Thursday, August 29, 2013

ಆಹಾರ ಭದ್ರತೆ ಕಾಯ್ದೆ

ಆಹಾರ ಭದ್ರತೆ ಕಾಯ್ದೆಗೆ ಅನುಮೋದನೆ ಸಿಕ್ಕ ಮೊದಲ ದಿನವೇ ರೂಪಾಯಿ ಮೌಲ್ಯದಲ್ಲಿ ಭಾರಿ ಕುಸಿತ ಕಂಡಿದೆ . ಒಂದೇ ದಿನದಲ್ಲಿ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ೨ ರೂಪಾಯಿಯಷ್ಟು ಕುಸಿದಿದೆ ಅಂದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಹೇಗೆ ಬಿಗಡಾಯಿಸಬಹುದು ಎಂಬುದನ್ನು ಶಂಕಿಸಿ .

ಇದೊಂದು ಆಹಾರ ಭದ್ರತೆ ಕಾಯ್ದೆ ಅಲ್ಲ,ನಮ್ಮ ದೇಶದ ಆರ್ಥಿಕ ಕುಸಿತಕ್ಕೆ ಒಂದು ವಿಷ ಇದ್ದಂತೆ .

ಇದರ ಪರಿಣಾಮಗಳು :ಮೊದಲನೆಯದಾಗಿ ,ಅಕ್ಕಿ,ಗೋಧಿ,ರಾಗಿ ಮುಂತಾದ ದವಸ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಹಂಚುತ್ತಾರೆ ಅಂದರೆ ರೈತರಿಂದ ಕೂಡ ಕಡಿಮೆ ಬೆಲೆಯಲ್ಲೇ ಖರೀದಿಸುತ್ತಾರೆ. ಆಗಾಗಿ ಕಷ್ಟ ಪಟ್ಟು ಬೆಳೆದ ರೈತರಿಗೆ ಭಾರಿ ಪೆಟ್ಟು ನೀಡಿದಂತೆಮತ್ತು ನಮ್ಮ ದೇಶದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗದೆ,ರೈತರಿಗೆ ಹಲವಾರು ರೀತಿಯಲ್ಲಿ ಕೆಡುಕುಂಟಾಗುತ್ತದೆ .
ಎರಡನೆಯದಾಗಿ ,ಇದರ ವ್ಯತಿರಿಕ್ತ ಪರಿಣಾಮವಾಗಿ ದೇಶದಲ್ಲಿ ಆಹಾರ ಉತ್ಪಾದನೆ ಕಡಿಮೆ ಆಗಬಹುದು,ಕಾರಣ ಕಡಿಮೆ ಬೆಲೆಯಲ್ಲಿ ಎಲ್ಲ ಸಿಗಬೇಕಾದರೆ ಯಾರೂ ಬೆಳೆಯುವ ಗೋಜಿಗೆ ಹೋಗುವುದಿಲ್ಲ. ಇದರಿಂದ ಕೃಷಿ ಕ್ಷೇತ್ರಕ್ಕೆ ನಷ್ಟ ಅಲ್ಲದೇ ,ನಮ್ಮಲ್ಲಿ ಉತ್ಪಾದನೆ ಕಡಿಮೆ ಆದರೆ ,ಬೇರೆ ಕಡೆಯಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ,ಅದು ಖಂಡಿತ ನಮ್ಮ ಅರ್ಥ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ..

ಈ ಕಾಯ್ದೆಯಿಂದಾಗಿ ರೂಪಾಯಿ ಮೌಲ್ಯ ಕುಸಿತ ಕಂಡರೆ ,ಅದು ಬೇರೆ ವಲಯಗಳಲ್ಲೂ ಕೂಡ ಏರು ಪೆರು ಆಗುವ ಸಾಧ್ಯತೆ ಇದೆ.
ಉದಾ : ಪೆಟ್ರೋಲಿಯಂ ವಲಯ : ಇದರಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರುವ ಸಂಭವ ಇದೆ .(ಈಗಾಗಲೇ ಹಲವಾರು ಕಂಪೆನಿಗಳುಡೀಸೆಲ್ ಬೆಲೆಯನ್ನು ೧೦ ರುಪಾಯಿಯಷ್ಟು ಹೆಚ್ಚಿಸಲು ಬೇಡಿಕೆ ಇಟ್ಟಿದೆ).ಇದರಿಂದ ಸಾರಿಗೆ ವೆಚ್ಚ ಏರುತ್ತದೆ. ಕೊನೆಯದಾಗಿ ಇದು ಪರಿಣಾಮ ಬೀರುವುದು ಮಧ್ಯಮ ವರ್ಗ ಮತ್ತು ಬಡವರ ಮೇಲೆಯೇ ಹೆಚ್ಚು .

ಅವಶ್ಯಕವಾಗಿರುವಷ್ಟು ಉತ್ಪಾದನೆಯೇ ಇಲ್ಲದ ಮೇಲೆ ,ಹೀಗೆ ಕಾಯ್ದೆಯ ಮೂಲಕ ಅಕ್ಕಿ,ಗೋಧಿಯನ್ನು ಎಲ್ಲಿಂದ ಒದಗಿಸಲು ಸಾಧ್ಯ .. ಆದಕ್ಕೆ ಮೂಲ ಇದೆಯೇ ? ಇದು ದೇಶದಲ್ಲಿ ಬಡತನವನ್ನು ಇನ್ನಷ್ಟು ಹೆಚ್ಚಿಸುತ್ತದೆಯೇ ಹೊರತು ,ಮಾತ್ಯಾವುದೇ ಸಾಧನೆ ಅಲ್ಲ .

೪ ದಶಕದ ಹಿಂದೆ ಜಾರಿಗೆ ಬಂದ 'ಗರೀಬಿ ಹಠಾವೊ' ಕಾರ್ಯಕ್ರಮವು ಹೇಗೆ ದೇಶದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ವಿಫಲವಾಯಿತೋ ಹಾಗೆ ಈ ಆಹಾರ ಭದ್ರತೆ ಕಾಯ್ದೆ ಕೂಡ ದೇಶದಲ್ಲಿ ಬಡತನವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಒಬ್ಬ ಮನುಷ್ಯನಿಗೆ ಪ್ರತಿದಿನ ಮೀನನ್ನು ತಿನ್ನಲು ಕೊಟ್ಟು ಅವನನ್ನು ಸೋಮಾರಿಯನ್ನಾಗಿಸುವ ಬದಲು ,ಅವನಿಗೆ ಮೀನು ಹಿಡಿಯುವುದನ್ನು ಹೇಳಿ ಕೊಟ್ಟರೆ ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳುತ್ತಾನೆ ಅಲ್ಲವೇ ?

ಈ ನಿಟ್ಟಿನಲ್ಲಿ ಭಾರತ ಅರ್ಥ ವ್ಯವಸ್ಥೆಯು ತೀರಾ ಕಳಪೆ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ..

ಕೊನೆಯದಾಗಿ ,ನನ್ನ ಪ್ರಕಾರ ಇದು 'Food Security Bill' ಅಲ್ಲ ,ಯು.ಪಿ.ಎ ಅನುಮೋದಿಸಿದ 'Financial Suicide Bill' ಈಗಾಗಲೇ ಹದಗೆಟ್ಟಿರುವ ಭಾರತದ ಅರ್ಥ ವ್ಯವಸ್ಥೆಯನ್ನು ಸಂಪೂರ್ಣ ನಾಶಮಾಡುವ ಕಾಯ್ದೆ ಅಷ್ಟೇ ...

4 comments:

  1. ಗಿರೀಶರೆ,
    ನಿಮ್ಮ ವಿಚಾರವು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ತಾವು ಬೆಳೆದ ಧಾನ್ಯಕ್ಕೆ ಸಮರ್ಪಕ ಬೆಲೆ ಸಿಗದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಇನ್ನು Financial Suicide Bill ಬಂದ ಮೇಲೆ, ಸಾಮೂಹಿಕ ಆತ್ಮಹತ್ಯೆಗಳು ಪ್ರಾರಂಭವಾಗುವುದರಲ್ಲಿ ಸಂದೇಹವಿಲ್ಲ.

    ReplyDelete
  2. ಜೊತೆಗೆ ಇದು 'Fund Sonia Bill' ಆದರೂ ಆಗಬಹುದು. ಯಾವ ರಾಜಕಾರಣಿ ಗದ್ದುಗೆಗೆ ಏರಿದರೂ ನಮ್ಮ ತಿಥಿ ದಿನಾಂಕ ಬರೆದಿಟ್ಟುಕೊಂಡೇ ಬರುತ್ತಾರೇನೋ! ಮಾರ್ಮಿಕವಾದ ಸಕಾಲೀಕ ಬರಹ.

    ReplyDelete
  3. >> ಒಬ್ಬ ಮನುಷ್ಯನಿಗೆ ಪ್ರತಿದಿನ ಮೀನನ್ನು ತಿನ್ನಲು ಕೊಟ್ಟು ಅವನನ್ನು ಸೋಮಾರಿಯನ್ನಾಗಿಸುವ ಬದಲು ,ಅವನಿಗೆ ಮೀನು ಹಿಡಿಯುವುದನ್ನು ಹೇಳಿ ಕೊಟ್ಟರೆ ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳುತ್ತಾನೆ ಅಲ್ಲವೇ ?<< Correct Sir :-)
    ನಮ್ಮ ಸರ್ಕಾರಗಳದ್ದು ಏನೇನು ಪ್ಲಾನುಗಳೋ.. :-(

    ReplyDelete
  4. ನಿಜವಾದ ಮಾತು ಗಿರೀಶ್! ಮುಂಬರುವ ಚುನಾವಣೆಯಲ್ಲಿ ಒಂದು ವರ್ಗದ ಜನರ ವೋಟುಗಳನ್ನು ಲಪಟಾಯಿಸುವುದಕ್ಕಾಗಿ ಒಂದು ಪಕ್ಷದವರು ಮಾಡಿರುವ ಮುಂದಾಲೋಚನೆಯಿಲ್ಲದ ವ್ಯವಸ್ಥೆಯಿದು! ಒಂದು ರುಪಾಯಿಗೆ ಅಕ್ಕಿ ಸಿಕ್ಕರೆ ಯಾರು ತಾನೆ ೧೦೦ ಅಥವಾ ೧೫೦ ರುಪಾಯಿಗಾಗಿ ದಿನವೆಲ್ಲಾ ದುಡಿಯುತ್ತಾರೆ ಹೇಳಿ?
    " ಒಬ್ಬ ಮನುಷ್ಯನಿಗೆ ಪ್ರತಿದಿನ ಮೀನನ್ನು ತಿನ್ನಲು ಕೊಟ್ಟು ಅವನನ್ನು ಸೋಮಾರಿಯನ್ನಾಗಿಸುವ ಬದಲು ,ಅವನಿಗೆ ಮೀನು ಹಿಡಿಯುವುದನ್ನು ಹೇಳಿ ಕೊಟ್ಟರೆ ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳುತ್ತಾನೆ ಅಲ್ಲವೇ ?" ಎಂಥ ಮಾತು!

    ReplyDelete