Thursday, April 28, 2011

ಅಳಿಯ ದೇವರು!!

ಅದೊಂದು ಸುಂದರ  ಹಳ್ಳಿ.ಅಲ್ಲೊಂದು ಸಣ್ಣ  ಸಂಸಾರ.ಆ ಮನೆಯಲ್ಲಿ ಒಂದು ಅಜ್ಜಿಯು ಇತ್ತು.ತನ್ನ ಒಬ್ಬಳೇ ಮಗಳ ಮದುವೆ ಆಗಿದೆ,ಹಾಗೆ ತನ್ನ ಮಗನ ಮದುವೆ ಕೂಡ ಒಂದೆರಡು ವರ್ಷದ ಮುಂಚೆಯಷ್ಟೇ ಆಗಿದೆ.
ಗಂಡ  ತೀರಿಕೊಂಡಿದ್ದರೂ ಆ ನೋವನ್ನು ಮರೆತು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಾ,ತೋಟದಲ್ಲಿ ಏನಾದರು ಸಣ್ಣ ಪುಟ್ಟ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದಾಳೆ...ಈ ಅಜ್ಜಿಯ ಮಗ ಆ ಊರಿನ ದೇವಸ್ಥಾನದ ಕಾರ್ಯದರ್ಶಿ,ಊರಲ್ಲಿ ಒಳ್ಳೆ ಮರ್ಯಾದೆ ಗೌರವ ಇದೆ..ತನ್ನ ಗಂಡ ತೀರಿಕೊಂಡ ಮೇಲೆ ಆ ಸ್ಥಾನ ಆಕೆಯ ಮಗನಿಗೆ ಸಿಕ್ಕಿತು.
ಹೀಗೆ ಒಂದು ದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಯ ಪಾದಕ್ಕೆ ಒಂದು ಮುಳ್ಳು ಹೊಕ್ಕಿತು.ಅದು ಸಾಧಾರಣ  ಮುಳ್ಲಾಗಿರಲಿಲ್ಲ,ಅದೊಂದು ವಿಷ ಪೂರಿತ ಮುಳ್ಳು...
ಆ ಮುಳ್ಳಿನಿಂದ ಆಕೆಯ ಪಾದದಲ್ಲಿ ಸಣ್ಣ ಗಾಯ ಆಯಿತು,ಅದು ಕ್ರಮೇಣ ದೊಡ್ಡದಾಗುತ್ತ ಹೋಯಿತು...ಆಕೆ ಚಿಕ್ಕಂದಿನಿಂದ  ಹೊಲ ಗದ್ದೆಗಳಲ್ಲಿ ಒಡನಾಟ ಜಾಸ್ತಿ ಇತ್ತಾದ್ದರಿಂದ ಇದೊಂದು ಮಾಮೂಲಿ ಎಂದು ಸುಮ್ಮನಾದಳು.ಅದು ದೊಡ್ಡ ಗಾಯವಾದಮೇಲೆ ಅವರು ಆಸ್ಪತ್ರೆಯ ಕಡೆ ಹೋಗಿದ್ದು.
ಆಗ ಗೊತ್ತಾಯಿತು ಆಗಲೇ ಆಕೆಗೆ ಗ್ಯಾಂಗ್ರಿನ್  ಕಾಯಿಲೆ ತಗುಲಿ ಆಗಿದೆ ಎಂದು..ಕಾಲು ಕತ್ತರಿಸಬೇಕು ಇಲ್ಲವಾದರೆ ಆಕೆಯ ಸಾವು ಹತ್ತಿರದಲ್ಲೇ  ಇದೆ ಎಂದು ವೈದ್ಯರು ಸಾರಾಸಗಟಾಗಿ ಹೇಳಿದರು..
ಯಾರೋ ಒಬ್ಬರು ನೆಂಟರು ನಾಟಿ ವೈದ್ಯರ ಬಳಿ ಆದರೆ ಇದು ವಾಸಿ ಆಗುತ್ತದೆ ಎಂದು ಹೇಳಿದರು,ಅದರಂತೆ ಅಲ್ಲಿಗೆ ಹೋದರೂ ಅಲ್ಲಿ ಕೂಡ  ವಾಸಿ ಆಗದೆ,ಅವರು ಕೂಡ ಈಗಾಗಲೇ ಸಮಯ ಮೀರಿ ಆಗಿದೆ,ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಏನು ತೋಚದೆ ವಿಧಿ ಬರಹ ಹೀಗೆ ಇರಬಹುದೇನೋ ಎಂದು ಆಕೆಯನ್ನು ಮನೆಗೆ ವಾಪಸ್ ಕರೆ ತಂದರು..
ಆದರೂ  ಆಕೆಯ ಅಳಿಯ ಮಾತ್ರ ಮತ್ತೆ ಬೇರೆ ಕಡೆ ಒಳ್ಳೆಯ ಆಸ್ಪತ್ರೆಗೆ ಸೇರಿಸಲು ತನ್ನ ಹೆಂಡತಿಯೊಂದಿಗೆ ಒತ್ತಾಯ ಮಾಡುತ್ತಾನೆ ,ಆದರೆ ಆಕೆಯ ಮಗ ಮಾತ್ರ ಒಪ್ಪಲಿಲ್ಲ,ಎಲ್ಲಿ ದುಡ್ಡು ಕೊಡಬೇಕಾಗುತ್ತದೋ ಎಂದು..
ಆ ಅಳಿಯ ಬೇರೆ ಉರಿನಲ್ಲಿ ಕೆಲಸದ ಮೇಲೆ ಇದ್ದ ಕಾರಣ ತನಗೆ ಸ್ವತಃ ಬಂದು ತನ್ನ ಅತ್ತೆಯನ್ನು ನೋಡಲು ಸಾಧ್ಯವಾಗಲಿಲ್ಲ,ಹೇಗಾದರೂ ಮಾಡಿ ಆಕೆಯನ್ನು ಆ ಕಾಯಿಲೆ ಇಂದ  ಪಾರು ಮಾಡಬೇಕು,ಆದಷ್ಟು ಇನ್ನಷ್ಟು ದಿನ ಬದುಕುವ ಹಾಗೆ ಮಾಡಬೇಕು ಎಂದು ತನ್ನ ಹೆಂಡತಿಗೆ ಹೇಳಿ ಆಸ್ಪತ್ರೆಗೆ ಸೇರಿಸುತ್ತಾನೆ,ಆಸ್ಪತ್ರೆಯ ಖರ್ಚನ್ನೆಲ್ಲ ತಾನೇ ನೋಡಿಕೊಳ್ಳುವುದಾಗಿ ,ಆಸ್ಪತ್ರೆಗೆ ಸೇರಿಸಲು ಬೇಡ ಅಂದಿದ್ದ ಆಕೆಯ ಮಗನಿಗೆ ಹೇಳುತ್ತಾನೆ..
ಇತ್ತ ಆಸ್ಪತ್ರೆಯಲ್ಲಿ ನಿಧಾನವಾಗಿ ಸ್ವಲ್ಪ ಮಟ್ಟಿಗೆ  ಚೇತರಿಸಿಕೊಳ್ಳುತ್ತಿದ್ದಾಳೆ  ಅಜ್ಜಿ,ಆದರೆ ಮಗ ಮಾತ್ರ ಆಕೆ ಇನ್ನೇನು ಸತ್ತು ಹೋಗುತ್ತಾಳೆ ಎಂದು ವೈದ್ಯರು ಹೇಳಿದ್ದಾರೆ  ಎಂದು ತಿಳಿದು,ಇನ್ನೂ ಜಾಸ್ತಿ ದಿನ ಬದುಕುವುದಿಲ್ಲ ಎಂದು ನಂಬಿ ,ದೇವಸ್ಥಾನದ ಕಾರ್ಯಕ್ರಮಗಳಿಗೆ ಬರುವ  ಹೊಲಗೇರಿಯ   ವಾದ್ಯದವರಿಗೆ  ತನ್ನ ತಾಯಿಯ  ಶವ ಸಂಸ್ಕಾರಕ್ಕೂ ಬರಬೇಕು ಎಂದು ಶವ ಸಂಸ್ಕಾರಕ್ಕೆ ಅಣಿ ಮಾಡಿಕೊಳ್ಳುತ್ತಿದ್ದಾನೆ.ಹಾಗೆಯೇ ಶಾಮಿಯಾನ,ಉಳಿ ಅನ್ನ ಮಾಡಲು ಪಕ್ಕದ ಊರಿನ ಬ್ರಾಹ್ಮಣರಿಗೆ ಅಡುಗೆಗೆ ,ಗುಂಡಿ ತೋಡಲು ಕೂಲಿಯವರಿಗೆ ಎಲ್ಲಾ ಹೇಳಿಬಿಟ್ಟಿದ್ದಾನೆ...
ಹೀಗೆ ತನ್ನ ತಾಯಿಯ ಜೀವದ ಬಗ್ಗೆ ಸ್ವಲ್ಪವೂ ಯೋಚಿಸದೆ ಆಕೆಯ ಶವ ಸಂಸ್ಕಾರದ ಬಗ್ಗೆ ಯೋಚಿಸುತ್ತಿದ್ದಾನೆ,ಆದರೆ ಅವನ ಹೆಂಡತಿ ಮಾತ್ರ ಆಸ್ಪತ್ರೆಯಲ್ಲಿ ಅಜ್ಜಿಯ ಮಗಳೊಂದಿಗೆ  ಅಂದರೆ ತನ್ನ ಅತ್ತಿಗೆಯೊಂದಿಗೆ ಅಜ್ಜಿಯ ಸೇವೆ ಮಾಡುತ್ತಿದ್ದಾಳೆ..
ಅಜ್ಜಿಯ ಅಳಿಯನೇ ಇದೆಲ್ಲರ ಖರ್ಚು ನೋಡಿಕೊಳ್ಳುತ್ತಿದ್ದಾನೆ,ಆದರೆ ಅವರು ಮಾತ್ರ ಬೇರೆ ಉರಿನಲ್ಲಿ ತನ್ನ ಕೆಲಸದ ಮೇಲೆ ಇರುವುದರಿಂದ ಬಂದು ನೋಡಲು ಹಾಗಿರಿವುದಿಲ್ಲ,ಹೀಗೆ ಸ್ವಲ್ಪ ದಿನ ಆದ ಮೇಲೆ ಆಸ್ಪತ್ರೆ  ಇಂದ ಮನೆಗೆ ವಾಪಸ್ ಕರೆದುಕೊಂಡು ಬರುತ್ತಾರೆ,ಸ್ವಲ್ಪ  ಲವಲವಿಕೆ ಅಜ್ಜಿಯ ಮುಖದಲ್ಲಿ ಇತ್ತು,ಆದರೂ ತನ್ನ ಮಗ ಒಂದು ದಿನ ತನ್ನನ್ನು ನೋಡಲು ಬಂದಿಲ್ಲ ,ಅವನ ಮನೆಯಲ್ಲಿ ಇರುವುದಕ್ಕೂ ಸ್ವಲ್ಪ ಬೇಸರ ಇತ್ತು..
ಆದರೆ ಮಗ ಮಾತ್ರ ಇನ್ನು ಆಕೆ ಜಾಸ್ತಿ ದಿನ ಬದುಕುವುದಿಲ್ಲ ಎಂದೇ ಭಾವಿಸಿದ್ದಾನೆ...
ಹೀಗೆ ಸುಮಾರು ೨ ವರ್ಷ ಯಾಕೆ ಬದುಕಿರುತ್ತಾಳೆ,ಇಷ್ಟು ದಿನ ಆಕೆಯ ಬದುಕಿಗ ಕಾರಣನಾದ ಅಳಿಯ ಮಾತ್ರ ಒಂದು ದಿನ ನೋಡಲು ಬಂದಿರಲಿಲ್ಲ,ಅದಾರೆ ಅವನಲ್ಲಿ ಪ್ರೀತಿ ಇದೆ.ಬರಬೇಕೆಂಬ ಮನಸ್ಸಿದ್ದರೂ ಕೆಲಸದ ಒತ್ತಡ ದಿಂದ ಬರಲು ಆಗಿಲ್ಲ...
ಹೀಗ ಮಾತ್ರ ಅಜ್ಜಿ ದಿನ ಏಣಿಸುವ ಪರಿಸ್ಥಿತಿಯಲ್ಲಿ ಇದ್ದಾಳೆ,ಅವಳ ಮೈಯಲ್ಲಿ ಶಕ್ತಿ ಪೂರ್ತಿ ಕುಂದಿ ಹೋಗಿದೆ.ಆಕೆಗೂ ತಾನು ಸಾಯುವ ದಿನ ಹತ್ತಿರ ಬಂದಿದೆ ಎಂದು ತಿಳಿಯಿತು,ಕೊನೆಗೆ ತನ್ನ ಅಳಿಯನನ್ನು ಆದಷ್ಟು ಬೇಗೆ ಕರೆಸಿ ಎಂದು ಗೋಳಿಟ್ಟಳು ..
ಅಳಿಯ ಕೂಡ ಈ ವಿಷಯ ತಿಳಿದು ಒಂದು ದಿನ ಬಿಡುವು ಮಾಡಿಕೊಂಡು ಬರುತ್ತಾನೆ,ಹಾಸಿಗೆ ಹಿಡಿದಿದ್ದ ಆಕೆಗೆ ಒಂದಷ್ಟು  ಅನ್ನ ತಿನ್ನಿಸಿ ,ಸ್ವಲ್ಪ  ನೀರು ಕುಡಿಸುತ್ತಾನೆ..ಆದಾದ ಸ್ವಲ್ಪ ಒಟ್ಟಿಗೆ ಆಕೆ ನಿರಾಳವಾಗಿ ಪ್ರಾಣ ಬಿಡುತ್ತಾಳೆ,ಕೊನೆ ಕಾಲದಲ್ಲಿ ಮಗ ಚೆನ್ನಾಗಿ ನೋಡಿಕೊಳ್ಳದಿದ್ದಾಗ ಅಳಿಯ ಆದಷ್ಟು ಪ್ರೀತಿ  ತೋರಿಸಿದ್ದ,
ಮಗ  ಬಹು ದಿನದಿಂದ ಶವ ಸಂಸ್ಕಾರಕ್ಕೆ ಕಾಯುತ್ತಿದ್ದ ,ಅದಕ್ಕೆ ಮುಂಚೆಯೇ ಎಲ್ಲರಿಗೂ ಹೇಳಿದ್ದ,
ಆದರೆ ಆ ದಿನ ಮನೆಗೆ ಬಂದ ನೆಂಟರು,ಬಂಧುಗಳು,ಉರ ಜನ ಇವರೆಲ್ಲರ ಬಾಯಲ್ಲಿ "ಇಂತ ಅಳಿಯನನ್ನು ಪಡೆಯಕ್ಕೆ ಎಷ್ಟು ಪುಣ್ಯ ಮಾಡಿದ್ದಳೋ ಈ ಅಜ್ಜಿ "
"ಮಗ ಸರಿಯಾಗಿ ನೋಡಿ ಕೊಳ್ಳಲಿಲ್ಲ,ಆದರೆ ಅಳಿಯ ಮಾತ್ರ ಎಷ್ಟು ಚೆನ್ನಾಗಿ ನೋಡಿಕೊಂಡ "
"ಕೊನೆ ತುತ್ತು ಅಳಿಯನ ಕೈಲೆ ತಿನ್ನಬೇಕು ಅಂತ ಇಷ್ಟು ದಿನ ಕಾಯುತ್ತಿದ್ದಲೋ ಏನೋ?"ಹೀಗೆ ಮಾತಾಡಿಕೊಳ್ಳುತ್ತಿದ್ದರು.
(ಮೊದಲ ಬಾರಿ ಕಥೆ ಬರೆಯುವ ಪ್ರಯತ್ನ ಮಾಡಿದ್ದೇನೆ,ತಪ್ಪಿದ್ದರೆ ತಿಳಿಸಿ,ತಿದ್ದಿಕೊಳ್ಳುವೆ,
ಎಡವಿದ್ದರೆ ಎಬ್ಬಿಸಿ, ಎಚ್ಚರಗೊಲ್ಲುವೆ....)

Sunday, April 17, 2011

ಒಂದು ಮಧುರ ಪ್ರೇಮ ಕಥೆ.....!!!!!!!!!!!


Onsite offer!!
ಈ ಐಟಿ ಕಂಪನಿ ಅಂದ ಮೇಲೆ ಅವಾಗ  ಅವಾಗ  ಬರ್ತಾ  ಇರುತ್ತೆ !!!
ಫ್ಲೈಟ್ ನಲ್ಲಿ  ಕೂತಿದ್ದೀನಿ  ,ಇನ್ನೊಮ್ಮೆ  ಆನ್ ಸೈಟ್ ..... .ಪ್ಲೇನ್  ಟೇಕ್  ಆಫ್  ಆಗಿದೆ  ,ಆಕಾಶದಲ್ಲಿ  ತೇಲುತ್ತ  ಇದೀನಿ . ಹಾಗೆ ಕಿಡಕಿಯಿಂದ   ಹೊರಗಡೆ  ಸುಮ್ಮನೆ ನೋಡಿದೆ ,ಸಂಜೆಯ  ಸುಂದರ  ದೃಶ್ಯಗಳು .ಸ್ವರ್ಗದಂತೆ   ಭಾಸವಾಗುತ್ತ  ಇದೆ .
ಆ  ಸುಂದರ ದೃಶ್ಯದಲ್ಲಿ  ನನ್ನಲ್ಲಿ  ನಾನು  ಕಳೆದು  ಹೋಗಿಬಿಟ್ತಿದ್ದೆ...

ಯಾರದೋ  ಧ್ವನಿ  ಎಚ್ಚರಿಸಿತು "excuse me sir, would you like to have something?"

ಹಿಂದಕ್ಕೆ  ತಿರುಗಿ  ನೋಡಿದ್ರೆ  ನನಗೆ  ಆಶ್ಚರ್ಯ ,ನನ್ನ  ಸುಂದರ  ಹಳೆ  ಸ್ಕೂಲ್  ಮೇಟ್  ಬಿಂದು  .
"ಏ ಬಿಂದು  , ನೀನು ? ಇಲ್ಲಿ ? ವಾವ್  .........ಇಷ್ಟು  ಚೆನ್ನಾಗಿ ಕಾಣ್ತಿದ್ಯ ,........  ಅದು  air-hostess ಡ್ರೆಸ್ನಲ್ಲಿ "

ಸೀರೆ  ಉಟ್ಟು ,ಮಲ್ಲಿಗೆ  ಹೂವು  ಮುಡಿದಿದ್ದರೆ  ಇನ್ನೂ  ಚೆನ್ನಾಗಿ  ಕಾಣುತ್ತಿದ್ದಳು .ಮುದ್ದಾದ ಬೊಂಬೆಯ  ಹಾಗೆ ...ಆದರೆ ಅವರಿಗೆ ಅದೇ ಯೂನಿ ಫಾರಂ ...
"ಗಿರಿ ,ವಾವ್ ,ನಂಗೆ  ನಂಬಕ್ಕೆ  ಆಗ್ತಿಲ್ಲ .....ಏನಿಲ್ಲಿ .ಓಹ್  ಸಾರೀ .ನಾನು  ಡ್ಯೂಟಿಯಲ್ಲಿ  ಇದೀನಿ ,ಆಮೇಲೆ  ಮಾತಡ್ತಿನಿ "
ಒಂದು  ಕಿರು  ನಗೆ  ಬೀರಿ ,ಆಕಡೆ  ಹೋದಳು .ನನ್ನ  ಕಣ್ಣಿಗೆ  ನಂಬಕ್ಕೆ  ಆಗ್ತಿಲ್ಲ ..ನನ್ನ  ಸ್ಕೂಲ್  ದಿನಗಳ  ನೆನಪಾಯಿತು..

ಅವಳ  ಬಗ್ಗೆ  ಎಷ್ಟು  ತಲೆ  ಕೆಡಿಸ್ಕೊಂಡಿದ್ದೆ ,ಸ್ಕೂಲ್  ಬಿಟ್ಟಮೇಲೆ  ಅವಳ  ಹಿಂದೆ  ಫಾಲೋ  ಮಾಡ್ಕೊಂಡ್ ಹೋಗೋದು..... ಎಷ್ಟೊಂದ್  ಲವ್  ಲೆಟರ್  ಬರ್ದಿದ್ದೆ  ,ಆದ್ರೆ  ಯಾವದನ್ನು  ಅವಳಿಗೆ  ಕೊಡೋ   ಧೈರ್ಯ  ಆಗಿರಲಿಲ್ಲ..........ಕ್ಲಾಸ್ನಲ್ಲಿ  ಲಾಸ್ಟ್  ಬೆನ್ಚಿಂದ  ಅವಳನ್ನೇ  ನೋಡ್ತಾ ಕುರ್ತಿದ್ದು.....ಎಲ್ಲಾ ನೆನಪಾಗ್ತಿದೆ  ,ಅವಳು  ನಮ್ಮ  ಕ್ಲಾಸಿನ  ಬ್ಯೂಟಿ ಕ್ಯೂನ್....... .
ಅವಳಿಗೋಸ್ಕರ  2-3 ಜನ  ಹುಡುಗರು ,ನನ್ನ ಕ್ಲಾಸ್ ಮೇಟ್ಸ್ ಗಳ   ಜೊತೆ  ಜಗಳ  ಆಡಿದ್ದು.... .

ನನಗೆ  ತಡೆಯೋಕ್ಕೆ   ಹಾಗ್ತಿಲ್ಲ ,ಅವಳನ್ನ  ಇನ್ನೊಮ್ಮೆ  ನೋಡ್ತಾ  ಇದ್ದೆ , ಬಿಂದು ಸ್ಕೂಲ್  ದಿನಗಳಿಗಿಂತ  ಇವಾಗ  ಇನ್ನೂ  ಚೆನ್ನಾಗಿ  ಕಾಣ್ತಿದ್ದಾಳೆ...

ಅವಳು  ಕೂಡ  ನನ್ನ  ಕಡೆ  ನೋಡಿ  ನಕ್ಕಳು ,ನಂತರ  ಬೇರೆ  air-hostess ಗಳಿಗೆ  ಏನೋ  ಹೇಳಿದಳು .ಅವರು  ಕೂಡ  ನನ್ನ  ಕಡೆ  ತಿರುಗಿ  ಕಿರು  ನಗೆ  ಬೀರಿದರು..
ಆಮೇಲೆ  ಏನಾಯಿತು  ಅಂತ  ಗೊತ್ತೇ  ಆಗ್ಲಿಲ್ಲ ,ಅವಳ  ಕೊಲಿಗೂ   ಕೂಡ  ಸಕತ್  ಆಗಿದ್ದಾಳೆ..

ಒಹ್  ಮೈ  ಗಾಡ್ !!!!!!!!!!!!!!!ಇವತ್ತು  ನನ್ನ  ಒಂದು  ಕನಸನ್ನು  ನನಸು  ಮಾಡ್ಬಿಟ್ಟೆ .
ಅವಳ  ಹತ್ತಿರ  ಹೋಗಿ  ಮಾತಾಡೋಣ  ಅಂದುಕೊಂಡೆ ,ಆದ್ರೆ  ಅದು  ಅವಳ  ಜಾಬ್  ಅಂತ  ಗೊತ್ತಿತ್ತು .....ಅವಳಿಗೆ ತೊಂದರೆ ಕೊಡಬಾರದು ಅಂತ ಸುಮ್ಮನಾದೆ...

ಮತ್ತೆ  ಹೊರಗಡೆ  ನೋಡಲು  ಶುರು  ಮಾಡಿದೆ ,ನಾವಾಗಲೇ  ಮೋಡಗಳ   ಮೇಲೆ  ಇದ್ವಿ .ಹೊರಗಡೆ  ಮುಸ್ಸಂಜೆ  ತುಂಬ  ಚೆನ್ನಗಿಕಾಣ್ತಿತ್ತು  ,ಹೊಳಗಡೆ  ಕೂಡ ,ಅವಳ  ನಗುವಿಂದಾಗಿ ............. .
ಹೇಗೋ  ಧೈರ್ಯ  ಮಾಡಿಕೊಂಡು  ಅವಳ  ಹತ್ತಿರ   ಮಾತಾಡಿಸೋಣ  ಅಂತ  ಹೋದೆ ,ಅವಳಿಗೂ  ನನಗೇನ್  ಬೇಕು  ಅಂತ  ತಿಳಿದಿರಬೇಕು .
ನನ್ನ  ಹತ್ತಿರ  ಬಂದು "ಸಾರೀ  ಕಣೋ ,ನಿನ್ನ  ಜೊತೆ  ತುಂಬ  ಮಾತಾಡಕ್ಕೆ  ಆಗ್ಲಿಲ್ಲ ......,
so ಹೇಗಿದ್ದೀಯ ,ಇಷ್ಟು  ವರ್ಷ  ಎಲ್ಲಿದ್ದೆ  ????,ಏನು  ನಿನ್ನ  ಜೀವನದ  ಕಥೆ ,ಏನಕ್ಕೆ  ಹೋಗ್ತಿದ್ಯ ?"

"hmmm...ನಾನ್  ಅಲ್ಲೇ  ಇದ್ದೆ ,ನೀನೆ  ಸ್ಕೂಲ್   ಮುಗಿದ  ಮೇಲೆ  ಎಲ್ಲಾ  ಬಿಟ್ಟು  ಹೋಗಿದ್ದು ,ನಿನ್ನನ್ನ  ಎಲ್ಲೆಲ್ಲೋ  ಹುಡುಕಿದೆ ,ಆದ್ರೆ  ನೀನ್  ಮಾತ್ರ  ಸಿಗಲಿಲ್ಲ ,ಆಮೇಲೆ  ಕಾಲೇಜ್  ಮುಗಿತು ,
ಒಳ್ಳೆ  ಕಂಪನಿಯಲ್ಲಿ  ಕೆಲಸ  ಸಿಗ್ತು  ,ನಂಗೊತ್ತಿಲ್ಲ ,ನಂಗೆ  ನಮ್ಮ  ಕಂಪನಿ  ಇಷ್ಟೆಲ್ಲಾ  ಕೊಟ್ಟಿದೆ ,ಇವಾಗ  ಆನ್ ಸೈಟ್  ಹೋಗ್ತಾ  ಇದೀನಿ ,ಯಾವಾಗ  ವಾಪಸ್  ಬರ್ತೀನಿ  ಅಂತ  ಗೊತ್ತಿಲ್ಲ ,ಬಿಂದು  ನಿಂಗೊತ್ತಾ,  ನಂಗೆ  ನನ್ನ  ಜೀವನದಲ್ಲಿ  ಎಲ್ಲಾ  ಸಿಕ್ಕಿದೆ ,ಆದ್ರೆ  'ಒಬ್ಬರನ್ನ'  ಬಿಟ್ಟು ,ನನ್ನ  ಸೋಲು ,ಗೆಲುವು ,ನನ್ನ  ಪ್ರಪಂಚ ,ಎಲ್ಲದನ್ನು  ಹಂಚಿಕೊಳ್ಳುವಂತವರು,"

ನೇರವಾಗಿ  ಅವಳ  ಕಣ್ಣನ್ನೇ  ನೋಡಿದೆ ,ಆ  ನೀಲಿ  ಕಂಗಳು ,ನನಗೆ  ಅನ್ನಿಸಿತು  ಅವಳಿಗೆ  'ಒಬ್ಬರನ್ನ' ಅಂದ್ರೆ  ಯಾರು  ಅಂತ  ಗೊತ್ತಾಗಿರಬಹುದು  ಅಂತ .......ಅವಳ  ಕಣ್ಣಲ್ಲಿ  ಸ್ವಲ್ಪ  ನೋವಿತ್ತು  ಅನ್ಸುತ್ತೆ ..........
 "ಸಾರೀ  ಕಣೋ ,ನಾನು  ಹೋಗಬೇಕು ,ನಿಂಗೆ  ನನ್ನ  ಫೋನ್  ನಂಬರ್   ಕೊಡ್ತಿನಿ ,ಆಮೇಲೆ  ಮಾತಾಡೋಣ "ಅಂತ ಹೇಳಿ ಹೋದಳು ...
ವಾಪಸ್  ನನ್ನ  ಸೀಟ್ ನಲ್ಲಿ  ಕುಳಿತೆ ,ನಿಶ್ಯಬ್ಧ .................,ಹೊರಗಡೆ  ನೋಡ್ತಾ  ಇದೀನಿ ,ಅವಳ  ಉತ್ತರಕ್ಕೆ  ಕಾಯ್ತಾ   ಇದೀನಿ ............
ಅಷ್ಟೊತ್ತಿಗಾಲೆ  ಹೊರಗಡೆ  ಕತ್ತಲು  ,ಇದ್ದಕಿದ್ದ  ಹಾಗೆ  ಗುಡುಗು ,ಮಿಂಚು....... ,ನನ್ನ  ಹೃದಯದಲ್ಲಿ  ಆದ  ಹಾಗೆ .........
ಇದ್ದಕಿದ್ದ  ಹಾಗೆ  ಪ್ಲೇನ್  ಕೂಡ  ಅಲುಗಾಡಲು  ಶುರು  ಆಯಿತು...... .ಎಲ್ಲರೂ  ಬೆಚ್ಚಿ  ಬಿದ್ದರು .

ಬಿಂದು  ಮೈಕ್ ಕಡೆ  ಹೋಗುವುದನ್ನು   ನೋಡಿದೆ ,ಯಾರು  ಹೆದರ  ಬಾರದು  ,ಹೊರಗಡೆ  ಗುಡುಗು  ಮಿಂಚಿ  ಇದೆ  ಅಷ್ಟೇ,ಇಲ್ಲೇ ಹತ್ತಿರ ಇರೋ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಮಾಡ್ತಿವಿ   ಅಂತ  ಮೈಕ್ ನಲ್ಲಿ    ಹೇಳಿದಳು...
ಆದ್ರೆ  ಪ್ಲೇನ್  ಇನ್ನೂ  ಜೋರಾಗಿ  ಅಲುಗಾಡಲು  ಶುರು  ಆಯಿತು  ,ಎಲ್ಲರೂ  ಇದೆ  ತಮ್ಮ  ಜೀವನದ  ಕೊನೆ  ಕ್ಷಣ  ಅಂತ  ಹೆದರಿ  ಬಿಟ್ಟಿದ್ರು .

ನಾನ್  ಮಾತ್ರ  ಬಿಂದುನನ್ನೇ ನೋಡ್ತಿದ್ದೆ ,ಅವಳು  ನನ್ನನ್ನೇ   ನೋಡ್ತಾ  ಇದ್ದಾಳೆ .
ನನ್ನ  ಬೆನ್ನಿಗೆ  ಏನೋ  ತಾಗಿದಂತಾಯಿತು  ,ನನ್ನ  ಮುಂದೆ  ಪೂರ್ತಿ  ಕತ್ತಲು  .ಪೂರ್ತಿ  ನಿಶ್ಯಬ್ಧ ,
ಇನ್ನೂ  ಆ  ಪ್ಲೇನ್  ಅಲುಗಾಡುತ್ತಿದೆ ,ಜನರ  ಹೆದರಿಕೆ ,
ಯಾರೋ  ಕೂಗಿದರು "ಗಿರೀssssssssssssಶ್ !!!!"
"ಗಿರೀಶ್ ,ಎದ್ದೇಳು .ಇವತ್ತು  ಕೂಡ  ಆಫೀಸಿನಲ್ಲಿ  ಮಲಿಗಿದ್ಯ ,..........ನಂಗೆ  ಆ  ರಿಪೋರ್ಟ್  ಬೇಗ  ಬೇಕು "

ಸುತ್ತ ನೋಡಿದೆ ,ಪ್ಲೇನು ಇಲ್ಲ,ಬಿಂದುನೂ  ಇಲ್ಲ,ಆನ್ ಸೈಟು ಇಲ್ಲ
ನನ್ನ  ಮ್ಯಾನೇಜರನ  ದುರುಗುಟ್ಟಿಕೊಂಡು   ನೋಡುತ್ತಾ   ನಿಂತೇ ..ನಿನ್ನಿಂದನೆ   ಆ  ಪ್ಲೇನ್ ಕ್ರಾಶ್  ಆಗಿದ್ದು ಅಂತ ಅವನಿಗೆ ಬೈಯುತ್ತಾ... ..

ಇನ್ನೂ  ಗೊತ್ತಿಲ್ಲ ,ಪ್ರತಿ  ದಿನ ಮಧ್ಯಾನ   2-3 ಗಂಟೆಗೆ  ಯಾಕ್ ಇಗಾಗುತ್ತೆ  ಅಂತ ....

Tuesday, April 12, 2011

ಹೊನ್ನಾರು...

ಹೊನ್ನಾರು...ಇದು  ಉಗಾದಿಯಲ್ಲಿ ಹಳ್ಳಿಗಳಲ್ಲಿ ನಡೆಯುವ ಒಂದು ಪದ್ದತಿ.
ಉಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತಾರೆ...ಆದ್ದರಿಂದ ಹೊಸ ವರುಷದ ದಿನ ಹಳ್ಳಿಗಳಲ್ಲಿ ತಮ್ಮ ತಮ್ಮ ಜಮೀನಿನಲ್ಲಿ ಮೊದಲ ಬೇಸಾಯ  ಮಾಡುತ್ತಾರೆ...ಈ ಮೊದಲ ಬೇಸಾಯಕ್ಕೆ ಹೊನ್ನಾರು ಹೂಡುವುದು ಎಂದು ಹೇಳುತ್ತಾರೆ...
ಈ ದಿನ  ರೈತರು  ತಮ್ಮ ನೇಗಿಲುಗಳನ್ನೆಲ್ಲ  ಸ್ವಚ್ಛ ಮಾಡಿ ,ಎತ್ತುಗಳಿಗೆ ಸ್ನಾನ ಮಾಡಿಸಿ,ನೇಗಿಲು ಮತ್ತು ಎತ್ತಿಗೆ ಪೂಜೆ ಮಾಡುತ್ತಾರೆ.ನಂತರ ಎತ್ತನ್ನು ಅಲಂಕರಿಸಿ ಅದರ ಕೊರಳಿಗೆ ಗಂಟೆಯ ಹಾರ ಮತ್ತು ಹೂವಿನ ಹಾರ ಹಾಕುತ್ತಾರೆ,
ಅದರ ಅಲಂಕಾರದ ಭಾಗವಾಗಿ ಎತ್ತಿನ ಕೊಂಬಿಗೆ ಬಣ್ಣ ಹಚ್ಚುತ್ತಾರೆ,ಜೊತೆಗೆ ಅದರ ಬೆನ್ನಿನ  ಮೇಲೆ ಹೊಸ ಬಟ್ಟೆ ಹಾಕುತ್ತಾರೆ,ಕೆಲವರು ರೇಷ್ಮೆ ಬಟ್ಟೆ ಹಾಕಿದರೆ,ಕೆಲವರು ಸಾಮಾನ್ಯ ಬಟ್ಟೆ ಹಾಕುತ್ತಾರೆ,ಆದರೆ ಅದು ಹೊಸ ಬಟ್ಟೆ ಆಗಿರುತ್ತದೆ.
ಇದೆ ರೀತಿ ಮನೆಯಲ್ಲಿ  ಯಾರಾದ್ರೂ ಒಬ್ಬರು ಆ ದಿನ ಬೇಸಾಯ ಮಾಡಬೇಕು,ಕೆಲವೊಮ್ಮೆ ಮನೆಯ ಯಜಮಾನ ಅಥವಾ ಹಿರಿಯ ಮಗ ,ಹೀಗೆ ಯಾರಾದರು ಒಬ್ಬರು ಸಜ್ಜಾಗುತ್ತಾರೆ.ಅದಲ್ಲದೆ ಬೇಸಾಯ  ಮಾಡುವ ವ್ಯಕ್ತಿ ಕೂಡ ಹೊಸ ಬಟ್ಟೆ(ಬಿಳಿ ಬಟ್ಟೆ ) ಹಾಕಿಕೊಂಡು ಮಧು ಮಗನಂತೆ ತಯಾರಾಗುತ್ತಾನೆ..ತಲೆಗೆ ಪೇಟವನ್ನು ಕೂಡ ಕಟ್ಟುತ್ತಾರೆ,ಇದಲ್ಲದೆ ಆ ವ್ಯಕ್ತಿ ಕೈಯಿಗೆ  ಉಂಗುರ ಹಾಕಿಕೊಳ್ಳುವುದು ವಾಡಿಕೆ.
ಅವನಿಗೆ ಮನೆಯ ಹೆಣ್ಣು ಮಕ್ಕಳು ಆರತಿ ಎತ್ತಿ,ಹಣೆಗೆ ಅಕ್ಷತೆಯನ್ನು ಇಟ್ಟು ಅರಸಿ ಕಳಿಸಿಕೊಡುತ್ತಾರೆ.
ಇದೆ ರೀತಿ ಪ್ರತಿಯೊಂದು ಮನೆಗಳಲ್ಲಿ ನಡೆಯುತ್ತದೆ...ನಂತರ ಊರಿನ ಹೆಬ್ಬಾಗಲಿನ ವರೆಗೂ ಇವರು ನೇಗಿಲನ್ನು ಹೊತ್ತು,ಎತ್ತುಗಳನ್ನು ಹಿಡಿದು ಹೋಗುತ್ತಾರೆ,
ಪ್ರತಿಯೊಂದು ಮನೆಯವರು ಕೂಡ ಹೆಬ್ಬಾಗಲಿನ ವರೆಗೂ ಬರುತ್ತಾರೆ,ನಂತರ ಅವರೆಲ್ಲರೂ ತಮ್ಮ ತಮ್ಮ ಹೊಲಗಳಿಗೆ ಹೋಗಿ
ಬೇಸಾಯ ಮಾಡಿಕೊಂಡು ಬರುತ್ತಾರೆ..ಆ ದಿನ ಅವರು ಕೇವಲ ೩ ಸುತ್ತು ಮಾತ್ರ ಹೂಡುತ್ತಾರೆ,ಕೆಲವು ಊರುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇದನ್ನು ಆಚರಿಸುತ್ತಾರೆ...
ಮನೆಗೆ ವಾಪಸ್ ಬರುವಾಗ ಯಾರೇ ಆದರು ಅವರು ಹೆಬ್ಬಾಗಲಿನ  ಹೊಳಗಡೆ ಹೋಗುವಾಗ ನೇಗಿಲು ಮತ್ತು ನೊಗವನ್ನು
ಎತ್ತಿನ ಮೇಲೆ ಬಿಡುವುದಿಲ್ಲ,ಬದಲಾಗಿ ಅವರು ಅದನ್ನು ಹೊತ್ತುಕೊಂಡು ಹೋಗಬೇಕು.
ಇದು ಪ್ರತಿ ದಿನ ಅವರು ಬೇಸಾಯ ಮಾಡಿ ಮನೆಗೆ ಹಿಂದಿರುಗುವಾಗ ಪಾಲಿಸ ಬೇಕಾದ ಕರ್ತವ್ಯ.
ಹಿಂದೆ ಯಾರಾದರು ಆ ರೀತಿ ಉರ ಹೊಳಕ್ಕೆ ಪ್ರವೇಶ ಮಾಡಿದರೆ,ಊರಿನ ಮುಖಂಡರುಗಳು  ಸೇರಿ ಪಂಚಾಯಿತಿ ಮಾಡಿ ಅವರಿಗೆ ದಂಡ ವಿಧಿಸುತ್ತಿದ್ದರು,ಈಗಲೂ ಕೆಲವು ಕಡೆ ಇದು ಚಾಲ್ತಿಯಲ್ಲಿದೆ.
ಆದರೆ ಈ ಬಾರಿ ಉಗಾದಿ ಸೋಮವಾರ ಬಂದಿದ್ದರಿಂದ ಯಾರು ಕೂಡ ಹೊನ್ನಾರು ಮಾಡಲಿಲ್ಲ,ಕಾರಣ ಯಾವುದೇ ಸೋಮವಾರ ಯಾವುದೇ ಹಳ್ಳಿಗಳಲ್ಲಿ ಬೇಸಾಯ ಮಾಡುವುದಿಲ್ಲ,ಯಾಕೆಂದರೆ ಎತ್ತುಗಳನ್ನು ಅವರು ಬಸವ(ನಂದಿ) ಏಂದು ಭಾವಿಸಿ ಪೂಜಿಸುತ್ತಾರೆ,ಮತ್ತು ಬಸವ ಹುಟ್ಟಿದ್ದು ಸೋಮವಾರ ಆದ್ದರಿಂದ ಅವತ್ತು ಯಾವುದೇ ಕಾರಣಕ್ಕೂ ಬೇಸಾಯ ಮಾಡುವುದಿಲ್ಲ.ಆದ್ದರಿಂದ ಈ ಬಾರಿ ಬೇರೆ ದಿನ ಈ ಕಾರ್ಯಕ್ರಮವನ್ನು ಮಾಡುತ್ತಾರೆ.
     

Saturday, April 2, 2011

ಯುಗಾದಿಗೆ ಊರಿಗೆ ಹೋಗುವಾಗ ಈಗಾಗಿತ್ತು.......!!


ಇಂಜಿನಿಯರಿಂಗ್    ಮೊದಲ  ವರ್ಷ ..ಮಾರನೆಯ  ದಿನ  ಯುಗಾದಿ  ಹಬ್ಬ  ಇದೆ .
ಹಾಗಾಗಿ  ಊರಿಗೆ  ಹೋಗುವ  ಹುಮ್ಮಸ್ಸಿನಲ್ಲಿ  ಮಧ್ಯಾನದ  ಕ್ಲಾಸ್  ಬಂಕ್  ಮಾಡಿ  ಊರಿಗೆ  ಹೊರಟೆ .
ಬಂಕ್ ಮಾಡಿದರೂ  ಕೂಡ  ಹೊರಡುವುದು  ಸ್ವಲ್ಪ  ತಡ  ಆಯಿತು .ಸಂಜೆ  ಅಗೋಗಿ ಬಿಟ್ಟಿತ್ತು .
ಸರಿ  ಇನ್ನೇನ್  ಮಾಡೋದ್  ಅಂತ  ಹೊರಟೆ .ತುಮಕೂರಿನಲ್ಲಿ  ಬಸ್  ಅತ್ತಿದೆ ,ಆಗ್ಲೇ  ಸಂಜೆ  ಆಗಿದ್ದರಿಂದ
ನಾನು  ಅರಸೀಕೆರೆ   ತಲುಪುವ  ವೇಳೆಗೆ  ನಮ್ಮ  ಊರಿಗೆ  ಲಾಸ್ಟ್  ಬಸ್  ಅರಸೀಕೆರೆ  ಮತ್ತು  ಬಾಣಾವರ  ೨  ಕಡೆ ಇಂದ  ಹೋಗಿ  ಬಿಟ್ಟಿರುತ್ತೆ .
ಹಾಸನದಿಂದ   ನಮ್ಮ  ಊರಿಗೆ  ಲಾಸ್ಟ್  ಬಸ್  ರಾತ್ರಿ  ೯ಕ್ಕೆ  ಇದೆ .ಆದ್ದರಿಂದ  ತಿಪಟೂರಿನಲ್ಲಿ  ಇಳಿದು  ಹಾಸನಕ್ಕೆ  ಹೋಗುವ  ಪ್ಲಾನ್  ಮಾಡಿದೆ.ಸರಿ  ತಿಪಟೂರಿನಲ್ಲಿ  ಇಳಿದು  ಸ್ವಲ್ಪ  ಸಮಯ  ಕಾದೆ  ,ಒಂದು  ಬಸ್  ಇಲ್ಲ  ಹಾಸನಕ್ಕೆ .
 ಯಾರೋ ಒಬ್ರನ್ನ  ಕೇಳ್ದಾಗ  ಅವರು  ಹೇಳಿದ್ರು ,"ಇವಾಗ  ಹಾಸನಕ್ಕೆ  ಯಾವ್ದು  ಬಸ್  ಇಲ್ಲಪ್ಪ ,ಯಾವ್ದಾದ್ರು
ಟೆಂಪೋಗೋ  ಅಥವಾ  ಲಾರಿಗೋ  ಹೋಗು "ಅಂತ .
ಇನ್ನೇನ್  ಮಾಡೋದು  ಅಂತ  ಕಾಯುತ್ತ ಇದ್ದೆ ,ಒಂದು  ಲಾರಿ  ಬಂತು ,ಸರಿ  ಅಲ್ಲಿದ್ದ  ಎಷ್ಟೋ  ಜನ  ಮುಗಿ  ಬಿದ್ರು ,ಆ  ಲಾರಿ  ಅತ್ತಕ್ಕೆ.ನಾನು  ಕೂಡ  ಒಬ್ಬ  ಅದ್ರಲ್ಲಿ .ಮಾರನೆಯ ದಿನ  ಹಬ್ಬ  ಆದ್ದರಿಂದ   ತುಂಬ ಜನ  ಪೇಟೆಗೆ  ಅದು  ಇದು  ತಗೊಂಡ್ ಹೋಗಕ್ಕೆ  ಬಂದಿದ್ರು  ಅನ್ಸುತ್ತೆ .ಹೇಗೋ ಲಾರಿ  ಅತ್ತಿ  ಆಯಿತು ,ನೋಡ್ಕೋತೀನಿ  ನನ್ನ ಪರ್ಸ್  ಇಲ್ಲ .ಬಿದ್ದೋಗಿ  ಬಿಟ್ಟಿತ್ತು.
ಹೇಗೋ  ಆ  ನೂಕು  ನುಗ್ಗುಲಲ್ಲಿ ಮತ್ತೆ  ಕೆಳಗೆ ಇಳಿದು  ನೋಡಿದೆ ,ಎಲ್ಲಾದರು ಬಿದ್ದಿದ್ಯ  ಅಂತ,
ನನ್ನ  ಪರ್ಸ್ ನಾಪತ್ತೆ.
೧ ರುಪಾಯಿ  ಕೂಡ  ದುಡ್ಡಿಲ್ಲ .ಎಲ್ಲ  ಅದರಲ್ಲೇ  ಇತ್ತು  .
ಗಾಬರಿ  ಹಾಗೋಯ್ತು  ,ಈಗೇನ್  ಮಾಡೋದು  ಅಂತ . ಈ  ಕಡೆ   ಅಳಬೇಕೋ  ಸಮಾಧಾನ  ಮಾಡ್ಕೊಬೇಕು  ಒಂದು  ತಿಳಿತಿಲ್ಲ .ಪರ್ಸ್ ಕೆಳಗೆ  ಬಿತ್ತೋ ,ಅಥವ  ಯಾರಾದ್ರೂ  ಎತ್ತಿದರೋ ,ಒಂದು  ಗೊತ್ತಿಲ್ಲ .
ಸರಿ ಇನ್ನೇನ್ ಮಾಡೋದು ಅಂತ ಅಲ್ಲಿದ್ದ ಒಬ್ಬ ಟ್ರಾಫಿಕ್ ಪೋಲಿಸ್ ಹತ್ತಿರ ಹೋಗಿ ಸರ್,ಯಾರಾದ್ರೂ ಒಂದು ಪರ್ಸ್ ತಂದು ಕೊಟ್ರ,ಲಾರಿ ಹತ್ತ ಬೇಕಾದ್ರೆ ಕೆಳಗೆ ಬಿದ್ದೋಯ್ತು ಅನ್ಸುತ್ತೆ  ಅಂತ ಕೇಳ್ದೆ,
ಯಾರಪ್ಪ ತಂದು ಕೊಡ್ತಾರೆ ಇಷ್ಟೊಂದ್ ಜನದಲ್ಲಿ ಯಾರ ಕೈಗೆ ಸಿಕ್ತೋ ಏನೋ,ಹಬ್ಬಕ್ಕೆ ಖರ್ಚಿಗೆ ಆಯಿತು ಬಿಡಿ ಅವರಿಗೆ ಅಂತ ಅವರು ಹೇಳ ಬೇಕಾದರೆ  ನಂಗೆ ತೋ ಥ್ಹರಿಕೆ ಏನಪ್ಪಾ ಮಾಡೋದು ಇವಾಗ ಅಂತ ಯೋಚಿಸ್ತಾ ಇದ್ದಾಗ,ಯಾವ್ ಊರು,ಎಷ್ಟಿತ್ತು ದುಡ್ಡು,ಬೇರೆ ಏನೇನ್ ಇತ್ತು ಅಂತ ಎಲ್ಲೇ ಕೇಳಿದ್ರು,
ಅದರಲ್ಲಿ ೨೦೦ ರುಪಾಯಿ ,ನನ್ನ ಲೈಬ್ರರಿ ಕಾರ್ಡ್,ಏಟಿಎಂ ಕಾರ್ಡ್,ಫಿ ರಶೀದಿ ಇತ್ತು,ನನ್ನು ಹಳೇಬೀಡಿಗೆ ಹೋಗಬೇಕು,ಇವಾಗ ಬಸ್ ಸಿಗಲ್ಲ,ಅದಕ್ಕೆ ಹಾಸನಕ್ಕೆ ಹೋಗಿ ನಮ್ಮ ಅಕ್ಕನ ಮನೇಲಿ ಉಳ್ಕೊಂಡು
ಬೆಳಗ್ಗೆ ಹೋಗ್ತೀನಿ ಅಂದೆ,ಸರಿ ಇನ್ನ್ಮುಂದೆ ಹುಷಾರಾಗಿ ಇಟ್ಕೋ ಅಂತ ಹೇಳಿ ೨೫ ರುಪಾಯಿ ಕೊಟ್ಟು ನೆಕ್ಷ್ತ ಬಸ್ಸಿಗೆ ಹೋಗು ಅಂತ ಹೇಳಿದ್ರು.
ನಾನು ಕಕ್ಕಾ  ಬಿಕ್ಕಿ ಅದೇ,ಆ ಟ್ರಾಫಿಕ್ ಪೋಲಿಸ್ ಗೆ ಏನ್ ಹೇಳ್ಬೇಕು ಅಂತ ಗೊತ್ತಾಗಲಿಲ್ಲ,ಸರ್ ಥ್ಯಾಂಕ್ಸ್ ಅಂದೆ,ಇರ್ಲಿ ಇರ್ಲಿ ಹುಷಾರಾಗಿ ಹೋಗು,ದುಡ್ಡನ್ನ ಸರಿಯಾಗಿ ಇಟ್ಕೋ ಅಂತ ಹೇಳಿ ಹೋದರು.
ಮತ್ತೆ  ಅದೇ  ರೀತಿ  ಸ್ವಲ್ಪ  ಕಾಯ್ತಾ  ಇದ್ದೆ ,ಆ  ಬಸ್  ಸ್ಟಾಪ್  ಹತ್ತಿರ ಫುಟ್  ಪಾತಿನಲ್ಲಿ   ಒಬ್ರು  ಗಂಡ  ಹೆಂಡತಿ  ಹಣ್ಣು
ಮಾರುತ್ತ ಇದ್ರೂ ಬಹುಷಃ  ಆ  ಪೋಲಿಸ್  ನನ್ನ  ಬಗ್ಗೆ  ಅವರಿಗೆ  ಹೇಳಿರಬೇಕು  ಅನ್ಸುತ್ತೆ .
ಅವರು  ನನ್ನನ್ನು  ಕರೆದು  "ಬಾರಪ್ಪ  ಇಲ್ಲಿ ,ದುಡ್ಡನ್ನ  ಹುಷಾರಾಗಿ  ಇತ್ಕೊಲದು  ತಾನೆ ,ಇಷ್ಟೊಂದ್  ಜನ  ಇದಾರೆ ,ಯಾರ್  ಎತ್ಕಂಡ್ರೋ   ಏನೋ ?"
ಅಂತ ಹೇಳಿ ಬೇಡ ಅಂದ್ರು ಊಟ  ಮಾಡಿದ್ಯೋ  ಇಲ್ವೋ , ತಗೋ ,ತಿನ್ನು ಅಂತ ಬಾಳೆಹಣ್ಣು ಕೊಟ್ಟರು
ಸರಿ  ಹಾಸನದಲ್ಲಿ  ನಮ್ಮ  ಅಕ್ಕನ  ಹತ್ರ  ಹೇಳಿ  ದುಡ್ಡು  ಇಸ್ಕೊಳನ  ಅಂತ  ಅಂದ್ರೆ ,ಯಾಕೋ  ಭಯ ಆಯಿತು ,ಅವರು  ಬೈತಾರೆ  ಅಂತ .
ಅವಾಗ  ನನ್ನ  ಹತ್ರ  ಮೊಬೈಲ್  ಕೂಡ  ಇರ್ಲಿಲ್ಲ .ಎಷ್ಟೋ  ಜನದ  ಫೋನ್  ನಂಬರ್  ನೆನಪಲ್ಲಿತ್ತು .
ತಕ್ಷಣ  ಅಲ್ಲಿ  ಕಾಯಿನ್  ಫೋನ್  ಇಂದ  ಅರಸಿಕೆರೆಯಲ್ಲಿರುವ  ನನ್ನ  ಒಬ್ಬ  ಫ್ರೆಂಡ್ ಗೆ   ಫೋನ್  ಮಾಡಿ ,ಇಂಗಿಂಗೆ ಆಗೋಗಿದೆ ,ನಂಗೆ  ದುಡ್ಡು  ಬೇಕು  ಇವಾಗ ,ಇನ್ನು  ಅರ್ಧ  ಗಂಟೇಲಿ
ಅಲ್ಲಿಗೆ  ಬರ್ತೀನಿ  ಅಂತ  ಹೇಳಿ  ಹೊರಟೆ .
ಅರಸಿಕೆರೆಯಲ್ಲಿ  ಅವನ  ಹತ್ರ ದುಡ್ಡು  ಇಸ್ಕೊಂಡು  ಹಾಸನಕ್ಕೆ  ಹೋಗಿ ,ನನ್ನ  ಅಕ್ಕನ  ಮನೇಲಿ  ಉಳ್ಕೊಂಡೆ .
ಆ  ಕಡೆ  ನಮ್ಮ  ಮನೇಲಿ  ನಾನು  ಬರ್ತೀನಿ  ಅಂತ  ಅಪ್ಪ  ಅಮ್ಮ  ಇಬ್ರು  ಕಾಯ್ತಿದ್ದಾರೆ  .ರಾತ್ರಿ  ಎಷ್ಟೊತ್ತು  ಆದರು   ಬರ್ಲಿಲ್ಲ  ಅಂತ  ನನ್ನ  ಕ್ಲಾಸ್ ಮೇಟ್  ಒಬ್ಬನಿಗೆ  ಫೋನ್  ಮಾಡಿದ್ದಾರೆ
(ನನ್ನ  ಹತ್ರ  ಮೊಬೈಲ್  ಇರಲಿಲ್ಲವಾದ್ದರಿಂದ  ಅವನೇ  ನನ್ನ  ಮನೆ  ಮತ್ತು  ನಂಗೆ  ಮೀಡಿಯೇಟರ್   ,ನಮ್ಮ  ಮನೆಯಿಂದ  ಏನಾದ್ರು  ವಿಷಯ  ಇದ್ರೆ  ಅವನಿಗೆ  ಫೋನ್  ಮಾಡ್ತಿದ್ರು
"ಅವನು  ಸಂಜೆನೇ  ಹೋದ ,ಅವನನ್ನ  ನಾನೇ  ಬಸ್  ಸ್ಟಾಪ್ ಗೆ  ಡ್ರಾಪ್  ಮಾಡಿದ್ದು " ಅಂತ  ಹೇಳಿ  ಬಿಟ್ಟಿದ್ದ .
ಎಲ್ಲಿ  ಹೋಗಿರಬಹುದು  ಅಂತ   ಮನೇಲಿ  ಯೋಚನೆ ,
ಬೆಳಗ್ಗೆ  ಹೋದ  ಮೇಲೆ  ಲೇಟ್  ಆಯಿತು ,ಅರಸಿಕೆರೆಯಿಂದ   ಬಸ್  ಸಿಗಲಿಲ್ಲ ,ಅದಕ್ಕೆ  ಹಾಸನದಲ್ಲಿ  ಉಳ್ಕೊಂಡೆ  ಅಂತ  ಹೇಳಿದೆ ,ಆದ್ರೆ  ಪರ್ಸ್  ವಿಷ್ಯ  ಮಾತ್ರ  ಹೇಳಲಿಲ್ಲ .
ಕೊನೆಗೂ  ಮನಸು  ತದೆಯೋಕ್ಕೆ  ಆಗದೆ   ಅಮ್ಮನ   ಹತ್ತಿರ  ಹೇಳ್ದೆ ,ಅಪ್ಪಾಜಿಗೆ  ಮಾತ್ರ  ಯಾವದೇ  ಕಾರಣಕ್ಕೂ  ಹೇಳ್ಬೇಡಿ  ಅಂತಾನು  ಹೇಳಿದ್ದೆ .
 ಆದ್ರೆ  ಬ್ಯಾಂಕ್ ನಲ್ಲಿ   ನನ್ನ  ಫೀ ರಶೀದಿ ಕೇಳ್ದಾಗ  ಅದು  ಕೂಡ  ಕಳೆದು  ಹೋದ್ದರಿಂದ  ಅಪ್ಪನ  ಹತ್ರ  ಅವಾಗ  ಈ  ವಿಷ್ಯ  ಹೇಳಲೇ  ಬೇಕಾಯಿತು  .
(ಅವತ್ತು ಆ ಪೋಲಿಸ್ ಮತ್ತು ಹಣ್ಣು ಅಂಗಡಿಯ ಗಂಡ ಹೆಂಡತಿ ಇಷ್ಟು ಜನರ ಸಹಾಯಕ್ಕೆ  ನಾನು ಯಾವತ್ತು ಚಿರ ಋಣಿ )