Monday, November 28, 2011

ಇವ್ರು ಇದ್ದಾರಲ್ಲ........

ಇವ್ರು ಇದ್ದಾರಲ್ಲ ಇವ್ರು.ಈ LIC Agent ಗಳು,ಅದೇನ್ ಕಾಟ ಕೊಡ್ತಾರೋ ನಾ ಕಾಣೆ.ನಾವ್ ಸತ್ತ ಮೇಲೆ ,ನಾವು ಕೂಡಿಟ್ಟಿದ್ದ ಹಣವನ್ನು ಬೇರೆಯವರಿಗೆ ಕೊಡಿಸೋ ಜವಾಬ್ದಾರಿ ಇವರದು..ಸಾಲ ತಗೊಂಡು ಕಣ್ಣು ತಪ್ಪಿಸಿ ಓಡಾಡುವ ಹಾಗೆ,ಇವರ ಕಣ್ಣು ತಪ್ಪಿಸಿ ಓಡಾಡ ಬೇಕಾದ ಪರಿಸ್ಥಿತಿ ಬಂದಿದೆ.. ಈ ಸ್ಥಿತಿ ನನಗೆ ಮಾತ್ರ ಅಂದು ಕೊಂಡಿದ್ದೆ,ನನ್ನ ಎಷ್ಟೋ ಸ್ನೇಹಿತರಿಗೆ ಇದೆ ರೀತಿ ಪ್ರಾಣ ಹಿಂಡುತ್ತಿದ್ದಾರಂತೆ...

ಅದೇನ್ ಆಯಿತು ಅಂದ್ರೆ,ಅದೊಂದು ದಿನ ನಮ್ಮೂರಿನ ಬ್ಯಾಂಕ್ ನಲ್ಲಿ ನನ್ನ ಎಜುಕೇಶನ್ ಲೋನ್ ಕಟ್ಟಿ ಹೊರಗಡೆ ಬಂದೆ ,ಅಲ್ಲೊಬ್ರು ಪಾರ್ಟಿ ಸಿಕ್ಕಿದರು...ನಾನು ಹೈ ಸ್ಕೂಲ್ಗೆ  ಹಳೇಬೀಡಿನಿಂದ ಬೇಲೂರಿಗೆ ಹೋಗುತ್ತಿದ್ದಾಗ ಅವರ ಮಗ ನಮ್ಮ ಸ್ಕೂಲಿನಲ್ಲಿ  ಪ್ರೈಮರಿ ಓದುತ್ತಿದ್ದ..  ಆಗಾಗಿ ಅವನನ್ನು ಕರೆದುಕೊಂಡು ಹೋಗುವುದು,ಬರುವುದು ಕೆಲವು ಹೊಣೆಗಳು ನಮ್ಮ ಮೇಲಿತ್ತು...ವಾರಕ್ಕೆರಡು ದಿನ ಕಬಾಬ್ ತಿಂದು ನನ್ನ ಹತ್ತಿರ ಬದು ಅಣ್ಣ ನಮ್ಮಪ್ಪಂಗೆ ಹೇಳ್ಬೇಡಿ ಅಂತ ಹೇಳ್ತಿದ್ದ...ನನಗೆ ಅಲ್ಲಿ ಸಿಕ್ಕಿದ್ದು ಅವನ ತಂದೆ...ಸರಿ ಯಾರದೋ ಜೊತೆ ಮಾತಾಡ್ತಾ ಇದ್ದವರು ನನ್ನನ್ನು ನೋಡಿ ಮಾತಾಡಿಸಿದರು...ಜೊತೆಯಲ್ಲಿದ್ದವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟರು .ಅವರು ಹೋದ ಮೇಲೆ ಎಲ್ಲಿ ಇರುವುದು,ಎಲ್ಲಿ ಕೆಲಸ ಮಾಡುತ್ತಿರುವುದು ಎಲ್ಲ ಉಭಯ ಕುಶಲೋಪರಿ ಆದ ಮೇಲೆ ತನ್ನ ಮಗನ ಬಗ್ಗೆ ಹೇಳಿ ಹೆಗಲ ಮೇಲೆ ಕೈ
ಹಾಕಿಕೊಂಡು ಟೀ ಕುಡಿಯಣ ಬಾ ಅಂತ ಕರ್ಕೊಂಡು ಹೊರಟರು...ಹೆಗಲ ಮೇಲೆ ಕೈ ಹಾಕಿದಾಗಲೇ ಎಲ್ಲೋ ಏನೋ ಎಡವಟ್ಟು ಆಗ್ತಿದೆ ಅನ್ಕೊಂಡೆ...ಅಲ್ಲ ಎಲೈಸಿ ಗಿಲ್ಲೈಸಿ ಮಾಡ್ಸಿದ್ಯೋ ಇಲ್ವೋ,ಇಲ್ಲ ಅಂದ್ರೆ ಮಾಡ್ಸು ನನ್ನ ಹತ್ತಿರಾನೆ ಅಂದ್ರು... ಒಹ್ ಇದಾ ವಿಷ್ಯ ಅಂತ ನಮ್ಮ ಅಪ್ಪನೆ  ಕಟ್ತವ್ರೆ..ಮತ್ತಿನ್ಯಾಕೆ ಅಂದೇ... ಅಲ್ದೆ ಆಫಿಸಿನಲ್ಲಿ ಬೇರೆ ಇದೆ ಅಂದೇ...ಅಯ್ಯೋ ಅದೆಲ್ಲ
ಪ್ರೈವೇಟ್,ಇದು lic ದು ಒಂದು ಮಾಡ್ಸು ಅಂದ್ರು...ಮಾಡ್ಸನ.ಸ್ವಲ್ಪ ಈ ಲೋನ್ ಮುಗಿದು ಬಿಡ್ಲಿ...ಆಮೇಲೆ ಮಾಡಿಸ್ತೀನಿ  ಅಂದೆ... ಇವಾಗ್ಲೆ ಒಳ್ಳೆ ಒಳ್ಳೆ ಸ್ಕೀಮ್ ಗಳು ಇದೆ ನೋಡು ಅಂತ ಮತ್ತೆ ಹೇಳಿದ್ರು . ಯಾಕೋ  ಬಿಡೋ ಹಾಗೆ ಕಾಣಲಿಲ್ಲ.......ಇರ್ಲಿ ತಾಳಿ, ಮಾಡಿಸ್ತೀನಿ ಅಂತ ಹೇಳಿ ಬೇಗ ಹೋಗಬೇಕು ಅಂತ ಹೊರಟೆ ...ಸರಿ ನೆಕ್ಸ್ಟ್  ಟೈಮ್ ಬಂದಾಗ ನಂಗೆ ಫೋನ್ ಮಾಡು
ಅಂದಾಗ ಸರಿ ಸರಿ ಅಂತ ಕಾಲು ಕಿತ್ತಿದ್ದು  ಆಯಿತು......ಅದಾದ್ ಮೇಲೆ ಒಂದಿನ ಅವರ ಹೆಂಡತಿ ಸಿಕ್ಕಿ ನಮ್ಮ ಮನೆಯವರು ಹೇಳ್ತಿದರು  ನೀನ್ ಪಾಲಿಸಿ ಕೊಡ್ತಿಯ ಅಂತ,ಇನ್ನು ಕೊಟ್ಟಿಲ್ವಂತೆ ಅನ್ನಬೇಕಾ..ಕೊಡ್ತೀನಿ ಕೊಡ್ತೀನಿ ಅಂತ ಹೇಳಿ ಅದು ಇದು ಮಾತಾಡಿ ತಪ್ಪಿಸಿಕೊಂಡಿದ್ದಾಯಿತು...
-------------------------------------
ಇನ್ನೊಬ್ಬ ಸ್ನೇಹಿತ ನನ್ನ ಸ್ಕೂಲ್ ಮೇಟ್, ಪಿಯುಸಿಗೆ ರಾಷ್ಟ್ರ ಗೀತೆ ಹಾಡಿ "ಇಲ್ಲಿ ಸಲ್ಲದವನು ಅಲ್ಲಿಯೂ ಸಲ್ಲನಯ್ಯ" ಅನ್ನೋ ಹಾಗೆ ೩ -೪ ಬಿಸಿನೆಸ್ ಮಾಡಿ ಕೈ ಸುಟ್ಟುಕೊಂಡು ಕೊನೆಗೆ ಎಲೈಸಿ ಏಜೆಂಟ್ ಆಗಿದ್ದಾನೆ ...ಸೈಡ್ ಬಿಸಿನೆಸ್ಸ್ ಅಷ್ಟೇ... ...  ...
ಅದಿನ್ನು ನಾನು ಕಾಲೇಜಿನಲ್ಲೇ ಇದ್ದೆ,ಹೀಗೆ ಊರಿಗೆ ಹೋದಾಗ ಇಬ್ಬರು ಭೇಟಿ ಮಾಡಿ ತೋಟ ಗದ್ದೆ ಎಲ್ಲ ಸುತ್ತಾಡೋ ಪರಿ ಪಾಠ,ಪ್ರತಿ ಸಾರಿ ಅಂತೆ ಅವನಿಗೆ ಫೋನ್ ಮಾಡಿ ಮನೆಗೆ ಬರ್ತಿದ್ದೀನಿ ಅಂದ್ರೆ  "ಏ ಇಲ್ಲ,ನನಗೆ exam ಇದೆ" ಅಂದ...,ಒಹ್ ಪಿಯುಸಿ ಕಟ್ಟಿದ್ದಾನೆ ಅನ್ಕೊಂಡು ಇರ್ಲಿ ಅವನ ಅಪ್ಪ ಅಮ್ಮನ್ನಾದ್ರು ಮಾತಾಡಿಸಿಕೊಂಡು ಬರಣ ಅಂತ  ಅವನ ಮನೆಗೆ ಹೋದ್ರೆ ದಪ್ಪದೊಂದು ಬುಕ್ ಇಟ್ಕೊಂಡು ಓದ್ತಿದ್ದ...ನಂಗೆ ನಾಳಿದ್ದು exam ಇದೆ... ಅದಾದ್  ಮೇಲೆ ಎಲ್ಲಾದರು ಹೋಗಣ..ಇವತ್ತು ಬೇಡ ಅಂದ...ಸರಿ ಏನ್ exam ಅಂತ ಕೇಳಿದ್ರೆ LIC ಏಜನ್ಸಿ ತಗಳಕ್ಕೆ ಬರಿತ್ತಿದ್ದಿನಿ... ಮೈಸೂರಿನಲ್ಲಿ ಇದೆ ಅಂದ.. ಸರಿ ದೇವ್ರು ಒಳ್ಳೇದ್ ಮಾಡ್ಲಿ..ಇದನ್ನಾದ್ರು ಪಾಸ್ ಆಗು ಅಂತ ಹೇಳಿ ಅವನ ಮನೇಲಿ ಮಜ್ಜಿಗೆ ಕುಡಿದ ಹೊರಟೆ... ಹಿಂದೆ ಇಂದ ಲೇ ಮಗನೆ ಕೆಲಸ ಸಿಕ್ಕಿದ ಮೇಲೆ ನನಗೆ ಒಂದು ಪಾಲಿಸಿ ಕೊಡದೆ ಹೋಗು,ಕತ್ತ್ ಹಿಚಿಕಿ ಸಾಯಿಸ್ತಿನಿ ನಿನ್ನ ಅಂದ... ೩ ಮೆಣಸಿನ ಕಾಯಿ ಉದ್ದ ಇಲ್ಲ.. ನನ್ನ ಪಕ್ಕ ನಿಂತರೆ ನನ್ನ ಎದೆ ಮಟ್ಟಕ್ಕೆ ಬರಲ್ಲ, ಹಿಂಗೆ ಅವಾಜ್ ಹಾಕ್ತಿಯ ಅಂತ ಅನ್ಕೊಂಡು ಹೋಗ್ಲ ಲೋ...ನೀನ್ ಪಾಸ್ ಆಗಲ್ಲ ಅಂದು ಮನೆಗೆ ಹೊರಟೆ... ಕೊನೆಗೆ ಅದೇಗೆ ಪಾಸ್ ಆದ್ನೋ ಅವನ ಮಂದೆವರು ಮಲ್ಲಪ್ಪಂಗೆ ಗೊತ್ತು...ನನಗೆ ಕೆಲ್ಸನು ಸಿಕ್ಕಿಲ್ಲ.ಇನ್ನು ಓದ್ತಾ ಇದ್ದೆ,,ಅವನಿಗೆ ಇನ್ನು  ಏಜೆನ್ಸಿ ಸಿಕ್ಕಿಲ್ಲ..ಆಗ್ಲೇ ನನ್ನಿಂದೆ ಬಿದ್ದಿದ್ದ.... ಈಗಲೂ ಊರಿಗೆ ಹೋದ್ರೆ ಭೇಟಿ ಮಾಡೇ ಮಾಡ್ತೀನಿ...ಅವನು ಮತ್ತೆ ಪೀಡ್ಸೆ ಪೀಡಿಸ್ತಾನೆ.. ಭೇಟಿ ಮಾಡದೆ ವಿಧಿ ಇಲ್ಲ... ಜಿಗರಿ ದೋಸ್ತ್ ಬೇರೆ...ನನ್ನ ಕಷ್ಟ ನೋಡಿ ಅವನೇ ಸುಮ್ಮನಾಗಿದ್ದಾನೆ ಇವಾಗ ...
---------------------------------
ಹಿಂಗೆ ಒಂದ್ಸಲಿ ತಿಪಟೂರ್  ಹತ್ತಿರ ನನ್ನ ನೆಂಟರ ಮನೆಗೆ ಹೋಗಿದ್ದೆ...ವಾಪಸ್ ಬರಬೇಕಾದರೆ ಎಷ್ಟೋ ಹೊತ್ತು ಕಾದರು ಬಸ್ ಆಗ್ಲಿ  ಆಟೋ ಆಗ್ಲಿ  ಬರಲಿಲ್ಲ...ಆಗ್ಲೇ ನನ್ನ ಟ್ರೈನ್ ಗೆ ಲೇಟ್ ಆಗ್ತಿತ್ತು..ನನ್ನನ ಬಿಡಕ್ಕೆ ಬಂದಿದ್ದ ನನ್ನ ಕಸಿನ್ ,ಬೈಕ್ನಲ್ಲಿ ಬರುತ್ತಿದ್ದ ಅದೇ ಊರಿನ ಒಬ್ಬರನ್ನು ನಿಲ್ಲಿಸಿ ನಮ್ಮ ಅಣ್ಣನ್ನ ತಿಪಟೂರಿಗೆ ಬಿಡಿ ಅಂಕಲ್ ಅಂದ್ಲು..ಸರಿ ಅವರು ಕೂಡ ಅಲ್ಲಿಗೆ ಹೋಗ್ತಿದ್ರು,ನಮ್ಮ ಮನೆಗೆ ಹೋಗಿ ಒಂದು ಪತ್ರ ಇದೆ ಅದನ್ನ ತಗೊಂಡು ಹೋಗಬೇಕು ಅಂದ್ರು..ನಾನು ಸಮ್ಮತಿಸಿದೆ...ಅವರ ತೋಟದ ಮನೆಗೆ ಹೋಗಿ ಹೊರಟೆವು,ಸುತ್ತ ತಂತಿ ಭೇಲಿ ತೋರಿಸಿ ಇದಷ್ಟು ನಮ್ಮದೇ ತೋಟ ಅಂದ್ರು ...ಏನಿಲ್ಲ ಅಂದ್ರು ಹತ್ತು ಏಕರಿಗಿಂತ ಜಾಸ್ತಿ ಇತ್ತು..ಮನೆ ಪಕ್ಕ ಬೇರೆ ಅಡಕೆ ಮರದ ತುಂಡುಗಳನ್ನು ಸುತ್ತ ಕಟ್ಟಿ  ಕಾಯಿಗಳನ್ನು ಕೊಬ್ಬರಿಗೆ ಹಾಕಿದ್ದರು ...ಒಳ್ಳೆ ಕುಳ ಅಂತ ಅನ್ನಿಸ್ತು... ಅಷ್ಟೊತ್ತಿಗಾಗಲೇ ನನ್ನ ಉರು,qualificaton ,ಕೆಲಸ ಎಲ್ಲಾದರ ಬಗ್ಗೆ ಕೇಳಿದ್ರು..ನನ್ನ ಮಗನು MBA ಮಾಡಿದ್ದಾನೆ... ಅಲ್ಲೇ ಬೆಂಗಳೂರಿನಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ...ಆಮೇಲೆ ಯಾಕೋ ಭೆಜಾರ್ ಆಗಿ ಇಲ್ಲೇ lecture ಆಗಿದ್ದಾನೆ...ಹೌದಾ ಅಂದೇ.. ದೊಡ್ಡ ಮಗಳು ಎಂ.ಫಿಲ್ ಆಗಿ,ಅವಳು ಕೆಲಸ ಮಾಡ್ತಿದ್ಲು,ಮದ್ವೆ ಮಾಡಿದ್ವಿ... ಇಬ್ಬರೇ ಮಕ್ಕಳ ಅಂದೇ...ಇನ್ನೊಬ್ಳು ಇದ್ದಾಳೆ...ಅವಳು ಈ ವರ್ಷ ಎಂ.ಎಸ್ಸಿ ಸೇರಿದಳು,ಬೆಂಗಳೂರ್ ಯುನಿವರ್ಸಿಟಿನಲ್ಲಿ....ಫ್ಯಾಮಿಲಿ ವಿಷ್ಯ ಎಲ್ಲ ಹೇಳ್ತಾವ್ರೆ ಏನಪ್ಪಾ ಇದು ಮಗಳನ್ನು ಏನಾದ್ರೂ ಕೊಟ್ಟು ಸಂಭಂದ ಗಿಮ್ಬಂದ ಕುದ್ರಿಸಿ ಕೊಳ್ಳಕ್ಕೆ ನೋಡ್ತಿದ್ದಾರ ಅಂತ ಮನಸಲ್ಲೇ ಅನ್ನಿಸ್ತು.. ಇರ್ಲಿ ಅನ್ಕೊಂಡು ಎಂ.ಎಸ್ಸಿ ನಲ್ಲಿ ಯಾವ ಡಿಪಾರ್ಟಮೆಂಟ್ ಅಂದೇ... ಮ್ಯಾಥ್ಸ್ ಅಂದ್ರು.. ಸರಿ..ಸ್ವಲ್ಪ ದೂರ ಬಂದ ಮೇಲೆ,ನೀವು lic  ಪಾಲಿಸಿ ಮಾಡ್ಸಿದ್ದಿರಾ ಅಂದ್ರು.. ಅಲೆಲೆಲೆಲೇ ಇದಾ ವಿಷ್ಯಾ...ಇವಾಗ ಬಂದ್ರು ನೋಡಿ ಟ್ರಾಕ್ ಗೆ ಅನ್ಕೊಂಡು..ಆಫಿಸಿನಲ್ಲೇ ಇದೆ ಅಂದೇ..ಅಯ್ಯೋ ಅದು ಬಿಡಿ,ನೀವು ಪದೇ ಪದೆ ಕಂಪನಿ ಚೇಂಜ್ ಮಾಡ್ತಿರ್ತಿರಾ,ಅದೆಲ್ಲ ಪ್ರಾಬ್ಲಂ,ಒಂದು LIC ಪಾಲಿಸಿ ಮಾಡಿಸ್ಬಿಡಿ... ಸುಮ್ನೆ ಟ್ಯಾಕ್ಸ್ ಎಲ್ಲ ಜಾಸ್ತಿ ಯಾಕ್ ಕಟ್ಟುತ್ತಿರಾ... ನಿಮಗೆ ಇದಿದ್ರೆ ಟ್ಯಾಕ್ಸ್ excemption ಆಗುತ್ತೆ...ಇದನ್ನೆಲ್ಲಾ ನಿಮಗೆ ಹೇಳಿ ಕೊಡಬೇಕಾಗಿಲ್ಲ ಅಲ್ವ? ಅಂದ್ರು.. ಅದು ಹೌದು ಇವಾಗ ಸ್ವಲ್ಪ ಟೈಟ್ ಇದೆ ದುಡ್ಡು ಆಗಾಗಿ,ಇಲ್ಲಿಗೆನ್ ಅವಾಗಾವಾಗ ಬರ್ತಿರ್ತೀನಿ ಮಾಡಿಸ್ತೀನಿ ಬಿಡಿ...ಸರಿ ಏನಿಲ್ಲ ನೀವು ನಿಮ್ಮ ಮಾರ್ಕ್ಸ್ ಕಾರ್ಡ್,ವೋಟರ್ ಐಡಿ ಕೊಟ್ಟರೆ ಸಾಕು ಅದರ ಜೊತೆಗೆ ಫೋಟೋ  ಅಂದ್ರು..ಸರಿ ಬಿಡಿ ಮುಂದಿನ ಸಾಲಿ ಬಂದಾಗ ನಿಮ್ಮನ್ನ ಭೇಟಿ ಮಾಡ್ತೀನಿ ಅನ್ನುವಷ್ಟೊತ್ತಿಗೆ ತಿಪಟೂರಿಗೆ ಬಂದಾಗಿತ್ತು..ನನ್ನ ಮೊಬೈಲ ನಂಬರ ತಗೊಂಡು ಅವರ ವಿಸಿಟಿಂಗ್ ಕಾರ್ಡ್ ಕೊಟ್ಟು ಹೊರಟರು.. ಅಬ್ಬ ಬಿಸೋ ದೊಣ್ಣೆ ಹೇಗೋ ತಪ್ಪಿಸಿ ಕೊಂಡಿದ್ದಾಯಿತು ಅಂತ ನಿಟ್ಟುಸಿರು  ಬಿಟ್ಟೆ....
----------------------------

ಹೀಗೆ ನಮ್ಮ ಆಂಟಿ ಒಬ್ಬರ ಮನೆಗೆ ಹೋದಾಗ ಒಂದು ಬುಕ್ ತಗಂಡು ನನ್ನ ಎಲ್ಲ ಮಾಹಿತಿ ಕೇಳಿದ್ರು,ಹುಟ್ಟಿದ ದಿನ,ಕಂಪನಿ ಹೆಸರು ಎಲ್ಲ... ಆಮೇಲೆ ಇನ್ನೊಂದ್ ಬುಕ್ ತಗಂಡು ಬಂದು ಕೂತು ಎಲ್ಲ ಪಾಲಿಸಿಗಳ ಬಗ್ಗೆ ಹೇಳಕ್ಕೆ ಶುರು ಮಾಡಿದ್ರು...ನನಗೆ ಯಾಕೆ ಹೇಳ್ತಿದ್ದಾರೆ ಅಂತ ಯೋಚನೆ ಮಾಡ್ತಿದ್ರೆ,ನೀನು ಇದು ಕಟ್ಟು..ಇಷ್ಟಿಷ್ಟು ಕಂತು,ಇಷ್ಟಿಷ್ಟು ವರ್ಷ ಅಂತ ಅವರೇ ಡಿಸೈಡ್ ಮಾಡ್ಬಿಟ್ರು... ಹೀಗ್ ಬೇಡ ಸುಮ್ನಿರ್ರಿ ನನ್ನ ಎಲ್ಲ ತಾಪತ್ರೆಗಳನ್ನು ಮುಗಿಸ್ಕೊತಿನಿ ಮೊದಲು ಅಂದ್ರು ಕೇಳಂಗಿಲ್ಲ,ಇನ್ನೆರಡು ತಿಂಗಳಲ್ಲಿ ನಿನ್ನ ಹುಟ್ಟಿದ ದಿನ ಇದೆ,ಅದಾದಮೇಲೆ ನೀನು ಪಾಲಿಸಿ ಮಾಡ್ಸಿದ್ರೆ ಕಂತು ಜಾಸ್ತಿ ಕಟ್ಟಬೇಕಾಗುತ್ತೆ ಅಂತೆಲ್ಲ ಹೇಳಿ ಅವರ ಸೀನಿಯರ್ ಯಾರೋ ಒಬ್ಬರಿಗೆ ಫೋನ್ ಬೇರೆ ಮಾಡಿ ಕೊಟ್ರು...ಅವರು ಕೂಡ ಈ ಪಾಲಿಸಿ ಚೆನ್ನಾಗಿದೆ ಅಂತ ಯಾವೊದೋ ಹೇಳಿದ್ರು,ಇದರಲ್ಲಿ ಲೈಫ್ ರಿಸ್ಕ್ ಕೂಡ ಇದೆ,ಜೊತೆಗೆ ಇದು ದುಡ್ಡು ಮೆಚುರ್  ಆದ ಮೇಲೆ  ಲೈಫ್ ಟರ್ಮ್ ಇರತ್ತೆ ಅಂತ... ಲೈಫ್ ರಿಸ್ಕ್ ಅಂದ್ರೆ ನಾವು ಸತ್ತರೆ ನಮ್ಮ ನಾಮಿನಿಗೆ ದುಡ್ಡು ಹೋಗುತ್ತಂತೆ...ಬೇರೆ ಎಲ್ಲ ಪಾಲಿಸಿಗಳು ಅದರ term ಮುಗಿದ ಮೇಲೆ ಮುಗಿದ ಹಾಗೆ,,ಆದರೆ ಇದು ಟರ್ಮ್ ಮುಗಿದು ನಾವು ಸಾಯೋವರ್ಗೂ ಇರುತ್ತೆ...ಒಂದು ಫಾರಂ ತಗಂಡು ಅದಕ್ಕೆ ನನ್ನ ಸೈನ್ ಹಾಕಿಸ್ಕೊಂದ್ರು,ಹೇಗಾದ್ರು ಮಾಡಿ ತಪ್ಪಿಸ್ಕೋ ಬೇಕು ಅಂತ,ಥೋ ಇವಾಗ ದುಡ್ಡಿಲ್ಲ,ಇನ್ನೊಂದ್ ಸ್ವಲ್ಪ ದಿನ ಬಿಟ್ಟು ಮಾಡಿಸ್ತೀನಿ ಬಿಡ್ರಿ ಅಂದ್ರೆ,ಈ ನಾನು ಈ ಕಂತು ಕಟ್ಟಿರ್ತೀನಿ,ನೀನು ನಿಧಾನಕ್ಕೆ ಕೊಡು ಅಂದ್ಬಿಟ್ಟು,ಸ್ವಲ್ಪ ದಿನ ಆದ ಕೂಡಲೇ ದುಡ್ಡು ಬೇಕಿತ್ತು, ಈ ತಿಂಗಳು ಕೊಡು ಅಂತ ಕೇಳ್ಬೇಕಾ ?ಬೇಡ ಬೇಡ ಅಂದ್ರು ದುಡ್ಡು ಕಟ್ಟಿ ಇವಾಗ ನನ್ನ ಬುಡಕ್ಕೆ ಕೊಡಲಿ ಪೆಟ್ಟು...
---------------------------------------------
ಇನ್ ಕೆಲವರು ಇದ್ದಾರೆ ಅವರು ಹೇಗೆ ಅಂದ್ರೆ ಸಮಯ ಸಾಧಕರು... ಹೆಗೇಗ್ ಟೈಮ್ ಟು ಟೈಮ್ ಆಟ ಆಡ್ತಾರೆ ಅಂದ್ರೆ ಹೇಳಕ್ಕೆ ತೀರದು..ಹೊಸ ವರ್ಷ ಹತ್ತಿರ ಬಂತು ಅಂದ್ರೆ ಸಾಕು ಜೊತೇಲಿ ಒಂದಿಷ್ಟು ಡೈರಿ ಗಳು ಮತ್ತೆ ಕ್ಯಾಲೆಂಡರ್ ಗಳನ್ನ ಇಟ್ಕೊಂಡಿರ್ತಾರೆ.... ಅಪರೂಪಕ್ಕೆ ಸಿಕ್ಕಿದ್ರೆ ಸಾಕು ಅವರಿಗೆ ಒಂದು ಡೈರಿ ಕೊಟ್ಟು "ಎಷ್ಟ್ ದಿನದಿಂದ ಹುಡುಕಿದೆ ನಿಮ್ಮನ್ನ,ಅವತ್ತು ಸಂತೆಲೂ  ಸಿಗಲಿಲ್ಲ'ಹೀಗೆ ಒಂದಿಷ್ಟು ಬುರುಡೆ ಕಚ್ಚಿ ಹೋಗುತ್ತಾರೆ...ಮತ್ತೆ ಇನ್ ಕೆಲವರು ಹೇಗೆ ಅಂದ್ರೆ ಸುತ್ತ ಮುತ್ತ ಊರುಗಳಲ್ಲಿ ಯಾರದಾದರು  ಮದ್ವೆ ಆಗ್ತಿದೆ ಅಂದ್ರೆ ಮೊದಲೇ ಬುಕ್ ಮಾಡ್ಕೋ ಬಿಡ್ತಾರೆ,ಅವರ ಹೆಂಡತಿಯ ಹೆಸರಲ್ಲಿ ಒಂದು ಪಾಲಿಸಿ ತಗಳಕ್ಕೆ..ಆಮೇಲೆ ಸುತ್ತ ಮುತ್ತ ಊರಲ್ಲಿ ಯಾರಿಗಾದರು ಕೆಲಸ ಸಿಗ್ತು ಅಂದ್ರೆ ಅವರ ಹಿಂದೆ ದೊಂಬಾಲು ಬೀಳುತ್ತಾರೆ... ಈ ಅನುಭವ ನಂಗೆ ಮಾತ್ರ ಅನ್ಕೊಂಡಿದ್ದೆ,ಆಮೇಲೆ ಗೊತ್ತಾಯ್ತು ನನ್ನ ಸ್ನೇಹಿತರು  ಎಷ್ಟೋ ಜನಕ್ಕೆ ಇದೆ ತರಹ ಕಾಟ ಇದೆ ಅಂತ...ಅಲ್ಲದೆ ಇವರ ಮೇಲ್ ಟಾರ್ಗೆಟ್ ಮೇಷ್ಟ್ರು  ಮೇಡಂಗಳು...ಯಾಕೆ ಅಂತ ಗೊತ್ತಿಲ್ಲ... ಅಲ್ಲದೆ ಎಲ್ಲಾದರು ಮಕ್ಕಳು ಹುಟ್ಟಿದೆ ಅಂತ ಗೊತ್ತಾದ್ರೆ ಸಾಕು, ಆ ಮಗುವಿನ ಅಪ್ಪ  ಅಮ್ಮಂಗೆ ತಲೆ ತಿಂದು ೧೮ ವರ್ಷ,೨೫ ವರ್ಷಕೀ ದುಡ್ಡು ಬರುತ್ತೆ...ಅದು ಇದು ಎಲ್ಲಾ ತಲೆಗೆ ತುಂಬಿ ಆ ಮಕ್ಕಳ ಹೆಸರಲ್ಲಿ ಒಂದು ಪಾಲಿಸಿ ಮಾಡಿಸ್ಬಿಡ್ತಾರೆ...
-------------------------------------
ಇದೆ ತರಹ ನಾನು ಈ ಜಗತ್ತಿಗೆ ಕಾಲಿಡುತ್ತಿದ್ದ ಹಾಗೆ ನನ್ನ ಹೆಸರಿಗೆ ಒಂದು ಪಾಲಿಸಿ ಮಾಡಿಸಿದರು ಒಬ್ಬ ಮಹಾಶಯರು... ಫ್ಯಾಮಿಲ ಡಾಕ್ಟರ್,ಫ್ಯಾಮಿಲಿ ಲಾಯರ್ ಇದ್ದ ಹಾಗೆ ಇವರು ಒಂದು ತರಹ ಫ್ಯಾಮಿಲಿ ಇನ್ಸುರೆನ್ಸ್ ಏಜೆಂಟ್ ಇದ್ದ ಹಾಗೆ...... ನಾನು ಹುಟ್ಟಿದ ಕೂಡಲೇ ಹೆಂಗೆ ಪಾಲಿಸಿ ಮಾಡಿಸ್ಕೊಂಡ್ರೋ ಹಾಗೆ ನನಗೂ ಮದ್ವೆ ಗಿದ್ವೆ ಆಗಿ ಮಕ್ಕಳಾದರೆ ಅದಕ್ಕೂ ಒಂದು ಪಾಲಿಸಿ ಮಾಡಿಸದೆ ಬಿಡೋ ಅಸ್ಸಾಮಿ ಅಲ್ಲ ಇವರು...ಹಿಂಗೆ ಊರಿಗೆ ಹೋದಾಗ ನಮ್ಮೂರ ಹತ್ತಿರ ಒಂದು ದೇವಸ್ಥಾನದಲ್ಲಿ ನಮ್ಮ ಬಳಗ ದಿಂದ ಒಂದು ಕಾರ್ಯಕ್ರಮ ಆಯೋಜಿಸುವ ಸಲುವಾಗಿ ನಡೆಯುತ್ತಿದ್ದ  ಮೀಟಿಂಗ್ ನಲ್ಲಿದ್ದೆ.... ಎಷ್ಟೋ ದಿನದಿಂದ ತಪ್ಪಿಸಿಕೊಂಡು ಇದ್ದೆ..ಅವತ್ತು ಅದೇಗೆ ನಾನು ಊರಿಗೆ ಬಂದಿರೋ ವಿಷಯ ಗೊತ್ತಾಯ್ತೋ  ಗೊತ್ತಿಲ್ಲ,ಮನಗೆ ಹುಡುಕಿಕೊಂಡು ಬಂದಿದ್ರು,ನಾನ್ ಮೀಟಿಂಗ್ ನಲ್ಲಿದ್ದೀನಿ ಅಂತ ನಮ್ಮ ಅಪ್ಪ ಹೇಳಿದ್ದೆ ತಡ ಅಲ್ಲಿಗೆ ಬಂದ್ರು... ಯಾರ್ ಹತ್ತಿರನೋ ಹೇಳಿ ಕಳಿಸಿ ಹೊರಗೆ ಕರಿಸ್ಕೊಂದು ಸೈನ್ ಮಾಡಿಸ್ಕೊಂಡೆ ಬಿಟ್ರು ಆ ಫಾರ್ಮ್ ಗೆ.... ಇನ್ನು ಸ್ವಲ್ಪ ದಿನ ಬಿಟ್ಟು ಮಾಡಿಸ್ತೀನಿ ಅಂದ್ರೆ ಈ ನಿಮ್ಮ ಅಪ್ಪ ಕತ್ತುತ್ತಾರಂತ ಬಿಡು ಅಂದ್ರು... ಅದೆಲ್ಲ ಆಗದ ಮಾತು ಅನ್ಕೊಂಡು  ಸಂಜೆ ಸಿಗ್ತೀನಿ ಮೀಟಿಂಗ್ ಮುಗಿದ ಮೇಲೆ ಅಂದ್ರು ಕೇಳಲಿಲ್ಲ,ಡಾಕ್ಯುಮೆಂಟ್ ಎಲ್ಲಾ ನಿಧಾನಕ್ಕೆ ಕೋಡು,ಇಲ್ಲ ಕೊರಿಯರ್ ಮಾಡು ಅಂತ ಹೇಳಿ ಹೋದರು...ನಾನು ಮೀಟಿಂಗ್ ಗೆ ಹೋಗೋ ಗಡಿಬಿಡಿ ಯಲ್ಲಿದ್ದೆ,ಆಗಾಗಿ ಅವರು ಹೇಳಿದ್ದ ಕಡೆ ಎಲ್ಲಾ ಸೈನ್ ಮಾಡಿ ಹೇಗೂ ಡಾಕ್ಯುಮೆಂಟ್ ಕೊಡಬೇಕು ಅಲ್ವ,ಅದು ಇಲ್ದೆ ಏನು ಮಾಡಕ್ಕಾಗಲ್ಲ ಅಂತ... ಕೊನೆಗೆ ಎಷ್ಟೋ  ದಿನದ ತನಕ ಕಾಯ್ಸಿ ಕೊಟ್ಟಿದ್ದ್ ಆಯಿತು... ಕೊಡದೆ ಇದ್ದರೆ ಬಿಡಬೇಕಲ್ಲ ಅವರು .

ಹಿಂದಿನ ತಿಂಗಳ ಸಂಬಳ ಎಲ್ಲಾ ಖಾಲಿ ಆಗಿ ಮುಂದಿನ ತಿಂಗಳ ಸಂಬಳ ಎಲ್ಲೆಲ್ಲಿ ಎಷ್ಟು ಕಟ್ಟಬೇಕು,ನನಗೆ ಎಷ್ಟು ಉಳಿಯುತ್ತೆ ಅಂತೆಲ್ಲ ಪೂರ್ತಿ ಪ್ಲಾನ್ ಮಾಡಿ ಕೊಂಡಿರುತ್ತೀವಿ ,ಆಗ ಮನೆಯಿಂದ ಅಮ್ಮನ ಫೋನ್ "ಪಾಪ,ಪ್ರೀಮಿಯಂ ಕಟ್ಟು ,ಬಿಲ್ ಬಂದಿದೆ" ಅಂತ... ಥೋ ತ್ತರಿಕೆ ,ನಮ್ಮ ಪ್ಲಾನ್ ಎಲ್ಲ  ಆಳಾಗಿ ಹೋಯಿತಲ್ಲ ಅಂತ ತಲೆ ಚಚ್ಚಿ ಕೊಳ್ಳಬೇಕು...ಇಂಥ ಟೈಮ್ ನಲ್ಲಿ ಇವರೆಲ್ಲ ನೆನಪಾಗ್ತಾರೆ...ಇನ್ ಸ್ವಲ್ಪ ದಿನ ಬಿಟ್ಟು ಅಪ್ಪ ಫೋನ್ ಮಾಡಿ"ಮರಿ,ಇನ್ಸುರೆನ್ಸ್ ಕಟ್ಟಿದ್ಯ,ಲಾಸ್ಟ್ ಡೇಟ್ ಆಗೋದರೊಳಗೆ ಕಟ್ಟು"...ನೀವೊಬ್ರು ಕಮ್ಮಿ ಆಗಿದ್ರಿ ಅನ್ಕೊಂಡು ಸುಮ್ನಿರ ಬೇಕು ಅಷ್ಟೇ...
ಬಹುಶ ಇಂಥ ಅನುಭವಗಳು ತುಂಬ ಜನಕ್ಕೆ ಆಗಿರುತ್ತೆ...