Sunday, October 30, 2011

ಮತಾಂತರ !!!

ಎಂದೂ ತಪ್ಪದ ದೇವಸ್ಥಾನದ ಪೂಜೆ,ಸ್ವಾಮಿಗಳಿಗೆ ನಿಷ್ಟರಾಗಿದ್ದ ಜನ ,ಎಲ್ಲರೂ ಒಂದೊಂದು ಕೆಲಸಗಳಲ್ಲಿ ತೊಡಗಿಕೊಂಡಿದ್ದ ಜನ ಇದ್ದಂತಹ ಊರಲ್ಲಿ ಒಂದು ಹಲಗೇರಿ ಇತ್ತು..ಊರು ಇದ್ದ ಕಡೆ ಹೊಲಗೇರಿ ಎಂಬಂತೆ.ಯಾವ ಕುಲಕ್ಕೂ ಸೀಮಿತವಾಗದ ದೇವಸ್ಥಾನದಲ್ಲಿ ಮೇಲ್ಜಾತಿಯವರೇ ಪೂಜೆ ಮಾಡುತ್ತಿದ್ದರೂ,ಊರಿನ ಕುಲದಿನೆಂಟು ಜಾತಿಯವರೂ,ಹಕ್ಕಿ ಶಿಕಾರ್ರು,ಕುಕ್ಕೆ ಕೊರಮರು ಹೀಗೆ ನಾನಾ ಪಂಗಡಗಳಿಗೆ ಸೇರಿದ ಜನರು  ಅಲ್ಲಿಗೆ ಬರುತ್ತಿದ್ದರು,ಕೆಲವೊಮ್ಮೆ ಭಜನೆಗೂ ಎಲ್ಲಾ ಜನರು ಬರುತ್ತಿದ್ದರು.

ಇಂಥ ಊರಲ್ಲಿ ಇದಕಿದ್ದ ಹಾಗೆ ಹೊಲಗೇರಿಯ ಕೆಲವು ದಲಿತರ ಮನೆಗಳ ಮೇಲೆ ಶಿಲುಬೆ ಏರತೊಡಗಿತು,ಕಾರ್ತಿಕ ಮಾಸ ಮುಗಿದ ಕೂಡಲೇ ಮನೆ ಮುಂದೆ ಕ್ರಿಸ್ಮಸ್ ನಕ್ಷತ್ರಗಳು  ಮೀನುಗ  ತೊಡಗಿತು.ಆ ಕಾಲೋನಿಯ ಎಷ್ಟೋ ಜನರು ದೇವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದರು.ಶಿವ,ರಾಮ,ಹರಿಯ ಭಜನೆ ಮಾಡುತ್ತಿದ್ದವರು ಏಸು ಪ್ರಭು ಎಂದು ಗುನುಗುನಿಸಲು ಶುರು ಮಾಡಿದರು.ಇದೆಲ್ಲರ ಹಿಂದಿನ ರೂವಾರಿ,ದಲಿತರ ಕಾಲೋನಿಯ ಏಕೈಕ ಡಿಗ್ರಿ ಪಧವಿದರ ಸುರೇಶ ಮತ್ತು ಗ್ರಾಮ ಪಂಚಯ್ತೀ ಸದಸ್ಯೆಯೂ ಆದ,ತನ್ನ ತಾಯಿ ವಿಧವೆ ನೀಲಮ್ಮ.

ಕೆಲವು ಪಂಗಡಗಳ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರು,ಅದನ್ನೂ ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಜೊತೆ ಕೆಲಸಕ್ಕೆ ಹಾಕಿಕೊಳ್ಳುತ್ತಿದ್ದರು.ಆದರೆ ಕೆಲವು ಮೇಲ್ಜಾತಿ ವರ್ಗದವರು ಮಾತ್ರ ಹೆಚ್ಹಾಗಿ ಓದಿಕೊಂಡಿದ್ದರು.ಇಂಥ ಸನ್ನಿವೇಶದಲ್ಲಿ ತಂದೆ ಕಳೆದುಕೊಂಡ ಸುರೇಶ ಮಾತ್ರ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳದೆ ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತಾನೆ.

ಒಂದು ಕ್ರೈಸ್ತ ಮಿಷನರಿ ನಡೆಸುತ್ತಿದ್ದ ಉಚಿತ ಹಾಸ್ಟೆಲ್ಲಿನಲ್ಲಿ ಸೇರುತ್ತಾನೆ,ಬೇರೆ ಕಡೆ ದುಡ್ಡು ಕಟ್ಟುವ ಶಕ್ತಿ ಇಲ್ಲದ ಕಾರಣ..ಹೀಗೆ ಅವನ ಓದು ಸಾಗುತ್ತಿದ್ದಾಗ,ಅವನ ಕಾಲೇಜಿನಲ್ಲೇ ಓದುತ್ತಿದ್ದ ಹಾಸ್ಟೆಲ್ಲಿನ ಪಕ್ಕದಲ್ಲೇ ಇದ್ದ ಚರ್ಚಿಗೆ ಪ್ರತಿ ಭಾನುವಾರ ಬರುತ್ತಿದ್ದ ಹುಡುಗಿಯ ಪರಿಚಯವಾಯಿತು.ಮೊದಮೊದಲು ನೆಪವೊಡ್ಡಿ ಚರ್ಚಿಗೆ ತಪ್ಪಿಸಿಕೊಳ್ಳುತ್ತಿದ್ದ ,ಬೈಬಲ್ ಓದಲು ಇಷ್ಟ ಪಡದ  ಸುರೇಶ ಅವಳ ಜೊತೆ ಚರ್ಚಿಗೆ ಹೋಗಲು ಮೊದಲು ಮಾಡಿದ.

ಬಿರುಗಾಳಿಯನ್ನು ತಡೆಯಲು ಹೇಗೆ ಸಾಧ್ಯ?ಸಮುದ್ರದ ಭೀಕರ ತೊರೆಯನ್ನು ನಿಲ್ಲಿಸಲು ಹೇಗೆ ಸಾಧ್ಯ ? ಅದೇಗೆ ಏಸು ಇದ್ದ ಒಂದು ರೊಟ್ಟಿಯನ್ನು ಅಷ್ಟೊಂದು ರೊಟ್ಟಿ ಮಾಡಿ ಸಾವಿರಾರು ಜನರಿಗೆ ನೀಡಿದ? ಇದೆಲ್ಲ ನಿಮ್ಮ ಮೂಡ ನಂಬಿಕೆ ಏನು ಬೈಬಲ್ಲಿನ ಸನ್ನಿವೇಶಗಳನ್ನು ಸುಳ್ಳು ಎಂದು ವಾದ ಮಾಡುತ್ತಿದ್ದ...ಕಾಲ ಜರುಗಿದಂತೆ ಫ್ಲೇವಿಯ ಎಂಬ ಹುಡುಗಿಯ ಪ್ರೀತಿಯ ಹಂಬಲದಲ್ಲಿ ಬಿದ್ದು,ಅವಳು ಮಡಿದ ಬೈಬಲ್ ಪಟನೆಗೆ ತಲೆದೂಗತೊಡಗಿದ.ಊರಿನ ತನ್ನ ಮನೆಯಲ್ಲಿದ್ದ  ಭಜನೆ ಪುಸ್ತಕಗಳು,ಶಾಲೆಯಲ್ಲಿ ಕೊಟ್ಟಿದ್ದ ಭಗವದ್ಗೀತೆ ಎಲ್ಲಾ ಓಲೆ ಸೇರಿದವು,ತಾನು ಕೂಡ ಬೈಬಲ್ ಓದಲು ಶುರು ಮಾಡಿದ..

ತಮ್ಮಿಬ್ಬರ ಮದುವೆ ಆಗಬೇಕೆಂದರೆ ಸುರೇಶ ತಮ್ಮ ಧರ್ಮಕ್ಕೆ ಬರಬೇಕು,ಅವನು ಇದನ್ನೇ ಪಾಲಿಸಬೇಕು ಎಂದು ಅರಿತಿದ್ದ ಫ್ಲೇವಿಯ ಅವನ ತಾಯಿಯನ್ನು ಹೇಗಾದರೂ ಒಪ್ಪಿಸಬೇಕು ಎಂದು ಪಣ ತೊಟ್ಟು,ಆಗಾಗ ಅವನ ಜೊತೆ ಇವನ ಹಳ್ಳಿಗೆ ಬರಲು ಶುರು ಮಾಡಿದಳು.ಪ್ರತಿ ಬಾರಿ ಬಂದಾಗಲು,ಸುರೇಶನ ತಾಯಿಗೆ ಏನೇನೋ ತುಂಬಲು ಶುರು ಮಾಡಿದಳು.ಮೇಲ್ಜಾತಿಯವರು ನಿಮ್ಮ ಓಣಿಗೆ ಬರಲ್ಲ,ನಿಮ್ಮ ಕೈಲಿ ದೇವಸ್ಥಾನದಲ್ಲಿ ಪೂಜೆ ಮಾಡುವುದಕ್ಕೆ ಬಿಡಲ್ಲ,ಇಲ್ಲಿ ಸಮಾನತೆ ಇಲ್ಲ,ಆದರೆ ನಮ್ಮ ಧರ್ಮದಲ್ಲಿ ಈ ರೀತಿ ಇಲ್ಲ... ಏನೇನೋ ಹೇಳತೊಡಗಿದಳು...

ನೀವು ನಮ್ಮ ಧರ್ಮಕ್ಕೆ ಬನ್ನಿ,ನಿಮ್ಮ ಒಳ್ಳೆಯ ಸವಲತ್ತು ಗಳನ್ನು  ಕೊಡುತ್ತೇವೆ ಎಂದೆಲ್ಲಾ ಹೇಳಿ ಮೊದಲೇ ದುಡ್ಡು ಎಂದರೆ  ಬಾಯಿ ಬಿಡುತ್ತಿದ ನೀಲಮ್ಮ ಚರ್ಚಿನವರು ಕೊಟ್ಟ ಒಂದಷ್ಟು ಪಡೆದು  ಅಲ್ಲಿ ಒಂದು ಪುಸ್ತಕಕ್ಕೆ ಸಹಿ ಮಾಡಿ ಆ ಧರ್ಮಕ್ಕೆ ಮತಾಂತರಗೊಂಡಳು..ಇದರ ಹಿಂದೆಯೇ ತನ್ನ ಮದುವೆಗೆ ಅನುಕೂಲವಾಗುತ್ತದೆ ಎಂದು ಮೊದಲೇ ಅರಿತಿದ್ದ ಸುರೇಶ ಕೂಡ...ಇದರ ಜೊತೆಗೆ ಈ ಉರಿನಲ್ಲಿ ಹೊಸ ಪಂಗಡ ಒಂದು ಶುರು ಆಯಿತು..

ಆ ಹುಡುಗಿ ಪ್ರತಿ ಬಾರಿ ಊರಿಗೆ ಬಂದಾಗ ಸುರೇಶನ ಮನೆಯಲ್ಲಿ ಒಂದೊಂದು ಬದಲಾವಣೆ ಆಗ ತೊಡಗಿತು.ಮೊದಲು ಪ್ರತಿ ಸೋಮವಾರ ನಡೆಯುತ್ತಿದ್ದ ಪೂಜೆ ನಿಂತಿತು,ಭಾನುವಾರ ಚರ್ಚಿಗೆ ಹೋಗಲು ಶುರು ಮಾಡಿದಳು ನೀಲಮ್ಮ...ನಂತರ ಮನೆಯಲ್ಲಿದ್ದ ಗಣಪತಿ,ಶಿವ,ಲಕ್ಷ್ಮಿ ಪಟಗಳು ಗೋಡೆಯಿಂದ ತೆಗೆಯಲ್ಪಟ್ಟಿತ್ತು...ಇವೆಲ್ಲ ಸುಟ್ಟು ಬೂದಿ ಆದವು...ಶಿಲುಬೆಯ ಆಕೃತಿ ಗೋಡೆಯಲ್ಲಿ ಅಲಂಕಾರ ಗೊಂಡಿತು...ನಂತರ ಈ ಒಡವೆ ಗಳೆಲ್ಲ ಬರೀ ವಿಜೃಂಭಣೆ ,ಇದು ಏಸುವಿಗೆ ಇಷ್ಟವಿಲ್ಲ ಎಂದು ಹೇಳಿ,ನೀಲಮ್ಮನ ಬಳೆ,ಕಿವಿಯಲ್ಲಿದ್ದ ಓಲೆ,ಸರಗಳನ್ನು ತೆಗೆಸಿದಳು...ಹಣೆಗೆ ಕುಂಕುಮ ಹರಿಶಿನ ಹಚ್ಚಿಕೊಳ್ಳುವುದು ನಿಂತ ನಂತರ ಅವುಗಳೆಲ್ಲ ತಿಪ್ಪೆ ಸೇರಿದವು..ಹಬ್ಬ ಹರಿದಿನಗಳು  ಗುತ್ತು ಗುರಿ ಇಲ್ಲದಂತಾಯಿತು...ಕೇವಲ ಕ್ರಿಸ್ಮಸ್ ಆಚರಣೆ ಶುರು ಆಯಿತು..ಹೀಗೆ ಒಂದೊಂದು ಬದಲಾವಣೆ ಆದ ನಂತರ ನೀಲಮ್ಮ ಪೂರ್ತಿ ಕ್ರೈಸ್ತ ಮಹಿಳೆ ಆದಳು...

ತನ್ನ ಅಣ್ಣ,ತನ್ನ ಮಗಳನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದಾಗ ,ಅದು ಚರ್ಚಿನಲ್ಲಿ ಮದುವೆ ಸಮಾರಂಭ ಇಟ್ಟು ಕೊಳ್ಳೋಣ ಎಂದ್ದಾಗ,ಈ ಮದುವೆ ಮುರಿದು ಬಿತ್ತು ಅಲ್ಲದೆ ನೀಲಮಮ್ನ ಅಣ್ಣ ಅವಳ ಜೊತೆ ಜಗಳ ಮಾಡಿಕೊಂಡು ಹೋದ...

ಗ್ರಾಮದಲ್ಲಿ ನಡೆಯುವ ಸಿದ್ಧ ಮಲ್ಲೇಶ್ವರನ ಜಾತ್ರೆಗೆ ಹೋಗುವುದನ್ನು ನಿಲ್ಲಿಸಿದಳು...ದೇವಸ್ಥಾನಕ್ಕೆ ಕಾಣಿಕೆ ನಿಲ್ಲಿಸಿದಳು...ಆಗಾಗ ಮನೆಗೆ ಬರುತ್ತಿದ್ದ ಸ್ವಾಮಿಯನ್ನು ಕರೆಯುವುದನ್ನು ನಿಲ್ಲಿಸಿದಳು..ಬದಲಾಗಿ ಚರ್ಚಿನ ಫಾದರ್ ಗಳು ಬರಲು ಶುರು ಮಾಡಿದರು...

ಇದೆಲ್ಲದರ ಜೊತೆಗೆ ಮನೆಯಲ್ಲಿ ಒಂದಿಷ್ಟು ಬೈಬಲ್ ಪ್ರತಿಗಳನ್ನು ಇಟ್ಟುಕೊಂಡು,ತನ್ನ ಓಣಿಯ ಹೆಂಗಸರಿಗೆಲ್ಲ ಓದಲು ಬರದ ನೀಲಮ್ಮ,ತನ್ನ ಮಗನಿಂದ ಮತ್ತು ಆ ಹುಡುಗಿಯಿಂದ ಮತ್ತು ಚರ್ಚಿನಲ್ಲಿ ಹೇಳುತ್ತಿದ್ದ ಬೈಬಲ್ಲಿನ ಪಾಠವನ್ನು ಒಪ್ಪಿಸ ತೊಡಗಿದಳು...ಇದಕ್ಕೆಲ್ಲ ಕಾರಣ,ಇನೊಂದಿಷ್ಟು ಜನರನ್ನು ಚರ್ಚಿಗೆ ತಂದರೆ ಇನ್ನಷ್ಟು ದುಡ್ಡನ್ನು ಕೊಡುತ್ತೇವೆ ಎಂದು ಹೇಳಿದ್ದೆ ಕಾರಣ...

ಇದರಿಂದ ತಮಗೂ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ತಿಳಿದ ಎಮ್ಮೆ ಮಲ್ಲನ ಹೆಂಡತಿ ನಾಗಮ್ಮ, ಸುಣ್ಣದ ಬಸವನ ಸೊಸೆ ಕಾಳಮ್ಮ..ಹೀಗೆ ಒಬ್ಬೊಬ್ಬರಾಗಿ ಚರ್ಚಿಗೆ ಹೋಗಲು ಶುರು ಮಾಡಿದರು...

ಕೆಲವು ಗಂಡಸರು ಮಾತ್ರ ತಮ್ಮ ಮನೆಗೆ ಬಂದ ಫಾದರ ಗಳಿಗೆ ಬೈದು ,ಇನ್ನೊಮ್ಮೆ ಬಂದರೆ ಕಾಲು ಮುರಿಯುವುದಾಗಿ ಬೆದರಿಸಿ ಕಳುಹಿಸಿದರು..

ಅಲ್ಲದೆ ಅವರು ಮುಖ್ಯ ಗುರಿಯಾಗಿಸಿಕೊಂಡಿದ್ದು ಕಾಯಿಲೆ ಬಿದ್ದವರನ್ನು ,ಅವರಿಗೆ ಬೈಬಲ್ ನಲ್ಲಿರುವ ಏಸು ಕಾಯಿಲೆ ವಾಸಿ ಮಾಡಿದ ಪ್ರಸಂಗಗಳನ್ನು ಹೇಳಿ ತಾವು ಚರ್ಚಿಗೆ ಬಂದರೆ ತಮ್ಮ ಕಾಯಿಲೆಗಳನ್ನು ವಾಸಿ ಮಾಡುವುದಾಗಿ ಹೇಳಿದರೂ,ಚರ್ಚಿಗೆ ಹೋದರು ತಮ್ಮ ಕಾಯಿಲೆ ವಾಸಿ ಆಗದೆ ಇದ್ದಾಗ ಇದೆಲ್ಲ ಸುಳ್ಳು ಎಂದು ನಂಬಿ ತಮಗೆ ಸಿಕ್ಕ ದುಡ್ಡನ್ನು ಇಟ್ಟಿಕೊಂಡು ಚರ್ಚಿಗೆ ಹೋಗುವುದನ್ನು ಕೆಲವರು ನಿಲ್ಲಿಸಿದರು...

ವರ್ಷಕ್ಕೊಮ್ಮೆ ಮಾಸ್ತಮ್ಮ ದೇವರಿಗೆ ಕೋಳಿ,ಕುರು ಬಲಿ ಕೊಡಲು ಓಣಿಗೆ ಒಣಿಯೇ ಗಾಡಿಗಳಲ್ಲಿ ಹೋಗುತ್ತಿದ್ದರೆ,ಈ ಬಾರಿ ಹೋಗುವವರ ಸಂಖ್ಯೆ ಕಡಿಮೆ ಆಗ ತೊಡಗಿತು...

ಹೀಗೆ ಕೆಲವು ಜನರು ಊರಿನ ಹಿರಿಯರ ಸಲಹೆ ಅಂತೆ ಮತ್ತೆ ತಮ್ಮ ಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ಹಾಗೆ ಮುಂದುವರೆದರು, ನೀಲಮ್ಮನಂಥ  ಕೆಲವರು ಚರ್ಚಿಗೆ ಹೋಗಲು ನಿಲ್ಲಿಸಲಿಲ್ಲ... ಸುರೇಶ ಫ್ಲೆವಿಯಳನ್ನು ಮದುವೆ ಆಗಿ ಅದೇ ಚರ್ಚಿನಲ್ಲಿ ಕೆಲಸಕ್ಕೆ ಆ ಧರ್ಮ ಪ್ರಚಾರಕ್ಕೆ ಕೆಲ್ಸಕ್ಕೆ ಸೇರಿಕೊಂಡ... ತನ್ನ ಉರಿನಲ್ಲಿ ಕೂಡ ಇನ್ನಷ್ಟು ಜನರನ್ನು ಚರ್ಚಿಗೆ ಕರೆ ತರಲು ಪ್ರಯತ್ನ ಮಾಡಿದರೂ  ಊರಿನ ಗಂಡಸರೆಲ್ಲ ಸೇರಿ ಧರ್ಮದೇಟು ಕೊಟ್ಟಾಗ ತನ್ನ ಉರಿನಲ್ಲಿ ಆ ಸಾಹಸಕ್ಕೆ ಮತ್ತೆ ಕೈ ಹಾಕಲಿಲ್ಲ....

--------------------------------------------------------------------------
## ಕಥೆ ##

Saturday, October 1, 2011

ಅಳಲು !!!

ದೊಡ್ಡೇಗೌಡ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬ...ವರ್ತಕರ ಸಂಘದ ಸದಸ್ಯ ಕೂಡ....ಉರಿನಲ್ಲಿ ಒಳ್ಳೆ ಹೆಸರಿದೆ... ಸಂತೆ ಬೀದಿಯಲ್ಲಿ ಬಿಳಿ ಪಂಚೆ,ಬಿಳಿ ಅಂಗಿ ಹಾಕಿಕೊಂಡು ನಡೆದು ಬಂದ ಅಂದರೆ ಅಲ್ಲಿರುವವರೆಲ್ಲರೂ ಎದ್ದು ನಮಸ್ಕರಿಸುತ್ತಾರೆ... ಗಟ್ಟಿಗ,ಧೈರ್ಯವಂತ,ಯಾರೊಬ್ಬರಿಗೂ ಒಂದು ರೂಪಾಯೀ ಮೋಸ ಮಾಡಿಲ್ಲ,ವ್ಯಾಪಾರದಲ್ಲಿ ಕೂಡ,ಹಾಗೆ ಯಾರೇ ಇವನಿಗೆ ಮೋಸ ಮಾಡಿದರೆ ಹಾಗೆ ಬಿಡುವ ಅಸ್ಸಾಮಿ ಅಲ್ಲ... ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಹಿರಿ ಮಗ ವೆಂಕಟೇಶ ಮತ್ತು ಕೊನೆ ವರ್ಷದ  ಡಿಗ್ರಿ ಮಾಡುತ್ತಿರುವ ಮಗಳು,ಇಬ್ಬರು ಮಕ್ಕಳ ಮದುವೆಯನ್ನು ಒಂದೇ ಚಪ್ಪರದಲ್ಲಿ ಮಾಡ ಬೇಕೆಂಬ ಆಸೆಯೊಂದಿಗೆ ಇಬ್ಬರಿಗೂ ವಧು ಮತ್ತು ವರನ ಅನ್ವೇಷಣೆಯಲ್ಲಿ ಕೂಡ ಇದ್ದನು...
ಅದೊಂದು ಭಾನುವಾರ ತನ್ನ ತೋಟ ಮತ್ತು ಅಂಗಡಿಯ ಕೆಲಸದವರಿಗೆ  ಬಟವಾಡೆ ಎಲ್ಲ ಮುಗಿಸಿ ತೋಟದ ಕಡೆ ಹೋಗಿದ್ದ... ಮನೆಯಲ್ಲಿ ಹೆಂಡತಿ ಒಬ್ಬಳೇ ಇದ್ದಳು... ಮಗ ವೆಂಕಟೇಶ ಒಂದು ಹುಡುಗಿಯ ಜೊತೆ ಮನೆಗೆ ಬಂದು,ತನ್ನ ತಾಯಿ ಹತ್ತಿರ ಅವಳನ್ನು ಮದುವೆ ಹಾಗಿರುವುದಾಗಿ ತಿಳಿಸಿದ....
ದೊಡ್ಡೇಗೌಡನ  ಹೆಂಡತಿ ದ್ಯಾವಮ್ಮ ಕುಸಿದು ಬೀಳುವಂತಾದಳು.... ಆಕಾಶ ಕಳಚಿ ತಲೆ ಮೇಲೆ ಬಿದ್ದ ಹಾಗೆ ಆದಳು...ಮಗನ ಈ ಮಾತಿಗೆ ಏನು ಹೇಳಬೇಕೆಂದು ತೋಚದೆ ಗಾಬರಿ ಬಿದ್ದಳು...ಇಂತ ಸಮಯದಲ್ಲಿ ಗಂಡ ಮನೆಯಲ್ಲಿ ಇರಬೇಕಿತ್ತು ಎಂದು ಕೊಂಡಳು ... ಅಳು ಬಂದರೂ ನುಂಗಿಕೊಂಡು "ಯಾಕ್ ಹೀಗ್ ಮಾಡಿದೆ? ನಮಗೆ ಹೇಳಿದ್ರೆ ನಾವೇ ಮದುವೆ ಮಾಡಿಸ್ತಿರ್ಲಿಲ್ವ ? ಯಾವಾಗ ಮದುವೆ ಆದೆ ? ಎಲ್ಲಿ ಆದೆ ? ಅವಳ ಮನೆಯಲ್ಲಿ ಈ ವಿಷಯ ಗೊತ್ತ ?" ಹೀಗೆ ಒಂದರ ಮೇಲೆ ಒಂದು ಪ್ರಶ್ನೆಯನ್ನು ಕೇಳಿದಳು...
ಮನಸ್ಸಿನಲ್ಲಿ ಇನ್ನು  ಮಗಳ ಮದುವೆ   ಮಾಡಬೇಕು,ಈ ವಿಷಯ ಊರಿನ ಜನರಿಗೆ ಗೊತ್ತಾದರೆ ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ,ನಮ್ಮ ಮರ್ಯಾದೆ ಏನಾಗಬೇಕು,ಊರವರ ಬಾಯಿಗೆ ಹುಳ ಹಾಗಿ ಬಿಟ್ವಿ....ಹೀಗೆ ಹತ್ತು ಹಲವಾರು ಯೋಚನೆಗಳು ತೊಳಲಾಡ ತೊಡಗಿದವು..
"ಒಂದು ವಾರ ಆಯಿತು ಮದುವೆ ಆಗಿ,ಅಲ್ಲೇ ಸಬ್ ರೆಜಿಸ್ಟ್ರಾರ್ ಆಫಿಸಿನಲ್ಲಿ ಆದ್ವಿ,ಏನೋ ಸ್ವಲ್ಪ ಪ್ರಾಬ್ಲಂ ಆಯಿತು,ಅದಕ್ಕೆ ಆದ್ವಿ..ಹೇಳಬೇಕು ಅಂತ ಇದ್ವಿ,ಹೇಗೂ ಹೇಳಲೇ ಬೇಕು ಅಂತ ಸುಮ್ಮನಾದ್ವಿ ಅಷ್ಟೇ"

"ಏನ್ ಅಂತ ಪ್ರಾಬ್ಲಂ.ಮನೇಲಿ ಹೇಳಿದ್ರೆ ಆಗ್ತಿರಲಿಲ್ವ,ನಿಮ್ಮ ಅಪ್ಪನ ಹತ್ತಿರನಾದ್ರು ಹೇಳಬಾರದಿತ್ತಾ ?? "

"ಅದನ್ನೆಲ್ಲ ಹೇಳಕ್ಕೆ ಆಗಲ್ಲ,ಇವಾಗೆನ್ ಅವರನ್ನು ಒಪ್ಪಿಸ್ತೀನಿ ಬಿಡು "

"ಏನ್ ಒಪ್ಕೋತಾರೆ,ನಿಮ್ಮ ಅಪ್ಪಂಗೆ ನೀನ್ ಹುಟ್ಟಿದ್ಯೋ ಅಥ್ವಾ ನಿಮ್ಮ ಅಪ್ಪ ನಿನಗೆ ಹುಟ್ಟಿದನೋ ? ಮಾಡೋದ್ ಮಾಡ್ಬಿಟ್ಟು ಹೇಳದು ನೋಡು,ಏನಾದ್ರೂ ಮಾಡ್ಕೋ  " ಅಂತ ಹೇಳಿ ಸಿಟ್ಟು  ನುಂಗಿ ಕೊಂಡು ಸೆರಗನ್ನು ಬಾಯಲ್ಲಿ ಕಚ್ಚಿಕೊಂಡು ಹಿತ್ತಲ ಬಾಗಿಲ ಬಳಿ ಹೋಗಿ ಕುಳಿತಳು....ಮಕ್ಕಳ ಮದುವೆ ಬಗ್ಗೆ ಕಂಡ ಕನಸುಗಳೆಲ್ಲ ಮಳೆ ನೀರಿನಲ್ಲಿ ಕೊಚ್ಚಿ ಹೋದಂತೆ ಆದವು...

ಸ್ವಲ್ಪ ಸಮಯದ ನಂತರ ತೋಟದಿಂದ ಬಂದ ದೊಡ್ದೆ ಗೌಡನಿಗೆ ಹೆಂಡತಿ "ಒಳಗೆ ಹೋಗಿ ನೋಡಿ,ಯಾವಳೋ ತಾಟ್ಗಿತ್ತಿನ ಮದುವೆ ಹಾಗಿ ಬಂದವನೇ ನಿಮ್ಮ ಮಗ "

ಇವನಿಗೆ ಏನು ಹೇಳಬೇಕೋ ತೋಚದೆ ಸೀದಾ ಒಳ ನಡೆದು ಮಗನ ಮುಂದೆ ನಿಂತ...ಏನು ಮಾತಾಡ ಬೇಕು ಎಂದು ತಿಳಿಯದೆ ತನ್ನ ಕೋಪ ಸಿಟ್ಟು ಯಾವುದನ್ನು  ತೋರಿಸಿಕೊಳ್ಳದೆ ಸುಮ್ಮನೆ ನಿಂತು ಬಿಟ್ಟ...ತನ್ನ ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಧೃತಿ ಗೆಡದೆ ಇದ್ದ ಅವನ ತಂದೆಗೆ ಕಣ್ಣೀರು ಗೊತ್ತಿಲ್ಲದೇ ಹರಿಯಿತು... ಈಗ ಬಹಳ ಬುದ್ಧಿವಂತಿಕೆ ಇಂದ ಕೆಲಸ ಮಾಡಬೇಕಾದ  ಪರಿಸ್ಥಿತಿ ಬಂತು... ಊರಿನವರಿಗೆ ವಿಷಯ ಗೊತ್ತಾದರೆ ತನ್ನ ಮರ್ಯಾದೆ ಹೋಗುತ್ತದೆ...

ಮದುವೆ ಆಗಿ ಬಂದಿರುವುದರಿಂದ ಮನೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇತ್ತು,ಇಲ್ಲದೆ ಹೋದರೆ ಉರಿಬ ದೊಡ್ಡ ಮನುಷ್ಯನೇ ಹೀಗೆ ಮಾಡಿದರೆ ಸರಿ ಇರುವುದಿಲ್ಲ....ಆ ಹುಡುಗಿ ಬೇರೆ ಜಾತಿ ಎಂದು ತಿಳಿದಾಗಲಂತೂ ಅವನ ಅಪ್ಪ ಅಮ್ಮ ಇಬ್ಬರೂ ಕೆಂಡಾಮಂಡಲವಾದರು  .... ಆದರೂ  ಬೇರೆ ದಾರಿ ಇಲ್ಲ...ಹುಡುಗಿಯ ಮನೆಯಲ್ಲಿ ಒಪ್ಪದೇ ಇರುವ ವಿಷಯ ತಿಳಿದು ಅವರ ಮನೆಗೆ ಹೋದರೆ ಹುಡುಗಿಯ ತಂದೆ "ತನಗೆ ಯಾವುದೇ ಸಂಬಂಧ ಇಲ್ಲ "ಎಂದು ಮಗಳ ಬಗ್ಗೆ ಕನಿಕರ ಇಲ್ಲದೆ ಸಾರಾ ಸಗಟಾಗಿ ಹೇಳಿಬಿಟ್ಟರು....

ಇವನ ತಂದೆ ಎಷ್ಟೇ ಒಪ್ಪಿಸಲು ಪ್ರಯತ್ನ ಪಟ್ಟರೂ ಸಾಧ್ಯ ಆಗಲಿಲ್ಲ... ಕೊನೆಗೆ ಅವಳ ಅಪ್ಪ "ಮದುವೆಗೆ ಮುಂಚೆ ಬಸುರಿ ಆಗಿ ಬಂದು,ನಮ್ಮ ಮನೆತನದ ಗೌರವ ಹಾಳು ಮಾಡಿದ್ದು ಸಾಕು,ಇನ್ನು ಮುಂದೆ ಅವಳು ನಮ್ಮ ಮನೆಗೆ ಬರುವುದು ಬೇಡ" ಎಂದು
ಹೇಳಿದಾಗಲೇ ಅವನು  ಯಾಕೆ ಮನೆಯಲ್ಲಿ ಹೇಳದೆ ಮದುವೆ ಆಗಿದ್ದು ಮತ್ತು ಅವನು ಮುಚ್ಚಿಟ್ಟಿದ್ದ ಸತ್ಯ ತಿಳಿದಿದ್ದು....

ಸುಮಾರು ಒಂದು ತಿಂಗಳ ಹಿಂದೆಯೇ ಇವರಿಬ್ಬರೂ ಬಂದು ಇವಳು ಗರ್ಭಿಣಿ ಆಗಿರುವ ವಿಷಯ ತಿಳಿಸಿದ್ದು ಮತ್ತು ತಾನು ಮದುವೆ ಮಾಡಿಕೊಡಲು ಒಪ್ಪದೇ ಇದ್ದಿದಕ್ಕೆ ಇವರು ಮದುವೆ ಆಗಿರಬೇಕು ಎಂದು,ಎಲ್ಲ ವಿಷಯಗಳನ್ನು ಹುಡುಗಿಯ ತಾಯಿ ದೊಡ್ದೆಗೌಡನಿಗೆ ಹೇಳುತ್ತಾಳೆ...

ಈ ಸಂಗತಿ ತಿಳಿದಾಗ ಬಹಳ ಜಾಗರೂಕರಾದ ಗೌಡ ಉಪಾಯ ಮಾಡಿ ರೆಜಿಸ್ಟಾರ್ ಆಫಿಸಿನಲ್ಲಿ ಆಗಿರುವ ಮದುವೆಯನ್ನು  ಇನ್ನೊಮ್ಮೆ ಶಾಸ್ತ್ರೋಕ್ತವಾಗಿ ಮಾಡಿಸಲು ನಿಶ್ಚಯಿಸುತ್ತಾನೆ..ಜೊತೆಗೆ ಒಳಗೆ ತಳಮಳ ಶುರು ಆಯಿತು ಅವನಿಗೆ,ಬೇರೆ ಜಾತಿಯ ಹುಡುಗಿಯನ್ನು ಮನೆ ಸೊಸೆ ಮಾಡಿ ಕೊಂಡರೆ ತನ್ನ ಸಮಾಜದಲ್ಲಿ ತನಗೆ ಇರುವ ಹೆಸರು ಕೆಡುತ್ತದೆ ಅಲ್ಲದೆ ಇಬ್ಬರಿಗೂ,ಇರುವ ಇನ್ನೊಬ್ಬ ಮಗಳ ಮದುವೆಯ ಬಗ್ಗೆ ಚಿಂತ ಅತ್ತ ತೊಡಗಿತು... ಅಣ್ಣ ಈ ರೀತಿ ಮಾಡಿದ್ದಾನೆ ಅಂತ ಗೊತ್ತಾದರೆ ಇವಳನ್ನು ಮದುವೆ  ಆಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಎಂಬ ಆತಂಕ....

ಇಂಥ ಆತಂಕದ ನಡುವೆ , ಆಗಿರುವ ಮದುವೆಗೆ ಇನ್ನೊಮ್ಮೆ ನಾಮಕಾವಸ್ಥೆ ಶಾಸ್ತ್ರೋಕ್ತವಾಗಿ ಮಾಡಿಯೂ ಆಯಿತು.... ಆದರೆ ಹುಡುಗಿಯ ಮನೆ ಕಡೆ ಇಂದ ಯಾರು ಬರಲಿಲ್ಲ... ತಂಗಿಯ ಮದುವೆ ಮೊದಲು ಮಾಡುವ ಬದಲು ಇವನು ಯಾಕೆ ಆದ,ಜವಾಬ್ದಾರಿ ಇಲ್ಲದವನು ಎಂದು ಕೆಲವರು ಬೈದು ಕೊಂಡರೆ,ಇನ್ನು ಕೆಲವರು ಹುಡುಗಿಯ ಮನೆ ಕಡೆಯವರು ಯಾರು ಬರದೆ ಇರುವ ವಿಷಯ ತಿಳಿದು ಏನೋ ಎಡವಟ್ಟಾಗಿದೆ ,ಅದಕ್ಕೆ ಈ ರೀತಿ ಇಷ್ಟು ಬೇಗ ಮಾಡುತ್ತಿದ್ದಾರೆ ಎಂದು ಮಾತಾಡಲು ಶುರು ಮಾಡಿದರೆ,ಕೆಲವರ ಸಂಶಯದ ನಡುವೆ ಕಲ್ಯಾಣ ಮುಗಿಯಿತು...ಆದರೆ ದೊಡ್ದೆ ಗೌಡ ಆಗಲಿ ಅವನ ಹೆಂಡತಿಯ ಮುಖದಲ್ಲಿ ಯಾವುದೇ ತರಹದ ಸಂತೋಷದ ಛಾಯೆ ಇರಲಿಲ್ಲ,ಬದಲಾಗಿ ದುಖ, ಸಮಾಜದಲ್ಲಿ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಅಂಜಿಕೆ ಎದ್ದು ಕಾಣುತಿತ್ತು...

ಬಹಳ ವಿಜೃಂಭಣೆಯಿಂದ  ಮಾಡಬೇಕು ಎಂದು ಕನಸು ಕಟ್ಟಿ ಕೊಂಡಿದ್ದ ಮದುವೆ ಈ ರೀತಿ ಆಗುತ್ತಿರುವುದಕ್ಕೆ ಬೇಸರ ಅಲ್ಲದೆ ಒಂದು ರೀತಿಯ ಸೂತಕದ ಲಕ್ಷಣಗಳು ಕಂಡವು...ವ್ಯಾಪಾರದಲ್ಲಿ ನಷ್ಟ ಆದಾಗ ಕೂಡ ಮಂಕಾಗದ ಅವನ ತಂದೆ ಇವತ್ತು ಮಂಕಾಗಿದ್ದರು,ಇಬ್ಬರಲ್ಲೂ ನೊಂದ ಭಾವ ಅಡಗಿತ್ತು....ಮಗನನ್ನು ಬೆಳೆಸಿ ಓದಿಸಿದಕ್ಕೆ ಇವನು ಕೊಟ್ಟ ದೊಡ್ಡ ಉಡುಗೊರೆ ಎಂದರೆ ತಮ್ಮ ಕನಸುಗಳನ್ನು ನುಚ್ಚು ನೂರು ಮಾಡಿದ್ದು ಮತ್ತು ಸಮಾಜದಲ್ಲಿ ತಮ್ಮ ಗೌರವ ಘನತೆ ಆಳು ಮಾಡಿದ್ದು....

ಸಂಭ್ರಮ ಇಲ್ಲದ ಮದುವೆ ಮುಗಿದು ದಂಪತಿಗಳನ್ನು ಕಳಿಸಿದ ಮೇಲೆ ಉರಿನಲ್ಲಿ ಇವರ ಮದುವೆ ವಿಷಯ ಎಲ್ಲರ ಬಾಯಲ್ಲಿ ಹರಿದಾಡ ತೊಡಗಿತು... ಕೆಲವರಿಗೆ ನಿಜ ಸಂಗತು ತಿಳಿಯ ತೊಡಗಿತು... ಊರಿನ ಜನರೆಲ್ಲಾ ಇವನ ಮನೆಯವರನ್ನು ಒಂದು ವಿಚಿತ್ರ ರೀತಿಯಲ್ಲಿ ನೋಡ ತೊಡಗಿದರು...ಮದುವೆ ಆಗಿ ೬ ವರೆ ತಿಂಗಳಿಗೆ ಮಗು ಆದಾಗ  ಜನ  ಕೆಟ್ಟ ರೀತಿಯಲ್ಲಿ ಕಾಣತೊಡಗಿದರು,ಅಲ್ಲದೆ ಅವನ ತಂಗಿಗೆ ಒಂದು ಸಂಭಂದ ಹುಡುಕುವುದು ಕಷ್ಟ ಆಯಿತು...ಅವಳು ತನ್ನ ಅಳಲು ತೋಡಿಕೊಳ್ಳಲು ಆಗದ ಪರಿಸ್ಥಿತಿ ತಲುಪಿದಳು....ನೆಂಟರಿಷ್ಟರು ದೂರ ಮಾಡಲು ಶುರು ಮಾಡಿದರು....

ಎಲ್ಲದರಿಂದ ಆಸಕ್ತಿ ಕಳೆದು ಕೊಂಡ ತಂದೆ ಮಗಳ ಮದುವೆ ಬಗ್ಗೆ ಚಿಂತ ಮಾಡತೊಡಗಿದ .......ಇವೆಲ್ಲದರಿಂದ ಬೇಸತ್ತ ವೆಂಕಟೇಶನ ತಾಯಿ ಅರೆ  ಹುಚ್ಚಿ ಆಗಿಬಿಟ್ಟಳು...