Tuesday, March 15, 2011

ಇಂಥವರಿಗೆ ಏನು ಮಾಡಬೇಕು ...???

ಒಂದು  ಹಂದಿ  ಕೊಳಚೆ  ನೀರಿನಲ್ಲಿ  ಬಿದ್ದು  ಒದ್ದಾಡುತ್ತಿತ್ತು. ಇದನ್ನು ನೋಡಿ ದೇವೇಂದ್ರ ಆ ಹಂದಿಯ ಮೇಲೆ ಕನಿಕರದಿಂದ  "ಅಯ್ಯೋ ಯಾಕಪ್ಪ ಆ ಕೊಳಚೆ ಒಳಗೆ  ಬಿದ್ದಿದಿಯ? " ಅಂತ  ಅದನ್ನ  ಮೇಲಕ್ಕೆ ಎತ್ತಕ್ಕೆ  ಹೋಗುತ್ತಾನೆ .
ಆದರೆ ಹಂದಿ ಮಾತ್ರ  "ನಾನು  ಇಲ್ಲೇ  ಇರ್ತೀನಿ " ಅಂತ  ಹಠ  ಮಾಡುತ್ತೆ .
ಹೇಗಾದರೂ ಮಾಡಿ ಇದನ್ನ ಮೇಲಕ್ಕೆ ಕರಿಬೇಕು ಅಂತ ದೇವೇಂದ್ರ "ನೋಡು  ನೀನು  ಮೇಲಕ್ಕೆ ಬಂದ್ರೆ ನಿನ್ನನ್ನ  ನಾನು ಸ್ವರ್ಗ  ಲೋಕಕ್ಕೆ ಕರ್ಕೊಂಡು  ಹೋಗ್ತಿನಿ ,ಅಲ್ಲಿ  ನೀನು ತಿಳಿ ನೀರಲ್ಲಿ  ಸ್ನಾನ  ಮಾಡಬಹುದು , ಈ  ಥರಾ  ಕೊಳಚೆ  ನೀರಲ್ಲಿ  ಇದ್ದರೆ  ಯಾವ  ಯಾವ  ಕಾಯಿಲೆ  ಬರುತ್ತೆ  ಗೊತ್ತಿಲ್ಲ ನಿಂಗೆ ,ಬಾ  ಮೇಲಕ್ಕೆ  "ಅಂತ  ಹೇಳ್ತಾನೆ .
ಇದು  ಯಾವದಕ್ಕೂ  ಬಗ್ಗದ  ಹಂದಿ  "ಏ ಇಲ್ಲ  ನಾನು  ಇಲ್ಲೇ  ಇರ್ತೀನಿ ,ನನಗೇನೆ ಆದರೂ ಪರವಾಗಿಲ್ಲ " ಅನುತ್ತೆ .
ಸರಿ  ದೇವೇಂದ್ರ  ಕಡೆ  ಪ್ರಯತ್ನ  ಅಂತ "ಸ್ವರ್ಗ ಲೋಕದಲ್ಲಿ  ರಂಭೆ  ಉರ್ವಸಿ  ಮೆನಕೆಯವರೆಲ್ಲ  ಇರ್ತಾರೆ ,ಅವರೆಲ್ಲ   ನೃತ್ಯ  ಮಾಡ್ತಿರ್ತಾರೆ ,ನೀನು
ಆರಾಮಾಗಿ  ಅವರ  ನ್ರುತ್ಯನೆಲ್ಲ  ನೋಡಬಹುದು ,ಅವರೆಲ್ಲ ನಿಂಗೆ ಸ್ನಾನ ಮಾಡಿಸುತ್ತಾರೆ  , ಬಾ  ಹೋಗಣ " ಅಂತ  ಕರಿತಾನೆ .
ಏನೆ ಮಾಡಿದ್ರು  ಆ  ಹಂದಿ  " ಇಲ್ಲ  ಇಲ್ಲ  ನಾನ್  ಇಲ್ಲೇ  ಇರ್ತೀನಿ ,ನಂಗೆ  ಇದೆ  ಚೆನ್ನಾಗಿದೆ " ಅಂತ  ಹೇಳುತ್ತೆ .
ಸರಿ  ದೇವೇಂದ್ರ  ಇನ್ನೇನು  ಮಾಡಕ್ಕಾಗಲ್ಲ  ಈ  ಹಂದಿಗೆ  ಅಂತ  ಸುಮ್ನೆ ಆಗಿಬಿಡುತ್ತಾನೆ .
ಇದೆ  ಥರಾ  ನಮ್ಮ ಮಧ್ಯದಲ್ಲೂ  ಕೆಲವು  ಜನ  ಇರುತ್ತಾರೆ . " ತಪ್ಪು  ದಾರಿಯಲ್ಲಿ  ಹೋಗುತ್ತಿದ್ದಿರ " ಅಂತ  ಒಳ್ಳೆ  ದಾರಿ  ತೋರಿಸಿದರು  ,
ಅವರಿಗೆ  ತಾವು  ಮಾಡಿದ್ದೆ  ಸರಿ ,ತಾವು  ಮಡ್ತಿರೋದೆ  ಸರಿ  ಅಂತ  ತಿಳಿದು  ಕೊಂಡಿರುವವರು .
ನಾವು  ಇರೋದೇ  ಹೀಗೆ  ಸ್ವಾಮಿ  ಅಂತ  ಹೇಳ್ತಾರೆ  ಈ  ಜನ.
ತಮ್ಮ  ಸ್ವಂತ  ಬುದ್ದಿ  ಯೋಚನೆ  ಇರಬೇಕು ,ಆದರೆ  ಬೇರೆಯವರು  ಹೇಳಿದ್ದನ್ನ  ಸ್ವಲ್ಪ  ಮಟ್ಟಿಗಾದರೂ  ಕೇಳಬೇಕು .
ಯಾವಾಗಲು  ಬೇರೆಯವರು  ಹೇಳಿದ್ದನ್ನ  ಕೇಳಲೂ ಬಾರದು ,ಆದರೆ  ಅದು  ಸರಿಯೋ  ತಪ್ಪೋ  ಅಂತ  ಯೋಚಿಸಿ  ನಿರ್ಧಾರ  ಮಾಡುವ  ವಿವೆಚನೆಯಾದರು  ಇರಬೇಕು .
ತಮ್ಮನ್ನು  ತಾವೇ  ಮೇಧಾವಿಗಳು  ಅಂತ ತಿಳಿದು ,ಬೇರೆ  ಯಾರೇ  ಏನೆ  ಹೇಳಿದರು  ಅದನ್ನ  ತಪ್ಪು  ಅಂತ  ಹೇಳುವ  ಅವಿವೇಕಿಗಳಿಗೆ  ಏನು  ಮಾಡಬೇಕು ?
(ಇದು  ಕೆಲವು  ದಿನಗಳ  ಹಿಂದೆ  ಒಂದು  ಕಾರ್ಯಕ್ರಮದಲ್ಲಿ  ಒಬ್ಬ  ಉಪನ್ಯಾಸಕರು  ಹೇಳಿದ  ಕಥೆ )

14 comments:

  1. ಒಳ್ಳೆ ಕತೆ , ಇಂತವರನ್ನು ಹೀಗೊಮ್ಮೆ ಹಾಗೊಮ್ಮೆ ನೋಡುತ ಇರ್ತಿವಿ ....

    ReplyDelete
  2. ಪ್ರತಿಯೋಬ್ಬರಿಗೂ ಅವರದೆ nature ಇರುತ್ತದೆ....ಅದು ಬದಲಾಯಿಸಲು ಸ್ವಲ್ಪ ಕಷ್ಟ.....

    ReplyDelete
  3. ಸೊಗಸಾದ ...
    ಕಟು ಸತ್ಯದ ಮಾತುಗಳು..

    ಇಷ್ಟವಾಯಿತು.... ಧನ್ಯವಾದಗಳು...

    ReplyDelete
  4. ನಿಜ, ಅನೇಕ ಜನ ಹೀಗೆ ಇರ್ತಾರೆ

    ReplyDelete
  5. @ಸಂದೀಪ್:ಇಂತವರು ತುಂಬ ಜನ ಇದ್ದಾರೆ
    @ಆಶಾ:ಅದನ್ನ ಬದಲಾಹಿಸುವುದು ಸ್ವಲ್ಪ ಅಲ್ಲ ತಿಂಬ ಕಷ್ಟ
    @ಪ್ರಕಾಶಣ್ಣ:ತುಂಬ ಧನ್ಯವಾದಗಳು.
    @ದೀಪಸ್ಮಿತಾ:ನಿಜ ಈ ಥರದ ಜನ ತುಂಬ ಇದ್ದಾರೆ .ಅವರನ್ನ ತಡೆಯೋದು ಬಹಳ ಕಷ್ಟ

    ReplyDelete
  6. nija ee kateyante halavu janaru iddare... oLLeya lekhana

    ReplyDelete
  7. @ಮನಸು ,
    ಲೇಖನ ಮೆಚ್ಚಿದಕ್ಕೆ ಧನ್ಯವಾದಗಳು
    ಹೌದು ತುಂಬ ಜನ ಈ ಥರದ ವ್ಯಕ್ತಿಗಳು ಇದ್ದಾರೆ

    ReplyDelete
  8. ಗಿರೀಶ್ ನಿಜ ಅದು ಕೆಲವರಿಗೆ ಏನು ಮಾಡಿದರೂ ತಲೆಗೆ ಹೋಗುವ ವಿಷಯವೇ ಅಲ್ಲ....ಇಂಥವರಿಗೆ ಬುದ್ಧಿ ಹೇಳುವುದೂ ವ್ಯರ್ಥವೇ...ಚನ್ನಾಗಿದೆ..ವೈಚಾರಿಕತೆಯ ಕಥೆಯೂ...

    ReplyDelete
  9. ಗಿರೀಶ್,
    ನಿಮ್ಮ ಮಾತು ನಿಜ. ಇಂತಹ ಜನರಿರುತ್ತಾರೆ.. ಕಥೆ ಚೆನ್ನಾಗಿದೆ!

    ReplyDelete
  10. @ ಅಜಾದ್ ಸರ್ ಮತ್ತು ಪುಟ್ಟಿ ಅಮ್ಮ ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
    ಇಂಥ ವ್ಯಕ್ತಿಗಳಿಗೆ ಏನು ಹೇಳುವುದು ವ್ಯರ್ಥವೇ ಸರಿ, ಹೀಗೆ ಬರುತ್ತಿರಿ

    ReplyDelete
  11. kelavaru haage..
    kattemunde hogi kinnari nudisidante... :P

    ReplyDelete
  12. @Shivu: howdu Shivu anthavarige yenu maadakke aagalla..

    ReplyDelete