಿ...
*************************************************************
ಹೀಗೆ ಮುಂದೆ ಹೋದಂತೆ,ಅಲ್ಲೊಂದು ಕ್ರಾಸಿಂಗ್ ಗೆ ಸ್ವಲ್ಪ ಸಮಯ  ನಿಲ್ಲಿಸಿ ಬಿಟ್ಟ,ಮತ್ತೆ ಕಾಫಿ,ಟೀ ಅದು ಇದು ವ್ಯಾಪಾರ ಶುರು ಆಯಿತು  ,ಸ್ವಲ್ಪ ಜೋರಾಗಿಯೇ  ಯಾಕೆ   ಅಂದ್ರೆ  ,ಕ್ರಾಸಿಂಗ್ ಇದೆಯಲ್ಲ  ಹಾಗಾಗಿ ..
ಕೂತು  ಕೂತು  ಸಾಕಾಗಿತ್ತು ,ಎಲ್ಲರಂತೆಯೇ  ನಾನು ಕೂಡ ಪುಸ್ತಕ ಅಲ್ಲೇ ಇಟ್ಟು( ಸೀಟು ಕಾದಿರಿಸಿದೆ .ಟವೆಲ್ಲು  ಹಾಕುವ  ಬುದ್ದಿ ನಮ್ಮ ಜಾಯಮಾನದಲ್ಲಿಯೇ  ಅಂಟಿಕೊಂಡು  ಬಂದಿದೆ ,ಯಾರೋ ಕೂತಿದ್ದ ಸೀಟಿಗೆ ಸೀಟು ಹಾಕುವವರು ,ಇಷ್ಟೊತ್ತು ಆ ಸೀಟನ್ನು  ವಿರಾಜಮಾನವಾಗಿ ಆಳಿ ,ಈಗ  ಬಿಟ್ಟು  ಕೊಡುತ್ತೀನ  ?ಖಂಡಿತ  ಇಲ್ಲ)
ಕೆಳಗಿಳಿದು platform ನಲ್ಲಿ  ಟೀ ಹೀರುತ್ತಾ  ನಿಂತು  ಬಿಟ್ಟೆ ,
ಅಷ್ಟೊತ್ತಿಗಾಗಲೇ  ಅಲ್ಲೊಂದು ಇಲ್ಲೊಂದು  ಗುಂಪುಗಳು  ಆಗಿ  ದೇಶದ  ಎಲ್ಲಾ ವಿಚಾರಗಳು ಎಲ್ಲರ  ಬಾಯಲ್ಲೂ  ರಾರಾಜಿಸುತ್ತಿದ್ದವು ,ನಾನು ಕೂಡ ಒಂದು   ಗುಂಪಿಗೆ  ಸದಸ್ಯನಾಗಿಬಿಟ್ಟೆ ,ಜೊತೆಗೆ ಮೇನಕ ,ಮಾಧುರಿ  ಏನಾಗಬಹುದು  ಮುಂದೆ ಎಂಬುದು  ತಲೆಯಲ್ಲಿ  ಹುಳು ಬಿಟ್ಟ ಹಾಗೆ ಆಗಿತ್ತು (ಮೇನಕ ,ಮಾಧುರಿ ನಾನು ಓದುತ್ತಿದ್ದ ಕಾದಂಬರಿಯ ಪಾತ್ರಗಳು )
ಅಷ್ಟರಲ್ಲೇ ಯಾರೋ ಒಬ್ಬ ಕಿಡಕಿಯಿಂದ ಕಾಫಿ ಕಪ್ ಅನ್ನು ಹೊರಗೆ ಎಸೆದ,ಅದು ನಮ್ಮ ಗುಂಪಿನ ಪಕ್ಕದಲ್ಲಿಯೇ ಬಿತ್ತು,ಆಗ ಅಲ್ಲೊಬ್ಬ ಅದನ್ನು ಕೆಳಕ್ಕೆ ತಳ್ಳುತ್ತ "ಈ ಮುಂಡೆ ಮಕ್ಕಳಿಗೆ ಮಾನ ಮರ್ಯಾದೆ ಇಲ್ಲ,ಹೀಗಾ ಬಿಸಾಡೋದು platform  ಮೇಲಕ್ಕೆ,?ಯಾರಾದ್ರೂ ಓಡಾಡುತ್ತಿರುತ್ತಾರೆ ಅನ್ನೋ common  ಸೆನ್ಸ್ ಕೂಡ ಇಲ್ಲ"
"ನಮ್ಮ ಜನಗಳಿಗೆ ಸರ್ಕಾರಿ ಜಾಗ ಅಂದ್ರೆ ಹೀಗೆ,ಹೆಂಗ್ ಬೇಕೋ ಹಂಗೆ,ಅವರ ಮನೇಲೂ ಈ ಥರಾ ಬಿಸಾಡುತ್ತಾರ ?" 
"ಅಯ್ಯೋ ಬಿಡಿ ಸರ್,ಏನ್ ಮಾಡಕ್ಕಾಗುತ್ತೆ ,ಈ ನನ್ ಮಕ್ಕಳಿಗೆ  ಬುದ್ಧಿ  ಬರಲ್ಲ,ಅವರು ಹೀಗೇನೆ"
"ಏನೋ ಸರ್,ನಮ್ಮ ಯಡ್ಡಿ ಏನಾದ್ರು? ಗಾಂಧೀ statue ಮುಂದೆ ಧರಣಿ ಮಾಡಿದರಂತೆ,ಇವಾಗ ಈ ಸಂಜೆ ಪೇಪರ್ ನಲ್ಲಿ  ಓದಿದೆ"
"ಏನಾದ್ರೂ ಮಾಡ್ಕೊಂಡು ಹಾಳಾಗಿ ಹೋಗಲಿ ಬಿಡಿ"
"ಏನ್ ಕೆಲಸ ಮಾಡಿದ್ದಾರೆ ಸರ್ ಇವರು,ಒಂದು ರೋಡ್ ನೆಟ್ಟಗೆ ರಿಪೇರಿ   ಮಾಡಿದ್ದಾರಾ?,ಜಪಾನ್ ನಲ್ಲಿ ಸುನಾಮಿ ಆದಾಗ ಒಂದು ವಾರಕ್ಕೆ ಯಾರ ಹೆಲ್ಪ್ ಇಲ್ಲದೆ ಅವರೇ ರೋಡ್  ರಿಪೇರಿ ಮಾಡಿದ್ದರೆ,ಇವರು ನೋಡಿದ್ರೆ  ಹೀಗೆ"
ಇನ್ನೊಬ್ಬ Hiroshima,naagasaki ವಿಷಯ ತೆಗೆದು ಶುರು ಮಾಡಿದ..
"ನಮ್ಮ ಶಿರಾಡಿ ಘಾಟ್ ರೋಡ್ ನಲ್ಲಿ ಮಳೆಗಾಲದಲ್ಲಿ ಹಾಳಾಗಿ ಹೋಗುತ್ತೆ,ಅವರು ರಿಪೇರಿ ಮಾಡೋ ಹೊತ್ತಿಗೆ ಮುಂದಿನ ಮಳೆಗಾಲ ಬಂದಿರುತ್ತೆ"ಅಂದೆ..
ಅಷ್ಟೊತ್ತಿಗೆ ಇನ್ನೊಬ್ಬ  ಈ ರೈಲು ಇಷ್ಟೊತ್ತು ನಿಂತು ಬಿಟ್ಟಿತಲ್ಲ ,ನಂಗೆ ಬಸ್ ಮಿಸ್ ಆಗಬಹುದು  ಅಂದ . 
ನನಗೂ ಅದೇ ತವಕ ಶುರು  ಆಯಿತು,ಯಾಕಂದ್ರೆ  ಅದೇ ಲಾಸ್ಟ್ ಬಸ್.
ಸ್ವಲ್ಪ ಹೊತ್ತಿನಲ್ಲೇ ಎದುರಿಂದ ಬಂದ ರೈಲು ವೇಗವಾಗಿ  ಹೋಯಿತು,ಇನ್ನೇನು ನಮ್ಮ ರೈಲಿನ ಸೈರನ್ ಕೂಗ ಬೇಕು ಅಷ್ಟೊತ್ತಿಗೆ platform ನಲ್ಲಿದ್ದ ಜನ ರೈಲಿಗೆ ಹತ್ತುತ್ತಿದ್ದರು..
ಒಬ್ಬ "ಇವನು ಇದೆ ಥರಾ ಫಾಸ್ಟ್ ಆಗಿ ಹೋಗಿ ಟೈಮ್ ಪಿಕ್ ಅಪ್ ಮಾಡ ಬೇಕು,ಆಗ್ಲೇ ಅರ್ಧ ಘಂಟೆ ಲೇಟ್ ಆಗಿ ಬಿಟ್ಟಿದೆ"ಅಂದರೆ,ಇನ್ನೊಬ್ಬ "ರೈಲು ಯಾವತ್ತು ಕರೆಕ್ಟ್ ಟೈಮ್ ಗೆ ಬರುತ್ತೆ ರೀ?"ಅಂದ..ಕಾಟು ಸತ್ಯದ ಮಾತು...
ಹೋಗ್ಲಿ ಬಿಡಪ್ಪ ಇನ್ನೇನ್ ಮಾಡಕ್ಕಾಗುತ್ತೆ ಅಂತ ಹತ್ತಿದೆವು..
ಅದಲ್ಲದೆ ಬೇರೆ ಬೇರೆ ವಿಷಯಗಳು ಪ್ರಸ್ತಾಪ ಆಗಿದ್ದವು..
ಮುಂದೆ ಸಾಗಿತು ನಮ್ಮ ಪಯಣ ಹಾಗೆಯೇ...ನನ್ನ ಲಾಸ್ಟ್ ಬಸ್ ಹಿಡಿದು ಬಂದು ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಸಮಯ  ೧೦ ಘಂಟೆ...
ಇದೆ ರೀತಿ ರೈಲು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ  ಇನ್ನು ವಿಚಿತ್ರ  ಘಟನೆಗಳಿಗೆ ಸಾಕ್ಷಿ ಆಗಿದ್ದೇನೆ..
ಹೀಗೆ ಸಾಗಿತು ನನ್ನ ಊರಿನ ಪ್ರಯಾಣ..

Saturday, May 7, 2011

ದೀಪಾವಳಿ !!


ನಾಳೆ ದೀಪಾವಳಿ,ಹಬ್ಬದ ತಯಾರಿ ಸ್ವಲ್ಪ ಜೋರಾಗಿಯೇ ನಡೆದಿದೆ....ಮನೆಯಲ್ಲಿ ಏನೋ ಒಂಥರಾ ಸಂಭ್ರಮ...೬ ವರ್ಷದ ಮುದ್ದಾದ ಮಗಳಿದ್ದಾಳೆ,ಅವಳಿಗೆ ಹಬ್ಬದ ಸಂಭ್ರಮ,ಪಟಾಕಿ ಎಲ್ಲಾ  ಕೊಡಿಸಿ ಹಾಗಿದೆ...
 ಇದ್ದಕಿದ್ದ ಹಾಗೆ  ಕಾಲಿಂಗ್ ಬೆಲ್ ರಿಂಗ್ ಆಯಿತು..ಯಾರು ಅಂತ ಬಾಗಿಲು ತೆಗೆದು ನೋಡಿದರೆ ರಮೇಶ...,ರಮೇಶ ಬರುತ್ತಾನೆ ಎಂದು ಕನಸಿನಲ್ಲಿಯೂ ನೆನೆಸಿರಲಿಲ್ಲ...
ರಮೇಶ ಮತ್ತು ನಾನು,ಇಬ್ಬರೂ ಕಾಲೇಜು ದಿನಗಳಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು,ಅವನು ನನ್ನ ಸೀನಿಯರ್,ನಾನು ನನ್ನ ಡಿಗ್ರಿ ಕೊನೆ ವರ್ಷಕ್ಕೆ ಬಂದಾಗ ಅವನಾಗಲೇ
ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ...ನನ್ನ ಡಿಗ್ರಿ ಮುಗಿದ ಮೇಲೆ ಇಬ್ಬರ ಮನೆಯಲ್ಲೂ ಒಪ್ಪಿಸಿ ಮದುವೆ ಮಾಡಿಕೊಳ್ಳುವುದಾಗಿ ಮಾತಾಗಿತ್ತು...ಆಗ ಅವನು ವಾರಕ್ಕೊಮ್ಮೆ ಊರಿಗೆ ಬಂದಾಗ ಇಬ್ಬರೂ ಭೇಟಿ ಮಾಡುತ್ತಿದ್ದೆವು....

ಬೇರೆ ದಿನಗಳಲಿ ಬರಿ ಫೋನು ಮತ್ತು ಇ-ಮೇಲ್ ನಲ್ಲಿ ನಮ್ಮಿಬ್ಬರ ಸಂಭಾಷಣೆ...
ಆದರೆ ದುರದೃಷ್ಟ ಅಂದರೆ ಇದೆ ಇರಬೇಕು.ಮನೆಯಲ್ಲಿ ಈ  ವಿಷಯ ಹೇಗೋ ತಿಳಿದು,ನನಗೆ ಮದುವೆ ನಿಶ್ಚಯ ಮಾಡಿ ಬಿಟ್ಟರು,ನಾನು ಮದುವೆ ಆದರೆ ರಮೆಶನನ್ನೇ ಆಗುತ್ತೇನೆ ಎಂದು ಹಠ ಹಿಡಿದರು ಕೂಡ ಯಾರು  ನನ್ನ ಮಾತನ್ನು ಕೇಳಲು ತಯಾರಿಲ್ಲ,ಕಡೆ ಪಕ್ಷ ನನ್ನ ಅಕ್ಕರೆಯ ಅಕ್ಕ ಕೂಡ,ಪ್ರೀತಿಯ ಅಣ್ಣ ಕೂಡ ಒಪ್ಪಲಿಲ್ಲ,ಅವನೇ ನನ್ನ ಮದುವೆಗೆ ಪಿತೂರಿ ಹೂಡಿದ್ದು...ಅವನೇ ಈ ಹುಡುಗನನ್ನು ಹುಡುಕಿದ್ದು, ಅಹಹ ಎಂತ ಹುಡುಗನನ್ನು ಹುಡುಕಿದ್ದಾನೆ,
ಅವನಿಗೂ ಮತ್ತು ರಮೇಶನಿಗೂ ಅಜ ಗಜಾಂತರ ವ್ಯತ್ಯಾಸ...

ನನ್ನ ತಾಯಿ ಕೂಡ ನನ್ನ ಮಾತನ್ನು ಕೇಳಲು ತಯಾರಿಲ್ಲ ,ಕಡೆ ಪಕ್ಷ ಮದುವೆ ಸ್ವಲ್ಪ ದಿನ ಮುಂದೂಡಿ,ನನ್ನ ಪರೀಕ್ಷೆ ಮುಗಿದ ಮೇಲೆ ಆಗುತ್ತೇನೆ ಎಂದರೂ ಯಾರು ಒಪ್ಪಲಿಲ್ಲ.
ಇಗಲೇ ಮದುವೆ ಆಗ ಬೇಕು ಎಂದರೆ ನಾನು ರಮೇಶನನ್ನು ಆಗುತ್ತೇನೆ ಎಂದೇ,ಆಗ ತಿಳಿಯಿತು ಇವರೆಲ್ಲ ಯಾಕೆ ಇವನನ್ನು ನನ್ನಿಂದ ದೂರ ಮಾಡುತ್ತಿದ್ದಾರೆ ಎಂದು,ನಮ್ಮಿಬ್ಬರದು ಬೇರೆ ಬೇರೆ ಜಾತಿ,ಇದೊಂದೇ ಕಾರಣಕ್ಕೆ ನಮ್ಮಿಬ್ಬರ ಮದುವೆಗೆ ಇವರ್ಯಾರು ಒಪ್ಪಲಿಲ್ಲ ....

ನನಗೆ ಮದುವೆ ಗೊತ್ತಾಗಿರುವ ವಿಷಯ ಅವನಿಗೆ ಇನ್ನೂ ತಿಳಿದಿರಲಿಲ್ಲ.,ನನ್ನ ಮೊಬೈಲನ್ನು ಅಣ್ಣ ಕಿತ್ತುಕೊಂಡಿದ್ದ .ಅವನಿಂದ ಫೋನ್ ಏನಾದ್ರೂ ಬಂದರೆ ಇವನೇ ಮಾತಾಡಿ ಅವನಿಗೆ ವಿಷಯ ಹೇಳುತ್ತಾನೋ ಏನೋ ಭಯ ಕಾಡುತಿತ್ತು..,ಅಥವಾ ಅವನಿಗೆ ಬೆದರಿಕೆ ಏನಾದ್ರೂ ಹಾಕಿದ್ದನೋ ಅದೂ ಗೊತ್ತಿಲ್ಲ . ...ನನ್ನ ಮದುವೆಯ ಸಮಯದಲ್ಲಿ ರಮೇಶ ಬಂದು ನನ್ನ ಅಣ್ಣನ ಜೊತೆ ಮಾತಾಡಿದ್ದ ಅಂತೆ...ಆದರೆ ಅವನಿಗೆ ಅಣ್ಣ ಮತ್ತು  ಅವನ ಸ್ನೇಹಿತರು ಸೇರಿ ಹೊಡೆದಿದ್ದರು... 
ನಂತರ ರಮೇಶ ಸುಮಾರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದನಂತೆ...ಹಾಗೆ ಇವರೆಲ್ಲ ಸೇರಿ ಥಳಿಸಿದ್ದರು.. ಆದಾದ ನಂತರ ನಾನು ಅವನನ್ನು ನೋಡುತ್ತಿರುವುದು ಇದೆ ಮೊದಲು...

ಕೊನೆಗೂ ಮನೆಯವರ ಇಚ್ಚೆಯಂತೆ ನನ್ನ ಮದುವೆ  ಅವರು ನೋಡಿದ ಹುಡುಗನ ಜೊತೆಗೆ ಆಯಿತು,ಈಗ ನಮಗೆ ೬ ವರ್ಷದ ಮಗಳಿದ್ದಾಳೆ...ನಾವು ತುಂಬ ಅನ್ಯೋನ್ಯ ವಾಗಿದ್ದೇವೆ ಎಂದು ತಿಳಿದಿದ್ದರೆ ಅದು ತಪ್ಪು,...
ಆ ಸಮಯದಲ್ಲಿ ಅಣ್ಣ ಅಕ್ಕ ಮತ್ತು ಮನೆಯವರಿಗೆಲ್ಲ ನನ್ನ ಗಂಡನ ವಿಷಯ ಗೊತ್ತಿದ್ದರು ಯಾರು ಕೂಡ ನನಗೆ ಹೇಳಿರಲಿಲ್ಲ,ಇವನಿಗೆ ಆಗಲೇ ಒಂದು ಮದುವೆ ಆಗಿ ಒಬ್ಬ ೧೨  ವರ್ಷದ ಮಗ ಕೂಡ ಇದ್ದನು,ಇವನ ಮೊದಲ ಹೆಂಡತಿಗೆ  ಕಾಯಿಲೆ ಇತ್ತು,ಅವಳು ಜಾಸ್ತಿ ದಿನ ಬದುಕುವುದಿಲ್ಲ ಎಂದು ಡಾಕ್ಟರ್ ಹೇಳಿದ್ದರಂತೆ...
ಆದ್ದರಿಂದ ಇವನಿಗೆ ಇನ್ನೊಂದು ಮದುವೆ ಆಗಲು ಕೆಲವರು  ಸಲಹೆ ನೀಡಿದ್ದರು ಮತ್ತು ಇವರು ನಮ್ಮ ದೂರದ ಸಂಭಂದಿ ಕೂಡ ಆಗಿದ್ದರು ..ನನ್ನ ಅಣ್ಣನಿಗೆ ಈ ವಿಷಯ ಮತ್ತು ನನ್ನ ರಮೇಶನ ಸ್ನೇಹದ ವಿಷಯ ಎರಡು ಒಟ್ಟಿಗೆ ಗೊತ್ತಾಗಿತ್ತು...
ಅಪ್ಪ ಅಮ್ಮನನ್ನು ಹೇಗೋ ಒಪ್ಪಿಸಿ ನನ್ನನ್ನು ಇವನ ಜೊತೆ ಮದುವೆ ಮಾಡಿಸಿ ಬಿಟ್ಟ...ನನ್ನ ಗಂಡ ನನಗಿಂತ ಏನಿಲ್ಲ ಅಂದರೂ ೧೫ ವರ್ಷ ದೊಡ್ಡವನು ..
ಆದ್ರೆ ನನಗೆ ಈ ಎಲ್ಲಾ ವಿಷಯ ಗೊತ್ತಾಗಿದ್ದು ನಾನು  ಇಲ್ಲಿಗೆ ಮದುವೆ ಆಗಿ ಬಂದು ೧ ವರ್ಷದ ನಂತರ..ಆದರೆ ಇವರ ಮೊದಲ ಹೆಂಡತಿ ಏಗೋ ಬದುಕಿದ್ದಾಳೆ,
ಆ ಕಾಯಿಲೆ ಕೂಡ ವಾಸಿಯಾಗಿದೆ..ಅವಳು ಮತ್ತು ಅವಳ ಮಗನನ್ನು ಅವಳ ತವರು ಮನೆಯಲ್ಲಿ ಇರಿಸಿದ್ದರಿಂದ ನನಗೆ ಈ  ವಿಷಯವೇ ಗೊತ್ತಿರಲಿಲ್ಲ,ಹೀಗೆ ಒಂದು ದಿನ ಅವಳು ಬಂದು ತನ್ನ ಪಾಲನ್ನು ಕೇಳಿದಾಗಲೇ ನನಗೆ ಗೊತ್ತಾಗಿದ್ದು,...
ಏನು ಮಾಡಬೇಕು ಎಂದು ಯೋಚಿಸುವ  ಸ್ಥಿತಿಯಲ್ಲಿ ಕೂಡ ನಾನು ಇರಲಿಲ್ಲ. ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ಸ್ಥಿತಿ ಏನು ಎಂದು ಅರ್ಥ ಮಾಡಿಕೊಳ್ಳಬಲ್ಲೆ,ಯಾರೇ ಆದರೂ ತನ್ನ ಗಂಡ ತಾನು ಬದುಕಿರುವಾಗಲೇ ಇನ್ನೊಬ್ಬಳನ್ನು ಮದುವೆ ಆಗುವುದನ್ನು ಸಹಿಸಿಕೊಳ್ಳುವುದಿಲ್ಲ.ನನಗೂ  ಅದೇ ರೀತಿಯ ಸ್ಥಿತಿ,ನನ್ನ ಗಂಡ  ನನಗಿಂತ ಮುಂಚೆ ಇನ್ನೋಬಳನ್ನು ವರಿಸಿದ್ದಾನೆ,ಆಕಾಶವೇ ಮೇಲೆ ಬಿದ್ದ ಹಾಗೆ ಆಯಿತು,ಯಾರನ್ನು ದೂರುವ ಪರಿಸ್ಥಿತಿ ಇಲ್ಲ ನನಗೆ....
ಇವನಿಗೆ ಅವಳ ಜೊತೆ ಸಂಸಾರ ಮಾಡಿ ಎಂದು ಹೇಳುವ ಧೈರ್ಯವೂ ಇಲ್ಲ.

ಕೊನೆಗೆ ಅವಳಿಗೆ ಕಾನೂನಿನ ಪ್ರಕಾರ ವಿಚ್ಚೇದನ ಕೊಟ್ಟು,ಅವಳಿಗೆ ಒಂದು ಮನೆಯನ್ನು ಕೊಡಿಸಿದ್ದಾಯಿತು..

ಸಮಯ ಕಳೆದ ನಂತರ ನಮಗೂ ಒಂದು ಮಗುವಾಯಿತು,ಆದರೆ ನನ್ನ ಗಂಡನಿಗೆ ನನ್ನ ಮೇಲೆ ಒಲವು ಕೂಡ ಕಡಿಮೆ ಆಯಿತು.ಯಾವಾಗಲು ಅವಳ ಮನೆಯಲ್ಲಿ ಇರುತ್ತಾನೆ,ಆಫೀಸು ಮುಗಿದ ಮೇಲೆ ಅವಳ ಮನೆಗೇ ಹೋಗುತ್ತಾನೆ,...
 ನನ್ನ ಅಡುಗೆಯೆಲ್ಲ ಮುಸುರೆಗೆ ಹಾಕುವುದು,ಅಪ್ಪ ಎಲ್ಲಿ ಎಂದು ಕೇಳಿದ ಮಗಳಿಗೆ ಆಫಿಸಿನಲ್ಲಿ ಕೆಲಸ ಇರುವುದರಿಂದ ಇವತ್ತು ಬರಲ್ಲ ನಾಳೆ ಬರುತ್ತಾರೆ ಎಂದು ಸುಳ್ಳು ಹೇಳುವುದು ರೂಡಿ ಆಗಿಬಿಟ್ಟಿದೆ.ಅಲ್ಲದೆ ಅವರು ನನ್ನ ಮಗಳ  ಸ್ಕೂಲಿನ ಫೀ ಕೂಡ ಸರಿಯಾಗಿ ದುಡ್ಡು ಕೊಡುತ್ತಿಲ್ಲ...ಆದರೆ ಅವಳ ಮಗನಿಗೆ ಕಾಲೇಜಿಗೆ ಡೊನೇಶನ್ ಕೊಡುತ್ತಾನೆ...ಮನೆ  ಖರ್ಚಿಗೆ ಕೂಡ ಕೊಡುತ್ತಿಲ್ಲ..ಏನೋ ನಂಬಿಕೆ ಇರುವುದರಿಂದ ನಮ್ಮ ಬೀದಿಯ ಅಂಗಡಿ ಮೂರ್ತಿ  ಸಾಲ ಕೊಡುತ್ತಾರೆ,ಸಾಲ  ವಾಪಸ್ ಕೊಟ್ಟು ಆಗಲೇ ೩ ತಿಂಗಳಾಗಿದೆ.ನಾಳೆ ಹಬ್ಬಕ್ಕೆ ಮನೆಗೆ ಬರುತ್ತಾರೆ ಎಂಬುದು ಅನುಮಾನ...

ಕಾಲಿಂಗ್ ಬೆಲ್ ಆದಾಗ ಬಹುಷಃ ನನ್ನ ಗಂಡ ಎಂದು ಬಾಗಿಲು ತೆರೆದರೆ ರಮೇಶ ಬಂದು ನಿಂತಿದ್ದಾನೆ...,ಇಂಥ ಸನ್ನಿವೇಶದಲ್ಲಿ ಅವನನ್ನು ನೋಡಿ ಖುಷಿ  ಪಡಬೇಕೋ ಒಂದೂ ತಿಳಿಯುತ್ತಿಲ್ಲ,ಅವನನ್ನು ನೋಡಿ ಸುಮಾರು ೮ ವರ್ಷ ಆಗಿದೆ,ಅವನನ್ನು ನೋಡುವ ಅವಕಾಶವೇ ಸಿಕ್ಕಿರಲಿಲ್ಲ,

ಈಗ ಅಕಸ್ಮಾತಾಗಿ ಮನೆಗೆ ಬಂದು ಬಿಟ್ಟಿದ್ದಾನೆ,ನಾನು ಒಳಗೆ ಬರಲು ಹೇಳಿ ಮುಂದೆ ನಡೆದೇ,ಅವನಿಗೆ ಮದುವೆ ಆಗಿದೆ ಎಂದು ಭಾವಿಸಿದ್ದೆ  ,ಆದರೆ ಇನ್ನೂ ಆಗಿಲ್ಲ,ಕಾರಣ ಕೇಳಿದರೆ ಆದರೆ ನಿನ್ನನ್ನೇ ಆಗುವುದು,ಇಲ್ಲ ಅಂದರೆ  ಈಗೆ ಇರುತ್ತೀನಿ  ಅಂತ ಬೇರೆ ಹೇಳುತ್ತಿದ್ದಾನೆ,ಅವನ ತಂಗಿ ಮತ್ತು ಇಬ್ಬರೂ ತಮ್ಮಂದಿರ ಮದುವೆ ಆಗಿದ್ದರು ಇವನು ಇನ್ನು ಆಗಿಲ್ಲ...

ಇಷ್ಟು ವರ್ಷ ನನಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ನನ್ನಿಂದ ದೂರ ಇದ್ದ...ಈಗ ನನ್ನ ಕಾಲೇಜು ಸ್ನೇಹಿತರಿಂದ ನನ್ನ ಅಡ್ರೆಸ್ಸ್ ತೆಗೆದುಕೊಂಡು ಬಂದಿದ್ದಾನೆ...

ಇವನು ಬಂದಾಗ ಸಧ್ಯ ನನ್ನ ಗಂಡ ಮನೆಯಲ್ಲಿ ಇಲ್ಲ, ಈಗ  ನನ್ನ ಗಂಡನಿಗೆ ಡಿವೋರ್ಸ್ ಕೊಟ್ಟು ತನ್ನನ್ನು ಮದುವೆ ಆಗಲು ಹೇಳುತ್ತಿದ್ದಾನೆ...
 ನನ್ನ ಮಗಳನ್ನು ಕೂಡ ಕರೆದು ಕೊಂಡು ಹೋಗೋಣ ಎನ್ನುತ್ತಿದ್ದಾನೆ.ಸ್ವಲ್ಪ ಸಮಯ ಯೋಚಿಸ ಬೇಕು ಎಂದು ಹೇಳಿ ಅವನನ್ನು ಕಳಿಸಿ ಬಿಟ್ಟಿದ್ದೇನೆ,ಆದರೆ ಈಗ  ನನ್ನ ಮನಸ್ಸಿನಲ್ಲಿ ಆಗುತ್ತಿರುವ ಗೊಂದಲ ಒಂದೇ ಎರಡೇ?

ಒಬ್ಬ ಗಂಡು ಇನ್ನೊಬ್ಬ ಹೆಂಗಸನ್ನು ಮದುವೆ ಆದರೆ ಸಮಾಜ ಒಪ್ಪುತ್ತದೆ,ಆದರೆ ಒಬ್ಬ ಹೆಣ್ಣು ಇನ್ನೊಬ್ಬ ಗಂಡಸನ್ನು ಮದುವೆ ಆದರೆ ಸಮಮಾಜ ಒಪ್ಪುವುದಿಲ್ಲ,ಅದೂ ನೋಡುವ ದೃಷ್ಟಿಯೇ ಬೇರೆ ಆಗಿರುತ್ತದೆ..
ಅಲ್ಲದೆ ಇಷ್ಟು ದಿನ ನನ್ನ ಗಂಡನನ್ನು ಅಪ್ಪ ಎಂದು ಕರೆಯುವ ಮಗಳಿಗೆ ಇವನನ್ನು ಏನು ಅಂತ  ಪರಿಚಯ ಮಾಡಿಕೊಡಲಿ...ಇವನನ್ನು ಏನು ಅಂತ ಕರಿಬೇಕು ಎಂದು  ಹೇಳಿಕೊಡಲಿ?
ಅವಳು ದೊಡ್ಡವಳಾದ ಮೇಲೆ ಕೂಡ ಅವಳಿಗೆ ಈ ವಿಷಯ ಗೊತ್ತಾದರೆ ಅವಳ ಮೇಲೆ ಇದು ಯಾವ ರೀತಿ ಪರಿಣಾಮ ಬೀರಬಹುದು...ನನ್ನ ಮೇಲೆ ಅವಳಿಗೆ ಯಾವ ಭಾವನೆ ಹುಟ್ಟಬಹುದು...
ಅಲ್ಲದೆ ತವರು ಮನೆಯವರ  ಮಾನ  ಮರ್ಯಾದೆ  ಹಾಳು ಮಾಡಿದ  ಹಾಗೆ  ಆಗುತ್ತದೆ ..
ಇದನೆಲ್ಲ  ಯೋಚಿಸಿದರೆ ಬೇಕಿತ್ತಾ ಈ  ಜನ್ಮ ಎಂಬ ಕೊರಗು...ಯಾವಾಗಲೋ ಸಾಯ ಬೇಕು ಎಂದು ನಿರ್ಧಾರ ಮಾಡಿ ಮಗಳ ಮುಖ ನೋಡಿ ಎಷ್ಟಾದರೂ ಕಷ್ಟ ಅನುಭವಿಸಲು ತಯಾರಾಗಿದ್ದೇನೆ...ನಾನು ಸತ್ತರೆ ಅವಳನ್ನು ನನ್ನ ಗಂಡ ಅಂತೂ ಸರಿಯಾಗಿ ಸಾಕುವುದಿಲ್ಲ..ನಾನಿರುವಾಗಲೇ ಹೀಗೆ,ಇನ್ನು ನಾನು ಸತು ಹೋದೆ ಅಂದರೆ ಅವಳ ಜೀವನವನ್ನು ಹಾಳು  ಮಾಡುತ್ತಾನೆ...ಈ ಕಾರಣಕ್ಕೆ ಭಂಡ ಧೈರ್ಯ ಮಾಡಿ ಸಾಯುವ ನಿರ್ಧಾರವನ್ನು ದೂರ ಮಾಡಿದ್ದು....
ಈ ಯೋಚನೆಯಲ್ಲೇ ರಾತ್ರಿ ಪೂರ ನಿದ್ದೆ ಇಲ್ಲದೆ ಕಳೆದದ್ದಾಯಿತು...
ನನ್ನ  ಮಗಳ  ಭವಿಷ್ಯದ ದೃಷ್ಟಿಯಲ್ಲಿ ನೋಡಿದರೆ ನಾನು ರಮೇಶನನ್ನು ಮದುವೆ ಆಗುವುದೇ ಒಳ್ಳೆಯದು ಅನಿಸುತ್ತಿದೆ...ಮಗಳಿಗೆ ಸ್ವಲ್ಪ ಬುದ್ಧಿ ಬಂದ ವಯಸ್ಸಿಗೆ ಈ ವಿಷಯದ ಬಗ್ಗೆ ತಿಳಿ ಹೇಳಬಹುದು ಎಂದು ನನ್ನ ಅನಿಸಿಕೆ...
ರಮೇಶ ಇವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಮತ್ತು ಅವಳ ವಿಧ್ಯಾಭ್ಯಾಸಕ್ಕೆ ಸಹಕರಿಸುತ್ತಾನೆ ಎಂದು ನನ್ನ ನಂಬಿಕೆ...
ಕತ್ತಲು ತುಂಬಿರುವ ನನ್ನ ಬದುಕಲ್ಲಿ ಈ ದೀಪಾವಳಿಯ ದಿನ ರಮೇಶ ಬೆಳಕು ಚೆಲ್ಲಬಹುದು ಎಂಬ ವಿಶ್ವಾಸ ಇದೆ,
ಆದರೂ ಏನು ಮಾಡಬೇಕು ಎಂಬ ಧೃಡ ನಿರ್ಧಾರ ಒಂದಿಲ್ಲ....
ರಮೇಶನ ಜೊತೆ ಹೋದರೆ ಕಟ್ಟಿಕೊಂಡ ಗಂಡನನ್ನು ಬಿಟ್ಟವಳು ಎಂಬ ಹಣೆ ಪಟ್ಟಿ..ಅಲ್ಲದೆ ಗಂಡನ ವರ್ತನೆ  ಈ ರೀತಿ...ಹೇಗೆ ಸಾಗಿಸಲಿ ನನ್ನ ಜೀವನ...ಹೇಗೆ ಸಾಕಲಿ ನನ್ನ ಮಗಳನ್ನ?