Saturday, December 31, 2011

Happy New Year !!!

ಗಳಿಗೆಗಳು ಉರುಳಿದಂತೆ ದಿನಗಳು
ದಿನಗಳು ಉರುಳಿದಂತೆ ವರುಷಗಳು
ಸುಖ ದುಃಖಗಳನ್ನು  ಹೊತ್ತು ಸಾಗುತ್ತಿದೆ ಜೀವನ !!!

ಆರಕ್ಕೇರದೆ ಮೂರಕ್ಕಿಳಿಯದೆ
ನಾಲ್ಕೈದರಲ್ಲೇ ಜೋತಾಡುತ್ತಿದೆ
ನಮ್ಮ ಭವಣೆ ,ಸಾಧನೆ...

*************************

ಕೈ ಜಾರಿ ನಯವಂಚಕನ ಸೇರಿದ ದುಡಿಮೆಯ ಫಲ
ಇದು ನನ್ನ ದಡ್ಡತನದಿ  ಗತಿಸಿದ ತಪ್ಪು
ನನ್ನ ನಂಬಿಕೆಗ ಅವ ಬಗೆದ ದ್ರೋಹ !
ಆದರೆ,ನನಗದು ಶಿಕ್ಷೆ,ಅಪ್ಪನ ಮಾತು ಕೇಳದ್ದಕ್ಕೆ ತಕ್ಕ ಶಾಸ್ತಿ.
ಬರೀ ಶಿಕ್ಷೆ ಅಲ್ಲ,ಈಗಲಾದರೂ
ಜಾಗರೂಕನಾಗು ಎಂಬ ಭೋಧನೆ..
ಇಲ್ಲ,ಇನ್ನೊಮ್ಮೆ ಮೋಸ ಹೋಗಲಾರೆ !
ಕೊನೆಗೆ ಅನಿಸಿದ್ದು ಅಪ್ಪನ ಮಾತು ಕೇಳಬೇಕಿತ್ತು .
ಕೈಯೊಳಗಿನ ರಂಧ್ರಗಳಿಗೆ ತೇಪೆ ಹಾಕಬೇಕು...
ಸಮಯ ಕೈ ಜಾರುವ ಮುನ್ನ ಎಚ್ಚೆತ್ತುಕೊಳ್ಳಬೇಕು,

***********************

ನನಸಾಗದೇ ಉಳಿದಿವೆ ಅದೆಷ್ಟೋ ಕನಸುಗಳು
ಕಾರ್ಯಗತವಾಗದ ನಿರ್ಣಯಗಳು
ಪಟ್ಟು ಬಿಡದೆ ಸಾಧಿಸಬೇಕಿದೆ ಕನಸು ಮತ್ತು ನಿರ್ಣಯಗಳನು...

ಚಿಂತಿಸದೆ  ಗತಿಸಿದ ಕರ್ಮಗಳನು
ಯೋಚಿಸದೆ ಮುಂದಿನ ಕಾರ್ಯಗಳನು
ಜೀವಿಸಬೇಕು ವರ್ತಮಾನದಲಿ..
****************************


                                       ನೇಸರನ ನವ ಕಿರಣಗಳು ನಿಮ್ಮ ಬಾಳಲ್ಲಿ ಹೊಂಗಿರಣವಾಗಲಿ..
                                      ಸುಖ ದುಃಖಗಳನ್ನೂ ಸಮವಾಗಿ ಸ್ವೀಕರಿಸುವ ಶಕ್ತಿ ನಿಮ್ಮದಾಗಲಿ..
                                             ಶಾಂತಿ,ನೆಮ್ಮದಿ ನಿಮಗೆ ಆಸರೆ ಆಗಲಿ..
                                             ಆತ್ಮ ಸ್ಥೈರ್ಯವೇ ನಿಮ್ಮ ಶಕ್ತಿಯಾಗಲಿ..
                                  ಎಲ್ಲರಿಗೂ ನವ ವಸಂತದ ಹಾರ್ದಿಕ  ಶುಭಾಶಯಗಳು....

Photo Courtesy:Girish.S

Sunday, December 4, 2011

ಕಡಿಮೆ ವೆಚ್ಚದ ಗೋಬರ್ ಗ್ಯಾಸ್ !!!

ಅವಶ್ಯಕತೆ ಮತ್ತು ಇರುವ ವಸ್ತುಗಳು ಮತ್ತು ಉಪಯೋಗಿಸದೆ ಬಿಟ್ಟ ಸರಕುಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು  ತಿಳಿದರೆ ಏನೆಲ್ಲಾ ಕಂಡು ಹಿಡಿಯಬಹುದು  ಎಂಬುದಕ್ಕೆ ಇದೊಂದು ನಿದರ್ಶನ ಅಂತ ಹೇಳಬಹುದು...
ನಾನೀಗ ಹೇಳುತ್ತಿರುವುದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಸಿದ್ಧನಹಳ್ಳಿ ಗ್ರಾಮದ ಹಾಲೇಗೌಡ ಎಂಬ ರೈತರ ಮನೆಯಲ್ಲಿ ಇರುವ ಒಂದು ಗೋಬರ್ ಗ್ಯಾಸ್ ಬಗ್ಗೆ.....ಇದಕ್ಕೆ ತಗುಲಿರುವ ವೆಚ್ಚ ಕೇವಲ ೫೦೦ ರುಪಾಯಿ ಎಂದರೆ ಆಶ್ಚರ್ಯ ಆಗಬಹುದು.... ಆದರೆ ಇದು ಸತ್ಯ...ಇದರ ಹಿಂದಿನ ಕತೃ ಅಲ್ಲೇ ಹತ್ತಿರದ ಊರಿನ ಸಿದ್ಧರಾಮಣ್ಣ ಅಂತ.. ಸದ್ಯ ಬೆಂಗಳೂರಿನಲ್ಲಿ GKVK ಯಲ್ಲಿ APOF ಎಂಬ ಅಂಗ ಸಂಸ್ಥೆಯಲ್ಲಿ  ರೈತರಿಗೆ ತರಬೇತಿ ಕೊಡುತ್ತಿದ್ದಾರೆ... ಈ ಗ್ಯಾಸ್ ಉತ್ಪಾದನೆಯ ತಂತ್ರಜ್ಞಾನ ಅವರ ಐಡಿಯಾ.

ಇವರು ಇಲ್ಲಿ ಉಪಯೋಗಿಸಿರುವುದು ಒಂದಿಷ್ಟು ಸೆಮೆಂಟ್ ಚೀಲಗಳನ್ನು ಹರಿದು ಅದರಿಂದ ಟಾರ್ಪೆಲ್ ಮಾಡಿದ್ದಾರೆ...ಜೊತೆಗೆ ಅಷ್ಟೇ ಆಕಾರದ ಇನ್ನೊಂದು ಪ್ಲಾಸ್ಟಿಕ್ ಟಾರ್ಪೆಲ್  ತಂದಿದ್ದಾರೆ...ಹನಿ ನೀರಾವರಿ ಪದ್ದತಿ ಯಲ್ಲಿ ಉಪಯೋಗಿಸುವ ಒಂದಿಷ್ಟು ಪೈಪ್ ಮತ್ತು ೩-೪ ಅಡಿ ಅಷ್ಟು PVC  ಪೈಪ್....  ಸುಮಾರು ೪೦-೫೦ ಇಟ್ಟಿಗೆ ಮತ್ತು ಸೀಮೆಂಟ್ ಅಷ್ಟೇ...


ಮೊದಲಿಗೆ ಒಂದು ಟಾರ್ಪೆಲ್ ಸುತ್ತಿ ಸಿಲಿಂಡರ್ ಆಕಾರದಲ್ಲಿ ಮಾಡಬೇಕು... ಅದರ ಸುತ್ತ ಇನ್ನೊಂದು ಪದರ ಸ್ವಲ್ಪ ಗಟ್ಟಿಯಾದ ಟಾರ್ಪೆಲ್ ಸುತ್ತಬೇಕು.. ಇದನ್ನು ಸೀಮೆಂಟ್ ನಲ್ಲಿ ಕೂಡ ಕಟ್ಟಾ ಬಹುದು... ಆದರೆ ಅದು ತುಂಬ ದುಬಾರಿ.... ಈ ಟಾರ್ಪೆಲ್ ನಿಂದ ಸುತ್ತಿದ ಆಕೃತಿ ಇಲ್ಲಿ ಆ ದೊಮೆ ನ ಕಾರ್ಯ ನಿರ್ವಹಿಸುತ್ತದೆ...ಇಲ್ಲಿ ಉತ್ಪಾದನೆ ಆಗುವ ಗ್ಯಾಸ್ ಇದರ ಸಾಮರ್ಥ್ಯದ ಮೇಲೆ ಅವಲಂಭಿಸಿದೆ....ಇದನ್ನು ಎಷ್ಟು ದೊಡ್ಡದು ಮಾಡುತ್ತಿವಿ ಅಷ್ಟು  ಸಾಮರ್ಥ್ಯ ಹೊಂದಿರುತ್ತದೆ.ಇದಕ್ಕೆ ಎರಡು ಬದಿಯಲ್ಲಿ ೨-೩ ಅಡಿ ಉದ್ದದ PVC ಪೈಪ್ ಅನ್ನು ಜೋಡಿಸಬೇಕು... ಮತ್ತು ಮಧ್ಯದಲ್ಲಿ ಮೇಲೆ ಹನಿ ನೀರಾವರಿಯಲ್ಲಿ ಬಳಸುವ ಪೈಪ್ ಅನ್ನು  ಜೋಡಿಸಿ ಅದನ್ನು ಸ್ಟವ್ ಗೆ ಜೋಡಿಸಬೇಕು.... ಇಲ್ಲಿ ಈ ಸಿಲಿಂಡರ್ ಆಕಾರದ ಹೊಳಗೆ ಗಾಳಿ ಹೋಗದಂತೆ ನೋಡಿಕೊಳ್ಳಬೇಕು... ಪೈಪ್ ಜೋಡಿಸುವ ೩ ಕಡೆ ಚೆನ್ನಾಗಿ ಕವರ್ ಮಾಡಬೇಕು...
ಹಾಲೇಗೌಡರು ತಮ್ಮ ಮನೆಯಲ್ಲಿ ಅಳವಡಿಸಲಾಗಿರುವ ಗೋಬರ್ ಗ್ಯಾಸ್ ಅನ್ನು ತೋರಿಸುತ್ತಿರುವುದು...
ನಂತರ ಕೆಳಗಿನ ಚಿತ್ರದಂತೆ ಒಂದು ತೊಟ್ಟಿಯನ್ನು ಕಟ್ಟಬೇಕು... ತೊಟ್ಟಿಯ ಕೆಳ ಭಾಗದಲ್ಲಿ ಒಂದು ಪೈಪ್ ಅನ್ನು ಜೋಡಿಸಿ ಅದನ್ನು ಟಾರ್ಪೆಲ್ ನಿಂದ ಮಾಡಿರುವ dome ಗೆ ಜೋಡಿಸಬೇಕು.... ಈ ತೊಟ್ಟಿಯಲ್ಲಿ ಸಗಣಿಯನ್ನು ಕಲಸಿ ಹಾಕಿದರೆ ಅದು ಆ ಪೈಪ್ ಮುಖಾಂತರ ಆ dome ಒಳಗೆ ಹೋಗುತ್ತದೆ... ಅಲ್ಲಿ ಗ್ಯಾಸ್ ಉತ್ಪಾದನೆ ಆಗಿ ಮಧ್ಯದಲ್ಲಿ  ಒಂದು  ಸಣ್ಣ  ಪೈಪ್ ಮುಖೇನ ಅದನ್ನು ಸ್ಟವ್ ಗೆ ಜೋಡಿಸಬೇಕು.... ಇವರು ಸಧ್ಯ ಹನಿ ನೀರಾವರಿಯ ಪೈಪ್ ಅನ್ನು ಜೋಡಿಸಿ ಅದರ ನಲ್ಲಿ ಅನ್ನು Regulator ಆಗಿ ಉಪಯೋಗಿಸುತ್ತಿದ್ದಾರೆ.... ಈ dome ನಲ್ಲಿ ಈ ಸಣ್ಣ ಪೈಪ್ ಅನ್ನು ಜೋಡಿಸುವಾಗ Clamp  ಹಾಕಿದರೆ ಒಳ್ಳೆಯದು.... ಆಗ ಗಟ್ಟಿಯಾಗಿ  ಇರುತ್ತದೆ...



ಸಗಣಿಯನ್ನು ಕದಡಿ ಹಾಕುತ್ತಿರುವುದು...

ಪ್ರತಿ ದಿನ ಸುಮಾರು ೫-೧೦ kg ಸಗಣಿಯನ್ನು ಕದಡಿ ಹಾಕಿದರೆ ಸಾಕು...ಕೇವಲ ೧೦ ನಿಮಿಷದ ಕೆಲಸ..


ಇನ್ನೊಂದು ಬದಿಯಲ್ಲಿ ಕಾಂಪೋಸ್ಟ್ ಹೊರ ಬರಲು ಪೈಪ್ ಹಾಕಿರುವುದು...
ಪ್ರತಿ ದಿನ ಹೊರಗೆ ಬರುವ ಕಾಂಪೋಸ್ಟ್ ಅನ್ನು ಎರೆ ಹುಳದ ಗೊಬ್ಬರ ತಯಾರು ಮಾಡಲು ಬಲಸ ಬಹುದು ಅಥವಾ ಅದಕ್ಕೆ ಯಾವುದಾದರು ಹಿಟ್ಟು(ರಾಗಿ,ಮೆಕ್ಕೆ ಜೋಳ,ಜೋಳ,ರಾಗಿ,ಹುರುಳಿ ಕಾಲು ಹಿಟ್ಟು....) ಮತ್ತು ಬೆಲ್ಲ ಬೆರೆಸಿದರೆ ಅದು ಬಹಳ ಉತ್ತಮವಾದ ಗೊಬ್ಬರ ಆಗುತ್ತ್ತದೆ...ಸಾವಯವ ಕೃಷಿ ಮಾಡುವವರಿಗೆ ಇದು ಹೇಳಿ ಮಾಡಿಸಿದಂತಹ ರೆಡಿ ಮೇಡ್ ಗೊಬ್ಬರ....
ಗ್ಯಾಸ್ ಹೋಗಲು ಪೈಪ್ ಜೋಡಿಸಿರುವುದು...ಇದನ್ನು ಸ್ಟವ್ ಗೆ ಜೋಡಿಸಲಾಗಿದೆ...
ಇಲ್ಲಿ ಇವರು ಸೈಕಲ್ ಟ್ಯೂಬ್ ನಲ್ಲಿರುವ Clamp ಅನ್ನು ಹಾಕಿ ಅದನ್ನು ಸಣ್ಣ ಪೈಪ್ ಗೆ ಜೋಡಿಸಿ ಅದನ್ನು ಸ್ಟವ್ ಗೆ connect ಮಾಡಿದ್ದಾರೆ...


ಇವರ ಮನೆಯಲ್ಲಿ ಇರುವ dome ೧೫೦೦ ಲೀಟರ್ ಸಾಮರ್ಥ್ಯದ್ದು...ಇದರಿಂದ ೩-೪  ಜನಕ್ಕೆ ಸಲೀಸಾಗಿ ಒಂದು ದಿನದ ಅಡುಗೆ ಮಾಡಬಹುದು.... ಅದರ ಸಾಮರ್ಥ್ಯ ಹೆಚ್ಚಿಸಿದಂತೆ(ಅದರ ಗಾತ್ರ ದೊಡ್ಡ ಮಾಡಬೇಕು) ಅದರಿಂದ ಉತ್ಪಾದನೆ ಆಗುವ ಗ್ಯಾಸ್ ಕೂಡ ಜಾಸ್ತಿ ಆಗುತ್ತದೆ.... ಯಾವುದೋ ಹಳೆ ಸ್ಟವ್ ಅನ್ನು ಸಧ್ಯ ಉಪಯೋಗಿಸುತ್ತಿದ್ದಾರೆ... ಅ ಸ್ಟವ್ ಬಿಟ್ಟು ಅವರಿಗೆ ತಗುಲಿರುವ ವೆಚ್ಚ ಕೇವಲ ೫೦೦ ರುಪಾಯಿ... ಇದು ಕನಿಷ್ಠ ಪಕ್ಷ ಏನೇ ಆದರು ೨ ವರ್ಷ ಬಾಳಿಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ...



ಆ dome ಅನ್ನು ಪ್ಲಾಸ್ಟಿಕ್ ಟಾರ್ಪೆಲ್ ನಿಂದ ಮಾಡಿರುವಿದರಿಂದ ಅದನ್ನು ಸ್ವಲ್ಪ ನೆರಳಿನಲ್ಲಿ ಇಟ್ಟರೆ ಒಳ್ಳಯದು...ಯಾಕೆ ಅಂದರೆ ಆ ಪ್ಲಾಸ್ಟಿಕ್ ಟೆಂಪರ್ ಕಳೆದುಕೊಂಡು ಹರಿದು ಹೋಗುಬಹುದು...ಇಲ್ಲಿ ಪ್ಲಾಸ್ಟಿಕ್ ನಿಂದ ಮಾಡಿರುವ dome ಅನ್ನು ಫೈಬರ್ ನಿಂದ ಅಥವಾ ಇಟ್ಟಿಗೆ ಇಂದ ಕೂಡ ಮಾಡಬಹುದು.. ಆದರೆ ಅದು ತುಂಬ ದುಬಾರಿ ಆಗುತ್ತದೆ....ಇಲ್ಲಿ ಇನ್ನೊಂದು ವಿಶೇಷ ಅಂದರೆ LPG ಗ್ಯಾಸ್ ನ ಹಾಗೆ burst ಆಗುವ ಸಂಭವ ಇಲ್ಲವೇ ಇಲ್ಲ...


ಕಳೆದ ವಾರ ಹಳೇಬೀಡು ಬಳಿ ಪುಷ್ಪಗಿರಿ ಬೆಟ್ಟದಲ್ಲಿ ನಡೆದ ಕೃಷಿ ಮೇಳದಲ್ಲಿ ಇದರ ಪ್ರಾತ್ಯಕ್ಷಿಕೆ ಮಾದರಿ ಅನ್ನು ಇಡಲಾಗಿತ್ತು....ಕುತೂಹಲ ಜಾಸ್ತಿ ಆಗಿ ಇದನ್ನು ನೋಡಲೇ ಬೇಕು ಎಂದು ಅಲ್ಲಿ ಹೋಗಿ ನೋಡಿಕೊಂಡು ಬಂದ್ದದಾಯಿತು...
ಸಧ್ಯ ಆ ಉರಿನಲ್ಲಿ ಸುಮಾರು ೧೦-೧೫ ಮನೆಗಳಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ... ಇಲ್ಲಿ ಹೊರ ಬರುವ ಕಾಂಪೋಸ್ಟ್ ಬರಿ ಸಗಣಿಗಿಂತ ಹೆಚ್ಚು ಸ್ಟ್ರಾಂಗ್ ಇದೆ.. ಆದ್ದರಿಂದ ಇದು ಬಹಳ ಒಳ್ಳೆಯ ಗೊಬ್ಬರ..


ಇಲ್ಲಿ ಆ ಪ್ಲಾಸ್ಟಿಕ್ dome ಒಳಗೆ ಇನ್ನು ಒಂದು ಅಥವಾ ಎರಡು ಪದರ ಪ್ಲಾಸ್ಟಿಕ್  ಹಾಕಿದರೆ ಸ್ವಲ್ಪ ಗಟ್ಟಿಯಾಗಿ ಇರುತ್ತದೆ.... ಮತ್ತು ಇದರ ಒಳಗೆ ಒಂದು ಪದರ ತಾಮ್ರದ ತಗಡು ಹಾಕಿದರೆ ವಿದ್ಯುತ್ ಅನ್ನು ಕೂಡ ಉತ್ಪಾದಿಸಬಹುದು... ಮತ್ತು Insulin ಕೂಡ ಇದರಿಂದ ತೆಗೆಯಬಹುದು ಎಂದು ಸಿದ್ದರಾಮಣ್ಣನವರು ತಿಳಿಸಿದರು...... ಇದರ ಬಗ್ಗೆ ಇನ್ನು ಕೆಲವೇ ದಿನದಲ್ಲಿ ಪ್ರಯೋಗ ಮಾಡಲಾಗುವುದು.. ..ಇದರ ಪ್ರಯೋಗ ಮುಗಿದ ನಂತರ ಇನ್ನೊಮ್ಮೆ ಅದರ ಬಗ್ಗೆ ಲೇಖನ ಬರೆಯುತ್ತೀನೆ...


"Necessity is the mother of Invention" ಅಂತ ಇದಕ್ಕೆ ಹೇಳಬಹುದು ಅಲ್ಲವೇ?

ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಿದ್ಧರಾಮಣ್ಣ ಅವರನ್ನು ಸಂಪರ್ಕಿಸಬಹುದು ... ಅವರ ಮೊಬೈಲ್ ಸಂಖ್ಯೆ:9141859991



Monday, November 28, 2011

ಇವ್ರು ಇದ್ದಾರಲ್ಲ........

ಇವ್ರು ಇದ್ದಾರಲ್ಲ ಇವ್ರು.ಈ LIC Agent ಗಳು,ಅದೇನ್ ಕಾಟ ಕೊಡ್ತಾರೋ ನಾ ಕಾಣೆ.ನಾವ್ ಸತ್ತ ಮೇಲೆ ,ನಾವು ಕೂಡಿಟ್ಟಿದ್ದ ಹಣವನ್ನು ಬೇರೆಯವರಿಗೆ ಕೊಡಿಸೋ ಜವಾಬ್ದಾರಿ ಇವರದು..ಸಾಲ ತಗೊಂಡು ಕಣ್ಣು ತಪ್ಪಿಸಿ ಓಡಾಡುವ ಹಾಗೆ,ಇವರ ಕಣ್ಣು ತಪ್ಪಿಸಿ ಓಡಾಡ ಬೇಕಾದ ಪರಿಸ್ಥಿತಿ ಬಂದಿದೆ.. ಈ ಸ್ಥಿತಿ ನನಗೆ ಮಾತ್ರ ಅಂದು ಕೊಂಡಿದ್ದೆ,ನನ್ನ ಎಷ್ಟೋ ಸ್ನೇಹಿತರಿಗೆ ಇದೆ ರೀತಿ ಪ್ರಾಣ ಹಿಂಡುತ್ತಿದ್ದಾರಂತೆ...

ಅದೇನ್ ಆಯಿತು ಅಂದ್ರೆ,ಅದೊಂದು ದಿನ ನಮ್ಮೂರಿನ ಬ್ಯಾಂಕ್ ನಲ್ಲಿ ನನ್ನ ಎಜುಕೇಶನ್ ಲೋನ್ ಕಟ್ಟಿ ಹೊರಗಡೆ ಬಂದೆ ,ಅಲ್ಲೊಬ್ರು ಪಾರ್ಟಿ ಸಿಕ್ಕಿದರು...ನಾನು ಹೈ ಸ್ಕೂಲ್ಗೆ  ಹಳೇಬೀಡಿನಿಂದ ಬೇಲೂರಿಗೆ ಹೋಗುತ್ತಿದ್ದಾಗ ಅವರ ಮಗ ನಮ್ಮ ಸ್ಕೂಲಿನಲ್ಲಿ  ಪ್ರೈಮರಿ ಓದುತ್ತಿದ್ದ..  ಆಗಾಗಿ ಅವನನ್ನು ಕರೆದುಕೊಂಡು ಹೋಗುವುದು,ಬರುವುದು ಕೆಲವು ಹೊಣೆಗಳು ನಮ್ಮ ಮೇಲಿತ್ತು...ವಾರಕ್ಕೆರಡು ದಿನ ಕಬಾಬ್ ತಿಂದು ನನ್ನ ಹತ್ತಿರ ಬದು ಅಣ್ಣ ನಮ್ಮಪ್ಪಂಗೆ ಹೇಳ್ಬೇಡಿ ಅಂತ ಹೇಳ್ತಿದ್ದ...ನನಗೆ ಅಲ್ಲಿ ಸಿಕ್ಕಿದ್ದು ಅವನ ತಂದೆ...ಸರಿ ಯಾರದೋ ಜೊತೆ ಮಾತಾಡ್ತಾ ಇದ್ದವರು ನನ್ನನ್ನು ನೋಡಿ ಮಾತಾಡಿಸಿದರು...ಜೊತೆಯಲ್ಲಿದ್ದವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟರು .ಅವರು ಹೋದ ಮೇಲೆ ಎಲ್ಲಿ ಇರುವುದು,ಎಲ್ಲಿ ಕೆಲಸ ಮಾಡುತ್ತಿರುವುದು ಎಲ್ಲ ಉಭಯ ಕುಶಲೋಪರಿ ಆದ ಮೇಲೆ ತನ್ನ ಮಗನ ಬಗ್ಗೆ ಹೇಳಿ ಹೆಗಲ ಮೇಲೆ ಕೈ
ಹಾಕಿಕೊಂಡು ಟೀ ಕುಡಿಯಣ ಬಾ ಅಂತ ಕರ್ಕೊಂಡು ಹೊರಟರು...ಹೆಗಲ ಮೇಲೆ ಕೈ ಹಾಕಿದಾಗಲೇ ಎಲ್ಲೋ ಏನೋ ಎಡವಟ್ಟು ಆಗ್ತಿದೆ ಅನ್ಕೊಂಡೆ...ಅಲ್ಲ ಎಲೈಸಿ ಗಿಲ್ಲೈಸಿ ಮಾಡ್ಸಿದ್ಯೋ ಇಲ್ವೋ,ಇಲ್ಲ ಅಂದ್ರೆ ಮಾಡ್ಸು ನನ್ನ ಹತ್ತಿರಾನೆ ಅಂದ್ರು... ಒಹ್ ಇದಾ ವಿಷ್ಯ ಅಂತ ನಮ್ಮ ಅಪ್ಪನೆ  ಕಟ್ತವ್ರೆ..ಮತ್ತಿನ್ಯಾಕೆ ಅಂದೇ... ಅಲ್ದೆ ಆಫಿಸಿನಲ್ಲಿ ಬೇರೆ ಇದೆ ಅಂದೇ...ಅಯ್ಯೋ ಅದೆಲ್ಲ
ಪ್ರೈವೇಟ್,ಇದು lic ದು ಒಂದು ಮಾಡ್ಸು ಅಂದ್ರು...ಮಾಡ್ಸನ.ಸ್ವಲ್ಪ ಈ ಲೋನ್ ಮುಗಿದು ಬಿಡ್ಲಿ...ಆಮೇಲೆ ಮಾಡಿಸ್ತೀನಿ  ಅಂದೆ... ಇವಾಗ್ಲೆ ಒಳ್ಳೆ ಒಳ್ಳೆ ಸ್ಕೀಮ್ ಗಳು ಇದೆ ನೋಡು ಅಂತ ಮತ್ತೆ ಹೇಳಿದ್ರು . ಯಾಕೋ  ಬಿಡೋ ಹಾಗೆ ಕಾಣಲಿಲ್ಲ.......ಇರ್ಲಿ ತಾಳಿ, ಮಾಡಿಸ್ತೀನಿ ಅಂತ ಹೇಳಿ ಬೇಗ ಹೋಗಬೇಕು ಅಂತ ಹೊರಟೆ ...ಸರಿ ನೆಕ್ಸ್ಟ್  ಟೈಮ್ ಬಂದಾಗ ನಂಗೆ ಫೋನ್ ಮಾಡು
ಅಂದಾಗ ಸರಿ ಸರಿ ಅಂತ ಕಾಲು ಕಿತ್ತಿದ್ದು  ಆಯಿತು......ಅದಾದ್ ಮೇಲೆ ಒಂದಿನ ಅವರ ಹೆಂಡತಿ ಸಿಕ್ಕಿ ನಮ್ಮ ಮನೆಯವರು ಹೇಳ್ತಿದರು  ನೀನ್ ಪಾಲಿಸಿ ಕೊಡ್ತಿಯ ಅಂತ,ಇನ್ನು ಕೊಟ್ಟಿಲ್ವಂತೆ ಅನ್ನಬೇಕಾ..ಕೊಡ್ತೀನಿ ಕೊಡ್ತೀನಿ ಅಂತ ಹೇಳಿ ಅದು ಇದು ಮಾತಾಡಿ ತಪ್ಪಿಸಿಕೊಂಡಿದ್ದಾಯಿತು...
-------------------------------------
ಇನ್ನೊಬ್ಬ ಸ್ನೇಹಿತ ನನ್ನ ಸ್ಕೂಲ್ ಮೇಟ್, ಪಿಯುಸಿಗೆ ರಾಷ್ಟ್ರ ಗೀತೆ ಹಾಡಿ "ಇಲ್ಲಿ ಸಲ್ಲದವನು ಅಲ್ಲಿಯೂ ಸಲ್ಲನಯ್ಯ" ಅನ್ನೋ ಹಾಗೆ ೩ -೪ ಬಿಸಿನೆಸ್ ಮಾಡಿ ಕೈ ಸುಟ್ಟುಕೊಂಡು ಕೊನೆಗೆ ಎಲೈಸಿ ಏಜೆಂಟ್ ಆಗಿದ್ದಾನೆ ...ಸೈಡ್ ಬಿಸಿನೆಸ್ಸ್ ಅಷ್ಟೇ... ...  ...
ಅದಿನ್ನು ನಾನು ಕಾಲೇಜಿನಲ್ಲೇ ಇದ್ದೆ,ಹೀಗೆ ಊರಿಗೆ ಹೋದಾಗ ಇಬ್ಬರು ಭೇಟಿ ಮಾಡಿ ತೋಟ ಗದ್ದೆ ಎಲ್ಲ ಸುತ್ತಾಡೋ ಪರಿ ಪಾಠ,ಪ್ರತಿ ಸಾರಿ ಅಂತೆ ಅವನಿಗೆ ಫೋನ್ ಮಾಡಿ ಮನೆಗೆ ಬರ್ತಿದ್ದೀನಿ ಅಂದ್ರೆ  "ಏ ಇಲ್ಲ,ನನಗೆ exam ಇದೆ" ಅಂದ...,ಒಹ್ ಪಿಯುಸಿ ಕಟ್ಟಿದ್ದಾನೆ ಅನ್ಕೊಂಡು ಇರ್ಲಿ ಅವನ ಅಪ್ಪ ಅಮ್ಮನ್ನಾದ್ರು ಮಾತಾಡಿಸಿಕೊಂಡು ಬರಣ ಅಂತ  ಅವನ ಮನೆಗೆ ಹೋದ್ರೆ ದಪ್ಪದೊಂದು ಬುಕ್ ಇಟ್ಕೊಂಡು ಓದ್ತಿದ್ದ...ನಂಗೆ ನಾಳಿದ್ದು exam ಇದೆ... ಅದಾದ್  ಮೇಲೆ ಎಲ್ಲಾದರು ಹೋಗಣ..ಇವತ್ತು ಬೇಡ ಅಂದ...ಸರಿ ಏನ್ exam ಅಂತ ಕೇಳಿದ್ರೆ LIC ಏಜನ್ಸಿ ತಗಳಕ್ಕೆ ಬರಿತ್ತಿದ್ದಿನಿ... ಮೈಸೂರಿನಲ್ಲಿ ಇದೆ ಅಂದ.. ಸರಿ ದೇವ್ರು ಒಳ್ಳೇದ್ ಮಾಡ್ಲಿ..ಇದನ್ನಾದ್ರು ಪಾಸ್ ಆಗು ಅಂತ ಹೇಳಿ ಅವನ ಮನೇಲಿ ಮಜ್ಜಿಗೆ ಕುಡಿದ ಹೊರಟೆ... ಹಿಂದೆ ಇಂದ ಲೇ ಮಗನೆ ಕೆಲಸ ಸಿಕ್ಕಿದ ಮೇಲೆ ನನಗೆ ಒಂದು ಪಾಲಿಸಿ ಕೊಡದೆ ಹೋಗು,ಕತ್ತ್ ಹಿಚಿಕಿ ಸಾಯಿಸ್ತಿನಿ ನಿನ್ನ ಅಂದ... ೩ ಮೆಣಸಿನ ಕಾಯಿ ಉದ್ದ ಇಲ್ಲ.. ನನ್ನ ಪಕ್ಕ ನಿಂತರೆ ನನ್ನ ಎದೆ ಮಟ್ಟಕ್ಕೆ ಬರಲ್ಲ, ಹಿಂಗೆ ಅವಾಜ್ ಹಾಕ್ತಿಯ ಅಂತ ಅನ್ಕೊಂಡು ಹೋಗ್ಲ ಲೋ...ನೀನ್ ಪಾಸ್ ಆಗಲ್ಲ ಅಂದು ಮನೆಗೆ ಹೊರಟೆ... ಕೊನೆಗೆ ಅದೇಗೆ ಪಾಸ್ ಆದ್ನೋ ಅವನ ಮಂದೆವರು ಮಲ್ಲಪ್ಪಂಗೆ ಗೊತ್ತು...ನನಗೆ ಕೆಲ್ಸನು ಸಿಕ್ಕಿಲ್ಲ.ಇನ್ನು ಓದ್ತಾ ಇದ್ದೆ,,ಅವನಿಗೆ ಇನ್ನು  ಏಜೆನ್ಸಿ ಸಿಕ್ಕಿಲ್ಲ..ಆಗ್ಲೇ ನನ್ನಿಂದೆ ಬಿದ್ದಿದ್ದ.... ಈಗಲೂ ಊರಿಗೆ ಹೋದ್ರೆ ಭೇಟಿ ಮಾಡೇ ಮಾಡ್ತೀನಿ...ಅವನು ಮತ್ತೆ ಪೀಡ್ಸೆ ಪೀಡಿಸ್ತಾನೆ.. ಭೇಟಿ ಮಾಡದೆ ವಿಧಿ ಇಲ್ಲ... ಜಿಗರಿ ದೋಸ್ತ್ ಬೇರೆ...ನನ್ನ ಕಷ್ಟ ನೋಡಿ ಅವನೇ ಸುಮ್ಮನಾಗಿದ್ದಾನೆ ಇವಾಗ ...
---------------------------------
ಹಿಂಗೆ ಒಂದ್ಸಲಿ ತಿಪಟೂರ್  ಹತ್ತಿರ ನನ್ನ ನೆಂಟರ ಮನೆಗೆ ಹೋಗಿದ್ದೆ...ವಾಪಸ್ ಬರಬೇಕಾದರೆ ಎಷ್ಟೋ ಹೊತ್ತು ಕಾದರು ಬಸ್ ಆಗ್ಲಿ  ಆಟೋ ಆಗ್ಲಿ  ಬರಲಿಲ್ಲ...ಆಗ್ಲೇ ನನ್ನ ಟ್ರೈನ್ ಗೆ ಲೇಟ್ ಆಗ್ತಿತ್ತು..ನನ್ನನ ಬಿಡಕ್ಕೆ ಬಂದಿದ್ದ ನನ್ನ ಕಸಿನ್ ,ಬೈಕ್ನಲ್ಲಿ ಬರುತ್ತಿದ್ದ ಅದೇ ಊರಿನ ಒಬ್ಬರನ್ನು ನಿಲ್ಲಿಸಿ ನಮ್ಮ ಅಣ್ಣನ್ನ ತಿಪಟೂರಿಗೆ ಬಿಡಿ ಅಂಕಲ್ ಅಂದ್ಲು..ಸರಿ ಅವರು ಕೂಡ ಅಲ್ಲಿಗೆ ಹೋಗ್ತಿದ್ರು,ನಮ್ಮ ಮನೆಗೆ ಹೋಗಿ ಒಂದು ಪತ್ರ ಇದೆ ಅದನ್ನ ತಗೊಂಡು ಹೋಗಬೇಕು ಅಂದ್ರು..ನಾನು ಸಮ್ಮತಿಸಿದೆ...ಅವರ ತೋಟದ ಮನೆಗೆ ಹೋಗಿ ಹೊರಟೆವು,ಸುತ್ತ ತಂತಿ ಭೇಲಿ ತೋರಿಸಿ ಇದಷ್ಟು ನಮ್ಮದೇ ತೋಟ ಅಂದ್ರು ...ಏನಿಲ್ಲ ಅಂದ್ರು ಹತ್ತು ಏಕರಿಗಿಂತ ಜಾಸ್ತಿ ಇತ್ತು..ಮನೆ ಪಕ್ಕ ಬೇರೆ ಅಡಕೆ ಮರದ ತುಂಡುಗಳನ್ನು ಸುತ್ತ ಕಟ್ಟಿ  ಕಾಯಿಗಳನ್ನು ಕೊಬ್ಬರಿಗೆ ಹಾಕಿದ್ದರು ...ಒಳ್ಳೆ ಕುಳ ಅಂತ ಅನ್ನಿಸ್ತು... ಅಷ್ಟೊತ್ತಿಗಾಗಲೇ ನನ್ನ ಉರು,qualificaton ,ಕೆಲಸ ಎಲ್ಲಾದರ ಬಗ್ಗೆ ಕೇಳಿದ್ರು..ನನ್ನ ಮಗನು MBA ಮಾಡಿದ್ದಾನೆ... ಅಲ್ಲೇ ಬೆಂಗಳೂರಿನಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ...ಆಮೇಲೆ ಯಾಕೋ ಭೆಜಾರ್ ಆಗಿ ಇಲ್ಲೇ lecture ಆಗಿದ್ದಾನೆ...ಹೌದಾ ಅಂದೇ.. ದೊಡ್ಡ ಮಗಳು ಎಂ.ಫಿಲ್ ಆಗಿ,ಅವಳು ಕೆಲಸ ಮಾಡ್ತಿದ್ಲು,ಮದ್ವೆ ಮಾಡಿದ್ವಿ... ಇಬ್ಬರೇ ಮಕ್ಕಳ ಅಂದೇ...ಇನ್ನೊಬ್ಳು ಇದ್ದಾಳೆ...ಅವಳು ಈ ವರ್ಷ ಎಂ.ಎಸ್ಸಿ ಸೇರಿದಳು,ಬೆಂಗಳೂರ್ ಯುನಿವರ್ಸಿಟಿನಲ್ಲಿ....ಫ್ಯಾಮಿಲಿ ವಿಷ್ಯ ಎಲ್ಲ ಹೇಳ್ತಾವ್ರೆ ಏನಪ್ಪಾ ಇದು ಮಗಳನ್ನು ಏನಾದ್ರೂ ಕೊಟ್ಟು ಸಂಭಂದ ಗಿಮ್ಬಂದ ಕುದ್ರಿಸಿ ಕೊಳ್ಳಕ್ಕೆ ನೋಡ್ತಿದ್ದಾರ ಅಂತ ಮನಸಲ್ಲೇ ಅನ್ನಿಸ್ತು.. ಇರ್ಲಿ ಅನ್ಕೊಂಡು ಎಂ.ಎಸ್ಸಿ ನಲ್ಲಿ ಯಾವ ಡಿಪಾರ್ಟಮೆಂಟ್ ಅಂದೇ... ಮ್ಯಾಥ್ಸ್ ಅಂದ್ರು.. ಸರಿ..ಸ್ವಲ್ಪ ದೂರ ಬಂದ ಮೇಲೆ,ನೀವು lic  ಪಾಲಿಸಿ ಮಾಡ್ಸಿದ್ದಿರಾ ಅಂದ್ರು.. ಅಲೆಲೆಲೆಲೇ ಇದಾ ವಿಷ್ಯಾ...ಇವಾಗ ಬಂದ್ರು ನೋಡಿ ಟ್ರಾಕ್ ಗೆ ಅನ್ಕೊಂಡು..ಆಫಿಸಿನಲ್ಲೇ ಇದೆ ಅಂದೇ..ಅಯ್ಯೋ ಅದು ಬಿಡಿ,ನೀವು ಪದೇ ಪದೆ ಕಂಪನಿ ಚೇಂಜ್ ಮಾಡ್ತಿರ್ತಿರಾ,ಅದೆಲ್ಲ ಪ್ರಾಬ್ಲಂ,ಒಂದು LIC ಪಾಲಿಸಿ ಮಾಡಿಸ್ಬಿಡಿ... ಸುಮ್ನೆ ಟ್ಯಾಕ್ಸ್ ಎಲ್ಲ ಜಾಸ್ತಿ ಯಾಕ್ ಕಟ್ಟುತ್ತಿರಾ... ನಿಮಗೆ ಇದಿದ್ರೆ ಟ್ಯಾಕ್ಸ್ excemption ಆಗುತ್ತೆ...ಇದನ್ನೆಲ್ಲಾ ನಿಮಗೆ ಹೇಳಿ ಕೊಡಬೇಕಾಗಿಲ್ಲ ಅಲ್ವ? ಅಂದ್ರು.. ಅದು ಹೌದು ಇವಾಗ ಸ್ವಲ್ಪ ಟೈಟ್ ಇದೆ ದುಡ್ಡು ಆಗಾಗಿ,ಇಲ್ಲಿಗೆನ್ ಅವಾಗಾವಾಗ ಬರ್ತಿರ್ತೀನಿ ಮಾಡಿಸ್ತೀನಿ ಬಿಡಿ...ಸರಿ ಏನಿಲ್ಲ ನೀವು ನಿಮ್ಮ ಮಾರ್ಕ್ಸ್ ಕಾರ್ಡ್,ವೋಟರ್ ಐಡಿ ಕೊಟ್ಟರೆ ಸಾಕು ಅದರ ಜೊತೆಗೆ ಫೋಟೋ  ಅಂದ್ರು..ಸರಿ ಬಿಡಿ ಮುಂದಿನ ಸಾಲಿ ಬಂದಾಗ ನಿಮ್ಮನ್ನ ಭೇಟಿ ಮಾಡ್ತೀನಿ ಅನ್ನುವಷ್ಟೊತ್ತಿಗೆ ತಿಪಟೂರಿಗೆ ಬಂದಾಗಿತ್ತು..ನನ್ನ ಮೊಬೈಲ ನಂಬರ ತಗೊಂಡು ಅವರ ವಿಸಿಟಿಂಗ್ ಕಾರ್ಡ್ ಕೊಟ್ಟು ಹೊರಟರು.. ಅಬ್ಬ ಬಿಸೋ ದೊಣ್ಣೆ ಹೇಗೋ ತಪ್ಪಿಸಿ ಕೊಂಡಿದ್ದಾಯಿತು ಅಂತ ನಿಟ್ಟುಸಿರು  ಬಿಟ್ಟೆ....
----------------------------

ಹೀಗೆ ನಮ್ಮ ಆಂಟಿ ಒಬ್ಬರ ಮನೆಗೆ ಹೋದಾಗ ಒಂದು ಬುಕ್ ತಗಂಡು ನನ್ನ ಎಲ್ಲ ಮಾಹಿತಿ ಕೇಳಿದ್ರು,ಹುಟ್ಟಿದ ದಿನ,ಕಂಪನಿ ಹೆಸರು ಎಲ್ಲ... ಆಮೇಲೆ ಇನ್ನೊಂದ್ ಬುಕ್ ತಗಂಡು ಬಂದು ಕೂತು ಎಲ್ಲ ಪಾಲಿಸಿಗಳ ಬಗ್ಗೆ ಹೇಳಕ್ಕೆ ಶುರು ಮಾಡಿದ್ರು...ನನಗೆ ಯಾಕೆ ಹೇಳ್ತಿದ್ದಾರೆ ಅಂತ ಯೋಚನೆ ಮಾಡ್ತಿದ್ರೆ,ನೀನು ಇದು ಕಟ್ಟು..ಇಷ್ಟಿಷ್ಟು ಕಂತು,ಇಷ್ಟಿಷ್ಟು ವರ್ಷ ಅಂತ ಅವರೇ ಡಿಸೈಡ್ ಮಾಡ್ಬಿಟ್ರು... ಹೀಗ್ ಬೇಡ ಸುಮ್ನಿರ್ರಿ ನನ್ನ ಎಲ್ಲ ತಾಪತ್ರೆಗಳನ್ನು ಮುಗಿಸ್ಕೊತಿನಿ ಮೊದಲು ಅಂದ್ರು ಕೇಳಂಗಿಲ್ಲ,ಇನ್ನೆರಡು ತಿಂಗಳಲ್ಲಿ ನಿನ್ನ ಹುಟ್ಟಿದ ದಿನ ಇದೆ,ಅದಾದಮೇಲೆ ನೀನು ಪಾಲಿಸಿ ಮಾಡ್ಸಿದ್ರೆ ಕಂತು ಜಾಸ್ತಿ ಕಟ್ಟಬೇಕಾಗುತ್ತೆ ಅಂತೆಲ್ಲ ಹೇಳಿ ಅವರ ಸೀನಿಯರ್ ಯಾರೋ ಒಬ್ಬರಿಗೆ ಫೋನ್ ಬೇರೆ ಮಾಡಿ ಕೊಟ್ರು...ಅವರು ಕೂಡ ಈ ಪಾಲಿಸಿ ಚೆನ್ನಾಗಿದೆ ಅಂತ ಯಾವೊದೋ ಹೇಳಿದ್ರು,ಇದರಲ್ಲಿ ಲೈಫ್ ರಿಸ್ಕ್ ಕೂಡ ಇದೆ,ಜೊತೆಗೆ ಇದು ದುಡ್ಡು ಮೆಚುರ್  ಆದ ಮೇಲೆ  ಲೈಫ್ ಟರ್ಮ್ ಇರತ್ತೆ ಅಂತ... ಲೈಫ್ ರಿಸ್ಕ್ ಅಂದ್ರೆ ನಾವು ಸತ್ತರೆ ನಮ್ಮ ನಾಮಿನಿಗೆ ದುಡ್ಡು ಹೋಗುತ್ತಂತೆ...ಬೇರೆ ಎಲ್ಲ ಪಾಲಿಸಿಗಳು ಅದರ term ಮುಗಿದ ಮೇಲೆ ಮುಗಿದ ಹಾಗೆ,,ಆದರೆ ಇದು ಟರ್ಮ್ ಮುಗಿದು ನಾವು ಸಾಯೋವರ್ಗೂ ಇರುತ್ತೆ...ಒಂದು ಫಾರಂ ತಗಂಡು ಅದಕ್ಕೆ ನನ್ನ ಸೈನ್ ಹಾಕಿಸ್ಕೊಂದ್ರು,ಹೇಗಾದ್ರು ಮಾಡಿ ತಪ್ಪಿಸ್ಕೋ ಬೇಕು ಅಂತ,ಥೋ ಇವಾಗ ದುಡ್ಡಿಲ್ಲ,ಇನ್ನೊಂದ್ ಸ್ವಲ್ಪ ದಿನ ಬಿಟ್ಟು ಮಾಡಿಸ್ತೀನಿ ಬಿಡ್ರಿ ಅಂದ್ರೆ,ಈ ನಾನು ಈ ಕಂತು ಕಟ್ಟಿರ್ತೀನಿ,ನೀನು ನಿಧಾನಕ್ಕೆ ಕೊಡು ಅಂದ್ಬಿಟ್ಟು,ಸ್ವಲ್ಪ ದಿನ ಆದ ಕೂಡಲೇ ದುಡ್ಡು ಬೇಕಿತ್ತು, ಈ ತಿಂಗಳು ಕೊಡು ಅಂತ ಕೇಳ್ಬೇಕಾ ?ಬೇಡ ಬೇಡ ಅಂದ್ರು ದುಡ್ಡು ಕಟ್ಟಿ ಇವಾಗ ನನ್ನ ಬುಡಕ್ಕೆ ಕೊಡಲಿ ಪೆಟ್ಟು...
---------------------------------------------
ಇನ್ ಕೆಲವರು ಇದ್ದಾರೆ ಅವರು ಹೇಗೆ ಅಂದ್ರೆ ಸಮಯ ಸಾಧಕರು... ಹೆಗೇಗ್ ಟೈಮ್ ಟು ಟೈಮ್ ಆಟ ಆಡ್ತಾರೆ ಅಂದ್ರೆ ಹೇಳಕ್ಕೆ ತೀರದು..ಹೊಸ ವರ್ಷ ಹತ್ತಿರ ಬಂತು ಅಂದ್ರೆ ಸಾಕು ಜೊತೇಲಿ ಒಂದಿಷ್ಟು ಡೈರಿ ಗಳು ಮತ್ತೆ ಕ್ಯಾಲೆಂಡರ್ ಗಳನ್ನ ಇಟ್ಕೊಂಡಿರ್ತಾರೆ.... ಅಪರೂಪಕ್ಕೆ ಸಿಕ್ಕಿದ್ರೆ ಸಾಕು ಅವರಿಗೆ ಒಂದು ಡೈರಿ ಕೊಟ್ಟು "ಎಷ್ಟ್ ದಿನದಿಂದ ಹುಡುಕಿದೆ ನಿಮ್ಮನ್ನ,ಅವತ್ತು ಸಂತೆಲೂ  ಸಿಗಲಿಲ್ಲ'ಹೀಗೆ ಒಂದಿಷ್ಟು ಬುರುಡೆ ಕಚ್ಚಿ ಹೋಗುತ್ತಾರೆ...ಮತ್ತೆ ಇನ್ ಕೆಲವರು ಹೇಗೆ ಅಂದ್ರೆ ಸುತ್ತ ಮುತ್ತ ಊರುಗಳಲ್ಲಿ ಯಾರದಾದರು  ಮದ್ವೆ ಆಗ್ತಿದೆ ಅಂದ್ರೆ ಮೊದಲೇ ಬುಕ್ ಮಾಡ್ಕೋ ಬಿಡ್ತಾರೆ,ಅವರ ಹೆಂಡತಿಯ ಹೆಸರಲ್ಲಿ ಒಂದು ಪಾಲಿಸಿ ತಗಳಕ್ಕೆ..ಆಮೇಲೆ ಸುತ್ತ ಮುತ್ತ ಊರಲ್ಲಿ ಯಾರಿಗಾದರು ಕೆಲಸ ಸಿಗ್ತು ಅಂದ್ರೆ ಅವರ ಹಿಂದೆ ದೊಂಬಾಲು ಬೀಳುತ್ತಾರೆ... ಈ ಅನುಭವ ನಂಗೆ ಮಾತ್ರ ಅನ್ಕೊಂಡಿದ್ದೆ,ಆಮೇಲೆ ಗೊತ್ತಾಯ್ತು ನನ್ನ ಸ್ನೇಹಿತರು  ಎಷ್ಟೋ ಜನಕ್ಕೆ ಇದೆ ತರಹ ಕಾಟ ಇದೆ ಅಂತ...ಅಲ್ಲದೆ ಇವರ ಮೇಲ್ ಟಾರ್ಗೆಟ್ ಮೇಷ್ಟ್ರು  ಮೇಡಂಗಳು...ಯಾಕೆ ಅಂತ ಗೊತ್ತಿಲ್ಲ... ಅಲ್ಲದೆ ಎಲ್ಲಾದರು ಮಕ್ಕಳು ಹುಟ್ಟಿದೆ ಅಂತ ಗೊತ್ತಾದ್ರೆ ಸಾಕು, ಆ ಮಗುವಿನ ಅಪ್ಪ  ಅಮ್ಮಂಗೆ ತಲೆ ತಿಂದು ೧೮ ವರ್ಷ,೨೫ ವರ್ಷಕೀ ದುಡ್ಡು ಬರುತ್ತೆ...ಅದು ಇದು ಎಲ್ಲಾ ತಲೆಗೆ ತುಂಬಿ ಆ ಮಕ್ಕಳ ಹೆಸರಲ್ಲಿ ಒಂದು ಪಾಲಿಸಿ ಮಾಡಿಸ್ಬಿಡ್ತಾರೆ...
-------------------------------------
ಇದೆ ತರಹ ನಾನು ಈ ಜಗತ್ತಿಗೆ ಕಾಲಿಡುತ್ತಿದ್ದ ಹಾಗೆ ನನ್ನ ಹೆಸರಿಗೆ ಒಂದು ಪಾಲಿಸಿ ಮಾಡಿಸಿದರು ಒಬ್ಬ ಮಹಾಶಯರು... ಫ್ಯಾಮಿಲ ಡಾಕ್ಟರ್,ಫ್ಯಾಮಿಲಿ ಲಾಯರ್ ಇದ್ದ ಹಾಗೆ ಇವರು ಒಂದು ತರಹ ಫ್ಯಾಮಿಲಿ ಇನ್ಸುರೆನ್ಸ್ ಏಜೆಂಟ್ ಇದ್ದ ಹಾಗೆ...... ನಾನು ಹುಟ್ಟಿದ ಕೂಡಲೇ ಹೆಂಗೆ ಪಾಲಿಸಿ ಮಾಡಿಸ್ಕೊಂಡ್ರೋ ಹಾಗೆ ನನಗೂ ಮದ್ವೆ ಗಿದ್ವೆ ಆಗಿ ಮಕ್ಕಳಾದರೆ ಅದಕ್ಕೂ ಒಂದು ಪಾಲಿಸಿ ಮಾಡಿಸದೆ ಬಿಡೋ ಅಸ್ಸಾಮಿ ಅಲ್ಲ ಇವರು...ಹಿಂಗೆ ಊರಿಗೆ ಹೋದಾಗ ನಮ್ಮೂರ ಹತ್ತಿರ ಒಂದು ದೇವಸ್ಥಾನದಲ್ಲಿ ನಮ್ಮ ಬಳಗ ದಿಂದ ಒಂದು ಕಾರ್ಯಕ್ರಮ ಆಯೋಜಿಸುವ ಸಲುವಾಗಿ ನಡೆಯುತ್ತಿದ್ದ  ಮೀಟಿಂಗ್ ನಲ್ಲಿದ್ದೆ.... ಎಷ್ಟೋ ದಿನದಿಂದ ತಪ್ಪಿಸಿಕೊಂಡು ಇದ್ದೆ..ಅವತ್ತು ಅದೇಗೆ ನಾನು ಊರಿಗೆ ಬಂದಿರೋ ವಿಷಯ ಗೊತ್ತಾಯ್ತೋ  ಗೊತ್ತಿಲ್ಲ,ಮನಗೆ ಹುಡುಕಿಕೊಂಡು ಬಂದಿದ್ರು,ನಾನ್ ಮೀಟಿಂಗ್ ನಲ್ಲಿದ್ದೀನಿ ಅಂತ ನಮ್ಮ ಅಪ್ಪ ಹೇಳಿದ್ದೆ ತಡ ಅಲ್ಲಿಗೆ ಬಂದ್ರು... ಯಾರ್ ಹತ್ತಿರನೋ ಹೇಳಿ ಕಳಿಸಿ ಹೊರಗೆ ಕರಿಸ್ಕೊಂದು ಸೈನ್ ಮಾಡಿಸ್ಕೊಂಡೆ ಬಿಟ್ರು ಆ ಫಾರ್ಮ್ ಗೆ.... ಇನ್ನು ಸ್ವಲ್ಪ ದಿನ ಬಿಟ್ಟು ಮಾಡಿಸ್ತೀನಿ ಅಂದ್ರೆ ಈ ನಿಮ್ಮ ಅಪ್ಪ ಕತ್ತುತ್ತಾರಂತ ಬಿಡು ಅಂದ್ರು... ಅದೆಲ್ಲ ಆಗದ ಮಾತು ಅನ್ಕೊಂಡು  ಸಂಜೆ ಸಿಗ್ತೀನಿ ಮೀಟಿಂಗ್ ಮುಗಿದ ಮೇಲೆ ಅಂದ್ರು ಕೇಳಲಿಲ್ಲ,ಡಾಕ್ಯುಮೆಂಟ್ ಎಲ್ಲಾ ನಿಧಾನಕ್ಕೆ ಕೋಡು,ಇಲ್ಲ ಕೊರಿಯರ್ ಮಾಡು ಅಂತ ಹೇಳಿ ಹೋದರು...ನಾನು ಮೀಟಿಂಗ್ ಗೆ ಹೋಗೋ ಗಡಿಬಿಡಿ ಯಲ್ಲಿದ್ದೆ,ಆಗಾಗಿ ಅವರು ಹೇಳಿದ್ದ ಕಡೆ ಎಲ್ಲಾ ಸೈನ್ ಮಾಡಿ ಹೇಗೂ ಡಾಕ್ಯುಮೆಂಟ್ ಕೊಡಬೇಕು ಅಲ್ವ,ಅದು ಇಲ್ದೆ ಏನು ಮಾಡಕ್ಕಾಗಲ್ಲ ಅಂತ... ಕೊನೆಗೆ ಎಷ್ಟೋ  ದಿನದ ತನಕ ಕಾಯ್ಸಿ ಕೊಟ್ಟಿದ್ದ್ ಆಯಿತು... ಕೊಡದೆ ಇದ್ದರೆ ಬಿಡಬೇಕಲ್ಲ ಅವರು .

ಹಿಂದಿನ ತಿಂಗಳ ಸಂಬಳ ಎಲ್ಲಾ ಖಾಲಿ ಆಗಿ ಮುಂದಿನ ತಿಂಗಳ ಸಂಬಳ ಎಲ್ಲೆಲ್ಲಿ ಎಷ್ಟು ಕಟ್ಟಬೇಕು,ನನಗೆ ಎಷ್ಟು ಉಳಿಯುತ್ತೆ ಅಂತೆಲ್ಲ ಪೂರ್ತಿ ಪ್ಲಾನ್ ಮಾಡಿ ಕೊಂಡಿರುತ್ತೀವಿ ,ಆಗ ಮನೆಯಿಂದ ಅಮ್ಮನ ಫೋನ್ "ಪಾಪ,ಪ್ರೀಮಿಯಂ ಕಟ್ಟು ,ಬಿಲ್ ಬಂದಿದೆ" ಅಂತ... ಥೋ ತ್ತರಿಕೆ ,ನಮ್ಮ ಪ್ಲಾನ್ ಎಲ್ಲ  ಆಳಾಗಿ ಹೋಯಿತಲ್ಲ ಅಂತ ತಲೆ ಚಚ್ಚಿ ಕೊಳ್ಳಬೇಕು...ಇಂಥ ಟೈಮ್ ನಲ್ಲಿ ಇವರೆಲ್ಲ ನೆನಪಾಗ್ತಾರೆ...ಇನ್ ಸ್ವಲ್ಪ ದಿನ ಬಿಟ್ಟು ಅಪ್ಪ ಫೋನ್ ಮಾಡಿ"ಮರಿ,ಇನ್ಸುರೆನ್ಸ್ ಕಟ್ಟಿದ್ಯ,ಲಾಸ್ಟ್ ಡೇಟ್ ಆಗೋದರೊಳಗೆ ಕಟ್ಟು"...ನೀವೊಬ್ರು ಕಮ್ಮಿ ಆಗಿದ್ರಿ ಅನ್ಕೊಂಡು ಸುಮ್ನಿರ ಬೇಕು ಅಷ್ಟೇ...
ಬಹುಶ ಇಂಥ ಅನುಭವಗಳು ತುಂಬ ಜನಕ್ಕೆ ಆಗಿರುತ್ತೆ...

  

Sunday, October 30, 2011

ಮತಾಂತರ !!!

ಎಂದೂ ತಪ್ಪದ ದೇವಸ್ಥಾನದ ಪೂಜೆ,ಸ್ವಾಮಿಗಳಿಗೆ ನಿಷ್ಟರಾಗಿದ್ದ ಜನ ,ಎಲ್ಲರೂ ಒಂದೊಂದು ಕೆಲಸಗಳಲ್ಲಿ ತೊಡಗಿಕೊಂಡಿದ್ದ ಜನ ಇದ್ದಂತಹ ಊರಲ್ಲಿ ಒಂದು ಹಲಗೇರಿ ಇತ್ತು..ಊರು ಇದ್ದ ಕಡೆ ಹೊಲಗೇರಿ ಎಂಬಂತೆ.ಯಾವ ಕುಲಕ್ಕೂ ಸೀಮಿತವಾಗದ ದೇವಸ್ಥಾನದಲ್ಲಿ ಮೇಲ್ಜಾತಿಯವರೇ ಪೂಜೆ ಮಾಡುತ್ತಿದ್ದರೂ,ಊರಿನ ಕುಲದಿನೆಂಟು ಜಾತಿಯವರೂ,ಹಕ್ಕಿ ಶಿಕಾರ್ರು,ಕುಕ್ಕೆ ಕೊರಮರು ಹೀಗೆ ನಾನಾ ಪಂಗಡಗಳಿಗೆ ಸೇರಿದ ಜನರು  ಅಲ್ಲಿಗೆ ಬರುತ್ತಿದ್ದರು,ಕೆಲವೊಮ್ಮೆ ಭಜನೆಗೂ ಎಲ್ಲಾ ಜನರು ಬರುತ್ತಿದ್ದರು.

ಇಂಥ ಊರಲ್ಲಿ ಇದಕಿದ್ದ ಹಾಗೆ ಹೊಲಗೇರಿಯ ಕೆಲವು ದಲಿತರ ಮನೆಗಳ ಮೇಲೆ ಶಿಲುಬೆ ಏರತೊಡಗಿತು,ಕಾರ್ತಿಕ ಮಾಸ ಮುಗಿದ ಕೂಡಲೇ ಮನೆ ಮುಂದೆ ಕ್ರಿಸ್ಮಸ್ ನಕ್ಷತ್ರಗಳು  ಮೀನುಗ  ತೊಡಗಿತು.ಆ ಕಾಲೋನಿಯ ಎಷ್ಟೋ ಜನರು ದೇವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದರು.ಶಿವ,ರಾಮ,ಹರಿಯ ಭಜನೆ ಮಾಡುತ್ತಿದ್ದವರು ಏಸು ಪ್ರಭು ಎಂದು ಗುನುಗುನಿಸಲು ಶುರು ಮಾಡಿದರು.ಇದೆಲ್ಲರ ಹಿಂದಿನ ರೂವಾರಿ,ದಲಿತರ ಕಾಲೋನಿಯ ಏಕೈಕ ಡಿಗ್ರಿ ಪಧವಿದರ ಸುರೇಶ ಮತ್ತು ಗ್ರಾಮ ಪಂಚಯ್ತೀ ಸದಸ್ಯೆಯೂ ಆದ,ತನ್ನ ತಾಯಿ ವಿಧವೆ ನೀಲಮ್ಮ.

ಕೆಲವು ಪಂಗಡಗಳ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರು,ಅದನ್ನೂ ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಜೊತೆ ಕೆಲಸಕ್ಕೆ ಹಾಕಿಕೊಳ್ಳುತ್ತಿದ್ದರು.ಆದರೆ ಕೆಲವು ಮೇಲ್ಜಾತಿ ವರ್ಗದವರು ಮಾತ್ರ ಹೆಚ್ಹಾಗಿ ಓದಿಕೊಂಡಿದ್ದರು.ಇಂಥ ಸನ್ನಿವೇಶದಲ್ಲಿ ತಂದೆ ಕಳೆದುಕೊಂಡ ಸುರೇಶ ಮಾತ್ರ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳದೆ ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತಾನೆ.

ಒಂದು ಕ್ರೈಸ್ತ ಮಿಷನರಿ ನಡೆಸುತ್ತಿದ್ದ ಉಚಿತ ಹಾಸ್ಟೆಲ್ಲಿನಲ್ಲಿ ಸೇರುತ್ತಾನೆ,ಬೇರೆ ಕಡೆ ದುಡ್ಡು ಕಟ್ಟುವ ಶಕ್ತಿ ಇಲ್ಲದ ಕಾರಣ..ಹೀಗೆ ಅವನ ಓದು ಸಾಗುತ್ತಿದ್ದಾಗ,ಅವನ ಕಾಲೇಜಿನಲ್ಲೇ ಓದುತ್ತಿದ್ದ ಹಾಸ್ಟೆಲ್ಲಿನ ಪಕ್ಕದಲ್ಲೇ ಇದ್ದ ಚರ್ಚಿಗೆ ಪ್ರತಿ ಭಾನುವಾರ ಬರುತ್ತಿದ್ದ ಹುಡುಗಿಯ ಪರಿಚಯವಾಯಿತು.ಮೊದಮೊದಲು ನೆಪವೊಡ್ಡಿ ಚರ್ಚಿಗೆ ತಪ್ಪಿಸಿಕೊಳ್ಳುತ್ತಿದ್ದ ,ಬೈಬಲ್ ಓದಲು ಇಷ್ಟ ಪಡದ  ಸುರೇಶ ಅವಳ ಜೊತೆ ಚರ್ಚಿಗೆ ಹೋಗಲು ಮೊದಲು ಮಾಡಿದ.

ಬಿರುಗಾಳಿಯನ್ನು ತಡೆಯಲು ಹೇಗೆ ಸಾಧ್ಯ?ಸಮುದ್ರದ ಭೀಕರ ತೊರೆಯನ್ನು ನಿಲ್ಲಿಸಲು ಹೇಗೆ ಸಾಧ್ಯ ? ಅದೇಗೆ ಏಸು ಇದ್ದ ಒಂದು ರೊಟ್ಟಿಯನ್ನು ಅಷ್ಟೊಂದು ರೊಟ್ಟಿ ಮಾಡಿ ಸಾವಿರಾರು ಜನರಿಗೆ ನೀಡಿದ? ಇದೆಲ್ಲ ನಿಮ್ಮ ಮೂಡ ನಂಬಿಕೆ ಏನು ಬೈಬಲ್ಲಿನ ಸನ್ನಿವೇಶಗಳನ್ನು ಸುಳ್ಳು ಎಂದು ವಾದ ಮಾಡುತ್ತಿದ್ದ...ಕಾಲ ಜರುಗಿದಂತೆ ಫ್ಲೇವಿಯ ಎಂಬ ಹುಡುಗಿಯ ಪ್ರೀತಿಯ ಹಂಬಲದಲ್ಲಿ ಬಿದ್ದು,ಅವಳು ಮಡಿದ ಬೈಬಲ್ ಪಟನೆಗೆ ತಲೆದೂಗತೊಡಗಿದ.ಊರಿನ ತನ್ನ ಮನೆಯಲ್ಲಿದ್ದ  ಭಜನೆ ಪುಸ್ತಕಗಳು,ಶಾಲೆಯಲ್ಲಿ ಕೊಟ್ಟಿದ್ದ ಭಗವದ್ಗೀತೆ ಎಲ್ಲಾ ಓಲೆ ಸೇರಿದವು,ತಾನು ಕೂಡ ಬೈಬಲ್ ಓದಲು ಶುರು ಮಾಡಿದ..

ತಮ್ಮಿಬ್ಬರ ಮದುವೆ ಆಗಬೇಕೆಂದರೆ ಸುರೇಶ ತಮ್ಮ ಧರ್ಮಕ್ಕೆ ಬರಬೇಕು,ಅವನು ಇದನ್ನೇ ಪಾಲಿಸಬೇಕು ಎಂದು ಅರಿತಿದ್ದ ಫ್ಲೇವಿಯ ಅವನ ತಾಯಿಯನ್ನು ಹೇಗಾದರೂ ಒಪ್ಪಿಸಬೇಕು ಎಂದು ಪಣ ತೊಟ್ಟು,ಆಗಾಗ ಅವನ ಜೊತೆ ಇವನ ಹಳ್ಳಿಗೆ ಬರಲು ಶುರು ಮಾಡಿದಳು.ಪ್ರತಿ ಬಾರಿ ಬಂದಾಗಲು,ಸುರೇಶನ ತಾಯಿಗೆ ಏನೇನೋ ತುಂಬಲು ಶುರು ಮಾಡಿದಳು.ಮೇಲ್ಜಾತಿಯವರು ನಿಮ್ಮ ಓಣಿಗೆ ಬರಲ್ಲ,ನಿಮ್ಮ ಕೈಲಿ ದೇವಸ್ಥಾನದಲ್ಲಿ ಪೂಜೆ ಮಾಡುವುದಕ್ಕೆ ಬಿಡಲ್ಲ,ಇಲ್ಲಿ ಸಮಾನತೆ ಇಲ್ಲ,ಆದರೆ ನಮ್ಮ ಧರ್ಮದಲ್ಲಿ ಈ ರೀತಿ ಇಲ್ಲ... ಏನೇನೋ ಹೇಳತೊಡಗಿದಳು...

ನೀವು ನಮ್ಮ ಧರ್ಮಕ್ಕೆ ಬನ್ನಿ,ನಿಮ್ಮ ಒಳ್ಳೆಯ ಸವಲತ್ತು ಗಳನ್ನು  ಕೊಡುತ್ತೇವೆ ಎಂದೆಲ್ಲಾ ಹೇಳಿ ಮೊದಲೇ ದುಡ್ಡು ಎಂದರೆ  ಬಾಯಿ ಬಿಡುತ್ತಿದ ನೀಲಮ್ಮ ಚರ್ಚಿನವರು ಕೊಟ್ಟ ಒಂದಷ್ಟು ಪಡೆದು  ಅಲ್ಲಿ ಒಂದು ಪುಸ್ತಕಕ್ಕೆ ಸಹಿ ಮಾಡಿ ಆ ಧರ್ಮಕ್ಕೆ ಮತಾಂತರಗೊಂಡಳು..ಇದರ ಹಿಂದೆಯೇ ತನ್ನ ಮದುವೆಗೆ ಅನುಕೂಲವಾಗುತ್ತದೆ ಎಂದು ಮೊದಲೇ ಅರಿತಿದ್ದ ಸುರೇಶ ಕೂಡ...ಇದರ ಜೊತೆಗೆ ಈ ಉರಿನಲ್ಲಿ ಹೊಸ ಪಂಗಡ ಒಂದು ಶುರು ಆಯಿತು..

ಆ ಹುಡುಗಿ ಪ್ರತಿ ಬಾರಿ ಊರಿಗೆ ಬಂದಾಗ ಸುರೇಶನ ಮನೆಯಲ್ಲಿ ಒಂದೊಂದು ಬದಲಾವಣೆ ಆಗ ತೊಡಗಿತು.ಮೊದಲು ಪ್ರತಿ ಸೋಮವಾರ ನಡೆಯುತ್ತಿದ್ದ ಪೂಜೆ ನಿಂತಿತು,ಭಾನುವಾರ ಚರ್ಚಿಗೆ ಹೋಗಲು ಶುರು ಮಾಡಿದಳು ನೀಲಮ್ಮ...ನಂತರ ಮನೆಯಲ್ಲಿದ್ದ ಗಣಪತಿ,ಶಿವ,ಲಕ್ಷ್ಮಿ ಪಟಗಳು ಗೋಡೆಯಿಂದ ತೆಗೆಯಲ್ಪಟ್ಟಿತ್ತು...ಇವೆಲ್ಲ ಸುಟ್ಟು ಬೂದಿ ಆದವು...ಶಿಲುಬೆಯ ಆಕೃತಿ ಗೋಡೆಯಲ್ಲಿ ಅಲಂಕಾರ ಗೊಂಡಿತು...ನಂತರ ಈ ಒಡವೆ ಗಳೆಲ್ಲ ಬರೀ ವಿಜೃಂಭಣೆ ,ಇದು ಏಸುವಿಗೆ ಇಷ್ಟವಿಲ್ಲ ಎಂದು ಹೇಳಿ,ನೀಲಮ್ಮನ ಬಳೆ,ಕಿವಿಯಲ್ಲಿದ್ದ ಓಲೆ,ಸರಗಳನ್ನು ತೆಗೆಸಿದಳು...ಹಣೆಗೆ ಕುಂಕುಮ ಹರಿಶಿನ ಹಚ್ಚಿಕೊಳ್ಳುವುದು ನಿಂತ ನಂತರ ಅವುಗಳೆಲ್ಲ ತಿಪ್ಪೆ ಸೇರಿದವು..ಹಬ್ಬ ಹರಿದಿನಗಳು  ಗುತ್ತು ಗುರಿ ಇಲ್ಲದಂತಾಯಿತು...ಕೇವಲ ಕ್ರಿಸ್ಮಸ್ ಆಚರಣೆ ಶುರು ಆಯಿತು..ಹೀಗೆ ಒಂದೊಂದು ಬದಲಾವಣೆ ಆದ ನಂತರ ನೀಲಮ್ಮ ಪೂರ್ತಿ ಕ್ರೈಸ್ತ ಮಹಿಳೆ ಆದಳು...

ತನ್ನ ಅಣ್ಣ,ತನ್ನ ಮಗಳನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದಾಗ ,ಅದು ಚರ್ಚಿನಲ್ಲಿ ಮದುವೆ ಸಮಾರಂಭ ಇಟ್ಟು ಕೊಳ್ಳೋಣ ಎಂದ್ದಾಗ,ಈ ಮದುವೆ ಮುರಿದು ಬಿತ್ತು ಅಲ್ಲದೆ ನೀಲಮಮ್ನ ಅಣ್ಣ ಅವಳ ಜೊತೆ ಜಗಳ ಮಾಡಿಕೊಂಡು ಹೋದ...

ಗ್ರಾಮದಲ್ಲಿ ನಡೆಯುವ ಸಿದ್ಧ ಮಲ್ಲೇಶ್ವರನ ಜಾತ್ರೆಗೆ ಹೋಗುವುದನ್ನು ನಿಲ್ಲಿಸಿದಳು...ದೇವಸ್ಥಾನಕ್ಕೆ ಕಾಣಿಕೆ ನಿಲ್ಲಿಸಿದಳು...ಆಗಾಗ ಮನೆಗೆ ಬರುತ್ತಿದ್ದ ಸ್ವಾಮಿಯನ್ನು ಕರೆಯುವುದನ್ನು ನಿಲ್ಲಿಸಿದಳು..ಬದಲಾಗಿ ಚರ್ಚಿನ ಫಾದರ್ ಗಳು ಬರಲು ಶುರು ಮಾಡಿದರು...

ಇದೆಲ್ಲದರ ಜೊತೆಗೆ ಮನೆಯಲ್ಲಿ ಒಂದಿಷ್ಟು ಬೈಬಲ್ ಪ್ರತಿಗಳನ್ನು ಇಟ್ಟುಕೊಂಡು,ತನ್ನ ಓಣಿಯ ಹೆಂಗಸರಿಗೆಲ್ಲ ಓದಲು ಬರದ ನೀಲಮ್ಮ,ತನ್ನ ಮಗನಿಂದ ಮತ್ತು ಆ ಹುಡುಗಿಯಿಂದ ಮತ್ತು ಚರ್ಚಿನಲ್ಲಿ ಹೇಳುತ್ತಿದ್ದ ಬೈಬಲ್ಲಿನ ಪಾಠವನ್ನು ಒಪ್ಪಿಸ ತೊಡಗಿದಳು...ಇದಕ್ಕೆಲ್ಲ ಕಾರಣ,ಇನೊಂದಿಷ್ಟು ಜನರನ್ನು ಚರ್ಚಿಗೆ ತಂದರೆ ಇನ್ನಷ್ಟು ದುಡ್ಡನ್ನು ಕೊಡುತ್ತೇವೆ ಎಂದು ಹೇಳಿದ್ದೆ ಕಾರಣ...

ಇದರಿಂದ ತಮಗೂ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ತಿಳಿದ ಎಮ್ಮೆ ಮಲ್ಲನ ಹೆಂಡತಿ ನಾಗಮ್ಮ, ಸುಣ್ಣದ ಬಸವನ ಸೊಸೆ ಕಾಳಮ್ಮ..ಹೀಗೆ ಒಬ್ಬೊಬ್ಬರಾಗಿ ಚರ್ಚಿಗೆ ಹೋಗಲು ಶುರು ಮಾಡಿದರು...

ಕೆಲವು ಗಂಡಸರು ಮಾತ್ರ ತಮ್ಮ ಮನೆಗೆ ಬಂದ ಫಾದರ ಗಳಿಗೆ ಬೈದು ,ಇನ್ನೊಮ್ಮೆ ಬಂದರೆ ಕಾಲು ಮುರಿಯುವುದಾಗಿ ಬೆದರಿಸಿ ಕಳುಹಿಸಿದರು..

ಅಲ್ಲದೆ ಅವರು ಮುಖ್ಯ ಗುರಿಯಾಗಿಸಿಕೊಂಡಿದ್ದು ಕಾಯಿಲೆ ಬಿದ್ದವರನ್ನು ,ಅವರಿಗೆ ಬೈಬಲ್ ನಲ್ಲಿರುವ ಏಸು ಕಾಯಿಲೆ ವಾಸಿ ಮಾಡಿದ ಪ್ರಸಂಗಗಳನ್ನು ಹೇಳಿ ತಾವು ಚರ್ಚಿಗೆ ಬಂದರೆ ತಮ್ಮ ಕಾಯಿಲೆಗಳನ್ನು ವಾಸಿ ಮಾಡುವುದಾಗಿ ಹೇಳಿದರೂ,ಚರ್ಚಿಗೆ ಹೋದರು ತಮ್ಮ ಕಾಯಿಲೆ ವಾಸಿ ಆಗದೆ ಇದ್ದಾಗ ಇದೆಲ್ಲ ಸುಳ್ಳು ಎಂದು ನಂಬಿ ತಮಗೆ ಸಿಕ್ಕ ದುಡ್ಡನ್ನು ಇಟ್ಟಿಕೊಂಡು ಚರ್ಚಿಗೆ ಹೋಗುವುದನ್ನು ಕೆಲವರು ನಿಲ್ಲಿಸಿದರು...

ವರ್ಷಕ್ಕೊಮ್ಮೆ ಮಾಸ್ತಮ್ಮ ದೇವರಿಗೆ ಕೋಳಿ,ಕುರು ಬಲಿ ಕೊಡಲು ಓಣಿಗೆ ಒಣಿಯೇ ಗಾಡಿಗಳಲ್ಲಿ ಹೋಗುತ್ತಿದ್ದರೆ,ಈ ಬಾರಿ ಹೋಗುವವರ ಸಂಖ್ಯೆ ಕಡಿಮೆ ಆಗ ತೊಡಗಿತು...

ಹೀಗೆ ಕೆಲವು ಜನರು ಊರಿನ ಹಿರಿಯರ ಸಲಹೆ ಅಂತೆ ಮತ್ತೆ ತಮ್ಮ ಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ಹಾಗೆ ಮುಂದುವರೆದರು, ನೀಲಮ್ಮನಂಥ  ಕೆಲವರು ಚರ್ಚಿಗೆ ಹೋಗಲು ನಿಲ್ಲಿಸಲಿಲ್ಲ... ಸುರೇಶ ಫ್ಲೆವಿಯಳನ್ನು ಮದುವೆ ಆಗಿ ಅದೇ ಚರ್ಚಿನಲ್ಲಿ ಕೆಲಸಕ್ಕೆ ಆ ಧರ್ಮ ಪ್ರಚಾರಕ್ಕೆ ಕೆಲ್ಸಕ್ಕೆ ಸೇರಿಕೊಂಡ... ತನ್ನ ಉರಿನಲ್ಲಿ ಕೂಡ ಇನ್ನಷ್ಟು ಜನರನ್ನು ಚರ್ಚಿಗೆ ಕರೆ ತರಲು ಪ್ರಯತ್ನ ಮಾಡಿದರೂ  ಊರಿನ ಗಂಡಸರೆಲ್ಲ ಸೇರಿ ಧರ್ಮದೇಟು ಕೊಟ್ಟಾಗ ತನ್ನ ಉರಿನಲ್ಲಿ ಆ ಸಾಹಸಕ್ಕೆ ಮತ್ತೆ ಕೈ ಹಾಕಲಿಲ್ಲ....

--------------------------------------------------------------------------
## ಕಥೆ ##

Saturday, October 1, 2011

ಅಳಲು !!!

ದೊಡ್ಡೇಗೌಡ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬ...ವರ್ತಕರ ಸಂಘದ ಸದಸ್ಯ ಕೂಡ....ಉರಿನಲ್ಲಿ ಒಳ್ಳೆ ಹೆಸರಿದೆ... ಸಂತೆ ಬೀದಿಯಲ್ಲಿ ಬಿಳಿ ಪಂಚೆ,ಬಿಳಿ ಅಂಗಿ ಹಾಕಿಕೊಂಡು ನಡೆದು ಬಂದ ಅಂದರೆ ಅಲ್ಲಿರುವವರೆಲ್ಲರೂ ಎದ್ದು ನಮಸ್ಕರಿಸುತ್ತಾರೆ... ಗಟ್ಟಿಗ,ಧೈರ್ಯವಂತ,ಯಾರೊಬ್ಬರಿಗೂ ಒಂದು ರೂಪಾಯೀ ಮೋಸ ಮಾಡಿಲ್ಲ,ವ್ಯಾಪಾರದಲ್ಲಿ ಕೂಡ,ಹಾಗೆ ಯಾರೇ ಇವನಿಗೆ ಮೋಸ ಮಾಡಿದರೆ ಹಾಗೆ ಬಿಡುವ ಅಸ್ಸಾಮಿ ಅಲ್ಲ... ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಹಿರಿ ಮಗ ವೆಂಕಟೇಶ ಮತ್ತು ಕೊನೆ ವರ್ಷದ  ಡಿಗ್ರಿ ಮಾಡುತ್ತಿರುವ ಮಗಳು,ಇಬ್ಬರು ಮಕ್ಕಳ ಮದುವೆಯನ್ನು ಒಂದೇ ಚಪ್ಪರದಲ್ಲಿ ಮಾಡ ಬೇಕೆಂಬ ಆಸೆಯೊಂದಿಗೆ ಇಬ್ಬರಿಗೂ ವಧು ಮತ್ತು ವರನ ಅನ್ವೇಷಣೆಯಲ್ಲಿ ಕೂಡ ಇದ್ದನು...
ಅದೊಂದು ಭಾನುವಾರ ತನ್ನ ತೋಟ ಮತ್ತು ಅಂಗಡಿಯ ಕೆಲಸದವರಿಗೆ  ಬಟವಾಡೆ ಎಲ್ಲ ಮುಗಿಸಿ ತೋಟದ ಕಡೆ ಹೋಗಿದ್ದ... ಮನೆಯಲ್ಲಿ ಹೆಂಡತಿ ಒಬ್ಬಳೇ ಇದ್ದಳು... ಮಗ ವೆಂಕಟೇಶ ಒಂದು ಹುಡುಗಿಯ ಜೊತೆ ಮನೆಗೆ ಬಂದು,ತನ್ನ ತಾಯಿ ಹತ್ತಿರ ಅವಳನ್ನು ಮದುವೆ ಹಾಗಿರುವುದಾಗಿ ತಿಳಿಸಿದ....
ದೊಡ್ಡೇಗೌಡನ  ಹೆಂಡತಿ ದ್ಯಾವಮ್ಮ ಕುಸಿದು ಬೀಳುವಂತಾದಳು.... ಆಕಾಶ ಕಳಚಿ ತಲೆ ಮೇಲೆ ಬಿದ್ದ ಹಾಗೆ ಆದಳು...ಮಗನ ಈ ಮಾತಿಗೆ ಏನು ಹೇಳಬೇಕೆಂದು ತೋಚದೆ ಗಾಬರಿ ಬಿದ್ದಳು...ಇಂತ ಸಮಯದಲ್ಲಿ ಗಂಡ ಮನೆಯಲ್ಲಿ ಇರಬೇಕಿತ್ತು ಎಂದು ಕೊಂಡಳು ... ಅಳು ಬಂದರೂ ನುಂಗಿಕೊಂಡು "ಯಾಕ್ ಹೀಗ್ ಮಾಡಿದೆ? ನಮಗೆ ಹೇಳಿದ್ರೆ ನಾವೇ ಮದುವೆ ಮಾಡಿಸ್ತಿರ್ಲಿಲ್ವ ? ಯಾವಾಗ ಮದುವೆ ಆದೆ ? ಎಲ್ಲಿ ಆದೆ ? ಅವಳ ಮನೆಯಲ್ಲಿ ಈ ವಿಷಯ ಗೊತ್ತ ?" ಹೀಗೆ ಒಂದರ ಮೇಲೆ ಒಂದು ಪ್ರಶ್ನೆಯನ್ನು ಕೇಳಿದಳು...
ಮನಸ್ಸಿನಲ್ಲಿ ಇನ್ನು  ಮಗಳ ಮದುವೆ   ಮಾಡಬೇಕು,ಈ ವಿಷಯ ಊರಿನ ಜನರಿಗೆ ಗೊತ್ತಾದರೆ ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ,ನಮ್ಮ ಮರ್ಯಾದೆ ಏನಾಗಬೇಕು,ಊರವರ ಬಾಯಿಗೆ ಹುಳ ಹಾಗಿ ಬಿಟ್ವಿ....ಹೀಗೆ ಹತ್ತು ಹಲವಾರು ಯೋಚನೆಗಳು ತೊಳಲಾಡ ತೊಡಗಿದವು..
"ಒಂದು ವಾರ ಆಯಿತು ಮದುವೆ ಆಗಿ,ಅಲ್ಲೇ ಸಬ್ ರೆಜಿಸ್ಟ್ರಾರ್ ಆಫಿಸಿನಲ್ಲಿ ಆದ್ವಿ,ಏನೋ ಸ್ವಲ್ಪ ಪ್ರಾಬ್ಲಂ ಆಯಿತು,ಅದಕ್ಕೆ ಆದ್ವಿ..ಹೇಳಬೇಕು ಅಂತ ಇದ್ವಿ,ಹೇಗೂ ಹೇಳಲೇ ಬೇಕು ಅಂತ ಸುಮ್ಮನಾದ್ವಿ ಅಷ್ಟೇ"

"ಏನ್ ಅಂತ ಪ್ರಾಬ್ಲಂ.ಮನೇಲಿ ಹೇಳಿದ್ರೆ ಆಗ್ತಿರಲಿಲ್ವ,ನಿಮ್ಮ ಅಪ್ಪನ ಹತ್ತಿರನಾದ್ರು ಹೇಳಬಾರದಿತ್ತಾ ?? "

"ಅದನ್ನೆಲ್ಲ ಹೇಳಕ್ಕೆ ಆಗಲ್ಲ,ಇವಾಗೆನ್ ಅವರನ್ನು ಒಪ್ಪಿಸ್ತೀನಿ ಬಿಡು "

"ಏನ್ ಒಪ್ಕೋತಾರೆ,ನಿಮ್ಮ ಅಪ್ಪಂಗೆ ನೀನ್ ಹುಟ್ಟಿದ್ಯೋ ಅಥ್ವಾ ನಿಮ್ಮ ಅಪ್ಪ ನಿನಗೆ ಹುಟ್ಟಿದನೋ ? ಮಾಡೋದ್ ಮಾಡ್ಬಿಟ್ಟು ಹೇಳದು ನೋಡು,ಏನಾದ್ರೂ ಮಾಡ್ಕೋ  " ಅಂತ ಹೇಳಿ ಸಿಟ್ಟು  ನುಂಗಿ ಕೊಂಡು ಸೆರಗನ್ನು ಬಾಯಲ್ಲಿ ಕಚ್ಚಿಕೊಂಡು ಹಿತ್ತಲ ಬಾಗಿಲ ಬಳಿ ಹೋಗಿ ಕುಳಿತಳು....ಮಕ್ಕಳ ಮದುವೆ ಬಗ್ಗೆ ಕಂಡ ಕನಸುಗಳೆಲ್ಲ ಮಳೆ ನೀರಿನಲ್ಲಿ ಕೊಚ್ಚಿ ಹೋದಂತೆ ಆದವು...

ಸ್ವಲ್ಪ ಸಮಯದ ನಂತರ ತೋಟದಿಂದ ಬಂದ ದೊಡ್ದೆ ಗೌಡನಿಗೆ ಹೆಂಡತಿ "ಒಳಗೆ ಹೋಗಿ ನೋಡಿ,ಯಾವಳೋ ತಾಟ್ಗಿತ್ತಿನ ಮದುವೆ ಹಾಗಿ ಬಂದವನೇ ನಿಮ್ಮ ಮಗ "

ಇವನಿಗೆ ಏನು ಹೇಳಬೇಕೋ ತೋಚದೆ ಸೀದಾ ಒಳ ನಡೆದು ಮಗನ ಮುಂದೆ ನಿಂತ...ಏನು ಮಾತಾಡ ಬೇಕು ಎಂದು ತಿಳಿಯದೆ ತನ್ನ ಕೋಪ ಸಿಟ್ಟು ಯಾವುದನ್ನು  ತೋರಿಸಿಕೊಳ್ಳದೆ ಸುಮ್ಮನೆ ನಿಂತು ಬಿಟ್ಟ...ತನ್ನ ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಧೃತಿ ಗೆಡದೆ ಇದ್ದ ಅವನ ತಂದೆಗೆ ಕಣ್ಣೀರು ಗೊತ್ತಿಲ್ಲದೇ ಹರಿಯಿತು... ಈಗ ಬಹಳ ಬುದ್ಧಿವಂತಿಕೆ ಇಂದ ಕೆಲಸ ಮಾಡಬೇಕಾದ  ಪರಿಸ್ಥಿತಿ ಬಂತು... ಊರಿನವರಿಗೆ ವಿಷಯ ಗೊತ್ತಾದರೆ ತನ್ನ ಮರ್ಯಾದೆ ಹೋಗುತ್ತದೆ...

ಮದುವೆ ಆಗಿ ಬಂದಿರುವುದರಿಂದ ಮನೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇತ್ತು,ಇಲ್ಲದೆ ಹೋದರೆ ಉರಿಬ ದೊಡ್ಡ ಮನುಷ್ಯನೇ ಹೀಗೆ ಮಾಡಿದರೆ ಸರಿ ಇರುವುದಿಲ್ಲ....ಆ ಹುಡುಗಿ ಬೇರೆ ಜಾತಿ ಎಂದು ತಿಳಿದಾಗಲಂತೂ ಅವನ ಅಪ್ಪ ಅಮ್ಮ ಇಬ್ಬರೂ ಕೆಂಡಾಮಂಡಲವಾದರು  .... ಆದರೂ  ಬೇರೆ ದಾರಿ ಇಲ್ಲ...ಹುಡುಗಿಯ ಮನೆಯಲ್ಲಿ ಒಪ್ಪದೇ ಇರುವ ವಿಷಯ ತಿಳಿದು ಅವರ ಮನೆಗೆ ಹೋದರೆ ಹುಡುಗಿಯ ತಂದೆ "ತನಗೆ ಯಾವುದೇ ಸಂಬಂಧ ಇಲ್ಲ "ಎಂದು ಮಗಳ ಬಗ್ಗೆ ಕನಿಕರ ಇಲ್ಲದೆ ಸಾರಾ ಸಗಟಾಗಿ ಹೇಳಿಬಿಟ್ಟರು....

ಇವನ ತಂದೆ ಎಷ್ಟೇ ಒಪ್ಪಿಸಲು ಪ್ರಯತ್ನ ಪಟ್ಟರೂ ಸಾಧ್ಯ ಆಗಲಿಲ್ಲ... ಕೊನೆಗೆ ಅವಳ ಅಪ್ಪ "ಮದುವೆಗೆ ಮುಂಚೆ ಬಸುರಿ ಆಗಿ ಬಂದು,ನಮ್ಮ ಮನೆತನದ ಗೌರವ ಹಾಳು ಮಾಡಿದ್ದು ಸಾಕು,ಇನ್ನು ಮುಂದೆ ಅವಳು ನಮ್ಮ ಮನೆಗೆ ಬರುವುದು ಬೇಡ" ಎಂದು
ಹೇಳಿದಾಗಲೇ ಅವನು  ಯಾಕೆ ಮನೆಯಲ್ಲಿ ಹೇಳದೆ ಮದುವೆ ಆಗಿದ್ದು ಮತ್ತು ಅವನು ಮುಚ್ಚಿಟ್ಟಿದ್ದ ಸತ್ಯ ತಿಳಿದಿದ್ದು....

ಸುಮಾರು ಒಂದು ತಿಂಗಳ ಹಿಂದೆಯೇ ಇವರಿಬ್ಬರೂ ಬಂದು ಇವಳು ಗರ್ಭಿಣಿ ಆಗಿರುವ ವಿಷಯ ತಿಳಿಸಿದ್ದು ಮತ್ತು ತಾನು ಮದುವೆ ಮಾಡಿಕೊಡಲು ಒಪ್ಪದೇ ಇದ್ದಿದಕ್ಕೆ ಇವರು ಮದುವೆ ಆಗಿರಬೇಕು ಎಂದು,ಎಲ್ಲ ವಿಷಯಗಳನ್ನು ಹುಡುಗಿಯ ತಾಯಿ ದೊಡ್ದೆಗೌಡನಿಗೆ ಹೇಳುತ್ತಾಳೆ...

ಈ ಸಂಗತಿ ತಿಳಿದಾಗ ಬಹಳ ಜಾಗರೂಕರಾದ ಗೌಡ ಉಪಾಯ ಮಾಡಿ ರೆಜಿಸ್ಟಾರ್ ಆಫಿಸಿನಲ್ಲಿ ಆಗಿರುವ ಮದುವೆಯನ್ನು  ಇನ್ನೊಮ್ಮೆ ಶಾಸ್ತ್ರೋಕ್ತವಾಗಿ ಮಾಡಿಸಲು ನಿಶ್ಚಯಿಸುತ್ತಾನೆ..ಜೊತೆಗೆ ಒಳಗೆ ತಳಮಳ ಶುರು ಆಯಿತು ಅವನಿಗೆ,ಬೇರೆ ಜಾತಿಯ ಹುಡುಗಿಯನ್ನು ಮನೆ ಸೊಸೆ ಮಾಡಿ ಕೊಂಡರೆ ತನ್ನ ಸಮಾಜದಲ್ಲಿ ತನಗೆ ಇರುವ ಹೆಸರು ಕೆಡುತ್ತದೆ ಅಲ್ಲದೆ ಇಬ್ಬರಿಗೂ,ಇರುವ ಇನ್ನೊಬ್ಬ ಮಗಳ ಮದುವೆಯ ಬಗ್ಗೆ ಚಿಂತ ಅತ್ತ ತೊಡಗಿತು... ಅಣ್ಣ ಈ ರೀತಿ ಮಾಡಿದ್ದಾನೆ ಅಂತ ಗೊತ್ತಾದರೆ ಇವಳನ್ನು ಮದುವೆ  ಆಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಎಂಬ ಆತಂಕ....

ಇಂಥ ಆತಂಕದ ನಡುವೆ , ಆಗಿರುವ ಮದುವೆಗೆ ಇನ್ನೊಮ್ಮೆ ನಾಮಕಾವಸ್ಥೆ ಶಾಸ್ತ್ರೋಕ್ತವಾಗಿ ಮಾಡಿಯೂ ಆಯಿತು.... ಆದರೆ ಹುಡುಗಿಯ ಮನೆ ಕಡೆ ಇಂದ ಯಾರು ಬರಲಿಲ್ಲ... ತಂಗಿಯ ಮದುವೆ ಮೊದಲು ಮಾಡುವ ಬದಲು ಇವನು ಯಾಕೆ ಆದ,ಜವಾಬ್ದಾರಿ ಇಲ್ಲದವನು ಎಂದು ಕೆಲವರು ಬೈದು ಕೊಂಡರೆ,ಇನ್ನು ಕೆಲವರು ಹುಡುಗಿಯ ಮನೆ ಕಡೆಯವರು ಯಾರು ಬರದೆ ಇರುವ ವಿಷಯ ತಿಳಿದು ಏನೋ ಎಡವಟ್ಟಾಗಿದೆ ,ಅದಕ್ಕೆ ಈ ರೀತಿ ಇಷ್ಟು ಬೇಗ ಮಾಡುತ್ತಿದ್ದಾರೆ ಎಂದು ಮಾತಾಡಲು ಶುರು ಮಾಡಿದರೆ,ಕೆಲವರ ಸಂಶಯದ ನಡುವೆ ಕಲ್ಯಾಣ ಮುಗಿಯಿತು...ಆದರೆ ದೊಡ್ದೆ ಗೌಡ ಆಗಲಿ ಅವನ ಹೆಂಡತಿಯ ಮುಖದಲ್ಲಿ ಯಾವುದೇ ತರಹದ ಸಂತೋಷದ ಛಾಯೆ ಇರಲಿಲ್ಲ,ಬದಲಾಗಿ ದುಖ, ಸಮಾಜದಲ್ಲಿ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಅಂಜಿಕೆ ಎದ್ದು ಕಾಣುತಿತ್ತು...

ಬಹಳ ವಿಜೃಂಭಣೆಯಿಂದ  ಮಾಡಬೇಕು ಎಂದು ಕನಸು ಕಟ್ಟಿ ಕೊಂಡಿದ್ದ ಮದುವೆ ಈ ರೀತಿ ಆಗುತ್ತಿರುವುದಕ್ಕೆ ಬೇಸರ ಅಲ್ಲದೆ ಒಂದು ರೀತಿಯ ಸೂತಕದ ಲಕ್ಷಣಗಳು ಕಂಡವು...ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಮಂಕಾಗದ ಅವನ ತಂದೆ ಇವತ್ತು ಮಂಕಾಗಿದ್ದರು,ಇಬ್ಬರಲ್ಲೂ ನೊಂದ ಭಾವ ಅಡಗಿತ್ತು....ಮಗನನ್ನು ಬೆಳೆಸಿ ಓದಿಸಿದಕ್ಕೆ ಇವನು ಕೊಟ್ಟ ದೊಡ್ಡ ಉಡುಗೊರೆ ಎಂದರೆ ತಮ್ಮ ಕನಸುಗಳನ್ನು ನುಚ್ಚು ನೂರು ಮಾಡಿದ್ದು ಮತ್ತು ಸಮಾಜದಲ್ಲಿ ತಮ್ಮ ಗೌರವ ಘನತೆ ಆಳು ಮಾಡಿದ್ದು....

ಸಂಭ್ರಮ ಇಲ್ಲದ ಮದುವೆ ಮುಗಿದು ದಂಪತಿಗಳನ್ನು ಕಳಿಸಿದ ಮೇಲೆ ಉರಿನಲ್ಲಿ ಇವರ ಮದುವೆ ವಿಷಯ ಎಲ್ಲರ ಬಾಯಲ್ಲಿ ಹರಿದಾಡ ತೊಡಗಿತು... ಕೆಲವರಿಗೆ ನಿಜ ಸಂಗತು ತಿಳಿಯ ತೊಡಗಿತು... ಊರಿನ ಜನರೆಲ್ಲಾ ಇವನ ಮನೆಯವರನ್ನು ಒಂದು ವಿಚಿತ್ರ ರೀತಿಯಲ್ಲಿ ನೋಡ ತೊಡಗಿದರು...ಮದುವೆ ಆಗಿ ೬ ವರೆ ತಿಂಗಳಿಗೆ ಮಗು ಆದಾಗ  ಜನ  ಕೆಟ್ಟ ರೀತಿಯಲ್ಲಿ ಕಾಣತೊಡಗಿದರು,ಅಲ್ಲದೆ ಅವನ ತಂಗಿಗೆ ಒಂದು ಸಂಭಂದ ಹುಡುಕುವುದು ಕಷ್ಟ ಆಯಿತು...ಅವಳು ತನ್ನ ಅಳಲು ತೋಡಿಕೊಳ್ಳಲು ಆಗದ ಪರಿಸ್ಥಿತಿ ತಲುಪಿದಳು....ನೆಂಟರಿಷ್ಟರು ದೂರ ಮಾಡಲು ಶುರು ಮಾಡಿದರು....

ಎಲ್ಲದರಿಂದ ಆಸಕ್ತಿ ಕಳೆದು ಕೊಂಡ ತಂದೆ ಮಗಳ ಮದುವೆ ಬಗ್ಗೆ ಚಿಂತ ಮಾಡತೊಡಗಿದ .......ಇವೆಲ್ಲದರಿಂದ ಬೇಸತ್ತ ವೆಂಕಟೇಶನ ತಾಯಿ ಅರೆ  ಹುಚ್ಚಿ ಆಗಿಬಿಟ್ಟಳು...

Wednesday, September 14, 2011

ಮರುಕಳಿಸಿದ ನೆನಪುಗಳು !!!

ಸುಮಾರು ೬ ವರ್ಷದ ನಂತರ ಎಲ್ಲರೂ ಒಟ್ಟಿಗೆ ಸೇರಿದ ದಿನ ಅದು..ಕಳೆದ ವಾರ ನಮ್ಮ ಪಿ.ಯು.ಸಿ ಹಾಸ್ಟೆಲ್ಲಿನ ಹುಡುಗರೆಲ್ಲ ಒಟ್ಟಿಗೆ ಭೇಟಿ ಆಗಿದ್ದೆವು...ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ರಾಮಕುಂಜ ಎಂಬ ಗ್ರಾಮದ ಬೋರ್ಡಿಂಗ್ ಹಾಸ್ಟೆಲ್ಲಿನಲ್ಲಿ ೨ ವರ್ಷ ಒಟ್ಟಿಗೆ ಕಳೆದ ನಾವು ಮತ್ತೆ ಆ ನೆನಪುಗಳನ್ನು ಹೊತ್ತು ಭೇಟಿ ಆದೆವು...
ರಾಮಕುಂಜ ಇದು ಉಪ್ಪಿನಂಗಡಿ ಇಂದ ಸುಭ್ರಮಣ್ಯ ಹೋಗುವ ದಾರಿಯಲ್ಲಿ ಇದೆ..ಇದು ಈಗಿನ ಪೇಜಾವರ ಯತಿಗಳಾದ ಶ್ರೀ ವಿಶ್ವೇಶ ತೀರ್ಥರ ಹುಟ್ಟೂರು,ಮತ್ತು ವನವಾಸದ ಕಾಲದಲ್ಲಿ ರಾಮನು ಇಲ್ಲಿ ಈಶ್ವರನನ್ನು ಪೂಜಿಸಿದ್ದರಿಂದ ಇಂದು ರಾಮಕುಂಜ ಎಂದು ಮತ್ತು ಅಲ್ಲಿನ ಈಶ್ವರನಿಗೆ ರಾಮಕುಂಜೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ...(ಇದು ಮೊದಲ ವರ್ಷದ ಮೊದಲ ಕನ್ನಡ ಕ್ಲಾಸಿನಲ್ಲಿ ನಮ್ಮ ಉಪನ್ಯಾಸಕರಾದ ಗಣರಾಜ್ ಕುಂಬ್ಳೆ ಅವರು ಹೇಳಿದ ವಿಷಯ,ಈ ಊರಿನ ಇತಿಹಾಸದ ಬಗ್ಗೆ ಒಂದು ಪುಸ್ತಕ ಕೂಡ ಬರೆದಿದ್ದಾರೆ).....
ಇಲ್ಲಿ ದೇವಸ್ಥಾನ,ಒಂದು ಪ್ರೈಮರಿ ಶಾಲೆ,ಒಂದು ಸಣ್ಣ ಗುಡ್ಡದ ಮೇಲೆ ನಮ್ಮ ಕಾಲೇಜು,ಅಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಸಣ್ಣ ಗುಡ್ಡದ ಮೇಲೆ ನಮ್ಮ ಹಾಸ್ಟೆಲ್....ದೇವಾಲಯದ ಬಳಿ ರಥದ ಮನೆ ಹತ್ತಿರ ಒಬ್ಬ ಭಟ್ಟರ ಮನೆ,ಜೊತೆಗೆ ಅವರು ನಡೆಸುತ್ತಿದ್ದ ಒಂದು ಅಂಗಡಿ(ಈ ಅಂಗಡಿ ನಮಗೆ ತುಂಬ Important )...ಅಷ್ಟು ಬಿಟ್ಟರೆ ಅಲ್ಲಿ ಏನೇನು ಇಲ್ಲ... ಮನೆಗಳು ಇವೆಯಾದರೂ ಅಲ್ಲಿಂದ ಸುಮಾರು ದೂರ ಹೋಗಬೇಕು... ಸುತ್ತ ಮುತ್ತ ಬೆಟ್ಟ ಗುಡ್ಡಗಳು,ಉರಿ ಬಿಸಿಲು, ಹೊತ್ತಿಲ್ಲದ ಹೊತ್ತಲ್ಲಿ ಬರುವ ಮಳೆ,ಇಂಥ ಊರಲ್ಲಿ ೨ ವರ್ಷ ಕಳೆದ ರೋಮಾಂಚಕಾರಿ ಘಟನೆಗಳನ್ನು ಮೆಲುಕು ಹಾಕಲು, ಅವುಗಳ ಬಗ್ಗೆ ಚರ್ಚೆಗೆ ನೆರವಾಗಿದ್ದು ಮೊನ್ನೆಯ ನಮ್ಮೆಲ್ಲರ ಭೇಟಿ... 

ಹತ್ತನೇ ತರಗತಿ ಮುಗಿಸು ಕಾಲೇಜುಗಳ ಅನ್ವೇಷಣೆಯಲ್ಲಿದ್ದಾಗ ತಂದೆಯ ಸ್ನೇಹಿತರೊಬ್ಬರು ಕೊಟ್ಟ ಸಲಹೆ ಮೇರೆಗೆ ಅಲ್ಲಿಗೆ ಹೋದಾಗ ನಮಗೆ ಕಂಡಿದ್ದು ಅದೇ ಕಾಲೇಜು ಬಿಲ್ಡಿಂಗ್,ಹಾಸ್ಟೆಲ್,ದೇವಸ್ಥಾನ,ಒಂದು ಶಾಲೆ ಮತ್ತು ಅಂಗಡಿ ಇಷ್ಟೇ...ಬೆಳಗ್ಗೆ ೫.೩೦ ಕ್ಕೆ ಎದ್ದು,೫.೪೫ ಗೆ ಪ್ರಾರ್ಥನೆ ,ನಂತರ ಚಹಾ ಕುಡಿದು ೬.೦೦ ಘಂಟೆ ಇಂದ ೮.೦೦ ರವರೆಗೆ ಓದು..ನಂತರ ಊಟ(ಗಂಜಿ ಊಟ),ನಂತರ ರೆಡಿ ಆಗಿ ೯.೩೦ ಕ್ಕೆ ಕಾಲೇಜಿಗೆ ಹೊರಡುವುದು...೯.೪೫ ಇಂದ ೧೨.೫೦ ಕಾಲೇಜು,೧.೦೦ ಊಟ,ಮತ್ತೆ ೧.೩೦ ಕ್ಕೆ ಕಾಲೇಜಿಗೆ ಹೊರಡುವುದು...೧.೪೫ ಇಂದ ೩.೫೦ ರವರೆಗೆ ಕಾಲೇಜು,ಮತ್ತೆ ಹಿಂದಿರುಗಿ ೪.೦೦ ಕ್ಕೆ ಕಾಫಿ ತಿಂಡಿ,ನಂತರ ೫.೪೫ ವರೆಗೆ ಆಟೋಟ,ಮತ್ತೆ ೬.೩೦ಕ್ಕೆ ಪ್ರಾರ್ಥನೆ,೬.೪೫ ಇಂದ ೮.೩೦ ರವರೆಗೆ ಸ್ಟಡಿ ಪೀರಿಯಡ್...ಮತ್ತೆ ಊಟದ ನಂತರ ೮.೫೦ ಇಂದ ೯.೫೦ ರವರೆಗೆ ಸ್ಟಡಿ ಪೀರಿಯಡ್,ಹತ್ತು ಘಂಟೆಗೆ ಎಲ್ಲಾ ಲೈಟ್ಸ್ ಆಫ್. ವಾರಕ್ಕೆ ಎರಡು ದಿನ ಸಮವಸ್ತ್ರ,ಮತ್ತೆ ಹಾಸ್ಟೆಲಿನಲ್ಲಿ ಇಂಥ ಸ್ಟ್ರಿಕ್ಟ್ ರೂಲ್ಸ್ ಗಳು...ಅಲಿ ಬಿಟ್ಟು ಬೇರೆ ಎಲ್ಲೂ ಹೋಗುವ ಅವಕಾಶವೇ ಇರಲಿಲ್ಲ....ನಮ್ಮ ಬಳಿ ಯಾವುದೇ ಕಾರಣಕ್ಕೂ ದುಡ್ಡು ಇಟ್ಟಿಕೊಳ್ಳುವ ಹಾಗಿರಲಿಲ್ಲ..ಬೇರೆಯವರ ರೂಮಿಗೆ ಹೋಗುವ ಹಾಗಿರಲಿಲ್ಲ...ಎಲ್ಲದಕ್ಕೂ permission ತಗೋಬೇಕು.ಆಟಕ್ಕೆ ಹೋಗಲಿಲ್ಲ ಅಂದರೂ,ರಾತ್ರಿ ಹತ್ತರ ನಂತರ ಓದಬೇಕು ಅಂದರೂ,ಬೇಗೆ ಮಲಗ ಬೇಕು ಅಂದ್ರೂ..ಅಲ್ಲದೆ ಪ್ರತಿ ತಿಂಗಳ ನಮ್ಮ ಬಿಲ್ ಜೊತೆ ಕಳುಹಿಸುತ್ತಿದ್ದ ನಮ್ಮ ರಿಪೋರ್ಟ್ ಗಳು ,ಅಲ್ಲದೆ ತಿಂಗಳಿಗೆ ಒಂದೇ ದಿನ(ಅದೂ ನಮಗೆ ಮೀಸಲಿಟ್ಟ ದಿನವೇ) ಮನೆಯಿಂದ ಫೋನ್ ಮಾಡಬಹುದಿತ್ತು,...ಬೇರೆ ದಿನ ಮಾಡಿದರೆ useless ...೩ ತಿಂಗಳಿಗೆ ಒಮ್ಮೆ ಮಾತ್ರ ಮನೆಗೆ ಕಳುಹಿಸುತ್ತಿದ್ದರು...ಅದೂ ರಜ ಸಿಕ್ಕಿದ್ರೆ,ಇಲ್ಲಾಂದ್ರೆ ಅದೂ ಇಲ್ಲ...ಹಾಸ್ಟೆಲ್ ನಲ್ಲೆ ಇರುತ್ತಿದ್ದ ನಮ್ಮ ಉಪನ್ಯಾಸಕರು....ನಮ್ಮ ಜೊತೆಗೆ ಊಟ,ನಮ್ಮ ಜೊತೆಯಲ್ಲಿ ಆಟ ಕೂಡ ಆಡುತ್ತಿದ್ದರು..ಸಿಟಿಗೆ ಬರಬೇಕು ಅಂದರೂ ಅಲ್ಲಿಂದ ಸುಮಾರು ೧೨ ಕಿಮಿ..ಅದೂ ಹುಷಾರಿಲ್ಲ ಅಂದರೆ ಅವರೇ ಕರ್ಕೊಂಡು ಬರುವವರು...ಅಲ್ಲೇ ಎಲ್ಲಾ ಇರುತ್ತಿದ್ದ stationary ಸಾಮಗ್ರಿಗಳು...ಬಹುಷಃ ಇಂಥ ಪರಿಸರ ನೋಡೇ ಇರಬೇಕು,ನಮ್ಮ ತಂದೆ 'ಈ ಬಡ್ಡಿ ಮಗಂಗೆ ಇದೆ ಸರಿಯಾದ ಜಾಗ,ಇಲ್ಲಾದರೆ ಬಾಲ ಮುದುರಿಕೊಂಡು ಇರ್ತಾನೆ'ಅಂತ ತಂದು ಸೇರಿಸಿಯೇ ಬಿಟ್ಟರು...

ಅಲ್ಲಿಂದ ಶುರು ಆಯಿತು ನಮ್ಮ ಓದು,ನಮ್ಮ ಇತರ ಚಟುವಟಿಕೆಗಳು,ರೂಲ್ಸ್ ವಿರುದ್ದ ನಡೆಯುವುದು...ಎಲ್ಲಾ...ಅಲ್ಲಿ ಬಿಟ್ಟು ೬ ವರ್ಷ ಆದರೂ ಆ ನೆನಪುಗಳು,ಆ ಊರು,ಆ ಘಟನೆಗಳು....ಯಾವುದನ್ನು ಮರೆಯಲು ಸಾಧ್ಯವಿಲ್ಲ...ಬೆಳ್ಳಗೆ ಬೆಳ್ಳಗೆ ಗಂಜಿ ಊಟ(ದಕ್ಷಿಣ ಕನ್ನಡ ಸ್ಪೆಷಲ್,ಕುಸುಲಕ್ಕಿ ಇಂದ ಮಾಡುತ್ತಾರೆ,ಅನ್ನ ಬೇಯಿಸಿದ ನಂತರ ಗಂಜಿಯನ್ನು ಬಸಿಯದೆ ಹಾಗೆ ಬಡಿಸುತ್ತಾರೆ),....ಜತೆಗೆ ಮಿಡಿ ಮಾವಿನ ಉಪ್ಪಿನಕಾಯಿ,ಚಟ್ನಿ.... ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದ ,ಏನು ಅರ್ಥವಾಗದ ತುಳು ಭಾಷೆ.....,ಆ ರಣ ಬಿಸಿಲು,....ಯಾವಾಗ ಬೇಕೋ ಅವಾಗ ಸುರಿಯುತ್ತಿದ್ದ ಮಳೆ,....ರವಿವಾರ ಮಾತ್ರ ಗಂಜಿ ಊಟದ ಬದಲಾಗಿ ಇರುತ್ತಿದ್ದ ಇಡ್ಲಿಗೆ ಕಾಯುತ್ತಿದ್ದ ಪರಿ,......ಕದ್ದು ಭೇಲಿ ಹಾರಿ(ಕೆಲವರು ನುಸುಳುತ್ತಿದ್ದರು,ಕೆಲವರು ಹಾರುತ್ತಿದ್ದರು) ಹೋಗುತ್ತಿದ್ದ ಆ ದೇವಸ್ಥಾನದ ಹತ್ತಿರ ಇದ್ದ ಆ ಭಟ್ಟರ ಅಂಗಡಿ.....,ಕೆಲವೊಮ್ಮೆ ಸಿಕ್ಕಿ ಹಾಕಿಕೊಂಡು ಬರೆದ ಅದೆಷ್ಟೋ Apology ಲೆಟರ್ ಗಳು,....ಕೆಲವೊಮ್ಮೆ ಮಧ್ಯ ರಾತ್ರಿ(ಶಾರ್ಪ್ ೨.೦೦ ಘಂಟೆ ) ಶುರು ಆಗುತ್ತಿದ್ದ ನಮ್ಮ ಕಾರ್ಯಾಚರಣೆ,ಕತ್ತಲಿನಲ್ಲಿ ಬೇಲಿ ಹಾರಿ ಹೋಗುತ್ತಿದ್ದ ಆ ನಮ್ಮ ಧೈರ್ಯ,....ಕತ್ತಲಿನಲ್ಲಿ ಹರಿದ ಅದೆಷ್ಟೋ ಲುಂಗಿಗಳು.....,ಕಳೆದುಕೊಂಡ ಟಾರ್ಚ್ ಗಳು,....ಹಾಸ್ಟೆಲ್ ವಿಧ್ಯಾರ್ಥಿಗಳಿಗಾಗಿ ಮಧ್ಯ ರಾತ್ರಿ ೧೨.೦೦ ಇಂದ ೨.೦೦ ರವರೆಗೆ ಕಾಯುತ್ತಿದ್ದ ಅಂಗಡಿಯ ಭಟ್ಟರು.....,ಅಂಗಡಿ ಇಂದ ತರುತ್ತಿದ್ದ ಕೋವಾ,ಚಕ್ಲಿ,ಕಡ್ಲೆ ಬೀಜ,ಸೋ೦ಟೆ ಗಳು,....ಪ್ರತಿ ಗುರುವಾರ ಸಂಜೆ ಭಜನೆ,ಭಜನೆ ನಂತರ ಬೆಲ್ಲದ ಅವಲಕ್ಕಿ...ರವಿವಾರ ಸಿಹಿ ಊಟ,....ನಮಗೆ ನಿಗದಿ ಆದ ರವಿವಾರ ಮನೆಯಿಂದ ಫೋನ್ ಬರುವುದೇನೋ ಎಂದು ಕಾಯುವ ರೀತಿ.... ಮನೆ ಇನ್ದೆನಾದರು ಅಪ್ಪ ಅಥವಾ ಅಮ್ಮ ಬರಬಹುದೇನೂ ಎಂದು ಪರಿತಪಿಸುವುದು.....(ನಾನು ಯಾವ ಭಾನುವಾರವೂ ಅಪ್ಪ ಅಮ್ಮನಿಗಾಗಿ ಕಾದಿಲ್ಲ ..ನನಗೆ ಗೊತ್ತು ನಮ್ಮ ಮನೆ ಇಂದ ಬರಲ್ಲ ಅಂತ.. ೨ ವರ್ಷದಲ್ಲಿ ನಮ್ಮ ಹಾಸ್ಟೆಲ್ ಡೇ ಗೆ ಇಬ್ಬರೂ ಬಂದಿದ್ದರು...ಅದೂ ಬಿಟ್ಟರೆ admission ಮತ್ತು ವರ್ಷದ ಮೊದಲ ದಿನ ಬಿಟ್ಟು ಹೋಗಲು,ಅದೂ ಲಗೇಜು ಇರುತ್ತೆ ಅಂತ,ನಮ್ಮ ಅಪ್ಪ ಬಂದಿದ್ದರು ಅಷ್ಟೇ)....ಮಳೆಯಲ್ಲೂ ಮಿಂದು ಆಡುತಿದ್ದ ಆ ಮಜಾ,..ಕಾಲೇಜು ಡೇ ಗಿಂತ ಅದ್ದೂರಿಯಾಗಿ ಮಾಡುತ್ತಿದ್ದ ಹಾಸ್ಟೆಲ್ ಡೇ,..ಹಾಸ್ಟೆಲ್ ಡೇ ದಿನದ ಭರ್ಜರಿ ಊಟ....ಹಾಸ್ಟೆಲ್ ಡೇ ಗೆ ಮಾಡುತ್ತಿದ್ದ ತಿಂಗಳು ಗಟ್ಟಲೆ preparation ಗಳು...ಹಾಸ್ಟೆಲ್ ಡೇ,ಕಾಲೇಜು ಡೇ,ಎದುರಿಗಿನ ಸ್ಕೂಲ್ ಡೇ,ಮೂರು ಕಾರ್ಯಕ್ರಮಗಳಲ್ಲಿ ಒಂದೇ ಭಾಷಣ ಮಾಡುತ್ತಿದ್ದ ಒಬ್ಬ ಅಸ್ಸಾಮಿ..."ನಾನು ಅಮೇರಿಕಾಕ್ಕೆ ಹೋಗಿದ್ದಾಗ......" ಈ ಕಥೆಯನ್ನು ಹೇಳಲು ಮರೆಯುತ್ತಿರಲಿಲ್ಲ....ಒಟ್ಟು ೬ ಬಾರಿ ಇದೆ ಕಥೆಯನ್ನು ಕೇಳಿದ್ದೇವೆ....ಕಾರ್ಯಕ್ರಮಕ್ಕೆ ನಮ್ಮ physica lecturer ನ music....ಪೇಜಾವರ ಮತ್ತು ಸುಭ್ರಮಣ್ಯ ಶ್ರೀಗಳ ಆಶೀರ್ವಚನ... ....ಎಂದೂ ಮಾತಾಡಿಸದ ನಮ್ಮ ಕ್ಲಾಸ್ ಮೇಟ್ ಹುಡುಗಿಯರು.... ಕಾಲೇಜು ಡೇ ಗೆ ನಡೆಯುತ್ತಿದ್ದ ಆಟೋಟಗಳು.... ಕಲಾ ಮತ್ತು ನಮ್ಮ ವಿಜ್ಞಾನ ವಿಭಾಗದ ನಡುವೆ ನಡೆಯುತ್ತಿದ್ದ ಜಗಳಗಳು....ನಂತರ ಗಲಾಟೆ ಮಾಡಿಕೊಂಡ ತಪ್ಪಿಗೆ ನಮ್ಮ ಇಡಿ ವಿಭಾಗವನ್ನು ಆ ವರ್ಷ ಎಲ್ಲಾ ಸ್ಪರ್ಧೆ ಗಳಿಂದ boycott ಮಾಡಿ,ನಂತರ ಪ್ರಾಂಶುಪಾಲರ ಹತ್ತಿರ ಒಪ್ಪಿಸಿ ಮತ್ತೆ ಸ್ಪರ್ಧೆಗೆ ಇಳಿದಿದ್ದು.....ಪಕ್ಕದ ತೋಟಗಳಿಗೆ ಗೇರು ಹಣ್ಣು ತಿನ್ನಲು ಹೋಗಿ,ಮಾಲಿಕನ ಬಳಿ ಸಿಕ್ಕಿ ಹಾಕಿಕೊಂಡು ಅವರು ಬೀಸಿದ ಕಲ್ಲಿನಿಂದ ತಪ್ಪಿಸಿ ಕೊಂಡು ಓಡೋಡಿ ಬಂದಿದ್ದು.... ತುಳು ಪ್ಲಾಸ್ಟಿಕ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿದ್ದರೆ,ಕಾಸರಗೋಡಿನ ನಮ್ಮ ಸ್ನೇಹಿತರು ಆಡುತ್ತಿದ್ದ ಮಲಯಾಳಂ ಸ್ಟೀಲ್ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ ಆಗುತ್ತಿತ್ತು.....ವಾರ ಗಟ್ಟಲೆ ನಡೆಯುತ್ತಿದ್ದ ದೇವಸ್ಥಾನದ ಜಾತ್ರೆ... ಮೊದಲ ಬಾರಿ ನಿದ್ದೆ ಗೆಟ್ಟು ನೋಡಿದ ಯಕ್ಷಗಾನ....ದಕ್ಷಿಣ ಕನ್ನಡ ವಿಶೇಷವಾದ ಹುಲಿ ವೇಷದ ಕುಣಿತ....ಜಾತ್ರೆಯ ಕೊನೆಯಲ್ಲಿ ಕೋಳಿ ಜಗಳ.... ಭಾಜಿ ಕಟ್ಟುತ್ತಿದ್ದ ಜನಗಳು....ಅರ್ಧಂಬರ್ಧ ಅರ್ಥ ಆದ ತುಳು ನಾಟಕಗಳು...ಹೆಸರು ಮರೆತು ಹೋಗಿವೆ...ಜಾತ್ರೆ ಬಂತು ಅಂದರೆ ನಮಗೆ ಸುಗ್ಗಿಯೋ ಸುಗ್ಗಿ... ಕೈಗೆ ಒಂದಿಷ್ಟು ದುಡ್ಡು ಕೊಡುತ್ತಿದ್ದರು(ತಿಂಗಳ ಬಿಲ್ಲಿನಲ್ಲಿ ಅದನ್ನು ಸೇರಿಸಿ ಮನೆಗೆ ಕಳುಹಿಸುತ್ತಿದ್ದರು).... ಜಾತ್ರೆಗೆ ಕೊಡುವ ದುಡ್ಡನ್ನು ೩೦ ರೂಪಾಯೀ ಇಂದ ೫೦ ರೂಪಯ್ಯೇ ವರೆಗೂ ಒಪ್ಪಿಸಲು ಆಫೀಸು ರೂಮಿನಲ್ಲಿ ಕಾಡಿ ಬೇಡಿದ್ದು....ಜಾತ್ರೆ ದಿನ ಆಮ್ಲೆಟ್ ಗಾಗಿ ಕಾಯುತ್ತಿದ್ದ ನಮ್ಮ ಕೆಲವು ಸ್ನೇಹಿತರು....ಅದನ್ನೇ ಚಿಕನ್ ತಿಂದಷ್ಟು ಖುಷಿಯಲ್ಲಿ ತಿನ್ನುತ್ತಿದ್ದರು...ನನ್ನಂಥ ಪುಳ್ಚಾರಿಗಳಿಗೆ ಐಸ್-ಕ್ರೀಂ ಮತ್ತು ಚುರುಮುರಿಯೇ ಗತಿ....
ಆಫೀಸು ರೂಮಿಗೆ ಮಾತ್ರ ಸೀಮಿತವಾಗಿದ್ದ TV ಯನ್ನು ಯಾವುದಾದರು ಕ್ರಿಕೆಟ್ ಮ್ಯಾಚ್ ಇದ್ದಾಗ ಕಾರಿಡಾರ್ ಗೆ ತರಿಸಿ ನೋಡುತ್ತಿದ್ದದ್ದು..ಎರಡನೇ ವರ್ಷಕ್ಕೆ ಬಂದಾಗ ಒಂದು ಹೊಸ TV ಅನ್ನು ನಮ್ಮ ಮೆಸ್ಸ್ ಗೆ ಇಟ್ಟು,ಅದೂ ಕೇವಲ ರಾತ್ರಿ ೮.೩೦ ರ DD 1 ರ ಇಂಗ್ಲೀಶ್ ಮತ್ತು ಹಿಂದಿ ನ್ಯೂಸ್ ನೋಡಲು ಅವಕಾಶ..ಬರುತ್ತಿದ್ದದ್ದು ಅದು ಒಂದೇ ಚಾನೆಲ್...ಮತ್ತೆ ಕ್ರಿಕೆಟ್ ಮ್ಯಾಚ್ ಇದ್ದಾಗ...
ಟ್ಯಾಂಕ್ ಹಿಂದೆ ಅಥವಾ ಯಾವುದೋ ಮರದ ಹಿಂದೆ ಕತ್ತಲಿನಲ್ಲಿ ನಿಂತು ಸ್ಟಡಿ ರೂಮಿನಲ್ಲಿ ನಿದ್ದೆ ಮಾಡುವವರನ್ನು ಹಿಡಿಯುತ್ತಿದ್ದ ನಮ್ಮ ಮ್ಯಾನೇಜರ್....ಸ್ಟಡಿ ಹವರ್ ನಲ್ಲಿ ಸ್ಟಡಿ ರೂಮಿನಲ್ಲಿ ನಿದ್ದೆ ಮಾಡಿ ಸಿಕ್ಕಿ ಬಿದ್ದ ಮೇಲೆ ಐದು ಐದು ಬಾರಿ,ಕೆಲವೊಮ್ಮೆ ಹತ್ತು ಹತ್ತು ಬಾರಿ ಬರೆಯುತ್ತಿದ್ದ Imposition ಗಳು...Imposition ಗೆ ಸಿಗುತ್ತಿದ್ದದ್ದು Physics ನ derivation ಗಳು,chemistry ಯ ಯಾವುದಾದರೂ acid preparation ಗಳು...Biology ಯ ಚಿತ್ರಗಳು...Maths ನ ಲೆಕ್ಕಗಳು...ಕೆಲವೊಮ್ಮೆ ನಮ್ಮ ಗ್ರೌಂಡ್ ನಲ್ಲಿ ೫ ಅಥವಾ ೧೦ ಸುತ್ತು ಓಡುವುದು....ರಾತ್ರಿ ಹತ್ತರ ನಂತರ ಓದುತ್ತಿದ್ದ(ನಮಗೆ ೯.೩೦ ಕ್ಕೆ ನಿದ್ರಾ ದೇವಿ ಒಲಿದು ಬಿಡುತ್ತಿದ್ದಳು..ಅದಕ್ಕಾಗಿ ಎಷ್ಟೋ ದಿನ imposition ಬರೆದಿದ್ದೇನೆ)ನಮ್ಮ ಕುಳ್ಳ ಶಾಸ್ತ್ರಿ.... ತನ್ನ ರಕ್ತ ಹೀರಿದ ಸೊಳ್ಳೆಗಳನ್ನು ಸಾಯಿಸಿ ಅವನ್ನೆಲ್ಲ ಒಂದು ಪೇಪರ್ ಗೆ ಅಂಟಿಸಿ ಹಿಡುತ್ತಿದ್ದ....ಅಲ್ಲದೆ ಮಧ್ಯ ರಾತ್ರಿಯಲ್ಲಿ ಕಾಲೇಜಿಗೆ ಹೋಗಿ ನಾವು ಬೆಳಗ್ಗೆ ಅದನ್ನು ಪರೆಶೀಲಿಸಲು ಏನಾದರು ಗುರುತು ಇಟ್ಟು ಬರುತ್ತಿದ್ದ ಪುಂಡ....ಕೆಲವೊಮ್ಮೆ ಬೇಗ ನಿದ್ರೆ ಬಂದರೆ ಸುಮ್ಮನೆ ತಲೆ ನೋವು,ಜ್ವರ ಅಂತ ಸುಳ್ಳು ಹೇಳಿ ಮಾತ್ರೆ ತೆಗೆದು ಕೊಂಡು,ಅದನ್ನು ಹೊರಗಡೆ ಬಂದ ಕೂಡಲೇ ಬಿಸಾಡಿ ಮಲಗುತ್ತಿದ್ದ ಉಪಾಯಗಳು....ಸಣ್ಣ ಪುಟ್ಟ ಜಗಳಗಳು..ಮತ್ತೆ ಹೊಂದಾಣಿಕೆ....ಎಲ್ಲರಿಗೂ ಒಂದೊಂದು ಅಡ್ಡ ಹೆಸರುಗಳು....
ಒಮ್ಮೆ ನಾವು ನಾಲ್ಕೈದು ಜನ ದೇವಸ್ಥಾನಕ್ಕೆ ಹೋಗಿ(with permission) ಅಲ್ಲಿಂದ ಹಾಗೆ ಯಾವುದೋ ದಾರಿ ಹಿಡಿದು ಗುಡ್ಡ ಎಲ್ಲಾ ಹಟ್ಟಿ,ಕೊನೆಗೆ ಬಂದ ದಾರಿ ಗೊತ್ತಾಗದೆ ಎಲ್ಲೆಲ್ಲೋ ಸುತ್ತಿ,ಕೊನೆಗೆ ಯಾರನ್ನೋ ಕೇಳಿಕೊಂಡು ಹಾಸ್ಟೆಲ್ ಸೇರಿದ್ದಾಯಿತು....ವಿಷಯ ಅಂದರೆ ನಾವು ಹೋಗಿದ್ದು ವಾರ್ಡನ್ ಗೆ ಗೊತ್ತಾಗಲಿಲ್ಲ..ಇಲ್ಲ ಅಂದಿದ್ರೆ ಅದೇ ಲೆಟರ್...ಮೊಬೈಲ್ ಇಟ್ಟುಕೊಳ್ಳಲು ಅವಕಾಶ ಇಲ್ಲದ ಪರಿಸ್ಥಿತಿಯಲ್ಲಿ ಮೊಬೈಲ್ ಇಟ್ಟಿಕೊಂಡು ಕರ್ತವ್ಯ ಲೋಪ ಹೆಸಗಿದ ಹಾಸ್ಟೆಲ್ ಲೀಡರ್ ನನ್ನು ಆ ಸ್ಥಾನದಿಂದ ಕೆಳಗಿಲಿಸಿದ್ದು(ಬೇಲಿಯೇ ಎದ್ದು ಹೊಲ ಮಯ್ದರೆ ಸರಿ ಇರಲ್ಲ ಅಲ್ವ ಅದಕ್ಕಾಗಿ)....
ವಾರಕ್ಕೆ ಒಂದು ರೂಮಿನವರು ಊಟ ಬಡಿಸುವ ವಿಧಾನ... ಒಮ್ಮೆ ಊಟ ಬಡಿಸುವಾಗ ಲುಂಗಿ ಉಡಲು ಬರದ ನಮ್ಮ ಪ್ರಜ್ವಲ್ ನ ಲುಂಗಿ ನಮ್ಮ ಮೆಸ್ ನಲ್ಲಿ ಜಾರಿ ಕೆಳಗೆ ಬಿದ್ದಿದ್ದು...ನಾನ್-ವೆಜ್ ತಿನ್ನುವ ಸಲುವಾಗಿ ಸ್ವಲ್ಪ ದೊಡ್ಡ ಕಾಯಿಲೆಗಳನ್ನು ಬರೆಸಿಕೊಲ್ಲುತ್ತಿದ್ದ ಇವನು ಪುತ್ತೂರು ಅಥವಾ ಉಪ್ಪಿನಂಗಡಿಗೆ ಹೋಗುತ್ತಿದ್ದ...ಸಣ್ಣ ಪುಟ್ಟ ಕಾಯಿಲೆ ಅಂದರೆ ಅಲ್ಲೇ ೨ ಕಿಮಿ ದೂರದ ಅತೂರಿಗೆ ಕಳುಹಿಸುತ್ತಿದ್ದರು ಅದಕ್ಕಾಗಿ....ಮನೆ ಇಂದ ಬಂದ ಕೂಡಲೇ ಅಲ್ಪ ಸ್ವಲ್ಪ ಚಿಲ್ಲರೆ ಕೊಟ್ಟು,ಬರುವಾಗ ಉಳಿದಿದ್ದು ಇಷ್ಟು,ನಮ್ಮ Personnal account ನಲ್ಲಿ ಇಡಿ ಅಂತ ಹೇಳಿ ನಮ್ಮ ಸಾಚಾತನವನ್ನು ತೋರಿಸುತ್ತಿದ್ದೆವು..ಆದ್ರೆ ಅಲ್ಲಿ ಇಲ್ಲಿ ಒಂದಿಷ್ಟು ದುಡ್ಡು ಇಟ್ಟಿಕೊಂಡು ಇರುತ್ತಿದ್ದೆವು...ಭಟ್ಟರ ಅಂಗಡಿಗೆ ಹೋಗಲು ಬೇಕಲ್ಲ...ಆ ದುಡ್ಡನ್ನು ದಿಂಬಿನ ಹೊಳಗೆ, ನಮ್ಮ Rack ಗಳ ಮೇಲೆ ಯಾವುದಾದರು ವೇಸ್ಟ್ ಡಬ್ಬದ ಹೊಳಗೆ ಅಥವಾ ಇನ್ನೆಲ್ಲೋ ಬಚ್ಚಿಡುತಿದ್ದೆವು...ಯಾವಾಗ IT ರೈಡ್ ಯಾಗುವುದು ಅಂತ ಹೇಳಕ್ಕೆ ಆಗುತಿರಲಿಲ್ಲ...
ಟ್ಯಾಂಕ್ ಕ್ಲೀನ್ ಮಾಡುವ ನೆಪದಲ್ಲಿ ಈಜು ಆಡುತ್ತಿದ್ದು....ಯಾರದೋ ಹಾಸಿಗೆ ಇಂದ ಅತ್ತಿದ ತಿಗಣೆ ಕಾಟ ತಾಳಲಾರದೆ ಎಲ್ಲಾ ಮಂಚಗಳನ್ನು ತೊಳೆದು ಅದಕ್ಕೆ DDT ಹಾಕಿ ತೊಳೆದು,ಕೊನೆಗೆ ಹಾಸಿಗೆಗಳನ್ನೇ ಬಿಸಾಡಿದ್ದು....ನಮ್ಮ Physics sir ನ ಟಾ೦ಟು ಗಳು, ಅವರ ಮದುವೆ ನಿಶ್ಚಯ ಆದಾಗ,ಪ್ರವೃತ್ತಿಯಲ್ಲಿ ಕೀ ಬೋರ್ಡ್ ವಾದಕರಾದ ಅವರಿಗೆ ನಿಮ್ಮ ಮಗು ಹುಟ್ಟುವಾಗಲೇ "ಸ ರೀ ಗ ಮ ಪ " ಅಂತ ಹೇಳುತ್ತದೆ ಅಂತ ಹೇಳಿ ತಿರುಗು ಬಾಣ ಬಿಟ್ಟಿದ್ದು...biology ಯ Human reproduction ಪಾಠ ನಡೆಯುವಾಗ ಕಿಸಕ್ಕನೆ ನಕ್ಕ ಒಬ್ಬ ಕ್ಲಾಸ್ ಮೇಟ್ ನನ್ನು ಬೈದು ಹೊರಗೆ ಕಳುಹಿಸಿದ್ದು...ಮುಖ್ಯವಾಗಿ ಹಾಸ್ಟೆಲ್ ವಿಧ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿ ತೋರಿಸಿದ,ನಮ್ಮನ್ನು ಅಷ್ಟೇ ಮಮತೆ ಇಂದ ನೋಡಿದ ಮತ್ತು ನಮ್ಮ ಆಟಗಳನ್ನು ಸಹಿಸಿಕೊಂಡು ಒಂದೂ ದಿನ ಬೇಜಾರು ಮಾಡಿಕೊಳ್ಳದ ನಮ್ಮ ಕ್ಲಾಸ್ ಟೀಚರ್ ಆದ ನಮ್ಮ maths ಮೇಡಂ...ಸ್ವಲ್ಪ ಸ್ಟ್ರಿಕ್ಟ್ ಇಂದ ನೋಡಿಕೊಂಡು ನಮ್ಮನ್ನು ಸ್ವಲ್ಪ ಹತೋಟಿಯಲ್ಲಿ ಇಟ್ಟಿಕೊಂಡಿದ್ದ ನಮ್ಮ chemistry ಸರ್ ಮತ್ತು ಅವರೇ ನಮ್ಮ ವಾರ್ಡನ್ ಕೂಡ....ಎರಡನೆ ವರ್ಷೆ ಅವರು ಬಿಟ್ಟು ಹೋಗಿ ಬೇರೆ ಉಪನ್ಯಾಸಕರೆ ಇಲ್ಲದೆ ಇದ್ದಾಗ ಬೇರೆ ಕಾಲೇಜಿನ ಒಬ್ಬರು ನಮಗೆ ಬಂದು ಪಾಠ ಮಾಡುತ್ತಿದ್ದರು...ಜಪಾನ್ ನ ರೈತ Fukuoka ಬಗ್ಗೆ ಇದ್ದ ಪಾಟವನ್ನು ಬಹಳ ಮೆಚ್ಹುಗೆ ಇಂದ ಮಾಡುತ್ತಿದ್ದ ನಮ್ಮ ಇಂಗ್ಲಿಷ್ ಉಪನ್ಯಾಸಕರಿಗೆ ನಮ್ಮ ಸೀನಿಯರ್ಸ್ ಅದೇ ಅಡ್ಡ ಹೆಸರು ಇಟ್ಟಿದ್ದರು....

ಸ್ವತಂತ್ರ ದಿನ ಸಲುವಾಗಿ ನಡೆಯುವ 'ಸೃಜನ' ಕಾರ್ಯಕ್ರಮದಲ್ಲಿ ಇವರು ಹಾಡಿದ್ದ 'ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ....' ಹಾಡು.... ಬಹಳ ಸುಲಲಿತವಾಗಿ ವಿವರಿಸುತ್ತಿದ್ದ ಕನ್ನಡ ಉಪನ್ಯಾಸಕರು...ಇವರು ಭೋದಿಸಿದ ಯಯಾತಿ ನಾಟಕ....ಉತ್ತಮ ವಾಗ್ಮಿಗಳು ಕೂಡ...ಇವರುಗಳ ಒಡನಾಟ ಪಡೆದದಕ್ಕೆ ಧನ್ಯೋಸ್ಮಿ !!!
ಎಲ್ಲಾ ವಿಷಯಗಳನ್ನು ಚಾಡಿ ಹೇಳಿ ಎಷ್ಟೋ apology ಲೆಟರ್ ಮತ್ತು ಸಹಿ ಗಳಿಗೆ ಕಾರಣನಾದ ಒಬ್ಬನಿಗೆ ಕರೆಂಟ್ ಹೋದಾಗ ,ಮೊದಲೇ ಜನರೇಟರ್ ಅನ್ನು ಸ್ವಲ್ಪ ಲೇಟ್ ಆಗಿ ಸ್ಟಾರ್ಟ್ ಮಾಡಲು ತೀರ್ಮಾನಿಸಿ ,ಬೆಡ್ ಶೀಟ್ ಮುಚ್ಚಿ ಧರ್ಮದೇಟು ಕೊಟ್ಟು ಕೊನೆಗೆ ತಮಾಷೆಗೆ ಎಂದಿದ್ದು...ಆದರೂ ಬುದ್ಧಿ ಬರಲಿಲ್ಲ ಅವನಿಗೆ....
ಹಾಸ್ಟೆಲ್ ಡೇ ಕೆಲವು ಸ್ಪರ್ಧೆಗಳು..ಅದರಲ್ಲಿ ಬೆಳಗ್ಗೆ ಬೆಳಗ್ಗೆ ನೀರು ಕುಡಿಯುವ ಸ್ಪರ್ಧೆ ಕೂಡ ಒಂದು....ನೀರು ಕುಡಿದು ಒಂದು ನಿಮಿಷ ವಾಂತಿ ಮಾಡುವ ಹಾಗಿಲ್ಲ...
ಒಬ್ಬನ ವಾಚ್ ಕದ್ದು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಅದನ್ನು ಟಾಯ್ಲೆಟ್ ಗೆ ಬಿಸಾಕಿ ಕೊನೆಗೂ ಸಿಕ್ಕಿ ಬಿದ್ದ ಅವನ ಮನೆ ಇಂದ ಕರೆಸಿ ಬುದ್ಧಿ ಹೇಳಿದ ವಾರ್ಡನ್....
ಕೆಲವು ಸಿಟಿ ಹುಡುಗರಿಗೆ ಇತ್ತ ಲುಂಗಿ ಉಡಲು ಬರಲ್ಲ,ಪ್ಯಾಂಟ್ ಹಾಕಬೇಕಂದ್ರೆ ಒಂದು ಥರಾ ಹಿಂಸೆ,ಜೊತೆಗೆ ಬರ್ಮುಡಾ ಹಾಕಿಕೊಳ್ಳುವ ಹಾಗಿಲ್ಲದ ನಮ್ಮ ರೂಲ್ಸ್ ,ಅಂತ ನಮ್ಮ ಸ್ನೇಹಿತರು ಒಳಗೆ ಬರ್ಮುಡಾ ಚಡ್ಡಿ ಹಾಕಿಕೊಂಡು,ಹೇಗ್ ಬೇಕೋ ಹಾಕಿ ಪಂಚೆ ಸುತ್ತಿಕೊಂಡು ನಡೆಯುವಾಗ ಕೆಳಗೆ ಬಿಳುತ್ತಿದ್ದರು....
ಧನುರ್ ಮಾಸದಲ್ಲಿ ಬೆಳಗ್ಗೆ ಆ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ದೇವಸ್ಥಾನದ ಮಹಾ ಮಂಗಳಾರತಿಗೆ ಹೋಗುತ್ತಿದ್ದ ನಮ್ಮ ಭಕ್ತಿ....
ಪ್ರದೀಪ ಎಂದು ಕೂಗಿದ ಹೆಸರನ್ನು ಪ್ರತಿಭಾ ಎಂದು ತಪ್ಪು ತಿಳಿದು ,ಆ ಹುಡುಗಿ ಕಂಪ್ಲೇಂಟ್ ಕೊಟ್ಟು,"ನೀವು ಇಲ್ಲಿ ಅಷ್ಟೂ ದೂರದಿಂದ ಓದಕ್ಕೆ ಬಂದಿದ್ದಿರ,ಒಳ್ಳೆ ಮಾರ್ಕ್ಸ್ ಮತ್ತು ಹೆಸರು ತಗೊಂಡ್ ಹೋಗಿ,ಅದೂ ಬಿಟ್ಟು ಲವ್ ಅಂತ ಸುತ್ತಾಡಿದರೆ ಹೇಳಿ,ಮದುವೆ ಕೂಡ ಇಲ್ಲೇ ಮಾಡಿ ಕಳುಹಿಸುತ್ತೇವೆ"ಅಂತ ಮೀಟಿಂಗ್ ನಲ್ಲಿ ಹೇಳಿದ್ದು....
ಯಾರೋ ಪುಣ್ಯಾತ್ಮ ಕೊಡದು ಕೊಟ್ಟ,೪ ಅಥವಾ ೫ kg ಕೊಡ್ತಾರೆ,ಅದೂ ಬಿಟ್ಟು ಬರೋಬ್ಬರಿ ೨ ಚೀಲ ತೊಂಡೆ ಕಾಯಿ ಕೊಟ್ಟಿದ್ದ,೪ ದಿನ ಮಧ್ಯಾನ ಸಾರು,ರಾತ್ರಿ ಸಾರು,ಪಲ್ಯ ಎಲ್ಲಾ ತೊಂಡೆ ಕಾಯಿಂದೆ....ಕೊನೆಗೆ ಬೇಸತ್ತು ಅವರೇ ಅದನ್ನು ಮಾಡುವುದನ್ನು ಕಡಿಮೆ ಮಾಡಿಬಿಟ್ಟರು...
ಇಂಥ ಹಾಸ್ಟೆಲ್ನಲ್ಲಿ ೨ ವರ್ಷ ಮನೆ ಇಂದ,ಮನೆಯವರಿಂದ ದೂರ ಇದ್ದ ನಾವುಗಳು ಇಂಥ ಹತ್ತು ಹಲವಾರು ನೆನಪುಗಳನ್ನು ಹೊತ್ತು ಕಳೆದ ವಾರ ಭೇಟಿ ಮಾಡಿ ಮತ್ತೆ ಈ ನೆನಪುಗಳನ್ನು ಮೆಲುಕು ಹಾಕುತ್ತಾ,ಅಲ್ಲಿ ಇಲ್ಲಿ ಸುತ್ತಾಡಿ,ಆ ದಿನಗಳ ಹಾಗೆ ರಾಜಕೀಯ,ಕ್ರೀಡೆ,ಸಿನೆಮಾ ಹೀಗೆ ಹಲವಾರು ವಿಷಯಗಳ ಚರ್ಚೆ,ಜೊತೆಗೆ ಕಾಲೇಜು ಬಿಟ್ಟ ಮೇಲೆ ನಮ್ಮ ಜೀವನ ಸಾಗಿದ ಪಥ,ಕೆಲವರು ಬೇರೆ ದೇಶಕ್ಕೆ ಹೋಗಿ ಬಂದ ಅನುಭವಗಳು,ಕೆಲವರು ನಂತರ ಕಾಲೇಜು ಬಿಟ್ಟು ಬಿಸಿನೆಸ್ ಶುರು ಮಾಡಿದ್ದು,ಕೆಲವರು ನಂತರ ಕಾಲೇಜಿನಲ್ಲಿ ಆದ ಅವರ ವಿಫಲ ಪ್ರೇಮ ಕಥೆಗಳು,ಹುಡುಗಿ ಕೈ ಕೊಟ್ಟು ಹೋದ ಮೇಲೆ ಸ್ವಲ್ಪ ದಿನ ಹದ ಗೆಟ್ಟಿದ್ದ ಜೀವನ,ಕೆಲಸ ಸಿಗದೆ ಅಲೆದ ದಿನಗಳು,ಹೀಗೆ ಎಷ್ಟೋ ವಿಷಯಗಳನ್ನು ಮಾತಾಡಿ ಹಳೆ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೊನೆಗೆ ಭರ್ಜರಿ ಪಾರ್ಟಿ ಮಾಡಿ,ಮಧ್ಯ ರಾತ್ರಿ ೪.೦೦ ಘಂಟೆ ವರೆಗೆ ಮೈಸೂರು ರಸ್ತೆಯಲ್ಲಿ ಬೈಕ್ ಗಳಲ್ಲಿ ಸುತ್ತಾಡಿ ಒಟ್ಟಾರೆ ಮಸ್ತ್ ಎಂಜಾಯ್ ಮಾಡಿದ್ವಿ....
ಇಷ್ಟೆಲ್ಲಾ ನೆನಪುಗಳು ಮರುಕಳಿಸುವುದಕ್ಕೆ ಕಾರಣವಾಗಿದ್ದು ಮಂಗಳೂರು,ಮುಂಬಯಿ,ಮಂಡ್ಯ,ಚಿಕ್ಕಬಳ್ಳಾಪುರ,ಚೆನ್ನೈ ಇಂದ ಬಂದಿದ್ದ ನಮ್ಮ ಸ್ನೇಹಿತರು,ಕೆಲವರು ಕಾರಣಾಂತರಗಳಿಂದ ಬರಲಿಲ್ಲ...ಈ ಒಂದು ದಿನವನ್ನು ಮಿಸ್ ಮಾಡಿಕೊಂಡರು..ಇದಕ್ಕೂ ಮುಂಚೆ ಎಷ್ಟೋ ಬಾರಿ ಭೇಟಿ ಆಗಿದ್ದೇವೆ ಆದರೂ,ಇಷ್ಟೊಂದು ಜನ ಒಟ್ಟಿಗೆ ಸೇರಿದ್ದು ಬಹುಶಃ ಕಾಲೇಜು ಬಿಟ್ಟ ಮೇಲೆ ಇದೆ ಮೊದಲು....

ರಾಮಕುಂಜದಲ್ಲಿ ಕಳೆದೆ ದಿನಗಳ ನೆನಪುಗಳು ಅಚ್ಚಳಿಯದ ಹಾಗೆ ಇನ್ನು ಹಚ್ಹ ಹಸುರಾಗಿದೆ....ಇದು ನನ್ನ ಜೀವನದಲ್ಲಿ ಬಹಳ ದೊಡ್ಡ ತಿರುವು ಕೊಟ್ಟ ಸ್ಥಳ... ಜೀವನದ ಎಷ್ಟೋ ಬಹು ಮುಖ್ಯ ಪಾಠಗಳನ್ನು ಹೇಳಿಕೊಟ್ಟಿದೆ....ಸಾಮಾಜಿಕವಾಗಿ ಬಹಳ ವಿಷಯಗಳನ್ನು ತಿಳಿಸಿದೆ.... ಎಂದೂ ಮರೆಯಲಾಗದ ದಿನಗಳು ಅವು....
ನಮ್ಮ ಹಾಸ್ಟೆಲ್ ಮತ್ತು ಸುತ್ತಮುತ್ತಲ ಪ್ರದೇಶಗಳ ಒಂದು ಕಿರು ನೋಟ ..... ಈ ಲಿಂಕ್ ನಲ್ಲಿದೆ....

Monday, September 5, 2011

ಜೀವನ ಒಂದು ಆಯ್ಕೆ !!!

ಟ್ರೈನು ಸಕಲೇಶಪುರ ದಾಟಿ ಶಿರಾಡಿ ಘಾಟಿನಲ್ಲಿ ಸಾಗುತ್ತಿದೆ...ಕಿಡಕಿ ಬದಿಯ ಸೀಟಿನಲ್ಲಿ ಕೂತು ಪ್ರಕೃತಿಯ ವಿಹಂಗಮ ನೋಟವನ್ನು ನೋಡುತ್ತಾ,ಹಸಿರು ಸೊಬಗನ್ನು ಅನುಭವಿಸುತ್ತಾ ಕಣ್ಣಿನಲ್ಲೇ ಎಲ್ಲವನ್ನೂ ಸೆರೆ ಹಿಡಿಯುತ್ತ ರೈಲಿನ ಜೊತೆ
ನಿಧಾನವಾಗಿ ಸಾಗುತ್ತಿದ್ದೇನೆ...ಪಕ್ಕದಲ್ಲೇ ಒಂದು ಗೆಳೆಯರ ಗುಂಪು.ಒಂದಷ್ಟು ಜನ ಹುಡುಗರು, ಒಂದಿಷ್ಟು ಹುಡುಗಿಯರು..,ಅವರು ಕೂಡ ನನ್ನ ಹಾಗೆ ಟ್ರಿಪ್ ಹೋಗುತ್ತಿರಬಹುದು,ಆದರೆ ನಾನು ಒಬ್ಬನೇ,ಅವರು ಗುಂಪಿನಲ್ಲಿದ್ದಾರೆ...

ಸ್ವಲ್ಪ ಸಮಯದ ನಂತರ ಒಬ್ಬ ಹುಡುಗ ಪಕ್ಕದಲ್ಲಿದ್ದ ಹುಡುಗಿಗೆ ಕೈ ಸಂಜ್ಞೆ ಮಾಡಿ ಕ್ಯಾಮೆರ ಹಿಡಿದು ಹೊರಟ,ಜೊತೆಯಲ್ಲಿ ಎಲ್ಲರೂ ಬಾಗಿಲ ಬಳಿ ಹೋದರು,ಕೊನೆಗೆ ಉಳಿದಿದ್ದು ಒಬ್ಬ ಹುಡುಗ ಮತ್ತು ಹುಡುಗಿ,ಎದುರು ಬದುರು ಸೀಟಿನಲ್ಲಿ...ಬೇರೆ ಯಾರೂ ಇಲ್ಲ...

"ಸುಷ್ಮಾ,ಒಂದು ಮಾತು ಕೇಳಲಾ ?"

"ಹಾ..ಕೇಳು "ಎಂದು ಹೇಳುವಂತೆ ಕಣ್ಣಲ್ಲೇ ಸಂಜ್ಞೆ ಮಾಡಿದಳು...

"ಅಲ್ಲ,ನಾನು ನಿನ್ನ ತುಂಬ ಇಷ್ಟ ಪಡ್ತೀನಿ,ನಾನು ನಿನ್ನನ್ನ ತುಂಬ ಪ್ರೀತಿಸ್ತೀನಿ,ನಾವಿಬ್ಬರು ಒಟ್ಟಿಗೆ ಬೆಳೆದಿದ್ದೇವೆ,ಆದರೆ ನೀನು ನನ್ನನ್ನ ಒಪ್ಪಿಕೊಳ್ಳಲೇ ಇಲ್ಲ ? ಅವನನ್ನು ಮದುವೆ ಆಗೋಕ್ಕೆ ಒಪ್ಪಿಕೊಂಡೆ " ಅಂತ ಮುಖ ಗಂಟು ಹಾಕಿಕೊಂಡೆ ಕೇಳಿದ.

"ನೋಡು ಅಜಯ್,ಒಬ್ಬ ಶಿಲ್ಪಿ ಒಂದು ದೇವಸ್ಥಾನ ಕಟ್ಟಬೇಕಾದರೆ ಒಂದೇ ಗುಡ್ಡದಿಂದ ಬಂಡೆಗಳನ್ನು ತರುತ್ತಾನೆ,ಆದರೆ ಅವನು ಅದರಲ್ಲಿ ಒಂದನ್ನು ಮಾತ್ರ ದೇವರ ವಿಗ್ರಹ ಮಾಡುವುದಕ್ಕೆ ಬಳಸಿಕೊಳುತ್ತಾನೆ.ಮಿಕ್ಕ ಕಲ್ಲುಗಳನ್ನು ಕಂಬ ಅಥವಾ ದೇವಸ್ಥಾನದ ಹೊರಗಡೆ ಮೆಟ್ಟಿಲು ಮಾಡುವುದಕ್ಕೆ ಉಪಯೋಗಿಸುತ್ತಾನೆ... ಆ ವಿಗ್ರಹ ಆಗೋ ಕಲ್ಲಿಗೆ ಅ ಪುಣ್ಯ ಇರುತ್ತೆ..ಅಷ್ಟೇ...ಅದೇ ತರಹ ಈ ವಿಷಯದಲ್ಲಿ ನಂದೂ ಆಯ್ಕೆ ಅಷ್ಟೇ !!!"

"ಹಾಗಾದ್ರೆ ನಾsssssssssssss... " 'ಮೆಟ್ಟಿಲಿಗೆ ಸಮಾನನ?' ಅಂತ ಅವನು ಹೇಳಿ ಮುಗಿಸುವ ಮೊದಲೇ,ಕತ್ತನ್ನು ಸಲ್ಪ ಎಡಕ್ಕೆ ಬಾಗಿಸಿ 'ಇರಬಹುದೇನೋ ?' ಎನ್ನೋ ಭಾವದಲ್ಲಿ ಮುಖ ಮಾಡಿದಳು...

ರೈಲು ಕಿಲೋ ಮೀಟರ್ ಉದ್ದದ ಸುರಂಗದೊಳಗೆ ಹೊಕ್ಕಿದೊಡನೆ ಭೋಗಿ ಒಳಗೆ ಕೂಡ ಕತ್ತಲು ಆವರಿಸಲು ಶುರು ಆಯಿತು,ಅದೇ ರೀತಿ ಅವನ ಭಾವದಲ್ಲಿ ಕೂಡ....

Monday, August 22, 2011

ಜೈಲು ... !!!

ಊರ ಹೊರಗಿನ ಹನುಮಪ್ಪನ ಗುಡಿ ದಾಟಿ ಸ್ವಲ್ಪ ಮುಂದೆ ಹೋದರೆ ಬಳೆಗಾರ ಶೆಟ್ಟರ ಕೆಂಗಾಡು ಹೊಲ...ಅಲ್ಲಿಂದ ಮುಂದೆ ಇರುವ ದಿಬ್ಬ ಹತ್ತಿ ಅಲ್ಲೇ ಪಕ್ಕದಲ್ಲೇ ಒಂದು ಎತ್ತಿನ ಗಾಡಿ ಹೋಗುವಷ್ಟು ಅಗಲವಾದ ಓಣಿ.. ಒಂದು ಫರ್ ಲಾಂಗ್ ಸಾಗಿದರೆ ಊರಿನವರೆಲ್ಲ ತಮ್ಮ ದನ ಕರುಗಳನ್ನು ಮೈ ತೊಳೆಯುವ ಚಿಕ್ಕದಾದ ಕಟ್ಟೆ ,ಅದರ ಹೆಸರು ಕೆಂಚನ ಕಟ್ಟೆ... ಕೆಲವು ಚಿಕ್ಕ ಮಕ್ಕಳು ಅಲ್ಲೇ ಈಜು ಆಡುತ್ತಾರೆ..ಅದೇಗೆ ಅದರಲ್ಲಿ ಬೀಳುತ್ತಾರೋ ಆ ಹನುಮಪ್ಪನೆ ಬಲ್ಲ.. ಪಕ್ಕದಲ್ಲೇ ಛೇರ್ಮನ್ ಮಲ್ಲೇಗೌಡರ ಜಮೀನು...ಇದು ಮುಂಚೆ ಗೋಮಾಳ ಆಗಿತ್ತಂತೆ... ಮಲ್ಲೇಗೌಡ ಛೇರ್ಮನ್ ಆದಮೇಲೆ ತನ್ನ ಹೆಸರಿಗೆ ಮಾಡಿಸಿಕೊಂಡ ಅಂತ ಉರವರೆಲ್ಲ ಹೇಳ್ತಾರೆ.... ಒಂದಾನೊಂದು ಕಾಲದ ಆ ಗೋಮಾಳ ಬಿಟ್ಟು ಮುಂದೆ ಹೋಗುತ್ತಾ ಎಡಗಡೆ ನೋಡಿದರೆ  ಮಾರಮ್ಮ ದೇವಸ್ಥಾನ ಇರುವ ಬೆಟ್ಟ. ದೇವಸ್ಥಾನ ದಿಂದ ಇನ್ನು ಮೇಲಕ್ಕೆ ಹೋದರೆ ಅದು ಕೋಡುಗಲ್ಲು .... ಆ ಗೋಮಾಳದಿಂದ ಮುಂದೆ ಹೋಗಿ ಅಲ್ಲೇ ಸ್ವಲ್ಪ ಎಡಗಡೆ,ಬೆಟ್ಟದ ಹಿಂದೆ ಬೆಸ್ತರ ಹಟ್ಟಿ ರಾಮಯ್ಯನ ಹೊಲ....

ರಾಮಯ್ಯ ತನ್ನ ವಂಶ ಪರಂಪರೆ ಅಂತೆ ಮೀನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದಾನೆ..ಜೊತೆಗೆ ಸ್ವಲ್ಪ ಜಮೀನು ಇದೆ,ಮಳೆಗಾಲದಲ್ಲಿ ಅದು ಇದು ಬೆಳೆ ತೆಗೆಯುತ್ತಾನೆ,ಜೊತೆಗೆ ೨ ಹಸು ಮತ್ತು ಒಂದು ಜೊತೆ ಎತ್ತು ಇದೆ....ತನ್ನ ಎತ್ತಿನಲ್ಲಿ ತನ್ನ ಜಮೀನು ಅಲ್ಲದೆ ಬೇರೆಯವರ ಹೊಲದಲ್ಲಿ ಬೇಸಾಯ ಮಾಡಿ ಕೂಲಿ ತೆಗೆದು ಕೊಂಡು ಹೇಗೋ  ಸಂಪಾದನೆ ಮಾಡಿ ತನ್ನ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಾನೆ... ಇವನ ಮನೆ ಇರುವುದು ಭೈರಾಪುರದ ಹೊರ ಭಾಗದಲ್ಲಿ,ಬೆಸ್ತರ ಹಟ್ಟಿ ಅಂತ ಕರೆಯಲ್ಪಡುವ ಒಂದು ಕಾಲೋನಿ... ಅಲ್ಲಿ ರಾಮಯ್ಯ ಬಿಟ್ಟರೆ ಇನ್ನು ಯಾರು ತಮ್ಮ ಪೂರ್ವಜರ ವೃತ್ತಿಯನ್ನು ನಡೆಸಿಕೊಂಡು ಬಂದಿಲ್ಲ...

ಅದು ಗುರುವಾರ...ಭೈರಾಪುರದಿಂದ ೪ ಕಿಮಿ ದೂರ ಇರುವ ಸಿಂಗನೂರಿನಲ್ಲಿ ವಾರದ ಸಂತೆ... ಬೇರೆ ದಿನ ಯಾರದಾದರೂ ತೋಟದಲ್ಲಿ ಕೂಲಿ ಹೋಗುವ ರಾಮಯ್ಯ ಗುರುವಾರ ಯಾವುದೇ ಕಾರಣಕ್ಕೂ ಹೋಗಲ್ಲ...ಅವತ್ತು ಸಂತೆಗೆ ಬೆಳ್ಳಗೆ ಬೇಗನೆ ಎದ್ದು  ಮೀನು ಮಾರಲು ಹೋಗುತ್ತಾನೆ.... ತನ್ನ ವ್ಯಾಪಾರ ವಹಿವಾಟು ಮುಗಿದ ಮೇಲೆ ತನ್ನ ಹೆಂಡತಿಗೆ ದುಡ್ಡು ಕೊಟ್ಟು ಸಂತೆ ಮಾಡಲು ಕಳುಹಿಸುತ್ತಾನೆ.... ಹೆಣ್ಣು ಮಕ್ಕಳೇ ಸಂತೆ ಮಾಡಿದರೆ ಸರಿ,ಮನೆಗೆ ಏನೇನ್ ಬೇಕೋ ಅವರಿಗೆ ಚೆನ್ನಾಗಿ ಗೊತ್ತಿರದು ಅಲ್ವೇ?.ರಾಮಯ್ಯನ ಹೆಂಡತಿ ಪುಟ್ಟವ್ವ ಪ್ರತಿ ವಾರ ಮಧ್ಯಾನದ ವೇಳೆಗೆ ಅಕ್ಕ ಪಕ್ಕದ ಮನೆಯ ಹೆಣ್ಣು ಮಕ್ಕಳೊಂದಿಗೆ ಜೊತೆ ಗೂಡಿ ಸಂತೆ ಮಾಡಲು ನಡೆದೇ ಹೋಗುತ್ತಾರೆ....

ಅವತ್ತು ಮಾತ್ರ ತನಗೆ ಗ್ರಾಮ ಲೆಕ್ಕಾಧಿಕಾರಿ  ಹತ್ತಿರ ತನ್ನ ಜಮೀನಿಗೆ  ಸಂಭಂದ ಪಟ್ಟ ಕೆಲಸ ಇದ್ದರಿಂದ ಮತ್ತು ಆ ಪುಣ್ಯಾತ್ಮ ವಾರಕ್ಕೆ ಒಂದೇ ದಿನ ಕೈಗೆ ಸಿಗುವುದರಿಂದ  ಅವತ್ತೇ ಆ ಕೆಲಸ ಮಾಡಿಸಿ ಕೊಳ್ಳಬೇಕಿತ್ತು  ... ಸಂತೆ ಬೇರೆ,ತುಂಬ ಜನ ಇರುತ್ತಾರೆ,ಎಷ್ಟೊತ್ತು ಆಗುತ್ತೋ ಏನೋ ಎಂದು ತಿಳಿದು ತನ್ನ ಹೆಂಡತಿಗೆ ಇವತ್ತು ಪೇಟೆಯಲ್ಲಿ ನನಗೆ ಸ್ವಲ್ಪ ಕೆಲಸ ಇದೆ,ನಾನು ಬರುವುದು  ಲೇಟ್ ಆಗಬಹುದು...ನೀನು ಹಸುಗಳನ್ನು ಮೇಯಿಸುತ್ತಿರು,ಹಂಗೆ ಏನೇನ್ ತರ್ಬೇಕೋ ಒಂದು ಚೀಟಿ ಬರೆದು ಕೋಡು...ಇವತ್ತು ನಾನೇ ಸಂತೆ ಮಾಡ್ಕಂಡ್ ಬರುತ್ತೀನಿ ಅಂತ ಹೇಳಿ ಚೀಟಿ ತೆಗೆದು ಕೊಂಡು ಮೀನು ಮಾರಲು ಹೋದ...ಹೀಗೆ ಯಾವುದೇ ರೀತಿಯ ಅನುಮಾನ ಪಡದೆ  ಹೇಳಿ ಹೋದ ರಾಮಯ್ಯನಿಗೆ  ತಾನು ಅಕಸ್ಮಾತ್ ಬೇಗ ಬಂದರೆ ತನ್ನ ಹೆಂಡತಿಯ ಇನ್ನೊಂದು ಮುಖ ತಿಳಿಯುತ್ತದೆ ಎಂದು ಭಾವಿಸಿರಲಿಲ್ಲ...

ಜೆಲೇಬಿ ಮೀನು,ಹಾವು  ಮೀನು,ಕಾಟ್ಲ, ಮೀಸೆ ಮೀನು,ಗೆಂಡೆ ಮೆನು  ಎಲ್ಲವನ್ನು ಮಾರಿ ಆ ಗ್ರಾಮ ಲೆಕ್ಕಿಗನಿಗೆ ಹಂಗೆ ಒಂದು ಗಾಂಧೀ ಪೇಪರ್ ಕೊಟ್ಟು ತನ್ನ ಕೆಲಸವನ್ನು ಸ್ವಲ್ಪ ಸಲೀಸಾಗಿ ಮತ್ತು  ಬೇಗ  ಮುಗಿಸಿಕೊಂಡು,ಹೇಗೂ ಇನ್ನೂ ಸಮಯ ಇದೆ ,ಅವಳೇ ಸಂತೆ ಮಾಡಿದರೆ ಸರಿ,ಆಮೇಲೆ ಸುಮ್ನೆ ಅದು ತಂದಿಲ್ಲ,ಇದು ಬೇಡವಾಗಿತ್ತು ಅಂತ ರಗಳೆ ಯಾಕೆ,ಅವಳನ್ನೇ ಕಳಿಸಿದರಾಯಿತು ಅಂತ ಹಾಗೆ ಸ್ವಾರ್ಣಲೋಕ ಬಾರ್  ಕಡೆ ಹೆಜ್ಜೆ ಹಾಕಿ ಸಂಜೆಗೆ ಮೀನಿನ ಫ್ರೈ ಜೊತೆ ಬೇಕಾಗುತ್ತೆ ಅಂತ ಎರಡು ಕ್ವಾಟರ್ MC ವಿಸ್ಕಿ ತೆಗೆದು ಕೊಂಡು ಮೀನು ತಂದಿದ್ದ ಕುಕ್ಕೆಯಲ್ಲಿದ್ದ ತಕ್ಕಡಿಯಲ್ಲಿಟ್ಟು ಮನೆ ಕಡೆ ಹೊರಟ....ಬೇರೆ ದಿನ ಪ್ಯಾಕೆಟ್ ಸಾರಾಯಿ ಕುಡಿಯವ ರಾಮಯ್ಯ ಮೀನಿನ ವ್ಯಾಪಾರ ಜೋರಾಗಿತ್ತು ಅನ್ಸುತ್ತೆ ಅವತ್ತು ಮಾತ್ರ ಬಾರಿಗೆ ಹೋಗಿ ವಿಸ್ಕಿ ಕೊಂಡ.... ಜೇಬಲ್ಲಿ ದುಡ್ಡಿದ್ದರೆ ತೂಕ ಅಲ್ವ? ಅಲ್ಲದೆ ದುಡ್ಡು  ಜೇಬಲ್ಲಿ ಕುಣಿಯುತ್ತೆ ಬೇರೆ....

ಇತ್ತ ಪುಟ್ಟವ್ವ ಹಾಲು ಕರೆದು ಡೈರಿಗೆ ಹಾಕಿ ಬಂದು ಮಕ್ಕಳಿಗೆ ತಿಂಡಿ ಮಾಡಿ ಕೊಟ್ಟು ಅವರನ್ನು ಶಾಲೆಗೆ ಕಳಿಸಿ ಹೇಗೂ ಇವರೇ ಸಂತೆ ಮಾಡ್ಕೊಂಡು ಬರುತ್ತಾರೆ,ಹೊಲ ಬೇರೆ ಅಷ್ಟೂ ದೂರ ಅಂತ ಮಧ್ಯಾನಕ್ಕೆ  ಬುಟ್ಟಿ ಕಟ್ಟಿಕೊಂಡು   ಹಸುಗಳನ್ನು ಮೇಯಿಸುವುದಕ್ಕೆ  ಹೋಗಿದ್ದಾಳೆ....

ಇತ್ತ  ರಾಮಯ್ಯ ಮನೆಗೆ ಬಂದವನೇ ತಂದಿದ್ದ ಬಾಟಲಿಗಳನ್ನು ಅಟ್ಟದ ಮೇಲಿಟ್ಟು ಹೆಂಡತಿಯನ್ನು ಸಂತೆಗೆ ಕಳುಹಿಸುವ ಸಲುವಾಗಿ  ಹೊಲದ ಕಡೆ ಹೆಜ್ಜೆ ಹಾಕ ತೊಡಗಿದ...ತನ್ನ ಹೊಲದಲ್ಲಿ ಮಧ್ಯದಲ್ಲಿ ತೆಂಗಿನ ಗರಿ ಇಂದ ಒಂದು ಸಣ್ಣ ಗುಡಿಸಲು ಕಟ್ಟಿದ್ದಾನೆ,ಇಟ್ಟಿಗೆ ಇಂದ ಕಟ್ಟಿಸುವಷ್ಟು  ಶಕ್ತನಲ್ಲ ಹಾಗಾಗಿ...ಸೀದಾ ಬಂದವನೇ ಅತ್ತಿತ್ತ ಕಣ್ಣಾಯಿಸಿ ಹಸುಗಳನ್ನು ಕಟ್ಟಿದ್ದ
ಜಾಗಕ್ಕೆ ಹೋಗಿ,ಮತ್ತೊಮ್ಮೆ ಜೋಳದ ಮೇವು ಕೂಯ್ದು ಅವುಗಳಿಗೆ ಹಾಕಿ ಹೆಂಡತಿಯನ್ನು ಹುಡುಕಿದ,ಬಹುಷಃ ಗುಡಿಸಿಲಿನಲ್ಲಿ ಇರಬಹುದು ಎಂದು ಅತ್ತ ಹೊರಟ.... ಮಾರಮ್ಮ ಬೆಟ್ಟದ ಕೋಡುಗಲ್ಲಿನ ಮೇಲೆ ಇರುವ ಬೃಹದಾಕಾರದ ಒಂದು ಬಂಡೆ,ಚಿಕ್ಕವನಾಗಿದ್ದಾಗಿಂದಲೂ ಅದು ಹೇಗೆ ಪುಟ್ಟ ಪುಟ್ಟ ಬಂಡೆಗಳ ಮೇಲೆ ಕೂತಿದೆ ಎಂದು ಯೋಚಿಸುತ್ತಿದ್ದ ರಾಮಯ್ಯನಿಗೆ ಆ ದೊಡ್ಡ ಬಂಡೆ ಸೀದಾ ತನ್ನ ಮೇಲೆ ಉರುಳುತ್ತಿರುವಂತೆ ಭಾಸವಾಯಿತು....

 ತನ್ನ ಹೊಲದ ಪಕ್ಕದಲ್ಲೇ ಕಬ್ಬಿನ ಗದ್ದೆ ಮತ್ತು ಬಾಳೆ ತೋಟ,ಅಲ್ಲಿಂದ ಮುಂದೆ ಹೋದರೆ ಚೋಮನ ದೇವರ ಗುಡಿ ಇರುವ ಒಂದು  ಗುತ್ತಿ,ಅಲ್ಲೇ ಮುಂದೆ ಸಾಗಿದರೆ ಸಿಗುವ ಕಾಗೆ ಹಳ್ಳ ದಾಟಿ ಅರ್ಧ ಮೈಲಿ ಹೋದರೆ ೨೦ ಮನೆ ಇರುವ  ಕುಂಚನಗೆರೆ ಗ್ರಾಮ....ಆ ಕಬ್ಬಿನ ಗದ್ದೆ ಮತ್ತು ಬಾಳೆ ತೋಟ ಆ ಕುಂಚನಗೆರೆ ಪಟೇಲರ ಎರಡನೇ ಮಗ ಸಿದ್ದೇಗೌಡನಿಗೆ ಸೇರಿದ್ದು....ರಾಮಯ್ಯ ಬಲಕ್ಕೆ ಒಮ್ಮೆ ಕಣ್ಣಾಯಿಸಿ ನೋಡಿದಾಗ ಅಲ್ಲೇ ಒಂದು ಬುಲ್ಲೆಟ್ ಕಂಡಿತು,ಅದು ಸಿದ್ದೆಗೌಡನದ್ದು...ಸುತ್ತ ಎಂಟಳ್ಳಿಯಲ್ಲಿ ಇವನ ಹತ್ತಿರ ಬಿಟ್ಟರೆ ಬೇರೆ ಯಾರ ಹತ್ತಿರವೂ ಈ ಬೈಕು ಇಲ್ಲ....

ಗುಡಿಸಲಿನ ಮುಂದೆ ಎರಡು ಜೊತೆ ಚಪ್ಪಲಿಗಳನ್ನು ಕಂಡಾಗ ರಾಮಯ್ಯನಿಗೆ ದಿಗಿಲು ಬಡಿದಂತಾಯಿತು ...
ಸಿದ್ದೇಗೌಡನಿಗೆ ಮೀನು ತಿನ್ನುವ ಚಪಲ,ತನ್ನ ಮನೆಯಲ್ಲಿ ಪಕ್ಕಾ ಸಸ್ಯಾಹಾರಿ,ಬಹುಷಃ ಇವನಿಗೆ ಮಾಂಸ ತಿನ್ನುವ ಚಟ ಇದೆ ಅಂತ ತಿಳಿದರೆ ಅವನನ್ನು ಮನೆಯಿಂದ ಹೊರ ಹಾಕುವುದಕ್ಕೂ ಯೋಚಿಸಲ್ಲ ಅವನ ತಾಯಿ...
ಆದ್ದರಿಂದ ಅವಾಗವಾಗ ತನ್ನ ತೋಟದ ಪಕ್ಕದಲ್ಲೇ ಇರುವ ರಾಮಯ್ಯನಿಗೆ ಹೇಳಿ ತರಿಸಿಕೊಳ್ಳುತ್ತಿದ್ದ..ಹೇಗೂ ಇವನು ಮೀನು ಹಿಡಿದು ಮಾರುತ್ತಾನೆ,ಬರೀ ತಂದು ಕೊಟ್ಟರೆ ಸಾಲದು,ಅವನಿಗೇನು ಅಡುಗೆ  ಮಾಡಕ್ಕೆ ಬರುತ್ತಾ ?,ಪುಟ್ಟವ್ವನೆ ಅದನ್ನು ಭೇಯಿಸಿ ತಂದು ಕೊಡುತ್ತಿದ್ದಳು...ರಾಮಯ್ಯ ಸಿದ್ದೇಗೌಡನ  ತೋಟಕ್ಕೂ  ಕೂಲಿ ಕೆಲ್ಸಕ್ಕೆ ಹೋಗುತ್ತಿದ್ದನಾದ್ದರಿಂದ ಅವನು ಇವನಿಗೆ ಹೇಳಿ ತರಿಸುತ್ತಿದ್ದ...

ಒಂದು ಕ್ಷಣ ಪಟೇಲರು ಮೀನು ತಿನ್ನುವುದಕ್ಕೆ ಬಂದಿರಬಹುದು ಎಂದು ತಿಳಿದರೂ ಕೂಡ , ಗುಡಿಸಲಿನ ಬಾಗಿಲು ಹಾಕಿದ್ದರಿಂದ ಅವನಿಗೆ ಅನುಮಾನ ಶುರು ಆಯಿತು...ಬಾಗಿಲು ಹಾಕಿದರೆ ಒಳಗಡೆ ಬೆಳಕು ಬರುವುದಿಲ್ಲ... ಅ ಕತ್ತಲಲ್ಲಿ ತಿನ್ನಲು ಸಾಧ್ಯವಿಲ್ಲ...
ಯಾಕೋ ಮನಸ್ಸಿಗೆ  ಒಂದು ರೀತಿ ಆಗಿ,ದುಡುಕಬಾರದು ಎಂದು ತಿಳಿದು ಸಂಜೆ ಮನೆಯಲ್ಲಿ ವಿಚಾರಿಸಿದರೆ ಆಗುತ್ತದೆ ಎಂದು ಸಂತೆ ಕಡೆ ಹೊರಟ....

ಹೆಂಡತಿಯ ಮೇಲೆ ವಿಪರೀತ ಕೋಪ ಇದ್ದ ರಾಮಯ್ಯ ಸಂತೆ ಇಂದ ಬರುವಾಗ ಕುಂಟ ರಾಜನ ಪೆಟ್ಟಿಗೆ ಅಂಗಡಿಯಲ್ಲಿ ಕಂಠ ಪೂರ್ತಿ ಕುಡಿದು ಬಂದ,ಮಕ್ಕಳಿಬ್ಬರೂ ಕೂಡ ಪ್ರತಿ ದಿನ ಇವನ ಅಣ್ಣನ ಮನೆಗೆ ಓದಿಕೊಳ್ಳಲು ಹೋಗುತ್ತಾರೆ....ಅಲ್ಲಿ ಅಣ್ಣನ ಮಗಳು ಇವರು ಪಾಠ ಹೇಳಿಕೊಡುವುದರಿಂದ ಅಲ್ಲಿಗೆ ಹೋಗುವ ಅಭ್ಯಾಸ...ಇವತ್ತು ರಾಮಯ್ಯ ಸಂತೆ ಇಂದ ಬರುವ ವೇಳೆಗೆ ಮಕ್ಕಳು ಆಗಲೇ ಅಲ್ಲಿಗೆ ಹೋಗಿದ್ದರು,ಬಂದವನೇ ಹೆಂಡತಿಯ ಹತ್ತಿರ ಹೇಗೆ ಮಾತು ಶುರು ಮಾಡುವುದು ಎಂದು ತಿಳಿಯದೆ ಚಿಂತಿಸ ತೊಡಗಿದ...ಸೀದಾ ಮನೆ ಹೊರಗಡೆ ಹೋದವನೇ ಒಂದು ದಡಿ ಕೋಲು ತಂದು ಅಡುಗೆ ಮನೆಯಲ್ಲಿ  ಒಲೆ ಅಚ್ಚುತ್ತಿದ ಪುಟ್ಟವ್ವನಿಗೆ ಒಡೆಯಲು ಶುರು ಮಾಡಿದ ...

ಅಯ್ಯಯ್ಯೋ,ದಮ್ಮಯ್ಯ ,ಯಾಕೆ ಹೊಡಿತಿದ್ದಿರ ಅಂತ ಕಿರುಚಿದರೂ ಇನ್ನು ತನ್ನ ಆಟವನ್ನು ನಿಲ್ಲಿಸಿಲ್ಲ...
'ನಾನು ಮಧ್ಯಾನ ಹೊಲಕ್ಕೆ ಬಂದಿದ್ದೆ,ಆ ಪಟೇಲ ಗುಡಿಸಿನಲ್ಲೇ  ಇದ್ದ ಅಲ್ವಾ?' ಅಂತ ಹೇಳಿದಾಗ, ಯಾರೋ ಬಂದು ಹಸುಗಳಿಗೆ ಮೇವು  ಹಾಕಿ ಹೋಗಿರುವುದು ನೆನಪಾಗಿ  ,ಇದು ತನ್ನ ಗಂಡನೇ ಎಂದು ತಿಳಿದು ಅವಳಿಗೆ ತನ್ನ ತಪ್ಪಿನ ಅರಿವಾಯಿತು...

ಅಷ್ಟೊತ್ತಿಗಾಗಲೇ ಪಕ್ಕದ ಮನೆಯಲ್ಲೇ ಇದ್ದ ತಮ್ಮ ಮಕ್ಕಳು ಮತ್ತು ಅಣ್ಣ ಅತ್ತಿಗೆ ಎಲ್ಲಾ ಅಲ್ಲಿಗೆ ಬಂದರು...ಆದರೆ ಯಾಕೆ ಜಗಳ ಮಾಡುತ್ತಿದ್ದೀವಿ ಎಂದು ರಾಮಯ್ಯ ಅಥವಾ ಪುಟ್ಟವ್ವ ಇಬ್ಬರೂ  ಹೇಳುವ ಸ್ಥಿತಿಯಲ್ಲಿ ಇರಲಿಲ್ಲ..
ಎಲ್ಲರೂ ಕುಡಿದು ಬಂದು ಜಗಳ ಮಾಡುತ್ತಿದ್ದಾನೆ ಎಂದು ಸುಮ್ಮನಾದರು...

ನಂತರ  ಮಕ್ಕಳಿಗೆ ಊಟ ಬಡಿಸಿ ಅವರು ಮಲಗಿದ ನಂತರ ಅಟ್ಟದ ಮೇಲಿದ್ದ ವಿಸ್ಕಿ ಬಾಟಲಿಗೆ ಕೋಸಿಗೆ ಸಿಂಪಡಿಸಲು ತಂದಿದ್ದ ಔಷಧಿ ಬೆರೆಸಿ  ಕುಡಿದು ಬಿಟ್ಟಳು...ಊಟ ಮಾಡದೆ ಮನೆಯ ಜಗುಲಿಯ ಮೇಲೆ ಮಲಗಿದ್ದ ರಾಮಯ್ಯನಿಗೆ ಇದರ ಅರಿವೇ ಇಲ್ಲ....
ಮಧ್ಯ ರಾತ್ರಿ ಇದ್ದಕಿದ್ದ ಹಾಗೆ ನೋವು  ತಡೆಯಲಾರದೆ ಅವಳು ಕಿರುಚಲು ಶುರು ಮಾಡಿದಾಗ ಒಳಗೆ ಬಂದು ನೋಡಿದರೆ ನೆಲದ ಮೇಲೆ ಹೊರಳಾಡುತ್ತಿದ್ದಾಳೆ,ಮತ್ತು ಅವಳ ಬಾಯಲ್ಲಿ ಒಂದು ರೀತಿಯ ರಸ ಸೋರುವುದನ್ನು ಗಮನಿಸಿ ಏನೋ ಅನಾವುತ ಮಾಡಿಕೊಂಡಿದ್ದಾಳೆ ಎಂದು ತಿಳಿದು ನಡು ರಾತ್ರಿಯಲ್ಲಿ ಎತ್ತಿನ ಗಾಡಿಯಲ್ಲಿ ಅವಳನ್ನು ಪೇಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದ...

ಬೆಳಗ್ಗೆ ಹೊತ್ತಿಗೆ ತನ್ನ ಅಣ್ಣ ಅತ್ತಿಗೆ ಮಕ್ಕಳು ಎಲ್ಲಾರಿಗೂ ವಿಷಯ ತಿಳಿದು ಎಲ್ಲಾ ಆಸ್ಪತ್ರೆಗೆ ಬಂದರು...ಪುಟ್ಟವ್ವನ ಸ್ಥಿತಿ ಆಗಲೇ ಗಂಭೀರ ಆಗಿತ್ತು...ಚಿಕಿತ್ಸೆ ಕೊಡುವ ಮೊದಲು ವೈದ್ಯರು ಒಂದು ಫಾರಂಗೆ ಇವನ ಬಳಿ ಸಹಿ ಪಡೆದಿದ್ದರು...ಇತ್ತ ರಾಮಯ್ಯನಿಗೂ ತನ್ನ ತಪ್ಪಿನ ಅರಿವಾಯಿತು...ಅವಳು ಬದುಕುವುದಿಲ್ಲ ಎಂದು ಖಾತರಿ ಆದ ಮೇಲೆ ಅಲ್ಲಿಂದ ಕಾಲು ಕಿತ್ತ...ಸ್ವಲ್ಪ ಸಮಯದಲ್ಲೇ
ಪುಟ್ಟವ್ವ ತೀರಿಕೊಂಡಳು....
ಸರಿ  ಅಷ್ಟೊತ್ತಿಗಾಗಲೇ ಅವನು ಪರಾರಿ ಆಗಿರುವ  ವಿಷಯ ಎಲ್ಲರಿಗೂ ತಿಳಿಯಿತು,ಅವನು ಬರುವುದಿಲ್ಲ ಎಂದು ತಿಳಿದು ಅವನ ಅಣ್ಣನೆ ಆಕೆಯ ಅಂತ್ಯ ಕ್ರಿಯೆ ಹೊಣೆ ಹೊತ್ತನು...ಅವಳ ಹೆಣವನ್ನು ಸುಡುವುದನ್ನು ರಾಮಯ್ಯ ಅದೇ ಕೋಡುಗಲ್ಲಿನ ದೊಡ್ಡ ಬಂಡೆಯ ಬಳಿ ನಿಂತು ಅಲ್ಲಿಂದ ನೋಡಿದ...೩-೪ ದಿನ ಅಲ್ಲಿ ಇಲ್ಲಿ ಸುತ್ತಾಡಿದ ಇವನು ,ತನ್ನ ಮಕ್ಕಳನ್ನು ನೆನೆದು ಮನೆಗೆ
ಹಿಂದಿರುಗಿದ,ಆದರೆ ಆಗಲೇ ಪೊಲೀಸರು ಇವನ ಹಿಂದೆ ಬಿದ್ದಿರುವುದು ಅವನಿಗೆ ತಿಳಿದೇ ಇರಲಿಲ್ಲ...

ಬಂದವನೇ ತನ್ನ ಸ್ನೇಹಿತ ರಂಗಯ್ಯನ ಹತ್ತಿರ ನಡೆದ ವಿಷ್ಯ ಎಲ್ಲಾ ಹೇಳಿದ್ದ,ರಂಗಯ್ಯನ ಮಗಳು ಮತ್ತು ಇವನ ಮಗಳು ಒಂದೇ ಕ್ಲಾಸ್ಸಿನಲ್ಲಿ ಓದುತ್ತಿದ್ದಾರೆ....ಪೊಲೀಸರಿಗೆ ಇವನು ಬಂದಿರುವ ಸುಳಿವು  ಸಿಕ್ಕೊಡನೆ ಇವನನ್ನು ಅರೆಸ್ಟ್ ಮಾಡಿದರು ಮತ್ತು ಕೋರ್ಟಿನಲ್ಲಿ ಇರಿಂಗ್  ನಡೆಯುತ್ತಿತ್ತು ,ಇವನು ಪೋಲಿಸ್ ವಶದಲಿದ್ದ...
ಇತ್ತ ಮಕ್ಕಳು ಅಣ್ಣನ ಮನೆಯಲ್ಲಿ ಇದ್ದಾರೆ ,ಅತ್ತಿಗೆಯೇ ಇವನ ಮಕ್ಕಳಿಂದ  ಪೊಲೀಸರಿಗೆ ದೂರು ಕೊಡೆಸಿದ್ದಳು.... ಏನು ಮಾಡುತ್ತಿದ್ದೇವೆ,ಇದರಿಂದ ತನ್ನ ತಂದೆ ಜೈಲಿಗೆ ಹೋಗುತ್ತಾರೆ ಎಂಬ ಸುಳಿವು ಸಿಗದ ಹಾಗೆ ಅವರಿಂದ ದೂರು ಕೊಡಿಸುತ್ತಾಳೆ....

ಈ ಮಕ್ಕಳಿಗೆ ಶಾಲೆಯಲ್ಲಿ ಒಂದು ರೀತಿಯ ಕಿರಿ ಕಿರು ಶುರು ಆಯಿತು....ಎಲ್ಲರೂ ನಿಮ್ಮಪ್ಪ ಜೈಲಲ್ಲಿ ಇದಾರಂತೆ,ನಿಮ್ಮ ಅಪ್ಪ,ನಿಮ್ಮ ಅಮ್ಮನ ಸಾಯ್ಸಿದರಂತೆ?ಹೀಗೆ ಕೇಳಲು ಶುರು ಮಾಡಿದರು... ಮಕ್ಕಳು ಅಳಲು  ಶುರು ಮಾಡಿದರು.... ಆಗ ರಂಗಯ್ಯನ ಮಗಳು ಮನೆಯಲ್ಲಿ  ಈ ವಿಷಯ ಹೇಳಿದಾಗ, ಎಲ್ಲಾ ವಿಷಯ ತಿಳಿದಿದ್ದ ರಂಗಯ್ಯ ಊರಿನ ಕೆಲವು ಮುಖಂಡರೊಡನೆ ಚರ್ಚಿಸಿ ,ಮಕ್ಕಳು ಓದುತ್ತಿದ್ದ ಶಾಲೆಯ ಮಾಸ್ತರು ಬಳಿ ವಿಷಯ ತಿಳಿಸಿ ರಾಮಯ್ಯನ ಮಕ್ಕಳಿಗೆ ತನ್ನ ತಂದೆಯ ತಪ್ಪಿಲ್ಲ ಮತ್ತು ಅವರು ಕೊಟ್ಟಿರುವ ದೂರನ್ನು ಹಿಂಪಡೆಯಲು  ಹೇಳಿ ಎಂದು ಹೇಳಿದ...ಅವನ ಅತ್ತಿಗೆಗೆ ಊರಿನವರೆಲ್ಲ ಇವನನ್ನು ಜೈಲಿನಿಂದ ಬಿಡಿಸಲು ಹೊಂಚು ಹಾಕುತ್ತಿದ್ದಾರೆ ಮತ್ತು ಮಕ್ಕಳ ಕಿವಿಗೆ  ಏನೇನೋ ತುಂಬುತ್ತಿದ್ದಾರೆ   ಎಂದು ತಿಳಿದು ಅವರನ್ನು ಶಾಲೆಗೇ ಕಳುಹಿಸುವುದನ್ನು ನಿಲ್ಲಿಸುತ್ತಾಳೆ..........

ಇತ್ತ ಮಕ್ಕಳಿಗೆ ತಾಯಿಯು ಸತ್ತಿದ್ದಾಳೆ,ಬದುಕಿರುವ ತಂದೆ ಜೈಲಿನಲ್ಲಿ  ಇದ್ದಾರೆ,ಒಂದು ರೀತಿಯಲ್ಲಿ ಮಾನಸಿಕೆ ಹಿಂಸೆ ಅಲ್ಲದೆ ತಮ್ಮ ದೊಡ್ಡಮ್ಮ ಕೂಡ ಹಿಂಸೆ ಕೊಡುತ್ತಿದ್ದಾರೆ ....,ಹೇಗೋ ಹಠ ಹಿಡಿದು ಕಡೆ ಪಕ್ಷ ಶಾಲೆಗಾದರು ಹೋಗಬೇಕು ಎಂದು ಶಾಲೆಗೇ ಹೋಗಲು ಶುರು ಮಾಡಿದರು... ಹಿಂದೆ ಒಂದು ದಿನ ತಮ್ಮ ಮೇಷ್ಟ್ರು ತಮ್ಮ ತಾಯಿ ಸತ್ತ ನಂತರ ತಮ್ಮ
ತಂದೆಯನ್ನು ಜೈಲಿನಿಂದ ಬಿಡಿಸುತ್ತೇವೆ ಎಂದು ಹೇಳಿದ್ದು  ನೆನಪಾಗಿ ಅವರ ಹತ್ತಿರ ಹೋದರು... ಮಾಸ್ತರಿಗೆ ಇವರು ಇಷ್ಟು ದಿನ ಯಾಕೆ ಶಾಲೆಗೇ ಬಂದಿರಲಿಲ್ಲ ಎಂಬ ವಿಷಯ ಗೊತ್ತಿತ್ತು ಮತ್ತು ಮಕ್ಕಳನ್ನು ನೋಯಿಸಬಾರದು ಎಂದು ಅದರ ಬಗ್ಗೆ ಕೇಳಲೇ ಇಲ್ಲ...

ರಂಗಯ್ಯನನ್ನು ಶಾಲೆಗೇ ಕರೆಸಿ ಮೇಷ್ಟ್ರು ಮತ್ತು ರಂಗಯ್ಯ ಇಬ್ಬರೂ ಮಕ್ಕಳಿಗೆ ತಮ್ಮ ತಂದೆ ಹೊಡೆದಿದ್ದರಿಂದ ತಮ್ಮ ತಾಯಿ ಸತ್ತಿಲ್ಲ,ಅವಳು ವಿಷ ಕುಡಿದು ಸತ್ತಿದ್ದು, ಅವನೇ ಹೊಡೆದಿದ್ದರೆ ಅವನಾಗೇ ಯಾಕೆ ಆಸ್ಪತ್ರೆಗೆ ಸೇರಿಸುತ್ತಿದ್ದ ಎಂದೆಲ್ಲ ಹೇಳಿದ ಮೇಲೆ, ಅವರಿಬ್ಬರಿಗೂ ನಡೆದ ವಿಷ್ಯ ಅರ್ಥ ಆಗ ತೊಡಗಿತು...ಆದರೆ ಮೇಷ್ಟ್ರು ಆಗಲಿ,ರಂಗಯ್ಯ ಆಗಲಿ ರಾಮಯ್ಯ ತನ್ನ ಹೆಂಡತಿಗೆ ಯಾಕೆ ಹೊಡೆದ,ಯಾಕೆ ಜಗಳ ಮಾಡಿದ ಎಂಬ ವಿಷಯವನ್ನು ಮಾತ್ರ ಮಕ್ಕಳಿಗೆ ಹೇಳಲಿಲ್ಲ,ಹೇಳಿದ್ದರೆ ಅವರಿಗೆ ತಮ್ಮ ತಾಯಿಯ ಮೇಲೆ ಅಸಡ್ಡೆ ಬರುತಿತ್ತೋ ಅಥವಾ ಅವರ ಮನಸ್ಸಿಗೆ ಎಂದೂ ಮಾಸದ ಗಾಯ ಆಗಿ ಬಿಡುತ್ತಿತ್ತು,...

ಹೇಗೋ ರಾಮಯ್ಯನ ಅತ್ತಿಗೆಗೆ ಗೊತ್ತಾಗದ ಹಾಗೆ ಮಕ್ಕಳನ್ನು ಓಲೈಸುವಲ್ಲಿ ಇವರಿಬ್ಬರೂ ಯಶಸ್ವಿ  ಆಗಿದ್ದರು...ಮುಂದಿನ ಇರಿಂಗ್ ಗೆ ಮಕ್ಕಳೊಡನೆ ಅವನ ಅಣ್ಣ ಮತ್ತು ಅತ್ತಿಗೆ ಇಬ್ಬರು ಬಂದರು,ರಂಗಯ್ಯ ಕೂಡ ಬಂದಿದ್ದ,ಆದರೆ ಮೇಷ್ಟ್ರು ಮಾತ್ರ ಬಂದಿರಲಿಲ್ಲ.... ಕೋರ್ಟಿನಲ್ಲಿ ಲಾಯರ್ ಕೇಳುವ ಪ್ರಶ್ನೆಗಳಿಗೆ ಏನೇನು ಉತ್ತರ ಹೇಳಬೇಕು ಎಂದು ಮೇಷ್ಟ್ರು ಹೇಳಿ ಕೊಟ್ಟಿದ್ದರು...

ಅದರಂತೆ ಮಕ್ಕಳು ತಮ್ಮ ತಂದೆಯನ್ನು ಜೈಲಿನಿಂದ ಕಳುಹಿಸಿ ಎಂದು  ತಮ್ಮ ಮುಗ್ಧ ಭಾವದಿಂದ ಕೇಳಿಕೊಂಡರು,ಕೆಲವು ಪ್ರಶ್ನೋತ್ತರಗಳು ಮುಗಿದ ಮೇಲೆ ದೂರು ಕೊಟ್ಟಿದ್ದ ಮಕ್ಕಳು,ಇದು ನಮಗೆ ತಿಳಿಯದಂತೆ ತಮ್ಮ ದೊಡ್ಡಮ್ಮ ಹೇಳಿಕೊಟ್ಟ ಹಾಗೆ ನಾವು ಪೋಲೀಸರ ಹತ್ತಿರ ಹೇಳಿದ್ದೆವು ಎಂದು ತಿಳಿಸದರು...ಇವರು  ಹೇಳಿದಂತೆ ಪೊಲೀಸರು ಬರೆದು ಕೊಂಡಿದ್ದರು ಅಷ್ಟೇ.... ಅಲ್ಲದೆ  ಇವನ ಅಣ್ಣ ಅತ್ತಿಗೆಗೆ ಒಂದು ರೀತಿಯ ಹಿನ್ನಡೆ ಆಯಿತು...ರಾಮಯ್ಯನ ಅತ್ತಿಗೆ ಈ ರೀತಿ ದೂರು ಕೊಡಲು ಒಂದು ಮುಖ್ಯ ಕಾರಣ ಎಂದರೆ,ಪುಟ್ಟವ್ವ ಅವಳ ಸ್ವಂತ ತಂಗಿ....

ಹೇಗೋ ಒಟ್ಟಿನಲ್ಲಿ ರಾಮಯ್ಯ ಜೈಲಿನಿಂದ ಬಿಡುಗಡೆ ಆದ,ಈಗ ಮಕ್ಕಳನ್ನು ಸಾಕುವ ಹೊಣೆ ಇದೆ,ಜೊತೆಗೆ ಅವರಿಗೆ ಇದರ ಹಿಂದಿನ ವಿಷಯ ತಿಳಿಯಬಾರದು ಮತ್ತು ಅವರಿಗೆ ತಾಯಿಯ ಕೊರಗು
ಬಾರದಂತೆ ನೋಡಿ ಕೊಳ್ಳಬೇಕು....

ಎಷ್ಟೋ ಜನ ಇನ್ನೊಂದು ಮದುವೆ ಮಾಡಿಕೊ ಎಂದರೂ ಕೂಡ,ಇವನು ಮರು ಮದುವೆ ಆಗದೆ ಹಾಗೆ ಇದ್ದಾನೆ....
ಮಕ್ಕಳಿಗೆ ಮಲತಾಯಿ ಬೇಡ ಎಂಬುದು ಇವನ ಆಶಯ...
------
^^^^^^

Sunday, August 7, 2011

Happy Friendship Day !!!!


ಇದೊಂದು ಅಮೂಲ್ಯ ಬೆಸುಗೆ....
ಇಲ್ಲಿ ವಯಸ್ಸಿನ ಅರಿವಿಲ್ಲ..,
ಗಂಡು ಹೆಣ್ಣೆಂಬ ಅಂತರವಿಲ್ಲ,
ಜಾತಿ,ಧರ್ಮಗಳ ಭೇದವಿಲ್ಲ...
ಕುಲ ಗೊತ್ರಗಳು ಲೆಕ್ಕಕಿಲ್ಲ...
ಪ್ರೀತಿ,ಔದಾರ್ಯಕ್ಕೆ ಕೊರತೆಯಿಲ್ಲ...
ಇದು ಬಿಡಿಸಲಾಗದ ಸ್ನೇಹ ಸಂಬಂಧ...
ಮಧುರ ಅನುಬಂಧ...
ಜೀವನಾನಂದ...

ಕಷ್ಟದಲ್ಲಿ ಸಹಾಯ ಹಸ್ತ ನೀಡುವರು...
ದುಃಖದಲ್ಲಿ ಭಾಗಿಯಾಗುವರು....
ಸಂತಸ ಹಂಚಿಕೊಳ್ಳುವರು...
ಸೋತಾಗ ಹುರಿದುಂಬಿಸುವರು...
ಗೆದ್ದಾಗ ನಮ್ಮಷ್ಟೇ ಹಿಗ್ಗುವರು...
ಕೋಟಿ ಕೊಟ್ಟರು ಸಿಗದವರು...
ಮುಸ್ಸಂಜೆ ತಂಗಾಳಿಯಂತೆ ಮುದ ನೀಡುವರು...
ಇವರು ಹೃದಯಸ್ಪರ್ಶಿ ಸ್ನೇಹಿತರು...

ನೀಡುವರು ನಿಷ್ಕಲ್ಮಶ ಪ್ರೀತಿ...
ಇದರಿಂದ ಬಾಳಲ್ಲಿ ಸಂಪ್ರೀತಿ...

Wednesday, July 20, 2011

ದೇಹದಾನ !!!

"ಏನ್ ತಾತ,ನಮ್ಮಪ್ಪ ಬಂದು ಕೇಳಿದ್ರೆ ಕೊಡಲ್ಲ ಅಂದಂತೆ "....ಮುಸ್ಸಂಜೆಯಲ್ಲಿ ಹೊಲದಿಂದ ಬಂದು,ಪುಷ್ಪಾಳಿಗೆ   ಟೀ ತರಲು ಏಳಿ ಜಗುಲಿಯ ಮೇಲೆ ಬೀಡಿ ಸೇದುತ್ತ ಕುಳಿತಿದ್ದಾಗ,ಏಕಾ  ಏಕಿ ಯಮುನಾ ಬಂದು ಹೀಗೆ ಕೂಗಾಡಿದಳು...
ಯಮುನಾ ನನ್ನ ಮೊದಲನೇ ಮಗ ಶೇಖರನ  ಮಗಳು....ಪುಷ್ಪ ನನ್ನ ಎರಡನೇ ಮಗ ಮೂರ್ತಿಯ ಹೆಂಡತಿ..
ಇಬ್ಬರೂ ಮಕ್ಕಳಿಗೂ ಬೇರೆ ಬೇರೆ ಮನೆ ಕಟ್ಟಿಸಿ ಕೊಟ್ಟಿದ್ದೇನೆ,
ಹಿರಿಯ ಮಗ ಶೇಖರನಿಗೆ ಹೊಸ ಮನೆಯನ್ನು ಕೊಟ್ಟಿದ್ದೇನೆ,ನನ್ನ ಪಿತ್ರಾರ್ಜಿತ ಹಳೆ ಮನೆಯನ್ನು ಕಿರಿಯ ಮಗನಿಗೆ ಕೊಟ್ಟು,ನಾನು ಅವನ ಮನೆಯಲ್ಲೇ ಇದ್ದೇನೆ,
ಆಗಾಗ  ಎರಡೂ  ಮನೆಗೆ ಹೋಗಿ ಬರುತ್ತಿರುತ್ತೇನೆ...
ಯಮುನಾ ಹೀಗೆ ಗದರುವುದನ್ನು ಕೇಳಿಸಿಕೊಂಡ ಪುಷ್ಪ ಹೊಳಗಿನಿಂದ ಬಂದು "ಏ ಇದೆಲ್ಲ ದೊಡ್ಡವರ ವಿಷಯ,ನಿಮ್ಮಪ್ಪ ಬಂದು ಮಾತಾಡುತ್ತಾರೆ,ನೀನ್ ಇದರಲೆಲ್ಲ ತಲೆ ಹಾಕಬೇಡ,ಸುಮ್ನೆ ಹೋಗಿ ಓದ್ಕೋ ಹೋಗು,
ಯಜಮಾನಗಿತ್ತಿ ತರಹ ಬಂದು ಬಿಟ್ಟಳು " ಅಂತ ಅಂದಳು..
"ಏನ್ ಚಿಕ್ಕಮ್ಮ ,ನಾನೇನ್ ಚಿಕ್ಕವಳಲ್ಲ,ನಾನು ಇವಾಗ ಮೇಜರ್ ,ನನಗೂ ಕೇಳೋ ಹಕ್ಕಿದೆ,ನಿಮಗೆಷ್ಟು  ಹಕ್ಕಿದ್ಯೋ ಅಷ್ಟೇ ನನಗೂ ಇದೆ  "ಎಂದಾಗ ಒಂದು ಕ್ಷಣ ನನ್ನ ಎದೆ ಬಡಿತ ನಿಂತು ಬಿಟ್ಟಿತ್ತು...
ಇವಳೇನಾ ಹದಿನೆಂಟು ವರ್ಷದಿಂದ ಮುದ್ದಾಗಿ ಸಾಕಿದ ಮೊಮ್ಮಗಳು,ನನ್ನ ತೊಡೆ ಮೇಲೆ ಮಲಗಿಕೊಂಡು ಕಥೆ ಕೇಳುತ್ತಿದ್ದವಳು ಇವಳೇನಾ,
ಎಷ್ಟು ಪ್ರೀತಿಯಿಂದ ಸಾಕಿದ್ದೆ,ಪ್ರತಿ ವರ್ಷ ಊರ ಅಮ್ಮನ ಜಾತ್ರೆಗೆ ಹೊಸ ಬಟ್ಟೆ ಕೊಡಿಸುತ್ತಿದ್ದೆ....
ಇದಕಿಂತ ಎರಡು  ದಿನ ಮುಂಚೆ ಅವಳ ಅಪ್ಪ ಬಂದು  ಇದೆ ರೀತಿ ಗಲಾಟೆ ಮಾಡಿದ್ದ..ಹುಟ್ಟಿಸಿದ ತಪ್ಪಿಗೆ ನನ್ನ ಎದೆ ಮೇಲೆ ಒದ್ದಿದ್ದಾನೆ...
ಇಬ್ಬರೂ ಮಕ್ಕಳಿಗೆ ನಾನೇನು ಕಡಿಮೆ ಮಾಡಿಲ್ಲ..
ಇಬ್ಬರ ಹೆಸರಿಗೂ ಇರುವ ಜಮೀನನ್ನು ಸರಿಯಾಗಿ ಪಾಲು ಮಾಡಿ ಪಾಲುಪಾರಿಕತ್ತು ಬರೆದಾಗಿದೆ...ಹಿರಿ ಮಗನ ಗಲಾಟೆ ತಾಳಲಾರದೆ ಈ  ಕೆಲಸವನ್ನು ಬಹಳ ಹಿಂದೆಯೇ ಮಾಡಿ ಬಿಟ್ಟಿದ್ದೇನೆ...ಆದರೆ ಅವರ ಹೆಸರಿಗೆ ಇನ್ನು ನೊಂದಾಯಿಸಿಲ್ಲ ಅಷ್ಟೇ...ಹೇಗೆ ಆದರೂ ಅವರಿಗೆ ಆ ಜಮೀನು ..ಆದರೂ ಹಿರಿ ಮಗ ಮಾತ್ರ ಆದಷ್ಟು ಬೇಗ ತನ್ನ ಹೆಸರಿಗೆ ಮಾಡಿಸಿಕೊಳ್ಳಲು ನೋಡುತ್ತಿದ್ದಾನೆ...
ಕೆಲವು ದಿನಗಳ ಹಿಂದೆ ನಂಜೇಗೌಡ ಬಂದು ಅವರವರ  ಜಮೀನನ್ನು ಅವರ ಹೆಸರಿಗೆ ಮಾಡಿಕೊಡು,ಸುಮ್ನೆ ಯಾಕೆ ಇನ್ನು ನಿನ್ನ ಹೆಸರಲ್ಲಿ ಇಟ್ಕೊ೦ಡಿದಿಯ ಅಂತ ಕೇಳಿದ್ದ,ನಿನಗ್ಯಾಕೆ ನಮ್ಮ ಮನೆ ವಿಚಾರ ಅಂತ ಬೈದು ಕಳ್ಸಿದ್ದೆ..ನಂಜೇಗೌಡ ಅಂದ್ರೆ ಕೆರೆ ಪಕ್ಕದ ನಮ್ಮ ಗದ್ದೆಯ ಪಕ್ಕದಲ್ಲೇ ಅವನ ಗದ್ದೆ ಇದೆ..ಅಲ್ಲಿ ನನ್ನ ಇಬ್ಬರೂ ಮಕ್ಕಳಿಗೂ ಪಾಲಿದೆ,ಅದರಲ್ಲಿ ಶೇಖರ ತನ್ನ ಪಾಲನ್ನು ನಂಜೇಗೌಡನಿಗೆ  ಮಾರುವುದಾಗಿ ಹೇಳಿ ಅವನ ಹತ್ತಿರ ಸ್ವಲ್ಪ ಹಣ ಕೂಡ ತಗೊಂಡಿದ್ದಾನೆ...ಅದಕ್ಕಾಗಿ ಈ ರೀತಿ ಅಪ್ಪ ಮಗಳು ಇಬ್ಬರೂ ಜಗಳ ಮಾಡುತ್ತಿದ್ದಾರೆ..

ಇಬ್ಬರು  ಮಕ್ಕಳಲ್ಲಿ ಈ ಶೇಖರ ತುಂಬ ಸೋಮಾರಿ...ಇಬಾರಿಗೂ ತಮ್ಮ ತಮ್ಮ ಜಮೀನನ್ನು ಪಾಲು ಮಾಡಿ ಕೊಟ್ಟು ೨ ವರ್ಷ ಆಯಿತು...ಈ ಮೂರ್ತಿನಾದರು,ಏನಾದ್ರು ಬೆಳೆ ಬೆಳೆದು ಜೀವನ ಮಾಡ್ತಿದ್ದಾನೆ...ಅದರ ಜೊತೆಗೆ ಎರಡು ಹಸು ಸಾಕಿದ್ದಾನೆ...ಗಂಡ ಹೆಂಡತಿ ಇಬ್ಬರೂ ವಿದ್ಯಾವಂತರು... 
ಮನೆ ಹಿರಿ ಮಗ ಆಗಿ ಅವನು ಇರುವ ಜಮೀನನ್ನು ಮಾರಲು ತಯ್ಯಾರಿದ್ದಾನೆ..
ಬೇಲಿಯೇ ಎದ್ದು ಹೊಲ ಮೆಯ್ದ ಹಾಗೆ   ಆಯಿತು..

೩೦ ವರ್ಷದ ಹಿಂದೆ ಸಿಕ್ಕ ಮೇಷ್ಟು ಕೆಲಸ ಬಿಟ್ಟೆ,ಬರಿ ೪೦ ರುಪಯೀ ಸಂಬಳ...ಆಗಿನ ಕಾಲದಲ್ಲಿ ಅದೇ ಹೆಚ್ಚು...ಆದರೂ ನಾನು ನನ್ನ ಅಣ್ಣ ಇಬ್ಬರೂ ಕೆಲಸಕ್ಕೆ ಸೇರಲಿಲ್ಲ...ನಮ್ಮ ಜಮೀನಿನಲ್ಲೆ ಬೇಕಾದಷ್ಟು ಆದಾಯ ಬರುತಿತ್ತು...
ಪಿತ್ರಾರ್ಜಿತ ಆಸ್ತಿಯ ಜೊತೆಗೆ ಒಂದಷ್ಟು ಬೇರೆಯವರಿಂದ ಕೊಂಡು..ಹೊಸ ಮನೆ ಕಟ್ಟಿಸಿ,ಅದನ್ನು ಹಿರಿಯ ಮಗನಿಗೆ ಕೊಟ್ಟಿದ್ದೇನೆ....ಮೂರ್ತಿ ಮತ್ತು ಅವನ ಹೆಂಡತಿ ಇಬ್ಬರಿಗೂ ಸ್ವಲ್ಪ  ಜವಾಬ್ದಾರಿ ಅನ್ನೋದು ಇದೆ...ಆದರೆ ಶೇಖರ ಆಗಲಿ ಅವನ ಹೆಂಡತಿಗಾಗಲಿ ಇಬ್ಬರೂ ಸೋಮಾರಿಗಳೇ...ಭಂಡರು..ದುಡಿದು ತಿನ್ನ ಬೇಕೆಂಬ ಯೋಚನೆಯೇ ಇಲ್ಲ...ಇರುವ ಆಸ್ತಿಯನ್ನು ಮಾರಿ ತಮ್ಮ ಮಗಳ ಮದುವೆ ಮಾಡುವ ನಿರ್ಧಾರ ಮಾಡಿರಬಹುದು..
ಬೇಕಾದಷ್ಟು ಸಾಲ ಮಾಡಿದ್ದಾನೆ,ಅದನ್ನೆಲ್ಲೇ ತೀರಿಸಲು ಈಗ ಜಮೀನನ್ನು  ತನ್ನ ಹೆಸರಿದೆ ಮಾಡಿ ಕೊಡಿ ಎಂದು ಪೀಡಿಸುತ್ತಿದ್ದಾನೆ..

ಅಪ್ಪನ ಆಸ್ತಿಯಲ್ಲಿ ಬೆವರು ಸುರಿದಿ ದುಡಿದು ಅದಕ್ಕೆ ಇನ್ನೊಂದಿಷ್ಟು ಹೊಲ ಗದ್ದೆಗಳನ್ನು ತೆಗೆದು ಕೊಂಡಿದ್ದೇನೆ... ಈಗ ಅವನ ಹೆಸರಿಗೆ ಮಾಡಿ ಕೊಟ್ಟರೆ ಅದನ್ನೆಲ್ಲಾ ನನ್ನ ಕಣ್ಣ ಮುಂದೆಯೇ ಮಾರುತ್ತಾನೆ,,ಅದಕ್ಕೆ ಅವನ ಹೆಸರಿಗೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದೇನೆ...
ಇದೆಲ್ಲಕಿಂತ ಮಿಗಿಲಾಗಿ  ನನ್ನ ಮುದ್ದು ಮೊಮ್ಮಗಳು ಬಂದು ಈ ರೀತಿ ಕೇಳಿದಳಲ್ಲ?ಅದೇ ಬೇಜಾರು..
"ಸರಿ ಹೋಗಮ್ಮ ,ನಿಮ್ಮ ಅಪ್ಪನ ಬರಕ್ಕೆ ಹೇಳು...ಮುಂದಿನ ವಾರ ತಾಲೂಕ್ ಆಫೀಸಿನಲ್ಲಿ ಎಲ್ಲಾ ದಾಖಲೆಗಳನ್ನ ಕೊಡ್ತೀನಿ ಅಂತ ಹೇಳು ನಿನ್ನ ಅಪ್ಪಂಗೆ "ಅಂದ ಕೂಡಲೇ ಹಿಂದಕ್ಕೆ ತಿರುಗಿ  ನೋಡದ  ಹಾಗೆ ಹೋದಳು..
ನನಗೂ ಅವಳ ಮುಖ ನೋಡಲಿ ಇಷ್ಟ ಇಲ್ಲದೆ ಕತ್ತು ಬಗ್ಗಿಸಿ ಕೊಂಡಿಯೇ ಇದ್ದೆ.....
ಮೊಮ್ಮಗಳ ಆಸೆ ಕೂಡ ಅದೇ ಆಗಿರಬೇಕು...ನನ್ನ ಮಗಳು ಯಾವತ್ತು ಕೂಡ ಈ ರೀತಿ ತಿರುಗಿ ಮಾತಾಡಿರಲಿಲ್ಲ..ಆದರೆ...
ಶೇಖರ ತನ್ನ ಜಮೀನನ್ನು ನಂಜೇಗೌಡರಿಗೆ  ಮಾರುವುದಂತು ಖಚಿತ..ಅವರ ಅಸ್ತಿ ಏನು ಬೇಕಾದರೂ ಮಾಡಿಕೊಳ್ಳಲಿ...

ನನ್ನ ಹೆಂಡತಿ ತೀರಿಕೊಂಡಾಗ,ಶೇಖರ ತನ್ನ ಪಾಲಿನ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಚಕಾರ ಎತ್ತಿದ್ದ....ತಾಯಿ ಅಂತ್ಯಕ್ರಿಯೇಯಲ್ಲೂ ಸಣ್ಣ ಪುಟ್ಟದಕ್ಕೆ ಲೆಕ್ಕ ಬರೆದು ಮೂರ್ತಿ ಹತ್ತಿರ ಖರ್ಚಿನ  ಅರ್ಧ ಭಾಗ ತೆಗೆದು ಕೊಂಡಿದ್ದ...
ನನಗೂ ವಯಸ್ಸಾಯಿತು...ನನ್ನ ಆಯಸ್ಸು ಕೂಡ ಮುಗಿಯುತ್ತ ಬಂತು...ಅವರ ಹೆಸರಿಗೆ ಹೊಲ ತೋಟ ಎಲ್ಲಾ ಮುಂದಿನ ವಾರ ಮಾಡಿಕೊಡುತ್ತೇನೆ..
ಈಗಾಗಲೇ ನನ್ನ ಮರ್ಯಾದೆಯನ್ನು ಮಗ ,ಮೊಮ್ಮಗಳು ಸೇರಿ ಊರವರ  ಮುಂದೆ  ಕಳೆದು ಹಾಗಿದೆ...
ಅದಕ್ಕೆ ಇವರ ಚಿಂತೆಯೇ ಬೇಡ...
ಆಗ ಸಿಕ್ಕಿದ್ದ ಮೇಷ್ಟು ಕೆಲಸಕ್ಕೆ ಹೋಗಿದ್ದರೆ ಈಗ ಈ ರೀತಿ ಹರಿದ ಚಪ್ಪಲಿ ಹಾಕಿಕೊಂಡು ಓಡಾಡುವ  ಸ್ಥಿತಿ ಇರುತ್ತಿರಲಿಲ್ಲ...ಈ ನನ್ನ ಹಿರಿ ಮಗನಿಗೆ ಕಡೆ ಪಕ್ಷ ಒಂದು ಜೊತೆ ಚಪ್ಪಲಿ ಕೊಡಿಸಬೇಕೆಂಬ ಆಸೆ ಇಲ್ಲ,ಆದರೆ ಜಮೀನು ಮಾತ್ರ ಬೇಕು...ಆ ಕೆಲ್ಸಕ್ಕೆ ಹೋಗಿದ್ದರೆ ಪಿಂಚಣಿಯಾದರು ಬರುತ್ತಿತ್ತು...
ಅವರಾದರೂ ನೆಟ್ಟಗೆ ಓದಿದ್ದರೆ ಈ ರೀತಿಯ ದುರ್ಬುದ್ಧಿ ಅವನಿಗೆ ಬರುತ್ತಿರಲಿಲ್ಲ... ಆದರೂ ಓದುತ್ತಿರುವ ಮೊಮ್ಮಗಳಿಗೆ ಏಕೆ ಬಂತು?....
ಇನ್ನೇನು ಮಾಡಲು ಸಾಧ್ಯವಿಲ್ಲ...ನಾನು ಸತ್ತಾಗ ಕೂಡ ನನ್ನ ಮಕ್ಕಳು ಕಿತ್ತಾಡುವುದು  ಬೇಡ..ಮರ್ಯಾದೆ ಹಾಳು ಮಾಡಿಕೊಳ್ಳುವುದು ಬೇಡ...ಮತ್ತೆ ಅದೇ ತರಹ ಜಗಳ ಮಾಡಿಕೊಂಡು ಕೂರುವುದು ಬೇಡ...
......ಅದಕ್ಕೆ ಯಾವುದಾದರು ಕಾಲೇಜಿಗೆ ದೇಹದಾನ ಮಾಡಲು ನಿರ್ಧಾರ ಮಾಡಿದ್ದೇನೆ ,ಯಾವುದಾದರು ಆಸ್ಪತ್ರೆಗೆ ಪತ್ರ ಬರೆಯಬೇಕು ಎಂದು ಕೊಂಡಿದ್ದೇನೆ..
ಯಾವ ಮಕ್ಕಳಾದರು ನನ್ನ ದೇಹದಿಂದ ಎನಾದ್ರೂ  ಕಲಿತುಕೊಳ್ಳಲಿ....ಅವರಿಗಾದರೂ ಒಳ್ಳೆಯದಾಗಲಿ...
ಮನೆಯ ಹಿರಿ ಮಗನಿಗೆ ಜವಾಬ್ದಾರಿ ಇಲ್ಲ ಅಂದರೆ ಅಥವಾ ಅವನಿಗೆ ದುಡಿದು ತಿನ್ನ ಬೇಕು ಎಂಬ ಹಂಬಲ ಇಲ್ಲ ಅಂದರೆ,ಹೆತ್ತವರ ಮೇಲೆ ಗೌರವ ಇಲ್ಲ ಅಂದರೆ ಇದೆ ಕಥೆ..
ಏನೋ ಇನ್ನು ಮುಂದೆ ನನಗೆ ನನ್ನ ಬೀಡಿಯೇ ಸಂಗಾತಿ...ಜೀವನದ ಕೊನೆಗಾಲವನ್ನು ಈ ರೀತಿ ಕಳೆಯುತ್ತೇನೆ ಎಂದು ಯಾವತ್ತಿಗೂ ಭಾವಿಸಿರಲಿಲ್ಲ...
 ಕೊನೆ ದಿನಗಳ ಎಣಿಕೆಯಲ್ಲಿ ಸಾಗುತ್ತಿದ್ದೇನೆ..
ಅವನು ತನ್ನ ಜಮ್ಮೀನನ್ನು ನನ್ನ ಕಣ್ಣ ಮುಂದೆ ಬೇರೆಯವರಿಗೆ ಮಾರುವ ಮೊದಲು ನನ್ನ ಕಣ್ಣು ಶಾಶ್ವತವಾಗಿ ಮುಚ್ಚಿದರೆ  ಒಳ್ಳೆಯದು...
 

Saturday, July 9, 2011

ಕಣ್ಣಾ ಮುಚ್ಚೆ .........!!!

ಕಣ್ಣಾ  ಮುಚ್ಚೇ.....
ಕಾಡೇ ಗೂಡು.....
ಉದ್ದಿನ ಮೂಟೆ......
ಉರುಳೆ ಹೋಯಿತು.....
ನನ್ನಯ ಹಕ್ಕಿ ಬಿಟ್ಟೇ ಬಿಟ್ಟೇ.....
ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ........ 
ಬಾಲ್ಯದಲ್ಲಿ ಪ್ರತಿಯೊಬ್ಬರೂ ಈ ಹಾಡನ್ನು ಏನಿಲ್ಲ ಅಂದರೂ ಸಾವಿರ ಸರಿ ಆದರೂ ಹಾಡಿರುತ್ತೀವಿ....ಹುಡುಗಾಟದ ವಯಸ್ಸಿನಲ್ಲಿ ಇದನ್ನು ಬಹಳ ಖುಷಿ ಇಂದ ಮನೆಯ ಸುತ್ತ ಮುತ್ತಲ  ಮಕ್ಕಳೆಲ್ಲಾ ಸೇರಿ ಅದೆಷ್ಟು ಸಂಭ್ರಮದಿಂದ ಹಾಡಿರುತ್ತಿದ್ದೆವು.... ಆದರೆ ಇದು ನಮ್ಮ ಜೀವನದ ಅಂತ್ಯಕ್ಕೆ ಎಷ್ಟು ಹೋಲಿಕೆ ಆಗುತ್ತದೆ.....
ಈ ಪದಗಳನ್ನು ನಮ್ಮ ಜೀವನಕ್ಕೆ ಈ ರೀತಿ  ಹೋಲಿಸಬಹುದು...

ಕಣ್ಣಾಮುಚ್ಚೆ ಎಂದರೆ ಮನುಷ್ಯನ ಸಾವು,ಮನುಷ್ಯನ ಅಂತ್ಯ ..

ಕಾಡೇ ಗೂಡು ಅಂದರೆ ಸತ್ತ ನಂತರ ಕಾಡಿನಲ್ಲಿ ನಮ್ಮ ಸಮಾಧಿಯೇ ನಮ್ಮ ವಾಸ ಸ್ಥಾನ ಅಥವಾ ಗೂಡು...ಇಲ್ಲಿರುವುದು ಸುಮ್ಮನೆ,ಅಲ್ಲಿರುವುದು ನಮ್ಮನೆ ಎಂಬ ಹಾಗೆ ನಾವು ಸಧ್ಯ ಇರುವ ಮನೆ ಅದು ಕೇವಲ ಕ್ಷಣಿಕ,ಶಾಶ್ವತ ಅಲ್ಲ...ನಮ್ಮ ಸಮಾಧಿಯೇ ನಮಗೆ ಶಾಶ್ವತ...

ಉದ್ದಿನ ಮೂಟೆ ಅಂದರೆ ನಮ್ಮ ೬೦ ಕಿಲೋ,೮೦ ಕಿಲೋ, ಅಥವಾ ಕ್ವಿಂಟಾಲ್ ತೂಕದ ದೇಹ......

ಉರುಳೆ ಹೋಯಿತು ಅಂದರೆ ಸತ್ತಾಗ ದೇಹ ಕೆಳಗೆ ಬೀಳುವ ಸಂಕೇತ....ಇಲ್ಲಿ ಉದ್ದಿನ ಮೂಟೆ ಉರುಳಿ ಹೋಯಿತು ಎಂಬುದನ್ನು ಸೂಚಿಸುತ್ತದೆ....

ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ ಅಂದರೆ ನಮ್ಮ ಪ್ರಾಣ ಪಕ್ಷಿ ಅಥವಾ ಆತ್ಮವನ್ನು ಬಿಡುತ್ತಿದ್ದೇವೆ ಎಂದು ಪರಮಾತ್ಮನಲ್ಲಿ ಹೇಳುವುದು....ಸತ್ತಾಗ ಪ್ರಾಣ ಪಕ್ಷಿ ಹಾರಿ ಹೋಯಿತು ಎಂದು ಹೇಳುವ ಹಾಗೆ ಇದು ಕೂಡ...

ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ ಅಂದರೆ ನಮ್ಮ ಆತ್ಮವನ್ನು ನಿಮ್ಮ ಆತ್ಮದಲ್ಲಿ ಅಡಗಿಸಿಕೊಳ್ಳಿ ಎಂದು ಪರಮಾತ್ಮನಲ್ಲಿ ವಿನಂತಿಸಿಕೊಳ್ಳುವುದು...

(ಹಾಗೆ ಇದು ಒಂದು ವ್ಯಾಖ್ಯಾನ ಅಷ್ಟೇ !!! ಇದರಲ್ಲಿ ತಪ್ಪು-ಒಪ್ಪುಗಳು ಇದ್ದರೂ ಇರಬಹುದು)

Tuesday, June 28, 2011

ತೆಂಗಿನ ತೋಟದಲ್ಲಿ ಗೂಬೆಗಳು !!!

ಕಳೆದ ವಾರ ಸಾವಯವ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಸಂತೆ ಶಿವರ ಎಂಬ ಗ್ರಾಮದ ಬಸವರಾಜು ಎಂಬ ರೈತರ ತೋಟಕ್ಕೆ ಹೋಗಿದ್ದೆವು.ಅವರ ತೋಟದಲ್ಲಿ ಕಂಡ ಕೆಲವು ವಿಚಿತ್ರ ಮತ್ತು ವಿಸ್ಮಯ ಸಂಗತಿಗಳನ್ನು ಹೇಳಬೇಕೆಂಬ ಆಶಯ..
ಮೊದಲನೆಯದು,ಆ ತೋಟವನ್ನು ಸುಮಾರು ೧೮ ವರ್ಷದಿಂದ ಬೇಸಾಯ ಮಾಡಿಲ್ಲ..ಎರಡನೆಯದು ಆ ತೋಟದಲ್ಲಿ ಗೂಬೆಯನ್ನು ಸಾಕಿದ್ದಾರೆ...

ಬೇಸಾಯ ಮಾಡದೆ ಇರುವ ತೋಟವನ್ನು  Zero Cultivation Land ಎಂದು ಕರೆಯುತ್ತಾರೆ..ಈ ರೀತಿ ಮಾಡುವುದರಿಂದ ಭೂಮಿಯಲ್ಲಿ ಎರೆ ಹುಳುಗಳು ಸಾಯುವುದಿಲ್ಲ ಮತ್ತು ಆ ಹುಳುಗಳು ಭೂಮಿ ಒಳಗೆ ಕೆಲವು ಪ್ರಕ್ರಿಯೆಗಳನ್ನು ನಡೆಸಿ ಆ ಗಿಡಗಳಿಗೆ ಗೊಬ್ಬರದ ರೀತಿ ಸಹಾಯ ಮಾಡುತ್ತದೆ. ಅಲ್ಲದೆ ಆ ತೋಟದಲ್ಲಿ ಅವರು ಬಳಸುವ ಔಷಧಿಗಳು ಭೇವಿನ ಎಣ್ಣೆ,ಬೆಳ್ಳುಳ್ಳಿ ಮತ್ತು ಮೆಂತ್ಯವನ್ನು ಅರೆದು ಮಾಡಿದ ರಸ,ಹುಳಿ ಮಜ್ಜಿಗೆ ಮತ್ತು ಗಂಜಲ,ಹೀಗೆ ಪ್ರತಿಯೊಂದು ಕೂಡ ಸಾವಯವ ಪದ್ದತಿ.ಯಾವುದೇ ರಾಸಾಯನಿಕ ವಸ್ತುವನ್ನು ಅವರು ಈ ತೋಟದಲ್ಲಿ ಬಳಸಿಲ್ಲ..

ಇದಕ್ಕಿಂತ ಮುಖ್ಯ ಸಂಗತಿ ಎಂದರೆ ಇಲ್ಲಿ ಗೂಬೆಯನ್ನು ಸಾಕಿದ್ದಾರೆ...ಗಿಳಿ,ಪಾರಿವಾಳ,love birds ಹೀಗೆ ಬೇರೆ ಬೇರೆ ಹಕ್ಕಿಗಳನ್ನು ಸಾಕುವುದು ಅಷ್ಟೇನೂ ಕುತೂಹಲಕಾರಿ ವಿಷಯ ಅಲ್ಲ...ಆದರೆ ಇಲ್ಲಿ ಅವರು ಗೂಬೆಯನ್ನು ಸಾಕಿದ್ದೇವೆ ಎಂದಾಗ ಒಂದು ರೀತಿಯ ಶಾಕ್ ಆಯಿತು, ಹಾಗೆ ಅದರ ಬಗ್ಗೆ ಕುತೂಹಲ ಹೆಚ್ಚಾಯಿತು...
  ಮೊದಲು ಅವರು ಒಂದು ಗೂಬೆಯನ್ನು ತಂದು ಸಾಕಲು ಮೊದಲು ಮಾಡಿದಾಗ ಒಂದು ಪೆಟ್ಟಿಗೆಯನ್ನು ಅದಕ್ಕಾಗಿ ಮೀಸಲು ಇಟ್ಟಿದ್ದರಂತೆ.ಪ್ರತಿ ದಿನ ಅದಕ್ಕೆ ಹಣ್ಣು ಹಂಪಲು ಹೀಗೆ ಅದು ಇದು ತಿನ್ನುವುದಕ್ಕೆ  ಕೊಟ್ಟು  ತಮಗೆ ಬೇಕಾದ ರೀತಿಯಲ್ಲಿ ಒಗ್ಗಿಸಿ ಕೊಂಡಿದ್ದಾರೆ..ಕೆಲವರು ಪಾರಿವಾಳ ಸಾಕುವವರು ಅವಕ್ಕೆ ಒಂದು ಪೆಟ್ಟಿಗೆಯನ್ನು ಇಟ್ಟು ಅದರಲ್ಲಿ ಕೆಲವು ಬೆಳೆಗಳನ್ನು  ಅವಕ್ಕೆ ಉಣ ಬಡಿಸುವ ಹಾಗೆ ಇವರೂ ಕೂಡ ಗೂಬೆಗಳಿಗೆ ಕೆಲವು ಬೆಳೆ ಮತ್ತು ಹಣ್ಣು ಗಳನ್ನು ಕೊಡುತ್ತಿದ್ದರಂತೆ,ಇದರಿಂದ ಅವು ಬೇರೆ ಕಡೆ ಹೋಗುತ್ತಿರಲಿಲ್ಲ. ಸಮಯ ಕಳೆದಂತೆ ಅವು ಇವರಿಗೆ ಸರಿಯಾಗಿ ಹೊಂದಿಕೊಂಡಿವೆ...

ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಗೂಬೆಯನ್ನು ಸಾಕಿರುವುದರಿಂದ ಆಗುತ್ತಿರುವ ಉಪಯೋಗಗಳು.ಮೊದಲನೆಯದಾಗಿ,ತೆಂಗಿನ ಮರ ಹತ್ತಿ ಕೆಲವು ಇಲಿಗಳು ಎಳನೀರನ್ನು ಕುಡಿಯುತ್ತವೆ,ಇದರಿಂದ ಆ ರೈತರಿಗೆ ತುಂಬ ನಷ್ಟ ಆಗುತ್ತದೆ..ಆದರೆ ಈ ಗೂಬೆಗಳು ಇಲಿಗಳು ಮತ್ತು ಹಾವುಗಳನ್ನು ತಿನ್ನುತ್ತದೆಯಂತೆ...ಇದರಿಂದ ಸ್ವಲ್ಪ ನಷ್ಟ ಕಡಿಮೆ ಆಗುತ್ತದೆ..ಅಲ್ಲದೆ ಅವು ಹಾವುಗಳನ್ನು ಕೂಡ ತಿನ್ನುವುದರಿಂದ ತೋಟದಲ್ಲಿ ಹಾವಿನ ಭಯ ಇರುವುದಿಲ್ಲ...ಹಾವುಗಳನ್ನು ತಿನ್ನುವುದನ್ನು ನಂಬದೆ ಮತ್ತೊಮ್ಮೆ ಕೇಳಿದಾಗ ಕೆಲವು ಬಾರಿ ಅವರೇ ಇದನ್ನು ಗಮನಿಸಿರುವ ವಿಷಯವನ್ನು ಹೇಳಿದರು...
ಮತ್ತೆ ಇದರ ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಆ ತೋಟದ ಯಜಮಾನರು ಅಲ್ಲಿಗೆ ಹೋದಾಗ ಅವು ಅವರ ಬಳಿ ಬಂದು,ಅವರು ತಂದು ಕೊಡುವ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತವೆ..ಆ ಮನೆಯವರು ಬಿಟ್ಟು ಬೇರೆ ಯಾರಾದರು ಆ ತೋಟದ ಒಳಗಡೆ ಹೋದರೆ ಅವು ಸುಖಾ ಸುಮ್ಮನೆ ಕೂಗಲು ಶುರು ಮಾಡುತ್ತವೆ.ಇದರಿಂದ ಕಳ್ಳರು ಆ ತೋಟಕ್ಕೆ ಹೋಗಲು ಹೆದರುವುದರಲ್ಲಿ ಬೇರೆ ಸಂದೇಹವೇ ಇಲ್ಲ...
ಬೇರೆಯವರು ಆ ತೋಟವನ್ನು ನೋಡ ಬೇಕು ಎಂದುಕೊಂಡರೆ ಆ ಮನೆಯವರಲ್ಲಿ ಯಾರಾದರು ಒಬ್ಬರ ಜೊತೆಗೆ ಹೋಗಬೇಕು..ಇಲ್ಲದಿದ್ದರೆ ಆ ಕರ್ಕಶ ಶಬ್ದವನ್ನು ಕೇಳಬೇಕಾಗುತ್ತದೆ...

ಆ ಗೂಬೆಗಳನ್ನು ಅವರು ಎಷ್ಟರ ಮಟ್ಟಿಗೆ ಪಳಗಿಸಿಕೊಂದಿದ್ದಾರೆ ಎಂದರೆ ಮೊದಲ ತಂದ ಮರಿಯನ್ನು ಮಾತ್ರ ಅವರು ಆ ಪೆಟ್ಟಿಗೆಯಲ್ಲಿ ಇಟ್ಟು ಸಾಕಿದ್ದು,ನಂತರ ಅದರ ಮರಿಗಳು ಈ ವಾತಾವರಣಕ್ಕೆ ಮತ್ತು ಆ ಪ್ರಕ್ರಿಯೆಗೆ ಹೊಂದಿಕೊಂಡು ಹೋಗುತ್ತಿವೆ...ಹೀಗೆ ಆ ಗೂಬೆಗಳ ಒಂದರ ನಂತರ ಇನ್ನೊಂದು ಪರಂಪರೆ ಆ ತೋಟದಲ್ಲಿ ಅದರ ಪಾಡಿಗೆ ಅವು ಹೊಂದಿಕೊಳ್ಳುತ್ತಿವೆ....

ಇನ್ನೊಂದು ವಿಷಯ ಎಂದರೆ ಪಾರಿವಾಳಗಳನ್ನು ಸಾಕುವುದರಿಂದ ಆಗುವ ಸಮಸ್ಯೆ ಎಂದರೆ ಅದರ ಶಬ್ದಕ್ಕೆ ಹಾವುಗಳು ಸಮೀಪ ಬರುತ್ತವೆ...ಇದು ಹಳ್ಳಿಗಳಲ್ಲಿ ಹೆಚ್ಚು,ಆದರೆ ಪಟ್ಟಣಗಳಲ್ಲಿ ಹಾವುಗಳು ಕಾಣುವುದೇ ಅಪರೂಪ...

Wednesday, June 8, 2011

! ! ? ?

ಕಳೆದು ಹೋದವು ವಸಂತಗಳು ಅದೆಷ್ಟೋ ,
ಸಂಪಾದಿಸಿದ್ದು ಶೂನ್ಯ ಆಸ್ತಿ,ಎಲ್ಲಾ ಕಳೆದದ್ದೇ ಜಾಸ್ತಿ,
ಆದರೆ ಗಳಿಸಿದ ಸ್ನೇಹ,ಪ್ರೀತಿ ಎಂಬ ಸಂಪತ್ತು ಅಪಾರ,
ಕಳೆದುಕೊಳ್ಳಲಾಗದ ಅತಿ ಬೆಲೆ ಬಾಳುವ ಸಂಪತ್ತು...

ಮುಂದಿವೆ ನೂರೆಂಟು ಕವಲು ದಾರಿ,
ಎಲ್ಲೂ ಮುನ್ನಡೆಯಲು ಒಪ್ಪದ ಚಿತ್ತ,
ನನ್ನದೇ ಬೇರೊಂದು ಕವಲುದಾರಿಯಲಿ ಸಾಗುವ ಹವಣಿಕೆಯಲಿ,
ಅದರ ಅನ್ವೇಷನೆಯಲಿ ಸಾಗುತ್ತಿದೆ ಜೀವನವೆಂಬ ಪಯಣ.

ಸಾಧಿಸಲು ಉಳಿದಿವೆ ಹತ್ತಾರು ಕನಸುಗಳು,
ಜೊತೆಗೆ ಸೇರುತ್ತಿವೆ ಇನ್ನಷ್ಟು,ಮತ್ತಷ್ಟು,
ಸಾಧಿಸಬೇಕೆಂಬ ಹಂಬಲ,
ಸಾಧಿಸುತ್ತೇನೆ ಎಂಬ ಛಲ,
ತಡವಾದರೂ ಸರಿ ಸಾಧಿಸಿಯೇ ತೀರುತ್ತೇನೆಂಬ ಹಠ,ಧೈರ್ಯ....

Tuesday, June 7, 2011

ನಮ್ಮಳ್ಳಿಯ ಕ್ರಿಕೆಟ್ ಮತ್ತು ಕೆಲವು ನೆನಪುಗಳು !!!

ನಮ್ಮ ಆಫೀಸಿನಲ್ಲಿ ಒಂದು ಕ್ರಿಕೆಟ್ tournament ಆಯೋಜಿಸಿದ್ದರು,ಹಾಗೆಯೇ ನಮ್ಮ ಬಾಲ್ಯದ ನೆನಪಾಗಿ,ನಮ್ಮ ಆಗಿನ ಕ್ರಿಕೆಟ್ ಶೈಲಿ,,ನಮ್ಮ ತಂಡಗಳು,ನಮ್ಮ ಆಟದ ಪರಿ ನೆನಪಾಗಿ,ಅದರ ಬಗ್ಗೆ ಒಂದಿಷ್ಟನ್ನು ನಿಮ್ಮ ಜೊತೆ ಹಂಚಿಕೊಳ್ಳೋಣ ಅನ್ನಿಸಿತು..
ನಮ್ಮ ಹಳ್ಳಿಯಲ್ಲಿ ಸಂಕ್ರಾಂತಿ ಕಳೆದರೆ ಸುಗ್ಗಿಯ ಕಾಲ,ಅಂದರೆ ರಾಗಿ ಕುಯ್ಯುವ ಕಾಲ.ರಾಗಿ ಕುಯ್ದು,ಹುಲ್ಲು ಮತ್ತು ರಾಗಿಯನ್ನು ಬೇರ್ಪಡಿಸಲು ಒಂದು ಕಣ ಮಾಡುತ್ತಾರೆ...
ಕಣ ಅಂದರೆ ಸುಮಾರು ೩೦*೩೦ ಜಾಗದಲ್ಲಿ ಸಮತಟ್ಟು ಮಾಡಿ ಸಗಣಿಯಿಂದ ಸಾರಿಸುತ್ತಾರೆ...ನಂತರ ಅಲ್ಲಿ ರಾಗಿಯನ್ನು ತೆನೆಯಿಂದ ಬೇರ್ಪಡಿಸುವ ಕಾರ್ಯ ಶುರು,ನಂತರ ಹುಲ್ಲನ್ನು ರಾಗಿಯನ್ನು ಒಣಗಿಸಲು ಮತ್ತು ಸ್ವಲ್ಪ ದಿನ ಅಲ್ಲಿಯೇ ಅದನ್ನು ಗುಡ್ಡೆ ಮಾಡಿ,ಒಂದು ದಿನ ಪೂಜೆ ಮಾಡಿ,ಅಲ್ಲಿಂದ ರಾಗಿಯನ್ನು ತಮ್ಮ ಮನೆಗಳಿಗೆ ಸಾಗಿಸುತ್ತಾರೆ..
ಕಣವನ್ನು ಒಂದೊಂದು ಮನೆಯವರೇ ಮಾಡುವುದಿಲ್ಲ,ಬದಲಾಗಿ  - ಮನೆಯವರು ಒಟ್ಟಿಗೆ  ಸೇರಿ ಮಾಡುತ್ತಾರೆ..ಇದರಿಂದ ಅವರ ನಡುವೆ ಭಾಂದವ್ಯ ಚೆನ್ನಾಗಿರುತ್ತದೆ,ಮತ್ತು ಅಷ್ಟೂ ಮನೆಯವರು ಎಲ್ಲಾ ಮನೆಯವರ ಕೆಲಸವನ್ನು ಒಟ್ಟಿಗೆ ಮಾಡುತ್ತಾರೆ,ರಾಗಿ ಕುಯ್ಯುವುದರಿಂದ ಹಿಡಿದು,ಅದನ್ನು ಬೇರ್ಪಡಿಸಿ,ರಾತ್ರಿ ಸಮಯದಲ್ಲಿ  ಕಣದಲ್ಲೇ ಮಲಗಿ ಕಾಯುವುದು,ಕಣ  ತಯ್ಯಾರು ಮಾಡುವುದು,ಎಲ್ಲವೂ,ಒಬ್ಬರ ಮನೆಯ ಕೆಲಸಕ್ಕೆ ಇನ್ನೊಬ್ಬರು ಬರುತ್ತಾರೆ,ಅವರ ಮನೆಯ ಕೆಲಸಕ್ಕೆ ಇವರು,ಇವರ ಮನೆಯ ಕೆಲಸಕ್ಕೆ ಅವರು..ಆದ್ದರಿಂದ ಕೂಲಿ ಕೆಲಸದವರನ್ನು ಕರೆಸುವುದು ತಪ್ಪುತ್ತದೆ.. ರೀತಿ ಒಬ್ಬರ ಮನೆಗೆ ನಾವು ಹೋಗಿ,ನಮ್ಮ ಮನೆಯ ಕೆಲಸಕ್ಕೆ ಅವರು ಬರುವು ಪದ್ಧತಿಗೆ 'ಮುಯ್ಯಿ ಆಳು' ಎಂದು ಕರೆಯುತ್ತಾರೆ..

ಇರಲಿ ವಿಷಯಕ್ಕೆ ಬರೋಣ, ಸುಗ್ಗಿಯೆಲ್ಲ ಮುಗಿಯುವುದು ಉಗಾದಿಯ ಹೊತ್ತಿಗೆ,ಅಂದರೆ ಹತ್ತಿರ ಹತ್ತಿರ ಮಾರ್ಚ್,ಅಂದರೆ ನಮ್ಮೆ ವಾರ್ಷಿಕ ಪರೀಕ್ಷೆ ಮುಗಿದು,ಬೇಸಿಗೆ ರಜ ಶುರು ಆಗುವ ಸಮಯ..
ಬೇಸಿಗೆ ರಜೆಯಲ್ಲಿ ನಮಗೆ ಕಣವೇ ಕ್ರಿಕೆಟ್ ಪಿಚ್ ,ಹೇಗೂ ಮಳೆಗಾಲ ಶುರು ಆಗುವವರೆಗೂ ಜಮೀನಲ್ಲಿ ಅವರು ಉಳುವುದಿಲ್ಲ,.ಭೇಸಾಯ ಮಾಡಿದರು ಏನನ್ನೂ ಬೆಳೆಯಲು ಸಾಧ್ಯವಿಲ್ಲ,ನೀರಿನ ಸಮಸ್ಯೆ ಮುಖ್ಯವಾಗಿ..ಏನೇ ಆದರೂ ಅದು ಹಾಗೆ ಬಿಟ್ಟಿರುತ್ತಾರೆ..ಇದು ತುಂಬ ಹಿಂದಿನಿಂದ ನಡೆದು ಬಂದಿದೆ..ಮಳೆಗಾಲ ಶುರು ಆಗುಯ ಸ್ವಲ್ಪ ಮುಂಚೆ ಅದನ್ನು ಉಳುತ್ತಾರೆ,ಅಲ್ಲದೆ ಸ್ವಲ್ಪ ದಿನದ ಮಟ್ಟಿಗೆ  ಜಮೀನಿಗೆ  ರಸ್ಟ್ ಕೊಡುವ ಪರಿಭಾಷೆಯೂ ಇರಬಹುದು....
ಸರಿ, ಕಣ ಕೇವಲ ಪಿಚ್ ಮಾತ್ರ,ನಮ್ಮ ಬೌಂಡರಿ ಇರುತ್ತಿದ್ದದ್ದು,ಮಳೆ ಬಂದ ದಿನ(ಅದೂ ಜೋರಾಗಿ)ಮಾತ್ರ ಹರಿಯುವ ಹಳ್ಳ,ಅಥವಾ ಹೊಲದ ತಂತಿ ಬೇಲಿ,ಹೊಲದ ಬದಿ ಇರಬಹುದು,ಹೀಗೆ ಸಾಗುತ್ತಿತ್ತು..
 ಪಿಚ್ ಮಾತ್ರ ಸಮ ವಾಗಿರುತ್ತಿತ್ತು,ಉಳಿದಂತೆ ಹೊಲದಲ್ಲಿ ಮಣ್ಣಿನ ಉಂಡೆಗಳು(ಹೆಂಟೆ ),ಬಾಲ್ ಹೆಂಟೆಗೆ  ತಾಗಿ ಮುಂದಕ್ಕೆ ಹೋಗಬಹುದು,ಬಲಕ್ಕೂ ,ಎಡಕ್ಕೂ ಯಾವ ದಿಕ್ಕಿಗೂ  ಹೋಗಬಹುದು,ಒಟ್ಟಿನಲ್ಲಿ ಅಲ್ಲಿ fielding
ಮಾಡುವವನ ಗತಿ ಅಧೋಗತಿ,ಅದರಲ್ಲೂ ಮಣ್ಣಿನ ಹೆಂಟೆ ಗಳಲ್ಲಿ ಓಡಿ ಬಾಲ್ ಹಿಡಿಯಬೇಕು.fielding  ಮಾಡುವುದು ಒಂದು ರೀತಿಯ ಹಿಂಸೆಯೇ ಸರಿ,ಆದರೂ ಉತ್ಸಾಹಕ್ಕೆನು  ಕಡಿಮೆ ಇರಲಿಲ್ಲ...
ಇಂಥ ಗುಣಮಟ್ಟದ ಪಿಚ್ನಲ್ಲಿ ಕೂಡ ಸುತ್ತ ಮುತ್ತಲಿನ ಊರಿನವರ ಜೊತೆ ಪಂದ್ಯಗಳನ್ನು ಆಡುತ್ತಿದ್ದೆವು..
ನಮ್ಮ ಪಕ್ಕದ ಉರಿನಲ್ಲಿ ಕೆರೆ ಇತ್ತು,ಅವರು ಕೆರೆಯಲ್ಲಿ ಆಡುತ್ತಿದ್ದರು,ಅದು ಸ್ವಲ್ಪ ದಿನದ ಮಟ್ಟಿಗೆ ಕ್ಷಣಿಕ ಸುಖ,ಕಾರಣ,ಕೆರೆಯ ಮಣ್ಣನ್ನು ತಮ್ಮ ತಮ್ಮ ಜಮೀನಿಗೆ ಹಾಕಿಸಿಕೊಳ್ಳಲು ಅಲ್ಲಲ್ಲಿ ದೊಡ್ಡ ದೊಡ್ಡ  ಗುಂಡಿ ತೆಗೆಯುತ್ತಿದ್ದರು.ಹಾಗಾಗಿ ಪಿಚ್ ಆಳು ಮಾಡುತ್ತಿದ್ದರು..
ಕೆಲವೊಮ್ಮೆ ನಾವು ತೆಂಗಿನ ಗರಿಗಳನ್ನು ಸವರಿ,ಅದರ ಎಡವು ಮಟ್ಟೆಯನ್ನು ಮಚ್ಚಿನಿಂದ ಅಥವಾ ಕುಡುಗೋಲಿನಿಂದ ತುಂಡು ಮಾಡಿ,ಬ್ಯಾಟ್ ಮಾಡುತ್ತಿದ್ದೆವು,ಊರಿನವರೆಲ್ಲ ಒಂದಷ್ಟು ದುಡ್ಡು ಹಾಕಿ ಬ್ಯಾಟ್ ತರುವುದಕ್ಕೂ ಮುಂಚೆ ನಮಗೆ nature  ಗಿಫ್ಟ್ ಬ್ಯಾಟ್ ಗತಿಯಾಗಿತ್ತು..
ನೀಲಗಿರಿಯ ಕಡ್ಡಿಗಳನ್ನು ಸವರಿ,ಅದಕ್ಕೆ ಮೂತಿಯನ್ನು ಕೆತ್ತಿ ವಿಕೆಟ್ ಮಾಡಿ ಕೊಂಡಿದ್ದೆವು,ಒಬ್ಬೊಬ್ಬರು - ರುಪಾಯೀ  ಸೇರಿಸಿ ಬಾಲ್ ತರುತ್ತಿದ್ದೆವು..ಹೀಗಿತ್ತು ನಮ್ಮ ಕ್ರಿಕೆಟ್..
ಇದರ ಜೊತೆಗೆ ಹಸು ಮೇಯಿಸುವುದು ,ತೋಟಕ್ಕೆ ನೀರು ಬಿಡುವುದು,ಮತ್ತೆ ಮೇವು  ತರುವುದು  ಇವೆಲ್ಲ ಕೆಲಸಗಳನ್ನು ಮಾಡಬೇಕಿತ್ತು..
ಹೊಯ್ಸಳ ಕಪ್,ವೀರಭದ್ರ ಕಪ್,ಪುಷ್ಪಗಿರಿ ಕಪ್..ಹೀಗೆಲ್ಲ ಕೆಲವ ಪಂದ್ಯಾವಳಿಗಳು ನಡೆಯುತ್ತಿದ್ದವು....
ಹೀಗೆ ಸುತ್ತಮುತ್ತಲ ಗ್ರಾಮಗಳಿಗೆ ಹೋಗುತ್ತಿದ್ದೆವು ,ನಮ್ಮ ಊರಿನ ಪಿಚ್  ಗಳು ಹೊಲದ ಮಧ್ಯೆ ಇದ್ದದ್ದರಿಂದ ಅಷ್ಟು ಅನುಕೂಲಕರವಲ್ಲವೆನ್ದು ನಾವು ಯಾವ ಪಂದ್ಯಾವಳಿಗಳನ್ನು ಆಯೋಜಿಸಿರಲಿಲ್ಲ.
ಹೀಗೆ ಒಮ್ಮೆ ೭ನೆ ಕ್ಲಾಸ್ ಅನ್ನಿಸುತ್ತದೆ,ನಮ್ಮೂರಿಂದ ಸುಮಾರು - ಕಿಮೀ ದೂರದ ಊರಿಗೆ ಹೋಗಿದ್ದೆವು,ಮೊದಲ ಪಂದ್ಯ ಗೆದ್ದು,ಎರಡನೇ ಪಂದ್ಯ ಸೋತು ವಾಪಸ್ ಬರುತ್ತಿದ್ದೆವು.ನಮ್ಮೂರಿಂದ ಕೆಲವರು ಸೈಕಲ್ ನಲ್ಲಿ,ಕೆಲವರು ಬಸ್ ನಲ್ಲಿ ಹೋಗಿದ್ದೆವು.ನಾನು ಮತ್ತು ನನ್ನ ಸ್ನೇಹಿತ ನನ್ನ ಸೈಕಲ್ ನಲ್ಲಿ ಹೋಗಿದ್ದೆವು.ವಾಪಸ್ ಬರುವಾಗೆ ಸೈಕಲ್ ಚೈನು ಕಟ್ ಆಯಿತು.ಹಳೇಬೀಡಿಗೆ ಇನ್ನು ಸುಮಾರು   ಕಿಮೀ ಇದೆ,ಅಲ್ಲಿಂದ ನಮ್ಮೂರಿಗೆ / ಕಿಮೀ,ಹೇಗಪ್ಪ ಈಗ ಹಳೆಬೀಡಿನ ತನಕ ಹೋಗುವುದು,ಅಲ್ಲಿ ಹೇಗೂ ರಿಪೇರಿ ಮಾಡಿಸಿ ಕೊಂಡರಾಯಿತು ಎಂಬ ಯೋಚನೆ ಇದ್ದಾಗ,ಅಲ್ಲೇ ಪಕ್ಕದ ತೋಟಕ್ಕೆ ಹೋಗಿ,ಒಂದು ದಾರ ಮತ್ತು ಸಣ್ಣ ತಂತಿಯನ್ನು ಅವರಿಂದ ಪಡೆದು ಹೇಗೂ  ಪೇಟೆಯವರೆಗೆ ತಲುಪಿ ರಿಪೇರಿ ಮಾಡಿಸಿಕೊಳ್ಳುವವರೆಗೂ ನಾವಿಬ್ಬರು ಪಟ್ಟ ವ್ಯಥೆ ಕೇಳತೀರದು,ಅದು ಮಧ್ಯದಲ್ಲಿ ಇನ್ನೊಮ್ಮೆ ಹರಿದು  ಹೋಗಿ,ಮತ್ತೆ ತಾತ್ಕಾಲಿಕವಾಗಿ ಚೈನಿಗೆ ತಂತಿ ಸಿಗಿಸೆದ್ದೆವು.

ಬೇಸಿಗೆ ಕಳೆದ ಮೇಲೆ ನಮಗೆ ನಮ್ಮೂರ ಶಾಲೆಯ ಮರಗಳ ನಡುವೆ ಇರುವ,ಶಾಲೆಯ ಮಕ್ಕಳು ಪ್ರಾರ್ಥನೆ ಮಾಡುವ ಜಾಗವೇ ಕ್ರಿಕೆಟ್ ಪಿಚ್ ಆಗುತ್ತಿತ್ತು.ಅಲ್ಲಿ ನಮ್ಮೂರಿನ ಕೆಲವರು ಆಡಲು ಬಿಡುತ್ತಿರಲಿಲ್ಲ.ಕಾರಣ ನಾವು ಶಾಲೆಯ ಹೆಂಚುಗಳನ್ನು ಹೊಡೆದು ಹಾಕುತ್ತಿವಿ ಎಂದು.ಸರಿ ಕೆಲ ದಿನಗಳು ಅಲ್ಲಿ ಆಡಿದೆ ನಂತರ ಎಲ್ಲರು ಬೈಯ್ಯಲು ಶುರು ಮಾಡುತ್ತಿದ್ದರು,ನಮ್ಮ ನಮ್ಮ ಮನೆಗಳಲ್ಲಿ ಕೂಡ.ಹಾಗಾಗಿ ಅಲ್ಲಿ ಆಡಲು ಬಿಟ್ಟೆವು ,ನಂತರ ಯಾರದಾದರೂ ಮನೆಯ ಬಳಿ ಜಾಗವೇ ಗತಿಯಾಗುತ್ತಿತ್ತು.
ನಮ್ಮ ಮನೆಯ ಪಕ್ಕದಲ್ಲಿ ಎತ್ತಿನ ಗಾಡಿ ನಿಲ್ಲಿಸುವ ಜಾಗದಲ್ಲಿ ಸ್ವಲ್ಪ ದಿನ ಆಡಿದೆವು.ಆಗ ನಡೆದಂತಹ ಒಂದು ಘಟನೆ.
ಆಟದ ಮಧ್ಯೆ ಒಮ್ಮೆ ಬಾಲು ಬೇಲಿಯ ಸಂಧಿ ಹೋಯಿತು.ಅಲ್ಲಿದ್ದ ಒಬ್ಬ ಹುಡುಗ ಬಾಲ್ ತರಲು ಹೋದವನು,"ಲೋ ಬರ್ರೋ ಇಲ್ಲಿ,ನೋಡ್ರೋ" ಅಂದ.
ಏನಪ್ಪಾ ಅಂತ ಹತ್ತಿರ ಹೋಗಿ ನೋಡಿದರೆ ಅಲ್ಲೊಂದು ಜೇನು ಕಟ್ಟಿತ್ತು.ಅದಕ್ಕೂ ಮುಂಚೆ ಯಾರು ಕೂಡ ಜೇನನ್ನು ಅಳಿಸಿರಲಿಲ್ಲ,ದೂರದಿನ್ದ ನೋಡಿದವರೇ.
ಸರಿ ಇನ್ನೇನು ಸಾಹಸಕ್ಕೆ ಕೈ ಹಾಕೋಣ ಎಂದು ನಿರ್ಧರಿಸಿ  ಎಲ್ಲ ಸಾಮಗ್ರಿಗಳನ್ನಿ ಸಿದ್ಧ ಪಡಿಸಿಕೊಂಡೆವು.
ಒಬ್ಬ ಹೇಳಿದ 'ಇದು ಕೋಲು ಜೇನು  ,ಸ್ವಲ್ಪ ಹುಷಾರಾಗಿರಬೇಕು,ಕಡಿದರೆ ಮುಖ ಊದುತ್ತದೆ"ಅಂತ.
ಸರಿ ಸೌದೆ,ತೆಂಗಿನ ಗರಿಗಳಿಗೇನೂ ಬರ ಇಲ್ಲ,ಬೆಂಕಿ ಪೊಟ್ಟಣ ಮತ್ತು ಒಂದು ಪಾತ್ರೆ ನಮ್ಮ ಮನೆಯಿಂದ ತಂದಿದ್ದಾಯಿತು.
ಮೊದಲು ಸ್ವಲ್ಪ ದೂರದಿನ್ದ ಸೋಗೆ ಗರಿಗಳಿಗೆ  ಬೆಂಕಿ ಹಚ್ಚಿ ಉರುಲು ಕೊಟ್ಟೆವು,ಯಾಕೋ ಜೇನುಗಳು ಜಗ್ಗಲಿಲ್ಲ.ಜೋರಾಗಿ ಬೆಂಕಿ ಹಚ್ಚುವ ಅಂದರೆ ಹತ್ತಿರದಲ್ಲೇ ಹುಲ್ಲಿನ ಮೆದೆ ಇದೆ(ಹಸು ಕರುಗಳಿಗೆ)
.ನಂತರ ಒಂದೆರಡು ಬಕೆಟ್  ನೀರು ತಂದು ,ಸ್ವಲ್ಪ ಜೋರಾಗಿ ಬೆಂಕಿ ಕಾವು ಕೊಟ್ಟೆವು.ಆಗ ಜೇನು ಒಂದೊಂದಾಗಿ ಪರಾರಿಯಾಗಲು ಶುರು  ಮಾಡಿದವು.ಜೊತೆಗೆ ಎಲ್ಲರಿಗು ಒಂದು ಅಥವಾ ಎರಡೆರಡು ಕಡೆ ಕಡಿದಿದ್ದವು.
ಸ್ವಲ್ಪ ಸಣ್ಣಗೆ ಊತ ಕೂಡ ಬಂದಿತ್ತು.ಎಷ್ಟೇ ಜೇನು ನೊಣಗಳು ಪರಾರಿಯಾದರು ಅಲ್ಲೊಂದು ಇಲ್ಲೊಂದು ಇದ್ದವು.ನಂತರ ಉಳಿದ ಗೆಡ್ಡೆಯನ್ನು ತೆಗೆದು ಹಿಂಡುತ್ತ ಹೋದರೆ ಸುಮಾರು ಅರ್ಧ ಲೀಟರ್ ಫ್ರೆಶ್ ಜೇನು ತುಪ್ಪ.
ಅಲ್ಲಿದ್ದ ಸುಮಾರು  - ಜನ ತೃಪ್ತಿಯಿಂದ ಆಗುವಷ್ಟು ತಿಂದೆವು.
ಆಗ ಅಲ್ಲೊಬ್ಬ ಹುಡುಗ "ಯಾರು ಕೈ ತೊಳೆದು ಕೊಳ್ಳುವವರೆಗೂ  ತಲೆ ಮುಟ್ಟಿ ಕೊಳ್ಳ ಬೇಡಿ  ಕೂದಲೆಲ್ಲ ಬಿಳಿ ಆಗುತ್ತೆ "ಅಂದ.ಇದು ಎಷ್ಟರ ಮಟ್ಟಿಗೆ ನಿಜ ಅಂತ ಗೊತ್ತಿಲ್ಲ.
ಸಮಯದಲ್ಲಿ ನಮ್ಮ ಮನೆಯಲ್ಲಿ ಯಾರು ಇರಲಿಲ್ಲ.ಬಂದ  ನಂತರ ಅಪ್ಪ ಅಮ್ಮನ ಹತ್ತಿರ ವಿಷಯ ಹೇಳಿದಾಗ ಅವ್ರು ಸರಿಯಾಗಿ ಕಡಿದಿದ್ದರೆ ಚೆನ್ನಾಗಿರುತಿತ್ತು.ಬರೀ ಇಷ್ಟೇನಾ ಊದಿರದು ಅಂತ ಹೇಳಿದ್ದರು.ನನಗೆ ನನ್ನ ತುಟಿಯಲ್ಲಿ ಸ್ವಲ್ಪ ಊದಿತ್ತು.ಮಾರನೆಯ ದಿನ ಶಾಲೆಗೇ ಅದೇ ಮುಖದಲ್ಲಿ ಹೋಗಿದ್ದೆ..
ಹೀಗೆ ನಮ್ಮ ಕ್ರಿಕೆಟ್ ಸಾಗುತ್ತಿತ್ತು.ಮಾಮೂಲಿ ಜಗಳಗಳು,ಮತ್ತೆ ಹೊಂದಾಣಿಕೆ ನಮ್ಮ ರಾಜಕೀಯ ಪಕ್ಷಗಳ ತರಹ ಸಾಗುತ್ತಿತ್ತು.