Thursday, October 25, 2012

ಏ ಮರವೇ....

ಸುಡು ಸುಡುವ ಬಿಸಿಲಲ್ಲಿ ಇಳಿದ ಬೆವರ
ಅಳಿಸುತ್ತಿತ್ತು ನಿನ್ನ ತಂಗಾಳಿಯ ಆದರ.
ಕರೆದು ಕರೆದು ಹಾದು ಹೋಗುತ್ತಿದ್ದ ಜನರ.
ಅದೆಷ್ಟು ಜನರಿಗೆ ನೀ ಮಾಡಿದೆಯೋ ಉಪಕಾರ ?

ರಸ್ತೆ ಅಗಲಿಸುವ ನೆಪವೊಡ್ಡಿತು ಸರಕಾರ
ನೀ ಉರುಳಿಬಿದ್ದೆ ನೆಲಕ್ಕೆ ಎತ್ತದೆ ಚಕಾರ.
ಇಲ್ಲಿಗೆ ಮುಗಿದಿತ್ತು, ನಿನ್ನ ಅವರ ನಡುವೆ ಸಮರ
ಇಲ್ಲಿಯವರೆಗೂ ನೀ ಆಗಿದ್ದೆ ಅಜರಾಮರ !!!

ಎಷ್ಟೋ ಜನರು ಊಡಿದ್ದರು ನಿನ್ನಡಿಯಲ್ಲಿ ಸಂಸಾರ
ಈಗ ಸೂರಿಲ್ಲದೆ ಅವರ ಗೋಳು ಅಪಾರ
ನಿನ್ನ ನೆನಪು ಮಾತ್ರ ಅಮರ !!

ನಿನ್ನ ಜೊತೆಗೆ ಮುಗಿಯಿತು ಹಕ್ಕಿಗಳ ಚಿಲಿಪಿಲಿ ಕಲರವ
ನೀ ಅವಕ್ಕೆ ಮಾಡಿದ ಉಪಕಾರ, ಮಧುರ ....