Monday, July 23, 2012

ಹುಯ್ಯೋ ಹುಯ್ಯೋ ಮಳೆರಾಯ.....

ಮುನಿದಿಹಳು ಕ್ಷಮಯಾಧರಿತ್ರಿ,
ಒಡಲೊಡೆದು ಕಾದಿಹಳು ನಿನಗೆ,
ತಲ್ಲಣಿಸು ಬಾ ಅವಳನು ... ಓ ಮಳೆರಾಯ !!

ಕೆರೆ ಕಟ್ಟೆಗಳು ಒಣಗಿಹುದು,
ಪಕ್ಷಿ ಸಂಕುಲವು ಕಂಗೆಟ್ಟಿಹುದು ,
ದಯೆ ತೋರು ಅವುಗಳ ಜೀವಕೆ ... ಓ ಮಳೆರಾಯ !!

ಬೆಳೆ ಇಲ್ಲ,ದವಸ ಇಲ್ಲ,
ಚಿಂತಾಕ್ರಾಂತನಾಗಿಹನು ರೈತ,
ಕೃಪೆ ತೋರು ಅವನ ಮೇಲೆ... ಓ ಮಳೆರಾಯ !!

ನಿನ್ನನೇ ನೆಚ್ಚಿಹವು ಅದೆಷ್ಟೋ ಜೀವಗಳು....